Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Good News : ‘ಆಪರೇಷನ್ ಸಿಂಧೂರ್’ ಕುರಿತು ‘ಲೇಖನ’ ಸ್ಪರ್ಧೆ.! ಬಹುಮಾನ ಮೊತ್ತ ಎಷ್ಟು ಗೊತ್ತಾ.?

02/06/2025 6:16 PM

BREAKING : ರಾಜ್ಯದಲ್ಲಿ ‘ಮೈಕ್ರೋ ಫೈನಾನ್ಸ್’ ಕಿರುಕುಳಕ್ಕೆ ಮತ್ತೊಂದು ಬಲಿ : ವಿಡಿಯೋ ಮಾಡಿಟ್ಟು ವ್ಯಕ್ತಿ ನೇಣಿಗೆ ಶರಣು!

02/06/2025 6:06 PM

‘500 ರೂಪಾಯಿ ನೋಟು’ಗಳು ಕೂಡ ರದ್ದಾಗುತ್ವಾ.? 3 ದೊಡ್ಡ ಕಾರಣಗಳಿವೆ.!

02/06/2025 5:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾಂಗ್ರೆಸ್, ಇಂದಿರಾಗಾಂಧಿ ಜಾರಿಗೆ ತಂದ ಯೋಜನೆಗಳನ್ನು ನಿಲ್ಲಿಸಲು, ಯಾರಿಂದಲೂ ಸಾಧ್ಯವಿಲ್ಲ: DKS
KARNATAKA

ಕಾಂಗ್ರೆಸ್, ಇಂದಿರಾಗಾಂಧಿ ಜಾರಿಗೆ ತಂದ ಯೋಜನೆಗಳನ್ನು ನಿಲ್ಲಿಸಲು, ಯಾರಿಂದಲೂ ಸಾಧ್ಯವಿಲ್ಲ: DKS

By kannadanewsnow0919/11/2024 4:30 PM

ಬೆಂಗಳೂರು : “ಕಾಂಗ್ರೆಸ್ ಸರ್ಕಾರ ಹಾಗೂ ಇಂದಿರಾ ಗಾಂಧಿ ಅವರು ಜಾರಿಗೆ ತಂದಿರುವ ಉಳುವವನೆ ಭೂಮಿಯ ಒಡೆಯ, ಪಿಂಚಣಿ, ಮಧ್ಯಾಹ್ನದ ಬಿಸಿಯೂಟ, ಪಡಿತರ ವ್ಯವಸ್ಥೆ ಸೇರಿದಂತೆ ಅನೇಕ ಯೋಜನೆಗಳನ್ನು ಯಾರಿಂದಲೂ ಹಾಗೂ ಯಾವುದೇ ಸರ್ಕಾರಗಳಿಂದಲೂ ನಿಲ್ಲಿಸಲು ಸಾಧ್ಯವಿಲ್ಲ” ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆಯಲ್ಲಿ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು.

“ಜವಹಾರ್ ಲಾಲ್ ನೆಹರು ಅವರಿಂದ ಹಿಡಿದು ಮನಮೋಹನ್ ಸಿಂಗ್ ಅವರ ಕಾಲದ ತನಕ ಕಾಂಗ್ರೆಸ್ ಸರ್ಕಾರಗಳು ಜಾರಿಗೆ ತಂದ ಒಂದೇ ಒಂದು ಯೋಜನೆಗಳನ್ನು ನಿಲ್ಲಿಸುವ ಶಕ್ತಿ, ಧೈರ್ಯ ಯಾರಿಗೂ ಬರಲಿಲ್ಲ” ಎಂದರು.

