Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING ; ದೆಹಲಿಯ ಕೆಂಪು ಕೋಟೆ ಬಳಿ ಕಾರಿನಲ್ಲಿ ಭಾರಿ ಸ್ಫೋಟ ; 2 ವಾಹನಗಳು ಭಸ್ಮ, ಜನರಲ್ಲಿ ಆತಂಕ

10/11/2025 7:24 PM
Explosion in a car near the Red Fort in Delhi

BREAKING: ದೆಹಲಿಯ ಕೆಂಪು ಕೋಟೆ ಬಳಿ ಕಾರಿನಲ್ಲಿ ಸ್ಫೋಟ…!

10/11/2025 7:20 PM

BIG BREAKING: ದೆಹಲಿಯ ಕೆಂಪುಕೋಟೆ ಬಳಿ ಎರಡು ಕಾರುಗಳು ಸ್ಪೋಟ | Delhi Blast

10/11/2025 7:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯಾವೊಬ್ಬ ಬಿಜೆಪಿ ನಾಯಕರ ಮಕ್ಕಳೂ ಶಾಖೆಗೆ ಹೋಗಿ ‘RSS’ ಚಡ್ಡಿ ಹಾಕಿಕೊಂಡು ಕೋಲಾಟ ಆಡುತ್ತಿಲ್ಲ : ಪ್ರಿಯಾಂಕ್ ಖರ್ಗೆ ವಾಗ್ದಾಳಿ
KARNATAKA

ಯಾವೊಬ್ಬ ಬಿಜೆಪಿ ನಾಯಕರ ಮಕ್ಕಳೂ ಶಾಖೆಗೆ ಹೋಗಿ ‘RSS’ ಚಡ್ಡಿ ಹಾಕಿಕೊಂಡು ಕೋಲಾಟ ಆಡುತ್ತಿಲ್ಲ : ಪ್ರಿಯಾಂಕ್ ಖರ್ಗೆ ವಾಗ್ದಾಳಿ

By kannadanewsnow0502/07/2025 1:40 PM

ಬೆಂಗಳೂರು : ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಆರ್‌ಎಸ್‌ಎಸ್‌ ಬ್ಯಾನ್ ಮಾಡುವುದಾಗಿ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದರು. ಇವರ ಹೇಳಿಕೆಗೆ ಬಿಜೆಪಿ ನಾಯಕರು ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದರು ಇದೀಗ ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ಯಾವೊಬ್ಬ ಬಿಜೆಪಿ ನಾಯಕರ ಮಕ್ಕಳೂ ಶಾಖೆಗೆ ಹೋಗಿ ‘RSS’ ಚಡ್ಡಿ ಹಾಕಿಕೊಂಡು ಕೋಲಾಟ ಆಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಟ್ವೀಟ್ ನಲ್ಲಿ ಸುದೀರ್ಘವಾಗಿ ವಾಗ್ದಾಳಿ ನಡೆಸಿರುವ ಅವರು, RSS ನಿಷೇಧದ ನನ್ನ ಹೇಳಿಕೆಯ ಕುರಿತಾಗಿ ವಿಜಯೇಂದ್ರ ಅವರು ಹಾಗು ಸುನಿಲ್ ಕುಮಾರ್ ಅವರು ಸೇರಿದಂತೆ ಬಿಜೆಪಿಯ ನಾಯಕರು ಬಗೆಬಗೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು, ರಾಜಕೀಯ ಭವಿಷ್ಯ ಕಂಡುಕೊಳ್ಳಲು RSS ರಕ್ಷಣೆಗೆ ನಿಲ್ಲುವುದು ಬಿಜೆಪಿಯವರಿಗೆ ಅತ್ಯಂತ ಅನಿವಾರ್ಯ, ಏಕೆಂದರೆ ಇವರೆಲ್ಲರ ಜುಟ್ಟು ನಾಗಪುರದ ಹಿಡಿತದಲ್ಲಿದೆ. ಇಷ್ಟವಿಲ್ಲದಿದ್ದರೂ ಬಿಜೆಪಿಯವರು RSS ಸಮರ್ಥನೆ ಮಾಡಿಕೊಳ್ಳಲೇಬೇಕು.

