ಬೆಂಗಳೂರು : ಇದೀಗ ಇಡೀ ದೇಶದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದ್ದು ಈ ಕುರಿತಂತೆ ಇಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸುದಿಗೋಷ್ಠಿ ನಡೆಸಿದ್ದು ಈ ಒಂದು ಪ್ರಕರಣದ ಕಥಾನಾಯಕ ನಾನಾದರೆ ಇದರ ಖಳನಾಯಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ವಾಗ್ದಾಳಿ ನಡೆಸಿದರು.

ಇಂದು ಬೆಂಗಳೂರಿನಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ ನಾಲ್ಕರ ನಂತರ ಈ ಪ್ರಕರಣ ಇರುತ್ತೋ ಇಲ್ಲವೋ ಗೊತ್ತಿಲ್ಲ ಪೆನ್ ಡ್ರೈವ್ ಹಂಚಿದ ನಾಲ್ವರು ರಾಜಾರೋಷವಾಗಿ ಓಡಾಡುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ HD ಕುಮಾರಸ್ವಾಮಿ ವಾಗ್ದಾಳಿ ಎಂದು ತಿಳಿಸಿದರು.

ನಾನು ಇಂತಹ ಅಶ್ಲೀಲ ಪೆನ್ ಡ್ರೈವ್ ಇಟ್ಟುಕೊಂಡಿಲ್ಲ ನನ್ನ ಬಳಿಯೋ ಪೆನ್ ಡ್ರೈವ್ ಬಿಡು ಬಿಡುಗಡೆ ಮಾಡಲು ಮನವಿ ಮಾಡಿದ್ದೆ ಬಿಡುಗಡೆ ಮಾಡಲು ಮುಖ್ಯಮಂತ್ರಿ ಹಾಗೂ ಸ್ಪೀಕರ್ಗೆ ಮನವಿ ಮಾಡಿದ್ದೆ ಆದರೆ ಪೆನ್ ಡ್ರೈವ್ ಮಾಡಿ ಹೆಣ್ಣುಮಕ್ಕಳ ಮಾನ ಹರಾಜು ಮಾಡಿದ್ದು ನೀವು ಯಾರೇ ತಪ್ಪು ಮಾಡಿದರೂ ಗಲ್ಲಿಗೇರಿಸಿ ಎಂದು ಹೇಳಿದ್ದೇನೆ.ಎಂದು ತಿಳಿಸಿದರು.

Share.
Exit mobile version