ನವದೆಹಲಿ: ನಿಷೇಧಿತ ಭಯೋತ್ಪಾದಕ ಸಂಘಟನೆ ‘ಸಿಖ್ಸ್ ಫಾರ್ ಜಸ್ಟೀಸ್’ನಿಂದ ರಾಜಕೀಯ ಧನಸಹಾಯ ಪಡೆದ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಸೋಮವಾರ ಶಿಫಾರಸು ಮಾಡಿದ್ದಾರೆ.

ವಾಂಟೆಡ್ ಭಯೋತ್ಪಾದಕ ಗುರುಪತ್ವಂತ್ ಪನ್ನುನ್ ಸ್ಥಾಪಿಸಿದ ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ ಗುಂಪಿನಿಂದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜಕೀಯ ಧನಸಹಾಯ ಪಡೆದಿದ್ದಾರೆ ಎಂಬ ಆರೋಪದ ಬಗ್ಗೆ ಭಯೋತ್ಪಾದನಾ ವಿರೋಧಿ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಹೇಳಿದ್ದಾರೆ.

ಕೇಂದ್ರ ಗೃಹ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ, ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಖಲಿಸ್ತಾನಿ ಗುಂಪುಗಳಿಂದ 16 ಮಿಲಿಯನ್ ಡಾಲರ್ ಹಣವನ್ನ ಸ್ವೀಕರಿಸಿದೆ ಎಂದು ಪನ್ನುನ್ ಘೋಷಿಸುವ ವೀಡಿಯೊವನ್ನು ಸಕ್ಸೇನಾ ಉಲ್ಲೇಖಿಸಿದ್ದಾರೆ.

ಈ ಆರೋಪಕ್ಕೆ ಎಎಪಿ ಇನ್ನೂ ಪ್ರತಿಕ್ರಿಯಿಸಿಲ್ಲ.

 

“ಒಂದು ಕಡೆ ರಾಮನ ಭಕ್ತರು ಮತ್ತೊಂದೆಡೆ, ರಾಮ ದ್ರೋಹಿ” : ಕಾಂಗ್ರೆಸ್ ವಿರುದ್ಧ ಸಿಎಂ ಯೋಗಿ ವಾಗ್ದಾಳಿ

ನಾಡಿನ ‘ಮಹಿಳೆ’ಯರಿಗೆ ‘ಭಾವನಾತ್ಮಕ ಪತ್ರ’ ಬರೆದ ‘ಸಿಎಂ ಸಿದ್ಧರಾಮಯ್ಯ’: ಇಲ್ಲಿದೆ ಓದಿ | CM Siddaramaiah

ಶಿವಮೊಗ್ಗ: ಮತಗಟ್ಟೆಗಳಿಗೆ ತೆರಳಲು ಮಸ್ಟರಿಂಗ್ ಕೇಂದ್ರಗಳಲ್ಲಿ ಅಧಿಕಾರಿ, ಸಿಬ್ಬಂದಿಗಳು ತಯಾರಿ

Share.
Exit mobile version