ನವದೆಹಲಿ : ಡಿಸೆಂಬರ್ 1 ರಿಂದ ಅಂದ್ರೆ, ಇಂದಿನಿಂದ ನಿಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ನಿಯಮಗಳಲ್ಲಿ ಬದಲಾವಣೆಯಾಗಲಿವೆ. ಎಲ್‌ಪಿಜಿ ಸಿಲಿಂಡರ್‌ಗಳು, ಸಿಎನ್‌ಜಿ, ಪಿಎನ್‌ಜಿಗಳ ಬೆಲೆಗಳನ್ನು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ನಿಗದಿಪಡಿಸಲಾಗುತ್ತದೆ.

ನವೆಂಬರ್ 30 ರೊಳಗೆ ಪಿಂಚಣಿ ಪಡೆದ ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು. ನೀವು ನವೆಂಬರ್ 30 ರೊಳಗೆ ಜೀವನ ಪ್ರಮಾಣಪತ್ರವನ್ನು ಸಲ್ಲಿಸದಿದ್ದರೆ, ಪಿಂಚಣಿ ಪಡೆಯಲು ನಿಮಗೆ ತೊಂದರೆಯಾಗಬಹುದು ಎಂದು ಮೊದಲೇ ತಿಳಿಸಲಾಗಿತ್ತು. ಇನ್ನೂ, ಡಿಸೆಂಬರ್‌ನಲ್ಲಿ ಬ್ಯಾಂಕುಗಳು 13 ದಿನಗಳ ಕಾಲ ಮುಚ್ಚಲ್ಪಡುತ್ತವೆ. ಈ ನಿಯಮಗಳ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.

1. PNG, CNG ಬೆಲೆ ನಿಗದಿ

ಹೆಚ್ಚಾಗಿ, ಪ್ರತಿ ತಿಂಗಳ ಮೊದಲ ಅಥವಾ ಮೊದಲ ವಾರದಲ್ಲಿ ದೇಶಾದ್ಯಂತ ಪಿಎನ್‌ಜಿ, ಸಿಎನ್‌ಜಿಯ ಬೆಲೆಗಳನ್ನು ನಿಗದಿಪಡಿಸಲಾಗುತ್ತದೆ. ದೆಹಲಿ ಮತ್ತು ಮುಂಬೈನಲ್ಲಿ ಕಂಪನಿಗಳು ತಿಂಗಳ ಮೊದಲ ವಾರದಲ್ಲಿ ದರಗಳನ್ನು ಬದಲಾಯಿಸುತ್ತವೆ.

2. ಎಲ್‌ಪಿಜಿ ಸಿಲಿಂಡರ್ ಬೆಲೆ ನಿಗದಿ

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ನಿಗದಿಪಡಿಸಲಾಗುತ್ತದೆ. ಕಳೆದ ತಿಂಗಳು, ಸರ್ಕಾರವು 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿತ್ತು. ಆದಾಗ್ಯೂ, 14 ಕೆಜಿ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಬಾರಿ ಸರ್ಕಾರವು ಬೆಲೆಯನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

