ಬೆಂಗಳೂರು : ಯಾವುದೇ ಧರ್ಮ ದ್ವೇಷ ಮಾಡುವಂತೆ ಹೇಳಲ್ಲ ಎಂದು ಮಿಲ್ಲರ್ ರಸ್ತೆಯ ಮಸ್ಕಿದ್ ಈ ಖಾದರಿಯಲ್ಲಿ ರಂಜಾನ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ನಾವು ಪ್ರಾರ್ಥನೆ ಮಾಡುವುದು ದೇವರು ಹಾಗೂ ಮನುಕುಲಕ್ಕೆ. ನಾವೆಲ್ಲ ಮಾನವರಾಗಿ ಕೆಲಸ ಮಾಡಬೇಕು ಇದು ಬಹಳ ಅವಶ್ಯಕ. ಬದುಕಿನ ಸಾರ್ಥಕಕ್ಕೆ ಮಾನವೀಯತೆ ಮತ್ತು ವಿಶ್ವಾಸದಿಂದ ಇರಬೇಕು. ನಮ್ಮ ದೇಶ ಅನೇಕ ಜಾತಿ ಧರ್ಮ ಮತ್ತು ಸಂಸ್ಕೃತಿಗಳಿಂದ ಕೂಡಿದೆ.
ಯಾವುದೇ ಜಾತಿ ಧರ್ಮ ಇದ್ದರೂ ಕೂಡ ನಾವೆಲ್ಲ ಒಟ್ಟಾಗಿ ಬಾಳಬೇಕು. ಯಾವುದೇ ಧರ್ಮ ದ್ವೇಷ ಬೋಧನೆ ಮಾಡಬಾರದು. ಇಸ್ಲಾಂ, ಕ್ರೈಸ್ತ, ಹಿಂದೂ ಧರ್ಮಗಳು ಪ್ರೀತಿಯನ್ನೇ ತೋರಿಸುತ್ತವೆ. ಯಾವುದೇ ಧರ್ಮ ದ್ವೇಷ ಮಾಡುವಂತೆ ಹೇಳಲ್ಲ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ ಸೇವೆಯ ಹೇಳಿಕೆ ನೀಡಿದರು








