Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

“ಸುರಕ್ಷತಾ ನಿಯಮ ಪಾಲಿಸಿ” ; ಇರಾನ್’ನಲ್ಲಿ ವಾಸಿಸುವ ಭಾರತೀಯರಿಗೆ ‘ಸಹಾಯವಾಣಿ ಸಂಖ್ಯೆ’ ಬಿಡುಗಡೆ

14/06/2025 3:14 PM

BREAKING : ರಾಯಚೂರಲ್ಲಿ ಘೋರ ದುರಂತ : ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಜನರು ಅಸ್ವಸ್ಥ, ಆಸ್ಪತ್ರೆಗೆ ದಾಖಲು!

14/06/2025 3:03 PM

ಪೈಲಟ್ ಮೇ ಡೇ ಸಂದೇಶದ 1 ನಿಮಿಷದಲ್ಲಿ ಕೇವಲ 2 ಕಿಮೀ ದೂರದಲ್ಲಿ ಏರ್ ಇಂಡಿಯಾ ವಿಮಾನ ದುರಂತ: ವಿಮಾನಯಾನ ಸಚಿವಾಲಯ

14/06/2025 3:02 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೋದಿಯವರೇ ಜಾತಿಗಣತಿಗೆ ಮುಂದಾಗಿದ್ದು ರಾಜ್ಯ ಸರ್ಕಾರದ ಮೇಲಿನ ದೊಡ್ಡಭಾರ ತಪ್ಪಿದಂತಾಗಿದೆ: ಶಾಸಕ ಗೋಪಾಲಕೃಷ್ಣ ಬೇಳೂರು
KARNATAKA

ಮೋದಿಯವರೇ ಜಾತಿಗಣತಿಗೆ ಮುಂದಾಗಿದ್ದು ರಾಜ್ಯ ಸರ್ಕಾರದ ಮೇಲಿನ ದೊಡ್ಡಭಾರ ತಪ್ಪಿದಂತಾಗಿದೆ: ಶಾಸಕ ಗೋಪಾಲಕೃಷ್ಣ ಬೇಳೂರು

By kannadanewsnow0905/05/2025 9:45 PM

ಸಾಗರ : ಪ್ರಧಾನಿ ನರೇಂದ್ರ ಮೋದಿಯವರೆ ಜಾತಿಗಣತಿಗೆ ಮುಂದಾಗಿದ್ದು ರಾಜ್ಯ ಸರ್ಕಾರದ ಮೇಲಿನ ದೊಡ್ಡಭಾರ ತಪ್ಪಿದೆ. ಅನೇಕ ಜಾತಿಯವರು ತಮ್ಮ ಜನಸಂಖ್ಯೆ ಹೆಚ್ಚು ಎಂದು ವಾದಿಸುತ್ತಿದ್ದರು. ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ಜಾತಿಗಣತಿ ಮಾಡಿದ್ದರಿಂದ ನಿಖರವಾದ ಮಾಹಿತಿ ಸಿಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಲ್ಲಿನ ಶಿವಪ್ಪನಾಯಕ ನಗರದ ಪರಿಶಿಷ್ಟ ವರ್ಗದ ಕಾಲೋನಿಯಲ್ಲಿ ಸೋಮವಾರ ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣದ ಮನೆಮನೆ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನಗಣತಿ ಜೊತೆ ಜಾತಿಗಣತಿಗೂ ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ಸಂತೋಷ ತಂದಿದೆ ಎಂದರು.

ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗವು ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಲೋಪವಾಗಬಾರದು ಎನ್ನುವ ಉದ್ದೇಶಕ್ಕೆ ಪುನರ್ ಪರಿಶೀಲನೆಗೆ ಶಿಫಾರಸ್ಸು ಮಾಡಿತ್ತು. ಪರಿಶಿಷ್ಟ ಜಾತಿಯಲ್ಲಿ 101 ಪಂಗಡಗಳಿದ್ದು ಎಲ್ಲ ಪಂಡಗಳಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಅನೇಕ ಸಂದರ್ಭದಲ್ಲಿ ಅರ್ಹರಿಗೆ ಮೀಸಲಾತಿ ಸೌಲಭ್ಯಗಳು ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮೀಸಲಾತಿಗೆ ಚಾಲನೆ ನೀಡಿದೆ. ಸಮೀಕ್ಷೆಗೆ ಬಂದಾಗ ನಿಖರವಾದ ಮಾಹಿತಿ ನೀಡುವ ಮೂಲಕ ನಿಮ್ಮ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯ ಪಡೆದುಕೊಳ್ಳಲು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿ, ಸಣ್ಣಪುಟ್ಟ ಜಾತಿಗಳಿಗೆ ಸರ್ಕಾರಿ ಸೌಲಭ್ಯ ತಲುಪಬೇಕಾದರೆ ಗಣತಿ ಅಗತ್ಯ. ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿಯವರು ಜನಗಣತಿ ಜೊತೆ ಜಾತಿಗಣತಿಗೂ ಮುಂದಾಗಿರುವುದು ಎಲ್ಲ ವರ್ಗದ ಜನಸಂಖ್ಯೆ ಅರಿತುಕೊಳ್ಳುವ ಜೊತೆಗೆ ತುಳಿತಕ್ಕೊಳಗಾದ ಜನಾಂಗಗಳಿಗೆ ಮೀಸಲಾತಿ ಮೂಲಕ ಸರ್ಕಾರಿ ಸೌಲಭ್ಯ ತಲುಪಿಸಲು ಅನುಕೂಲವಾಗುತ್ತದೆ. ಜಾತಿಗಣತಿಗೆ ಅಧಿಕಾರಿಗಳು ಬಂದಾಗ ಪರಿಶಿಷ್ಟ ಜಾತಿಯವರು ತಮ್ಮ ಮೂಲಜಾತಿ ನಮೂದಿಸುವ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯರಾದ ಮಧುಮಾಲತಿ, ಗಣಪತಿ ಮಂಡಗಳಳೆ, ತಹಶೀಲ್ದಾರ್ ಚಂದ್ರಶೇಖರ ನಾಯ್ಕ್, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಈ., ಸಮಾಜ ಕಲ್ಯಾಣಾಧಿಕಾರಿ ಸುರೇಶ್ ಸಹಾನೆ, ಪೌರಾಯುಕ್ತ ಎಚ್.ಕೆ.ನಾಗಪ್ಪ ಇನ್ನಿತರರು ಹಾಜರಿದ್ದರು. ವಿ.ಟಿ.ಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.

Share. Facebook Twitter LinkedIn WhatsApp Email

Related Posts

BREAKING : ರಾಯಚೂರಲ್ಲಿ ಘೋರ ದುರಂತ : ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಜನರು ಅಸ್ವಸ್ಥ, ಆಸ್ಪತ್ರೆಗೆ ದಾಖಲು!

14/06/2025 3:03 PM1 Min Read

BREAKING : ಬೆಂಗಳೂರಲ್ಲಿ ‘BMTC’ ಚಾಲಕನ ಮೇಲೆ ಚಪ್ಪಲಿಯಿಂದ ಹಲ್ಲೆಗೈದ ಮಹಿಳೆ : ದೂರು ದಾಖಲು

14/06/2025 2:47 PM1 Min Read

ಪ್ರಯಾಣಿಕರ ಗಮನಕ್ಕೆ: ಈ ಎರಡು ರೈಲುಗಳ ಸಂಚಾರ ರದ್ದು

14/06/2025 2:47 PM1 Min Read
Recent News

“ಸುರಕ್ಷತಾ ನಿಯಮ ಪಾಲಿಸಿ” ; ಇರಾನ್’ನಲ್ಲಿ ವಾಸಿಸುವ ಭಾರತೀಯರಿಗೆ ‘ಸಹಾಯವಾಣಿ ಸಂಖ್ಯೆ’ ಬಿಡುಗಡೆ

14/06/2025 3:14 PM

BREAKING : ರಾಯಚೂರಲ್ಲಿ ಘೋರ ದುರಂತ : ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಜನರು ಅಸ್ವಸ್ಥ, ಆಸ್ಪತ್ರೆಗೆ ದಾಖಲು!

14/06/2025 3:03 PM

ಪೈಲಟ್ ಮೇ ಡೇ ಸಂದೇಶದ 1 ನಿಮಿಷದಲ್ಲಿ ಕೇವಲ 2 ಕಿಮೀ ದೂರದಲ್ಲಿ ಏರ್ ಇಂಡಿಯಾ ವಿಮಾನ ದುರಂತ: ವಿಮಾನಯಾನ ಸಚಿವಾಲಯ

14/06/2025 3:02 PM

“ಪ್ರಸರಿಸುತ್ತಿಲ್ಲ, ಶಕ್ತಿ ಕಳೆದುಕೊಳ್ತಿದೆ, ಮೇಲೆರಲು ಸಾಧ್ಯವಾಗ್ತಿಲ್ಲ ; ಏರ್ ಇಂಡಿಯಾ ಅಪಘಾತಕ್ಕೂ ಮುನ್ನ ಪೈಲಟ್’ಗಳ ಕೊನೆಯ ಸಂದೇಶ

14/06/2025 2:54 PM
State News
KARNATAKA

BREAKING : ರಾಯಚೂರಲ್ಲಿ ಘೋರ ದುರಂತ : ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಜನರು ಅಸ್ವಸ್ಥ, ಆಸ್ಪತ್ರೆಗೆ ದಾಖಲು!

By kannadanewsnow0514/06/2025 3:03 PM KARNATAKA 1 Min Read

ರಾಯಚೂರು : ರಾಯಚೂರಿನಲ್ಲಿ ಇಂದು ಘೋರವಾದ ದುರಂತ ಒಂದು ಸಂಭವಿಸಿದ್ದು ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ…

BREAKING : ಬೆಂಗಳೂರಲ್ಲಿ ‘BMTC’ ಚಾಲಕನ ಮೇಲೆ ಚಪ್ಪಲಿಯಿಂದ ಹಲ್ಲೆಗೈದ ಮಹಿಳೆ : ದೂರು ದಾಖಲು

14/06/2025 2:47 PM

ಪ್ರಯಾಣಿಕರ ಗಮನಕ್ಕೆ: ಈ ಎರಡು ರೈಲುಗಳ ಸಂಚಾರ ರದ್ದು

14/06/2025 2:47 PM

SHOCKING : ರಾಜ್ಯದಲ್ಲಿ ಹೇಯ ಕೃತ್ಯ : ಅನ್ಯ ವ್ಯಕ್ತಿ ಜೊತೆ ‘ಲೈಂಗಿಕ ಕ್ರಿಯೆ’ ನಡೆಸಲು ಅಪ್ರಾಪ್ತ ಮಗಳಿಗೆ ಒತ್ತಾಯಿಸಿದ ಪಾಪಿ ತಂದೆ!

14/06/2025 2:41 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.