Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: 30,000 ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಜಿಲ್ಲಾಸ್ಪತ್ರೆ ಸರ್ಜನ್

10/07/2025 3:08 PM

BIG NEWS: ‘SSLC ಪರೀಕ್ಷೆ ಫಲಿತಾಂಶ’ ವೃದ್ಧಿಗೆ ಮಹತ್ವದ ಕ್ರಮ: ಎಲ್ಲಾ ಶಾಲೆಗಳು ಈ ಕ್ರಮ ಅನುಸರಿಸೋದು ಕಡ್ಡಾಯ

10/07/2025 2:58 PM

Good News : ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ; ಶೇ.30–34ರಷ್ಟು ‘ವೇತನ’ ಹೆಚ್ಚಳ ಸಾಧ್ಯತೆ : ವರದಿ

10/07/2025 2:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » KPTCL ಎಇ ‘ಶಾಂತಕುಮಾರ ಸ್ವಾಮಿ’ಗೆ ಯಾರು ಕಿರುಕುಳ ನೀಡಿಲ್ಲ: ‘ಹೈಕೋರ್ಟ್’ಗೆ ‘ASPP’ ಮಾಹಿತಿ
KARNATAKA

KPTCL ಎಇ ‘ಶಾಂತಕುಮಾರ ಸ್ವಾಮಿ’ಗೆ ಯಾರು ಕಿರುಕುಳ ನೀಡಿಲ್ಲ: ‘ಹೈಕೋರ್ಟ್’ಗೆ ‘ASPP’ ಮಾಹಿತಿ

By kannadanewsnow0907/08/2024 10:06 PM

ಬೆಂಗಳೂರು: ನಿನ್ನೆ ನಾನು ಕೋರ್ಟ್ ಹಾಲ್ ಬಿಟ್ಟು ಹೋಗೋದಿಲ್ಲ. ನನಗೆ ಬೆದರಿಕೆ ಇದೆ. ನನ್ನ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿದೆ ಎಂಬುದಾಗಿ ಹೈಕೋರ್ಟ್ ನ್ಯಾಯಮೂರ್ತಿ ಮುಂದೆ ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಶಾಂತಕುಮಾರ ಸ್ವಾಮಿ ಅಲವತ್ತುಕೊಂಡಿದ್ದರು. ಇಂದು ವಿಚಾರಣ ನಡೆಸಿದಂತ ನ್ಯಾಯಪೀಠದ ಮುಂದೆ ಎಎಸ್ ಪಿಪಿ ಅವರು ಅವರಿಗೆ ಯಾರೂ ಕಿರುಕುಳ ನೀಡಿಲ್ಲ ಎಂಬುದಾಗಿ ವಿವರಣೆ ನೀಡಿದ್ದರು.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಕೆಪಿಟಿಸಿಎಲ್ ನಲ್ಲಿ ಸಹಾಯ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಶಾಂತಕುಮಾರ ಸ್ವಾಮಿ ಎಂ.ಜಿ ಎನ್ನುವವರು, ನಿನ್ನೆ ಹೈಕೋರ್ಟ್ ನಲ್ಲಿ ಹೈಡ್ರಾಮಾವನ್ನೇ ನಡೆಸಿದ್ದರು. ಸಾಗರ ಡಿವೈಎಸ್ಪಿ ಕಿರುಕುಳ ನೀಡುತ್ತಿದ್ದಾರೆ. ನ್ಯಾಯಾಲಯ ಬಿಟ್ಟು ಹೋಗಲ್ಲ. ನನ್ನನ್ನು ಕಾಪಾಡಿ ಅಂತ ಗೋಗರೆದಿದ್ದರು. ಈ ಘಟನೆಯ ಕುರಿತಂತೆ ಸಮಗ್ರ ಮಾಹಿತಿಯನ್ನು ನ್ಯಾಯಪೀಠದ ಮುಂದೆ ಹಿಡುವಂತೆ ಇಂದಿಗೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರನ್ನೊಳಗೊಂಡ ಪೀಠವು ಸೂಚಿಸಿತ್ತು.

