ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವಂತ ನಂದಿನಿ ಗಿರಿಧಾಮವನ್ನು ಹೊಸ ವರ್ಷದಂದು ಬಂದ್ ಮಾಡಲಾಗುತ್ತಿದೆ. ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಪಿಎನ್ ರವೀಂದ್ರ ಆದೇಶಿಸಿದ್ದಾರೆ.
ಈ ಕುರಿತಂತೆ ಆದೇಶ ಹೊರಡಿಸಿರುವಂತ ಡಿಸಿ, ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಡಿಸೆಂಬರ್.31ರ ಸಂಜೆ 6ರಿಂದ ಜನವರಿ 1ರ ಬೆಳಿಗ್ಗೆ 7 ಗಂಟೆಯವರೆಗೆ ಪ್ರವಾಸಿಗರು, ಸಾರ್ವಜನಿಕರ ಪ್ರವೇಶಕ್ಕೆ ನಂದಿನಿ ಗಿರಿಧಾಮಕ್ಕೆ ಪ್ರವೇಶ ನಿಷೇಧಿಸಲಾಗಿದೆ ಎಂದಿದ್ದಾರೆ.
ಇನ್ನೂ ನಂದಿಗಿರಿಧಾಮದ ಮೇಲಿರುವಂತ ಅತಿಥಿ ಗೃಹಗಳ ಬುಕ್ಕಿಂಕ್ ಕೂಡ ರದ್ದುಗೊಳಿಸಲಾಗಿದೆ. ನಂದಿ ಗಿರಿಧಾಮದ ಅತಿಥಿ ಗೃಹಗಳಿಗೆ ಬುಕ್ಕಿಂಗ್ ಅನ್ನು ಜನವರಿ.1ರಂದು ಬೆಳಿಗ್ಗೆ 7ರ ನಂತ್ರವೇ ಅವಕಾಶ ನೀಡಲಾಗಿದೆ. ಅಲ್ಲಿಯವರೆಗೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನಿರ್ಬಂಧಿಸಲಾಗಿದೆ.
GOOD NEWS: ರಾಜ್ಯದಲ್ಲಿ ‘ಹೊಸ PU ಕಾಲೇಜು’ ತೆರೆಯುವ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಅರ್ಜಿ ಆಹ್ವಾನ
ಆಂದೋಲ ಶ್ರೀಗಳು ವೀರಶೈವ ಲಿಂಗಾಯತ ರಲ್ಲವೇ?: ಸಮಾಜದ ಮುಖಂಡ ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನೆ