ಬೆಂಗಳೂರು: ನಿನ್ನೆ ನಗರದಲ್ಲಿ ಭಾರೀ ಮಳೆ ಅವಾಂತರವನ್ನೇ ಸೃಷ್ಠಿಸಿತ್ತು. ಪೂರ್ವ ಮುಂಗಾರು ಮಳೆ ತಂದ ಅವಾಂತರಕ್ಕೆ ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಬರೋಬ್ಬರಿ 50 ಮರಗಳು ಧರೆಗುರುಳಿದ್ದಾವೆ. ಅಲ್ಲದೇ 171 ಮರಗಳ ರೆಂಬೆ ಕೊಂಬೆಗಳು ಮುರಿದು ಬಿದ್ದಿದ್ದಾವೆ.

ಬಿಬಿಎಂಪಿಯಿಂದ ಅಂಕಿ ಅಂಶಗಳನ್ನು ಒಳಗೊಂಡ ಮಾಹಿತಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ಸೌತ್ ವಿಭಾಗದಲ್ಲಿ 10 ಮರಗಳು ಬಿದ್ದಿದ್ದರೇ, ರಾಜರಾಜೇಶ್ವರಿ ನಗರದಲ್ಲಿ 32, ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ 6, ಬೆಂಗಳೂರು ವೆಸ್ಟ್ ನಲ್ಲಿ 10, ಮಹದೇವಪುರ ವ್ಯಾಪ್ತಿಯಲ್ಲಿ 1, ಯಲಹಂಕದಲ್ಲಿ 3, ಬೆಂಗಳೂರು ಈಸ್ಟ್ ನಲ್ಲಿ 6 ಹಾಗೂ ದಾಸರಹಳ್ಳಿಯಲ್ಲಿ 2 ಸೇರಿದಂತೆ 70 ಮರಗಳು ಉರುಳಿ ಬಿದ್ದಿದ್ದಿವೆ. ಈವರೆಗೆ 55 ಮರಗಳನ್ನು ತೆರವು ಮಾಡಲಾಗಿದೆ ಎಂದಿದೆ.

ಇನ್ನೂ ಬೆಂಗಳೂರು ಸೌಥ್ ವ್ಯಾಪ್ತಿಯಲ್ಲಿ 30 ಮರಗಳ ರೆಂಬೆ ಕೊಂಬೆಗಳು ಮುರಿದು ಬಿದ್ದಿದ್ದರೇ, ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ 63, ಬೊಮ್ಮನಹಳ್ಳಿಯಲ್ಲಿ 22, ಬೆಂಗಳೂರು ವೆಸ್ಟ್ ನಲ್ಲಿ 25, ಮಹದೇವಪುರದಲ್ಲಿ 2, ಯಲಹಂಕದಲ್ಲಿ 5, ಬೆಂಗಳೂರು ಈಸ್ಟ್ ನಲ್ಲಿ 22 ಹಾಗೂ ದಾಸರಹಳ್ಳಿ ವ್ಯಾಪ್ತಿಯಲ್ಲಿ 2 ಮರಗಳ ರೆಂಬೆ ಕೊಂಬೆ ಸೇರಿದಂತೆ 171 ಮರಗಳ ರೆಂಬೆಕೊಂಬೆಗಳು ಮುರಿದು ಬಿದ್ದಿವೆ. ಈವರೆಗೆ 119 ಮರಗಳ ರೆಂಬೆಕೊಂಬೆಯನ್ನು ತೆರವು ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.

ನಾನು ಕಥಾನಾಯಕನಾದರೆ ಡಿಸಿಎಂ ಡಿಕೆ ಶಿವಕುಮಾರ್ ಖಳನಾಯಕ : ಮಾಜಿ ಸಿಎಂ HD ಕುಮಾರಸ್ವಾಮಿ ವಾಗ್ದಾಳಿ

BREAKING : ‘UPSC NDA -1 ಪರೀಕ್ಷೆ’ ಫಲಿತಾಂಶ ಪ್ರಕಟ, ನೇರ ಲಿಂಕ್ ಇಲ್ಲಿದೆ!

Share.
Exit mobile version