ನವದೆಹಲಿ: ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರನ್ನು ಗುರುಗ್ರಾಮದ ಮೇದಾಂತ ಆಸ್ಪತ್ರೆಯ ಐಸಿಯು ವಾರ್ಡ್ಗೆ ದಾಖಲಿಸಲಾಗಿದೆ.
Bharat Jodo Yatra : ಇಂದು ಮೈಸೂರಿಗೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯನ್ನು ಹಲವಾರು ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದಾಗ್ಯೂ, ಭಾನುವಾರ ಅವರ ಸ್ಥಿತಿ ಗಂಭೀರಗೊಂಡ ನಂತರ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು.
Bharat Jodo Yatra : ಇಂದು ಮೈಸೂರಿಗೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ
ಮುಲಾಯಂ ಸಿಂಗ್ ಯಾದವ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ಮುಲಾಯಂ ಸಿಂಗ್ ಯಾದವ್ ಅವರ ಪುತ್ರ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ದೆಹಲಿ ತಲುಪಿದ್ದಾರೆ.
Haryana | SP chief Akhilesh Yadav reaches Medanta hospital in Gurugram where his father & SP leader Mulayam Singh Yadav has been admitted https://t.co/4jAtwMloFX pic.twitter.com/kCCcxbxWOS
— ANI (@ANI) October 2, 2022
ಇದಕ್ಕೂ ಮುನ್ನ ಸಮಾಜವಾದಿ ಪಕ್ಷದ ಪಿತಾಮಹನ ಪತ್ನಿ ಸಾಧನಾ ಗುಪ್ತಾ ಈ ವರ್ಷದ ಜುಲೈನಲ್ಲಿ ನಿಧನರಾದರು. ಶ್ವಾಸಕೋಶದ ಸೋಂಕಿಗಾಗಿ ಅವರು ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಾಧನಾ ಗುಪ್ತಾ ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿ. ಅವರ ಮೊದಲ ಪತ್ನಿ ಮಾಲ್ತಿ ದೇವಿ 2003 ರಲ್ಲಿ ನಿಧನರಾದರು. ಮಾಲತಿ ದೇವಿ ಅಖಿಲೇಶ್ ಯಾದವ್ ಅವರ ತಾಯಿ.