RSS ಬಗೆಗೆ ಬಿಜೆಪಿಯವರ ಪ್ರೀತಿ ಗಂಟಲು ಮೇಲಿನದ್ದೇ ಹೊರತು ಹೃದಯದಾಳದ್ದಲ್ಲ, ನೈಜ ಅಭಿಮಾನ ಇದ್ದಿದ್ದರೆ ಬಿಜೆಪಿ ನಾಯಕರು ತಮ್ಮ ಮಕ್ಕಳನ್ನು ಶಾಲೆಯ ಬದಲು ಶಾಖೆಗೆ ಕಳಿಸುತ್ತಿದ್ದರು.ಯಾವೊಬ್ಬ ಬಿಜೆಪಿ ನಾಯಕರ ಮಕ್ಕಳೂ ಶಾಖೆಗೆ ಹೋಗಿ RSS ಚಡ್ಡಿ ಹಾಕಿಕೊಂಡು ಕೋಲಾಟ ಆಡುತ್ತಿಲ್ಲ, RSS ಸಂಪರ್ಕಕ್ಕೆ ಬಂದರೆ ತಮ್ಮ ಮಕ್ಕಳ ಭವಿಷ್ಯಕ್ಕೆ ಬೆಂಕಿ ಬೀಳುತ್ತದೆಂದು ಬಿಜೆಪಿಗರಿಗೂ ಗೊತ್ತಿದೆ.

ಅಕಸ್ಮಾತ್ ಮೋದಿಯವರು ಬಿಜೆಪಿ ನಾಯಕರ ಮಕ್ಕಳಿಗಾಗಿ “ಸೆಲ್ಫಿ ವಿತ್ ಶಾಖೆ“ ಎಂದು ಕರೆ ನೀಡಿದರೆ ಬಿಜೆಪಿಗರ ಬಂಡವಾಳ RSSಗೂ ತಿಳಿಯುತ್ತದೆ. RSS ಎಂಬ ವಿಷಕಾರಿ ಸಂಘಟನೆಯನ್ನು ಸರ್ದಾರ್ ವಲ್ಲಭಾಯ್ ಪಟೇಲರು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿ ನಿಷೇಧ ಹೇರಿದ್ದರು ಎಂಬ ಐತಿಹಾಸಿಕ ಸತ್ಯವನ್ನು ಮಾನ್ಯ ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ಅರಿತುಕೊಂಡರೆ ಒಳಿತು.

ದಂಡು, ದಾಳಿಗೆ ಹೆದರದಿದ್ದರೂ ಈ ದೇಶದ ಸಂವಿಧಾನಕ್ಕೆ ಹೆದರಲೇಬೇಕು @BYVijayendra @karkalasunil ಅವರೇ, ಈ ದೇಶದಲ್ಲಿ ಸಂವಿಧಾನವೇ ಪರಮೋಚ್ಚ ಶಕ್ತಿ. ಈ ದೇಶದ ಸಮಗ್ರತೆಗೆ ದಕ್ಕೆ ತರುವ, ರಾಷ್ಟ್ರಗೀತೆ, ರಾಷ್ಟ್ರಧ್ವಜ, ಸಂವಿಧಾನಕ್ಕೆ ಬೆದರಿಕೆಯೊಡ್ದುವ RSS ಎಂಬ ಕ್ಯಾನ್ಸರ್ ಗೆ ಸಂವಿಧಾನದಲ್ಲಿ ಚಿಕಿತ್ಸೆ ಇದೆ ಎಂಬುದನ್ನು ಬಿಜೆಪಿಯವರು ಮರೆಯದಿರಲಿ.

ಬಿಜೆಪಿಯವರಿಗೆ ನನ್ನ ಸವಾಲು…

1) ಶತಮಾನೋತ್ಸವ ಆಚರಿಸಲು ಸಿದ್ದವಾಗಿರುವ RSS ಈ ನೂರು ವರ್ಷಗಳಲ್ಲಿ ದೇಶಕ್ಕಾಗಿ ಮಾಡಿದ ಕೇವಲ 10 ಸಾಧನೆಗಳನ್ನು ಹೇಳಿಬಿಡಲಿ.