ನ್ಯಾಯಾಲಯದ ಸೂಚನೆಯಂತೆ ಇಂದು ಪ್ರಕರಣದ ವಿಚಾರಣೆ ಆರಂಭಗೊಂಡಾಗ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್ ಜಗದೀಶ್ ಅವರು, ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಏಕ ಸದಸ್ಯ ಪೀಠಕ್ಕೆ ಮಾಹಿತಿ ನೀಡಿತು.

ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಶಾಂತಕುಮಾರ ಸ್ವಾಮಿ ಅವರು ಅಬಕಾರಿ ಇಲಾಖೆಯ ಪೊಲೀಸ್ ಅಧಿಕಾರಿ ಜೊತೆಗೂಡಿ ತಾನು ವಿವಾಹವಾಗಬೇಕಿದ್ದಂತ ಯುವತಿಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಅಬಕಾರಿ ಇಲಾಖೆಯ ಪೊಲೀಸ್ ಅಧಿಕಾರಿ ಮತ್ತು ಶಾಂತಕುಮಾರಸ್ವಾಮಿ ನಡುವೆ ನಡೆದಂತ ಸಂಭಾಷಣೆಯ 7-8 ಆಡಿಯೋಗಳಿದ್ದಾವೆ. ಇದಕ್ಕಾಗಿ ಮದುವೆ ಮುರಿದು ಬಿದ್ದಿತ್ತು ಎಂದು ಗಮನಕ್ಕೆ ತಂದರು.

ಇನ್ನೂ ಶಾಂತಕುಮಾರ ಸ್ವಾಮಿ ಆರೋಪಿಸಿದಂತೆ ಪೊಲೀಸರು ಅವರಿಗೆ ಯಾವುದೇ ಕಿರುಕುಳ ನೀಡಿಲ್ಲ. ಪೊಲೀಸರು ಸೇರಿದಂತೆ ಯಾರು ಕಿರುಕುಳವನ್ನು ನೀಡಿಲ್ಲ. ಶಾಂತಕುಮಾರ ಸ್ವಾಮಿಯನ್ನು ಬಂಧಿಸಿ, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಾಗ ಹಾಸಿಗೆಯಿಂದ ಕೆಳಗೆ ಉದ್ದೇಶಪೂರ್ವಕವಾಗಿ ಬಿದ್ದು ರಾದ್ಧಾಂತ ನಡೆಸಿದ್ದರು. ಆ ಘಟನೆಯನ್ನು ವೀಡಿಯೋ ಚಿತ್ರೀಕರಸಿಕೊಳ್ಳಲಾಗಿದೆ ಎಂಬುದಾಗಿ ಹೈಕೋರ್ಟ್ ನ್ಯಾಯಪೀಠದ ಮುಂದೆ ಎಎಸ್ ಪಿಪಿ ವಿವರಿಸಿದರು.

ಈ ಎಲ್ಲವನ್ನು ಆಲಿಸಿದಂತ ಹೈಕೋರ್ಟ್ ನ ಎಂ.ನಾಗಪ್ರಸನ್ನ ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠವು, ಹೊಸದಾಗಿ ಅರ್ಜಿಯನ್ನು ನಿಮಗೆ ಸಲ್ಲಿಸುವ ಸ್ವಾತಂತ್ರ್ಯ ಕಲ್ಪಿಸಲಾಗಿದೆ. ನೀವು ಅರ್ಜಿ ಸಲ್ಲಿಸಿ. ಆಗ ಪರಿಶೀಲಿಸಿ ಸೂಕ್ತ ಆದೇಶ, ನಿರ್ದೇಶನ ಮಾಡುತ್ತೇವೆ. ನಾವು ಮೌಖಿಕವಾಗಿ ಏನನನ್ನು ಹೇಳುವುದಿಲ್ಲ. ಅದಕ್ಕೆ ಮಾನ್ಯತೆಯೂ ಇರುವುದಿಲ್ಲ ಎಂಬುದಾಗಿ ತಿಳಿಸಿದರು.

