ಬೆಂಗಳೂರು: ರಾಜ್ಯದ ಹಲವೆಡೆ ಎನ್‌ ಐಎ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಲೋಕ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಪಿಎಫ್‌ ಐ ಮೇಲೆ ಎನ್‌ ಐಎ ದಾಳಿ ನಡೆಸಿದೆ.

BIGG NEWS: PFI ಸಂಫಟನೆ ಬ್ಯಾನ್‌ ಮಾಡಲು ಕೇಂದ್ರ ಸರ್ಕಾರ ಮೀನಮೇಷ; ಪ್ರಮೋದ್‌ ಮುತಾಲಿಕ್‌

 

ಇಂದು ಎನ್‌ ಐಎ ದಾಳಿ ನಡೆಸಿದ್ದು, ಅದಕ್ಕೆ ನಾವು ಕೂಡ ಸಹಾಯ ಮಾಡಿದ್ದೇವೆ. ಈಗಾಗಲೇ ಡಿ.ಜೆ ಹಳ್ಳಿ ಕೇಸ್‌ ಗೆ ಸಂಬಂಧಿಸಿದಂತೆ ಕೇಸ್‌ ನಲ್ಲಿ ಬೇಕಾದವರಿಗೆ ರೇಡ್‌ ಆಗಿದೆ ಎಂದು ಹೇಳಿದ್ದಾರೆ.
ಇನ್ನು ಬೆಂಗಳೂರು ಮತ್ತು ಮಂಗಳೂರು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ದಾಳಿ ನಡೆಸಿದೆ. ಜಿಲ್ಲೆಯಲ್ಲಿರುವ ಪಿಎಫ್ಐ ಸಂಘಟನೆಯ ನಾಯಕ ಮನೆಗಳ ಮೇಲೆ NIA ಹಾಗೂ ED ಅಧಿಕಾರಿಗಳು ದಾಳಿ ನಡೆಸಿದೆ. ಈ ವೇಳೆ ಕೆಲ ಮುಖಂಡರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ಸುಮಾರು 20 ಕಾರ್ಯಕರ್ತರನ್ನು ಎನ್ಐಎ ವಶಕ್ಕೆ ಪಡೆದಿದೆ ಎಂದು ಹೇಳಲಾಗಿದೆ.

Share.
Exit mobile version