2) ದೇಶದ ಆರ್ಥಿಕತೆ ನೀಡಿದ ಕೊಡುಗೆ ಏನು, ಸಮಾಜದ ಸುಧಾರಣೆಗೆ ಮಾಡಿದ ಕೆಲಸವೇನು, ಅಸಮಾನತೆ, ಶೋಷಣೆಗಳ ನಿರ್ಮೂಲನೆಗೆ ಮಾಡಿದ್ದೇನು?

3) ಬಡವರ ಕಲ್ಯಾಣಕ್ಕೆ ಹಮ್ಮಿಕೊಂಡ ಕಾರ್ಯಕ್ರಮಗಳೇನು? ದೇಶದ ಐಕ್ಯತೆಗೆ ದುಡಿದಿದ್ದೇನು? ಎಂದು RSS ಸಮರ್ಥಿಸುವ ಬಿಜೆಪಿಗರು ಉತ್ತರಿಸಬೇಕು.

4) ಸ್ವತಂತ್ರ ಚಳವಳಿಯ ಸಂದರ್ಭದಲ್ಲಿ ಉಪ್ಪಿನ ಸತ್ಯಾಗ್ರಹದ ವೇಳೆ ದೂರ ಉಳಿದಿದ್ದೇಕೆ?

5) ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸದೆ ಬ್ರಿಟಿಷರ ಪರ ಇದ್ದಿದ್ದೇಕೆ?

6) ಸಂವಿಧಾನದ ಕರಡು ಪ್ರತಿ ಸುಟ್ಟಿದ್ದೇಕೆ?

7) ರಾಷ್ಟ್ರಧ್ವಜವನ್ನು ವಿರೋಧಿಸಿದ್ದೇಕೆ?

8) ದಶಕಗಳ ಕಾಲ ತಿರಂಗಾವನ್ನು ಹಾರಿಸದಿದ್ದಿದ್ದೇಕೆ? ದೇಶವು ಮೂರು ಯುದ್ಧಗಳನ್ನು ಎದುರಿಸಿದ್ದಾಗ ಎಲ್ಲಿ ಹೋಗಿತ್ತು ನಿಮ್ಮ ಬಲಿಷ್ಠ ಸಂಘಟನೆ?

ದೊಗಲೆ ಚಡ್ಡಿ, ತುಂಡು ಕೋಲು ಹಿಡಿದ ಮಾತ್ರಕ್ಕೆ ಯಾರೂ ಸಂವಿಧಾನವನ್ನು ಎದುರಿಸುವಷ್ಟು ಶಕ್ತಿವಂತರಾಗುವುದೂ ಇಲ್ಲ, ದೇಶಭಕ್ತರೆನಿಸಿಕೊಳ್ಳುವುದೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

RSS ನಿಷೇಧದ ನನ್ನ ಹೇಳಿಕೆಯ ಕುರಿತಾಗಿ ವಿಜಯೇಂದ್ರ ಅವರು ಹಾಗು ಸುನಿಲ್ ಕುಮಾರ್ ಅವರು ಸೇರಿದಂತೆ ಬಿಜೆಪಿಯ ನಾಯಕರು ಬಗೆಬಗೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಕುರ್ಚಿ ಉಳಿಸಿಕೊಳ್ಳಲು, ರಾಜಕೀಯ ಭವಿಷ್ಯ ಕಂಡುಕೊಳ್ಳಲು RSS ರಕ್ಷಣೆಗೆ ನಿಲ್ಲುವುದು ಬಿಜೆಪಿಯವರಿಗೆ ಅತ್ಯಂತ ಅನಿವಾರ್ಯ, ಏಕೆಂದರೆ ಇವರೆಲ್ಲರ ಜುಟ್ಟು ನಾಗಪುರದ ಹಿಡಿತದಲ್ಲಿದೆ.… pic.twitter.com/im18qce2tL

— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) July 2, 2025

Share. Facebook Twitter LinkedIn WhatsApp Email

Related Posts

BREAKING: ಪರಪ್ಪನ ಅಗ್ರಹಾರ ಜೈಲಲ್ಲಿ ವೀಡಿಯೋ ವೈರಲ್ ಕೇಸ್: ಮುಖ್ಯ ಅಧೀಕ್ಷಕರಾಗಿ ಅಂಶು ಕುಮಾರ್ ನೇಮಕ