ಅಂದಹಾಗೇ ಹೈಕೋರ್ಟ್ ಗೆ ಸಾಗರ ಡಿವೈಎಸ್ಪಿ ತುರ್ತು ಕೆಲಸ ನಿಮಿತ್ತ ತೆರಳಲು ಸಾಧ್ಯವಾಗಿರಲಿಲ್ಲ. ಅವರ ಪರವಾಗಿ ಶಿಕಾರಿಪುರದ ಡಿವೈಎಸ್ಪಿ ತೆರಳಿದ್ದರು. ಶಾಂತಕುಮಾರ ಸ್ವಾಮಿ ಆರೋಪ, ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಎಎಸ್ ಪಿಪಿಗೆ ದಾಖಲೆಯ ಸಹಿತ ಒದಗಿಸಿದ್ದರು. ಅಲ್ಲದೇ ಅವರು ಹೈಕೋರ್ಟ್ ನ ಕಲಾಪದ ವೇಳೆಯಲ್ಲಿ ಹಾಜರಿದ್ದರು. ಅವರು ನೀಡಿದಂತ ಮಾಹಿತಿಯನ್ನು ಆಧರಿಸಿ ಹೈಕೋರ್ಟ್ ನ್ಯಾಯಪೀಠಕ್ಕೆ ಎಎಸ್ ಪಿಪಿ ಸಂಪೂರ್ಣ ಮಾಹಿತಿಯನ್ನು ಒದಗಿಸಿ, ವಿವರಣೆ ನೀಡಿದರು. ಹೀಗಾಗಿ ಪ್ರಕರಣದ ಮನವರಿಕೆಯಾದಂತ ನ್ಯಾಯಮೂರ್ತಿಗಳು ಮತ್ತೊಂದು ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. ಮತ್ತೆ ಅರ್ಜಿಯನ್ನು ಹೈಕೋರ್ಟ್ ಗೆ ಶಾಂತಕುಮಾರಸ್ವಾಮಿ ಸಲ್ಲಿಸಿದ್ರೇ, ಹೈಕೋರ್ಟ್ ಯಾವ ಸೂಚನೆ, ಆದೇಶ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

‘ಗೃಹ ಜ್ಯೋತಿ’ ಗ್ರಾಹಕರ ಗಮನಕ್ಕೆ: ನೀವು ಮನೆ ಬದಲಿಸಿದ್ದೀರಾ? ಈ ರೀತಿ ಮತ್ತೆ ‘ಗೃಹ ಜ್ಯೋತಿ ಪ್ರಯೋಜನ’ಕ್ಕೆ ಅರ್ಜಿ ಸಲ್ಲಿಸಿ

ಆ.22ರಿಂದ ಬೆಂಗಳೂರಲ್ಲಿ ಅತಿದೊಡ್ಡ ಕೃಷಿ ಮತ್ತು ಆಹಾರ ಪ್ರದರ್ಶನ ಮೇಳ | AgriTech India 2024

ನಾಳೆಯಿಂದ ಬೆಂಗಳೂರಿನ ‘ಲಾಲ್ ಬಾಗ್’ನಲ್ಲಿ ‘ಫಲಪುಷ್ಪ ಪ್ರದರ್ಶನ್’ ಆರಂಭ: ಹೀಗಿದೆ ‘ಟಿಕೆಟ್ ದರ’ | Lalbagh Flower show

Share. Facebook Twitter LinkedIn WhatsApp Email

Related Posts

BREAKING: 30,000 ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಜಿಲ್ಲಾಸ್ಪತ್ರೆ ಸರ್ಜನ್

