ಭೋಪಾಲ್ (ಮಧ್ಯಪ್ರದೇಶ): ಚಿಕನ್ ವಿಷಯವಾಗಿ ಗಂಡ-ಹೆಂಡತಿ ನಡುವೆ ಉಂಟಾದ ಜಗಳವನ್ನು ಬಿಡಿಸಲು ಹೋಗಿ ನೆರೆ ಮನೆಯ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ನ ಬಿಲ್ಖಿರಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಚವಾನಿ ಪಥರ್ ಗ್ರಾಮದಲ್ಲಿ ನಡೆದಿದೆ.
ಎಚ್ಚರ.! ‘ಬ್ರೈನ್ ಸ್ಟ್ರೋಕ್’ ಆಗೋಕು ತಿಂಗಳ ಮೊದ್ಲು ಕಾಣಿಸಿಕೊಳ್ಳೊ ಈ ಪ್ರಮುಖ ‘ಲಕ್ಷಣ’ ಲಘುವಾಗಿ ಪರಿಗಣಿಸ್ಬೇಡಿ.!
ಚವಾನಿ ಪಥರ್ ಗ್ರಾಮದಲ್ಲಿ ಚಿಕನ್ ಮಾಡುವ ವಿಷಯದಲ್ಲಿ ದಂಪತಿಗಳು ಜಗಳವಾಡುತ್ತಿದ್ದರು. ಚಿಕನ್ ಮಾಡಲು ಹೆಂಡತಿ ನಿರಾಕರಿಸಿದ್ದಕ್ಕೆ ಪತಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಇದನ್ನು ಕಂಡ ನೆರೆಮನೆ ನಿವಾಸಿಗಳಲ್ಲಿ ಕೆಲವರು ದಂಪತಿ ನಡುವಿನ ಜಗಳವನ್ನು ಪರಿಹರಿಸಲು ಮುಂದಾಗಿದ್ದರು.
ಇದರಿಂದ ಕೋಪಗೊಂಡ ಆರೋಪಿ ಪಪ್ಪು, ನೆರೆಹೊರೆಯವರಾದ ಬಬ್ಲು ಅಹಿರ್ವಾರ್ ಎಂಬುವವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.ಆದರೆ ಚಿಕಿತ್ಸೆ ಫಸಲಿದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪಪ್ಪು ಅಹಿರ್ವಾರ್ ನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕರ್ಕೇಟ ಎಸ್ಪಿ ತಿಳಿಸಿದ್ದಾರೆ.
BIGG BREAKING NEWS: 100 ರೂ ದೇಣಿಗೆ ಸಂಗ್ರಹ ಆದೇಶ ಹಿಂಪಡೆದ ‘ಶಿಕ್ಷಣ ಇಲಾಖೆ’