ಬೆಂಗಳೂರು : ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ ಟೀಕೆ ಸಾಯುತ್ತದೆ ಕೆಲಸ ಉಳಿಯುತ್ತದೆ ಎಂದು ಬೆಂಗಳೂರಿನ ಎಕ್ಸ್ ಪೋ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು. ಬೆಂಗಳೂರಿನಲ್ಲಿ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್ಪೋ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹುಷಾರಾಗಿರಿ ನೀವು ವ್ಯವಹಾರ ಮಾಡುವಾಗ ಯಶಸ್ಸು ಮುಖ್ಯ. ನನ್ನನ್ನು ಬಂಡೆ ಅಂತ ಕರೆಯುತ್ತಾರೆ ಆದರೆ ಬಂಡೆ ಮುಂದೆ ಆಕೃತಿ ಆಗುತ್ತದೆ. ನಾನು ಚಿಕ್ಕವನು ಆಗಿರಬಹುದು ಆದರೆ ಅನುಭವ ಇದೆ ನನ್ನ ಜಾತಿ ಅವರೇ ನನ್ನನ್ನು ಟೀಕೆ ಮಾಡುತ್ತಿದ್ದಾರೆ ಹಿಂದೆ ಮುಂದೆಯಿಂದ ಚಾಕು ಹಾಕುತ್ತಿದ್ದಾರೆ ಎಚ್ ಡಿ ಕುಮಾರಸ್ವಾಮಿ ಜೊತೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಆದರೆ ಅವರೇ ನನಗೆ ಚಾಕು ಹಾಕಿದ್ದಾರೆ ಅಂತ ಹೇಳಿದ್ದಾರೆ ಸಕ್ಸಸ್ ಸ್ಟೋರಿಯಲ್ಲಿ ಶ್ರಮ ಮತ್ತು ಟೀಕೆ ಇದ್ದೇ ಇರುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.