ಬ್ಯಾಂಕ್ ರಾಷ್ಟ್ರೀಕರಣದಿಂದ ದೇಶ ಆರ್ಥಿಕವಾಗಿ ಸಬಲ

ಚನ್ನಪಟ್ಟಣದ ಉಪಚುನಾವಣಾ ಸಭೆಯಲ್ಲಿ ಮಾತನಾಡುವಾಗ ಹಿರಿಯ ಮಹಿಳೆಯೊಬ್ಬರು ಇಂದಿರಾಗಾಂಧಿ ಅವರ ಪಿಂಚಣಿ ಯೋಜನೆಯನ್ನು ನೆನಪಿಸಿಕೊಂಡು ʼಮೊದಲಿಗೆ 40 ರೂಪಾಯಿ ಕೊಡುತ್ತಿದ್ದರುʼ ಎಂದು ತುಂಬಿದ ಸಭೆಯಲ್ಲಿ ಹೇಳಿದರು. ಜನರು ಅವರನ್ನು ಅನೇಕ ಜನಪರ ಯೋಜನೆಗಳಿಗಾಗಿ ಈಗಲೂ ನೆನಪಿಸಿಕೊಳ್ಳುತ್ತಾರೆ. ಬ್ಯಾಂಕ್ ರಾಷ್ಟ್ರೀಕರಣದಿಂದ ದೇಶ ಆರ್ಥಿಕವಾಗಿ ಸಬಲವಾಯಿತು. ನೆಹರು ಅವರ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷ ಈ ದೇಶವನ್ನು ಒಗ್ಗಟ್ಟಾಗಿ ಇಟ್ಟಿದೆ” ಎಂದರು.

“ಬಡವರಿಗೆ ಭೂಮಿ ನೀಡಿದ ಕಾಂಗ್ರೆಸ್

“ಭಾರತ್ ಜೋಡೋ ಯಾತ್ರೆ ಸಂದರ್ಭ ಮೊಣಕಾಲ್ಮೂರು ಬಳಿ ಟೀ ಕುಡಿಯಲು ಬಿಡುವು ತೆಗೆದುಕೊಂಡಾಗ ಅಜ್ಜಿಯೊಬ್ಬರು ಕೈಯಲ್ಲಿ ಸೌತೆಕಾಯಿ ಹಿಡಿದುಕೊಂಡು ನಿಂತಿದ್ದರು. ಆಗ ರಾಹುಲ್ ಗಾಂಧಿ ಅವರು ಗಮನಿಸಿ ಕೇಳಿದಾಗ, ʼನಿಮ್ಮ ಅಜ್ಜಿ ಇಂದಿರಮ್ಮ ಕೊಟ್ಟ ಭೂಮಿಯಲ್ಲಿ ಇದನ್ನು ಬೆಳೆದಿದ್ದೇವೆʼ ಎಂದು ಅದನ್ನು ರಾಹುಲ್ ಗಾಂಧಿ ಅವರಿಗೆ ನೀಡಿದರು. ಇದು ಉಳುವವನಿಗೆ ಭೂಮಿ ಕಾರ್ಯಕ್ರಮದ ಫಲ” ಎಂದರು.

ಇಂದಿರಾ ಗಾಂಧಿ ಅವರ ಯುಗದಲ್ಲಿ ಬದುಕಿರುವುದು ಪುಣ್ಯ

“ಇಂದಿರಾ ಗಾಂಧಿ ಅವರ ಯುಗದಲ್ಲಿ ನಾವು ಬದುಕಿದ್ದೇವೆ ಎಂಬುದೇ ನಮ್ಮ ಪುಣ್ಯ. ಈ ದೇಶದ ಉಕ್ಕಿನ ಮಹಿಳೆಯನ್ನು ಯಾರೂ ಸಹ ಮರೆಯಲು ಸಾಧ್ಯವಿಲ್ಲ. ಅವರ ಪ್ರತಿಯೊಂದು ಕಾರ್ಯಕ್ರಮ, ದಿಟ್ಟ ಹೆಜ್ಜೆ, ಹೋರಾಟ, ಧೈರ್ಯ, ನಾಯಕತ್ವ ಹಾಗೂ ತ್ಯಾಗ ಹಾಗೂ ಈ ದೇಶ ಭವಿಷ್ಯಕ್ಕೆ ನೆಹರು ಅವರ ಕುಟುಂಬ ನೀಡಿದ ಮಾರ್ಗದರ್ಶನವನ್ನು ದೇಶದ ಜನರು ಮರೆಯಲು ಸಾಧ್ಯವಿಲ್ಲ” ಎಂದರು.