10/11/2025 7:09 PM1 Min Read

GOOD NEWS: ರಾಜ್ಯ ಸರ್ಕಾರದಿಂದ ‘ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ’ ನೋಂದಣಿ

10/11/2025 7:02 PM2 Mins Read

ನಾಳೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ರಾಷ್ಟ್ರೀಯ ಶಿಕ್ಷಣ ದಿನಾಚರಣೆ’ ಆಚರಿಸುವುದು ಕಡ್ಡಾಯ: ಸರ್ಕಾರ ಆದೇಶ

10/11/2025 6:56 PM1 Min Read
Recent News

BREAKING ; ದೆಹಲಿಯ ಕೆಂಪು ಕೋಟೆ ಬಳಿ ಕಾರಿನಲ್ಲಿ ಭಾರಿ ಸ್ಫೋಟ ; 2 ವಾಹನಗಳು ಭಸ್ಮ, ಜನರಲ್ಲಿ ಆತಂಕ

10/11/2025 7:24 PM
Explosion in a car near the Red Fort in Delhi

BREAKING: ದೆಹಲಿಯ ಕೆಂಪು ಕೋಟೆ ಬಳಿ ಕಾರಿನಲ್ಲಿ ಸ್ಫೋಟ…!

10/11/2025 7:20 PM

BIG BREAKING: ದೆಹಲಿಯ ಕೆಂಪುಕೋಟೆ ಬಳಿ ಎರಡು ಕಾರುಗಳು ಸ್ಪೋಟ | Delhi Blast

10/11/2025 7:14 PM

ಪೋಷಕರೇ ಎಚ್ಚರ ; ಟಿವಿ, ಗೇಮ್, ಮೊಬೈಲ್ ಬಳಕೆ ‘ಮಕ್ಕಳ ಹೃದಯ’ವನ್ನ ದುರ್ಬಲಗೊಳಿಸುತ್ವೆ ; ಸಂಶೋಧನೆ

10/11/2025 7:11 PM
State News
KARNATAKA

BREAKING: ಪರಪ್ಪನ ಅಗ್ರಹಾರ ಜೈಲಲ್ಲಿ ವೀಡಿಯೋ ವೈರಲ್ ಕೇಸ್: ಮುಖ್ಯ ಅಧೀಕ್ಷಕರಾಗಿ ಅಂಶು ಕುಮಾರ್ ನೇಮಕ

By kannadanewsnow0910/11/2025 7:09 PM KARNATAKA 1 Min Read

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಲ್ಲಿ ಕೈದಿಗಳು ಮೋಜು-ಮಸ್ತಿ ಮಾಡಿದಂತ ವೀಡಿಯೋ ವೈರಲ್ ಆಗಿತ್ತು. ಅಲ್ಲದೇ ಉಗ್ರನಿಗೆ ಮೊಬೈಲ್ ನೀಡಿದಂತ ವೀಡಿಯೋ…

GOOD NEWS: ರಾಜ್ಯ ಸರ್ಕಾರದಿಂದ ‘ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ’ ನೋಂದಣಿ

10/11/2025 7:02 PM

ನಾಳೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ರಾಷ್ಟ್ರೀಯ ಶಿಕ್ಷಣ ದಿನಾಚರಣೆ’ ಆಚರಿಸುವುದು ಕಡ್ಡಾಯ: ಸರ್ಕಾರ ಆದೇಶ

10/11/2025 6:56 PM

BREAKING: ರಾಜ್ಯದ ‘ಗೃಹ ಲಕ್ಷ್ಮೀ ಫಲಾನುಭವಿ’ಗಳಿಗೆ ಮತ್ತೊಂದು ಸಿಹಿಸುದ್ದಿ: ಸರ್ಕಾರದಿಂದ ‘ಗೃಹಲಕ್ಷ್ಮೀ ಸಹಕಾರ ಸಂಘ’ ನೋಂದಣಿ

10/11/2025 6:43 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.