3. ಬ್ಯಾಂಕುಗಳಿಗೆ 13 ದಿನಗಳು ರಜೆ

2022 ರ ಡಿಸೆಂಬರ್‌ ತಿಂಗಳಲ್ಲಿ ಒಟ್ಟು 13 ದಿನಗಳ ಕಾಲ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಬ್ಯಾಂಕಿನ 13 ದಿನಗಳ ರಜಾದಿನಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಎಲ್ಲಾ ಭಾನುವಾರಗಳ ವಾರಾಂತ್ಯದ ರಜಾದಿನಗಳು ಸೇರಿವೆ. ವರ್ಷದ ಕೊನೆಯ ದಿನವಾದ ಕ್ರಿಸ್ ಮಸ್ ಮತ್ತು ಗುರು ಗೋವಿಂದ್ ಸಿಂಗ್ ಅವರ ಜನ್ಮದಿನವ ಡಿಸೆಂಬರ್ ತಿಂಗಳಲ್ಲಿ ಬರುತ್ತದೆ. ಅದರ ಮೇಲೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಭಾರತದ ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕುಗಳು ರಜಾದಿನಗಳಲ್ಲಿ ಮುಚ್ಚಲ್ಪಡುತ್ತವೆ. ಆದಾಗ್ಯೂ, ಕೆಲವು ಬ್ಯಾಂಕುಗಳು ಸ್ಥಳೀಯ ಹಬ್ಬಗಳು ಮತ್ತು ರಜಾದಿನಗಳನ್ನು ಆಚರಿಸುತ್ತವೆ ಮತ್ತು ಆ ದಿನದಂದು ರಾಜ್ಯದಲ್ಲಿ ಮುಚ್ಚಲ್ಪಡುತ್ತವೆ. ಬ್ಯಾಂಕುಗಳು ಮುಚ್ಚಲ್ಪಟ್ಟಾಗ, ನಿಮ್ಮ ಹೆಚ್ಚಿನ ಕೆಲಸವನ್ನು ನೀವು ಆನ್ಲೈನ್ ಬ್ಯಾಂಕಿಂಗ್ ಮೂಲಕ ನಿಭಾಯಿಸಬಹುದು.

4. ಪಿಂಚಣಿದಾರರು ನವೆಂಬರ್ 30 ರೊಳಗೆ ಜೀವನ ಪ್ರಮಾಣಪತ್ರವನ್ನು ಸಲ್ಲಿಸಿರಬೇಕು

ಪಿಂಚಣಿ ಪಡೆಯುವುದನ್ನು ಮುಂದುವರಿಸಲು, ಪಿಂಚಣಿದಾರರು ತಮ್ಮ ವಾರ್ಷಿಕ ಜೀವನ ಪ್ರಮಾಣಪತ್ರವನ್ನು ನವೆಂಬರ್ 30, 2022 ರೊಳಗೆ ಸಲ್ಲಿಸಿರಬೇಕು. ನವೆಂಬರ್ 30 ರೊಳಗೆ ಈ ಕೆಲಸವನ್ನು ಪೂರ್ಣಗೊಳಿಸದಿದ್ದರೆ, ನಿಮ್ಮ ಪಿಂಚಣಿಗೆ ಸಂಬಂಧಿಸಿದ ಕೆಲವು ತೊಂದರೆಗಳು ಎದುರಾಗಬಹುದು.

BREAKING NEWS: ಎನ್ಡಿಟಿವಿ ಗ್ರೂಪ್ ಎಡಿಟರ್, ಹಿರಿಯ ಪತ್ರಕರ್ತ ರವೀಶ್ ಕುಮಾರ್ ರಾಜೀನಾಮೆ | Ravish Kumar resigns

BIG NEWS: ಇಂದು ʻಡಿಜಿಟಲ್ ರೂಪಾಯಿʼ ಬಿಡುಗಡೆ… ಬೆಂಗಳೂರಲ್ಲೂ ಈ ಸೇವೆ ಲಭ್ಯ! | Digital rupee

BIG NEWS: ಗುಜರಾತ್ ವಿಧಾನಸಭೆ ಚುನಾವಣೆ: ಇಂದು ಬೆಳಗ್ಗೆ 8 ಗಂಟೆಯಿಂದ ಮೊದಲ ಹಂತದ ಮತದಾನ ಪ್ರಾರಂಭ | Gujarat Assembly election

BREAKING NEWS: ಎನ್ಡಿಟಿವಿ ಗ್ರೂಪ್ ಎಡಿಟರ್, ಹಿರಿಯ ಪತ್ರಕರ್ತ ರವೀಶ್ ಕುಮಾರ್ ರಾಜೀನಾಮೆ | Ravish Kumar resigns

Share.
Exit mobile version