ಇಂದಿರಾ ಗಾಂಧಿ ಅವರ ಸ್ಪೂರ್ತಿದಾಯಕ ನುಡಿಮುತ್ತುಗಳನ್ನು ಉಲ್ಲೇಖಿಸಿದ ಡಿಸಿಎಂ

“ಅಧಿಕಾರ ಎಂದರೆ ಪ್ರತಿಯೊಬ್ಬ ಮಾನವನ ಪ್ರಗತಿ. ನನ್ನ ತಂದೆ ನೆಹರು ಅವರು ರಾಜಕೀಯದ ಪವಾಡ ಪುರುಷ ಇರಬಹುದು ಆದರೆ ರಾಜಕೀಯದಲ್ಲಿ ನನ್ನ ದಾರಿಯೇ ಬೇರೆ. ಚುನಾವಣೆಯಲ್ಲಿ ಸೋಲುವುದು, ಗೆಲ್ಲುವುದು ಮುಖ್ಯವಲ್ಲ. ಈ ದೇಶವನ್ನು ಗಟ್ಟಿಗೊಳಿಸುವುದು ಮುಖ್ಯ. ಜನರು ತಮ್ಮ ಕರ್ತವ್ಯಗಳನ್ನು ಮರೆತುಬಿಡುತ್ತಾರೆ ಆದರೆ ತಮ್ಮ ಹಕ್ಕುಗಳನ್ನು ನೆನಪಿಸಿಕೊಳ್ಳುತ್ತಾರೆ. ಪ್ರಜೆಗಳು ಅವರ ಕರ್ತವ್ಯ ಹಾಗೂ ಹಕ್ಕುಗಳನ್ನು ನಾವು ನೆನಪಿಸಬೇಕು. ಅಧಿಕಾರ ಎಂದರೆ ಪ್ರತಿ ಮಾನವನ ಪ್ರಗತಿ” ಎಂದು ಇಂದಿರಾ ಗಾಂಧಿ ಅವರ ಸ್ಪೂರ್ತಿದಾಯಕ ನುಡಿಮುತ್ತುಗಳನ್ನು ಭಾಷಣದ ಮಧ್ಯೆ ಡಿಸಿಎಂ ಉಲ್ಲೇಖಿಸಿದರು.

ಮತ್ತೆ ಅಧಿಕಾರಕ್ಕೆ ಬರಲು ತಂತ್ರ, ಒಗ್ಗಟ್ಟು, ಯೋಜನೆಗಳಿಗೆ

“ರಾಜ್ಯದ ಜನರಿಗೆ ನಮ್ಮ ಸರ್ಕಾರ ಮುಂದಿನ ದಿನಗಳಲ್ಲಿ ಹೊಸ ಯೋಜನೆಗಳನ್ನು ನೀಡುತ್ತದೆ. ಮತ್ತೆ ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ನಮ್ಮ ಬಳಿ ತಂತ್ರ, ಮಂತ್ರ, ಒಗ್ಗಟ್ಟು, ನಾಯಕತ್ವ ಹಾಗೂ ಶಕ್ತಿಯಿದೆ. ಕಾರ್ಯಕರ್ತರು ಆಶಾಭಾವನೆ ಮತ್ತು ಒಗ್ಗಟ್ಟಿನಿಂದ ನಮ್ಮ ಜೊತೆ ಇದ್ದರೆ ಸಾಕು” ಎಂದು ಹೇಳಿದರು.

“ಸೋನಿಯಾ ಗಾಂಧಿ ಅವರು ಇಂದಿರಾ ಗಾಂಧಿ ಅವರ ನುಡಿಮುತ್ತುಗಳನ್ನು ಸಂಗ್ರಹಿಸಿರುವ ಪುಸ್ತಕದ ಹಕ್ಕುಸ್ವಾಮ್ಯ ರಾಹುಲ್ ಗಾಂಧಿ ಅವರ ಬಳಿ ಇರುವ ಕಾರಣಕ್ಕೆ ಬೇಗ ಲೋಕಾರ್ಪಣೆಗೊಳಿಸಲು ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಅನುಮತಿ ಪಡೆಯಲಾಗುವುದು. ಮಹಾತ್ಮ ಗಾಂಧಿ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ 100 ವರ್ಷಗಳ ನೆನಪಿನ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಗುವುದು” ಎಂದು ಹೇಳಿದರು.