10/07/2025 3:08 PM1 Min Read

BIG NEWS: ‘SSLC ಪರೀಕ್ಷೆ ಫಲಿತಾಂಶ’ ವೃದ್ಧಿಗೆ ಮಹತ್ವದ ಕ್ರಮ: ಎಲ್ಲಾ ಶಾಲೆಗಳು ಈ ಕ್ರಮ ಅನುಸರಿಸೋದು ಕಡ್ಡಾಯ

10/07/2025 2:58 PM8 Mins Read

BREAKING : ಕಲಬುರ್ಗಿಯಲ್ಲಿ ಘೋರ ಘಟನೆ : ವಸತಿ ಶಾಲೆಯಲ್ಲೇ ನೇಣಿಗೆ ಶರಣಾದ ವಿದ್ಯಾರ್ಥಿ!

10/07/2025 2:14 PM1 Min Read
Recent News

BREAKING: 30,000 ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಜಿಲ್ಲಾಸ್ಪತ್ರೆ ಸರ್ಜನ್

10/07/2025 3:08 PM

BIG NEWS: ‘SSLC ಪರೀಕ್ಷೆ ಫಲಿತಾಂಶ’ ವೃದ್ಧಿಗೆ ಮಹತ್ವದ ಕ್ರಮ: ಎಲ್ಲಾ ಶಾಲೆಗಳು ಈ ಕ್ರಮ ಅನುಸರಿಸೋದು ಕಡ್ಡಾಯ

10/07/2025 2:58 PM

Good News : ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ; ಶೇ.30–34ರಷ್ಟು ‘ವೇತನ’ ಹೆಚ್ಚಳ ಸಾಧ್ಯತೆ : ವರದಿ

10/07/2025 2:58 PM

8ನೇ ವೇತನ ಆಯೋಗವು ನೌಕರರ ‘ವೇತನ, ಪಿಂಚಣಿ’ಯನ್ನ ಶೇ.30–34ರಷ್ಟು ಹೆಚ್ಚಿಸಬಹುದು : ವರದಿ

10/07/2025 2:43 PM
State News
KARNATAKA

BREAKING: 30,000 ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಜಿಲ್ಲಾಸ್ಪತ್ರೆ ಸರ್ಜನ್

By kannadanewsnow0910/07/2025 3:08 PM KARNATAKA 1 Min Read

ಉತ್ತರ ಕನ್ನಡ: ಜಿಲ್ಲೆಯ ಜಿಲ್ಲಾಸ್ಪತ್ರೆಯ ಸರ್ಜನ್ ಒಬ್ಬರು ಗುತ್ತಿಗೆದಾರರೊಬ್ಬರಿಂದ 30,000 ಲಂಚ ಸ್ವೀಕರಿಸುತ್ತಿದ್ದಂತ ವೇಳೆಯಲ್ಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಉತ್ತರ…

BIG NEWS: ‘SSLC ಪರೀಕ್ಷೆ ಫಲಿತಾಂಶ’ ವೃದ್ಧಿಗೆ ಮಹತ್ವದ ಕ್ರಮ: ಎಲ್ಲಾ ಶಾಲೆಗಳು ಈ ಕ್ರಮ ಅನುಸರಿಸೋದು ಕಡ್ಡಾಯ

10/07/2025 2:58 PM

BREAKING : ಕಲಬುರ್ಗಿಯಲ್ಲಿ ಘೋರ ಘಟನೆ : ವಸತಿ ಶಾಲೆಯಲ್ಲೇ ನೇಣಿಗೆ ಶರಣಾದ ವಿದ್ಯಾರ್ಥಿ!

10/07/2025 2:14 PM

BREAKING : ಹಾಸನದಲ್ಲಿ ಸರಣಿ ‘ಹೃದಯಾಘಾತ’ ಪ್ರಕರಣ : ಬೆಚ್ಚಿ ಬೀಳಿಸುತ್ತೆ ತಜ್ಞರ ವರದಿ!

10/07/2025 2:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.