ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಅವರು ನಿಧನ ಹೊಂದಿ ಎರಡು ವರ್ಷ ಕಳೆದ್ರೂ ಅವರ ಸಾವಿಗೆ ನಿಕರ ಕಾರಣವೇನು ಎಂದು ತಿಳಿದುಬಂದಿಲ್ಲ. ಇದು ಆತ್ಮಹತ್ಯೆಯೋ… ಕೊಲೆಯೋ ಎಂದು ಕೆಲವರು ಬಿಂಬಿಸುವುದರಲ್ಲೇ ಇದ್ದಾರೆ.
ಇದೀಗ ಎನ್ ಸಿಬಿ ಯಿಂದ ಮತ್ತೊಂದ ಮಾಹಿತಿ ಹೊರಗೆ ಬಿದ್ದಿದೆ. ಸುಶಾಂತ್ ಸಿಂಗ್ ರಜಪೂತ್ ಅವರು ಅತೀಯಾಗಿ ಮಾದಕ ದ್ರವ್ಯವ್ಯೆಸನಿಯಾಗಲು ರಿಯಾ ಚಕ್ರವರ್ತಿ ಅವರು ಕುಮ್ಮಕ್ಕು ನೀಡಿದ್ದರು ಎಂದು ಎನ್ ಸಿಬಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ. ಅವರ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದ ತನಿಖೆಯಲ್ಲಿ, ಎನ್ಸಿಬಿ ಈ ಪ್ರಕರಣದಲ್ಲಿ 35 ಆರೋಪಿಗಳ ವಿರುದ್ಧ ಒಟ್ಟು 38 ಆರೋಪಗಳನ್ನು ಹೊರಿಸಿದೆ.
ಈ ಕುರಿತು ಅತೀ ಶೀಘ್ರದಲ್ಲೇ ತನಿಖೆಯ ತೀರ್ಪು ಹೊರಗೆ ಬರಲಿದೆ. ಅದಕ್ಕಾಗಿ ಸುಶಾಂತ್ ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಇಂದಿಗೂ ಸಹ ಸುಶಾಂತ್ ಸಾವಿಗೆ ನ್ಯಾಯ ಸಿಗಬೇಕೆಂದು ಅದೆಷ್ಟೋ ಮಂದಿ ಹೋರಾಟ ಮಾಡುತ್ತಿದ್ದಾರೆ. ಪ್ರಕರಣದ ತನಿಖೆ ಪೂರ್ಣಗೊಂಡು ಸುಶಾಂತ್ ಸಾವಿಗೆ ಕಾರಣ ಆದವರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.