ಇಂದಿರಾ ಗಾಂಧಿ ಸಿನಿಮಾ ಥಿಯೇಟರ್ ಪ್ರಾರಂಭ ಮಾಡಿದೆ

“ನಾವು ದೆಹಲಿಗೆ ಯುವ ಕಾಂಗ್ರೆಸ್ ಸಮ್ಮೇಳನಕ್ಕೆ ತೆರಳುವ ವೇಳೆ ನಿಂತುಬಿಟ್ಟಿತು. ಇಂದಿರಾಗಾಂಧಿ ಅವರ ಹತ್ಯೆಯಾಗಿದೆ ಎನ್ನುವ ಸುದ್ದಿ ಬಂದ ಕಾರಣಕ್ಕೆ ರೈಲು ದೊಡ್ಡಬಳ್ಳಾಪುರದ ಹತ್ತಿರ ನಿಂತು ಬಿಟ್ಟಿತು. ಬೆಂಗಳೂರಿನಲ್ಲಿ ಗಲಭೆಯೆದ್ದ ಕಾರಣಕ್ಕೆ ಒಂದಷ್ಟು ಜನರನ್ನು ಜೈಲಿಗೆ ಹಾಕಲಾಯಿತು. ನಾನು ಇದೇ ವೇಳೆ ಜಿಲ್ಲಾಧಿಕಾರಿಗಳಾಗಿದ್ದ ಪುಟ್ಟಣಪ್ಪ ಅವರ ಬಳಿ ಸಿನಿಮಾ ಥಿಯೇಟರ್ ಪ್ರಾರಂಭ ಮಾಡುವುದಕ್ಕೆ ಅನುಮತಿ ಕೇಳಿದೆ. ಅವರು ಯಾವ ಹೆಸರನ್ನು ಇಟ್ಟಿದ್ದೀಯಾ ಎಂದು ಕೇಳಿದರು. ನಾನು ʼಇಂದಿರಾಗಾಂಧಿʼ ಅವರ ಹೆಸರನ್ನು ಇಡುತ್ತೇನೆ ಎಂದು ಹೇಳಿದ ತಕ್ಷಣ ಸಹಿ ಹಾಕಿದರು. ಕೆಪಿಸಿಸಿ ಹಿಂಭಾಗದ ನೂತನ ಕಟ್ಟಡಕ್ಕೆ ನಾಮಕರಣ ಮಾಡುವ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಿದೆ ಅವರು ʼಇಂದಿರಾ ಗಾಂಧಿ ಭವನʼ ಎಂದು ಸೂಚಿಸಿದರು. ನಂತರ ಸಭಾಂಗಣಕ್ಕೆ ʼಭಾರತ್ ಜೋಡೋ ಭವನʼ ಎಂದು ಹೆಸರಿಟ್ಟೆವು” ಎಂದರು.

ನಮ್ಮ ಸರ್ಕಾರದಿಂದ ಬಡವರಿಗೆ ತೊಂದರೆಯಾಗುವುದಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

ಕಾಂಗ್ರೆಸ್ ನಲ್ಲೂ ‘ಕಿಂಡರ್ ಗಾರ್ಡನ್’ ಪದ್ಧತಿ ಇದೆ : ಸಚಿವ ಸ್ಥಾನದ ಕುರಿತು ಶಾಸಕ ನರೇಂದ್ರ ಸ್ವಾಮಿ ಅಸಮಾಧಾನ

Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ‘ಮೈಕ್ರೋ ಫೈನಾನ್ಸ್’ ಕಿರುಕುಳಕ್ಕೆ ಮತ್ತೊಂದು ಬಲಿ : ವಿಡಿಯೋ ಮಾಡಿಟ್ಟು ವ್ಯಕ್ತಿ ನೇಣಿಗೆ ಶರಣು!

02/06/2025 6:06 PM1 Min Read

ಕಲಬುರ್ಗಿ ಡಿಸಿ ಬಗ್ಗೆ ಅವಹೇಳನಕಾರಿ ಹೇಳಿಕೆ : ಪೊಲೀಸರ ವಿಚಾರಣೆ ಬಳಿಕ MLC ರವಿಕುಮಾರ್ ಹೇಳಿದ್ದೇನು?

02/06/2025 5:48 PM1 Min Read

BREAKING : ಪ್ರಚೋದನಕಾರಿ ಪೋಸ್ಟ್ : ಮಂಗಳೂರಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ ಅಮೀನ್ ಅರೆಸ್ಟ್

02/06/2025 5:39 PM1 Min Read
Recent News

Good News : ‘ಆಪರೇಷನ್ ಸಿಂಧೂರ್’ ಕುರಿತು ‘ಲೇಖನ’ ಸ್ಪರ್ಧೆ.! ಬಹುಮಾನ ಮೊತ್ತ ಎಷ್ಟು ಗೊತ್ತಾ.?

02/06/2025 6:16 PM

BREAKING : ರಾಜ್ಯದಲ್ಲಿ ‘ಮೈಕ್ರೋ ಫೈನಾನ್ಸ್’ ಕಿರುಕುಳಕ್ಕೆ ಮತ್ತೊಂದು ಬಲಿ : ವಿಡಿಯೋ ಮಾಡಿಟ್ಟು ವ್ಯಕ್ತಿ ನೇಣಿಗೆ ಶರಣು!

02/06/2025 6:06 PM

‘500 ರೂಪಾಯಿ ನೋಟು’ಗಳು ಕೂಡ ರದ್ದಾಗುತ್ವಾ.? 3 ದೊಡ್ಡ ಕಾರಣಗಳಿವೆ.!

02/06/2025 5:51 PM

ಕಲಬುರ್ಗಿ ಡಿಸಿ ಬಗ್ಗೆ ಅವಹೇಳನಕಾರಿ ಹೇಳಿಕೆ : ಪೊಲೀಸರ ವಿಚಾರಣೆ ಬಳಿಕ MLC ರವಿಕುಮಾರ್ ಹೇಳಿದ್ದೇನು?

02/06/2025 5:48 PM
State News
KARNATAKA

BREAKING : ರಾಜ್ಯದಲ್ಲಿ ‘ಮೈಕ್ರೋ ಫೈನಾನ್ಸ್’ ಕಿರುಕುಳಕ್ಕೆ ಮತ್ತೊಂದು ಬಲಿ : ವಿಡಿಯೋ ಮಾಡಿಟ್ಟು ವ್ಯಕ್ತಿ ನೇಣಿಗೆ ಶರಣು!

By kannadanewsnow0502/06/2025 6:06 PM KARNATAKA 1 Min Read

ಹುಬ್ಬಳ್ಳಿ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ತಾಳಲಾರದೆ ಕಳೆದ ಕೆಲವು ತಿಂಗಳು ಹಿಂದೆ ಸರಣಿ ಆತ್ಮಹತ್ಯೆ ಪ್ರಕರಣಗಳು…

ಕಲಬುರ್ಗಿ ಡಿಸಿ ಬಗ್ಗೆ ಅವಹೇಳನಕಾರಿ ಹೇಳಿಕೆ : ಪೊಲೀಸರ ವಿಚಾರಣೆ ಬಳಿಕ MLC ರವಿಕುಮಾರ್ ಹೇಳಿದ್ದೇನು?

02/06/2025 5:48 PM

BREAKING : ಪ್ರಚೋದನಕಾರಿ ಪೋಸ್ಟ್ : ಮಂಗಳೂರಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ ಅಮೀನ್ ಅರೆಸ್ಟ್

02/06/2025 5:39 PM

ಕರ್ನಾಟಕದಲ್ಲಿ ‘ಥಗ್ ಲೈಫ್’ ಬಿಡುಗಡೆಗೆ ರಕ್ಷಣೆ ಕೋರಿ ಹೈಕೋರ್ಟ್ ಮೊರೆ ಹೋದ ನಟ ಕಮಲ್ ಹಾಸನ್

02/06/2025 5:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.