Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ 4,000 ಕೋಟಿ ವೆಚ್ಚದಲ್ಲಿ 500 ಕಿಮೀ ರಸ್ತೆಗೆ ವೈಟ್‌ ಟಾಪಿಂಗ್ ಡಿಪಿಆರ್ ಸಿದ್ಧತೆ: ಡಿಸಿಎಂ ಡಿ.ಕೆ. ಶಿವಕುಮಾರ್

21/10/2025 4:48 PM

ಮೊಬೈಲ್‌ ಸ್ಫೋಟ: ಬಹು ಅಂಗಾಂಗಕ್ಕೆ ಹಾನಿ-ಪ್ರಾಣಾಪಾಯದಿಂದ ಪಾರು ಮಾಡಿದ ಸಕಾಲಿಕ ಚಿಕಿತ್ಸೆ

21/10/2025 4:44 PM

ಕೆಇಎ ಕಾರ್ಯವೈಖರಿ ಬಗ್ಗೆ ಮಹಾರಾಷ್ಟ್ರ ಅಧಿಕಾರಿಯಿಂದ ಮೆಚ್ಚುಗೆ: ಸೀಟು ಹಂಚಿಕೆ ಅಧ್ಯಯನಕ್ಕೆ 2ನೇ ಭೇಟಿ

21/10/2025 4:40 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೊಬೈಲ್‌ ಸ್ಫೋಟ: ಬಹು ಅಂಗಾಂಗಕ್ಕೆ ಹಾನಿ-ಪ್ರಾಣಾಪಾಯದಿಂದ ಪಾರು ಮಾಡಿದ ಸಕಾಲಿಕ ಚಿಕಿತ್ಸೆ
KARNATAKA

ಮೊಬೈಲ್‌ ಸ್ಫೋಟ: ಬಹು ಅಂಗಾಂಗಕ್ಕೆ ಹಾನಿ-ಪ್ರಾಣಾಪಾಯದಿಂದ ಪಾರು ಮಾಡಿದ ಸಕಾಲಿಕ ಚಿಕಿತ್ಸೆ

By kannadanewsnow0921/10/2025 4:44 PM

ಬೆಂಗಳೂರು: ಮೊಬೈಲ್‌ ಸ್ಫೋಟದಿಂದಾಗಿ ಗಂಭೀರವಾಗಿ ಗಾಯಗೊಂಡು ಬಹುಅಂಗಾಂಗ ಹಾನಿಗೊಳಗಾಗಿದ್ದ 19 ವರ್ಷದ ಯುವಕನನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ನಗರದ ಸ್ಪರ್ಶ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

ತನ್ನ ಮನೆಯಲ್ಲಿ ಮೊಬೈಲ್‌ ನೋಡುತ್ತಿದ್ದಾಗ 19 ವರ್ಷದ ಯುವಕ ಪ್ರಥಮ್‌ (ಹೆಸರು ಬದಲಿಸಲಾಗಿದೆ) ಮೊಬೈಲ್‌ ಅಕಸ್ಮಾತ್‌ ಸ್ಫೋಟಿಸಿತ್ತು.. ಮಧುಮೇಹದಿಂದಲೂ ಬಳಲುತ್ತಿದ್ದ ಪ್ರಥಮ್‌ರನ್ನು ತಕ್ಷಣ ಇನ್‌ಫ್ಯಾಂಟ್ರಿ ರಸ್ತೆಯ ಸ್ಪರ್ಶ್‌ ಆಸ್ಪತ್ರೆಗೆ ಕರೆ ತರಲಾಗಿತ್ತು. ತಮ್ಮ ಪುತ್ರ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಆತನ ಮುಖದ ತುಂಬಾ ಕಪ್ಪು ಮಸಿ ತುಂಬಿಕೊಂಡು ಮುಖದ ತುಂಬ ಗಾಯಗಳಾಗಿ ಬಲ ಗೈ ಊದಿಕೊಂಡಿದ್ದನ್ನು ಕಂಡ ಪ್ರಥಮ್‌ ತಂದೆ ಆಸ್ಪತ್ರೆಗೆ ದಾಖಲಿಸಿದ್ದರು. ತಕ್ಷಣ ಕಾರ್ಯಪ್ರವೃತ್ತವಾದ ಸ್ಪರ್ಶ್‌ ಆಸ್ಪತ್ರೆಯ ಬಹು ವಿಭಾಗೀಯ ತಜ್ಞ ವೈದ್ಯರ ತಂಡ ಯುವಕನು ಮೊಬೈಲ್‌ ಸ್ಫೋಟದಿಂದಾಗಿ ಡಯಾಬಿಟಿಕ್‌ ಕೀಟೋ ಅಸಿಡೋಸಿಸ್‌ ಎಂಬ ಮಾರಣಾಂತಿಕ ಸ್ಥಿತಿಗೆ ತಲುಪಿದ್ದನ್ನು ಪತ್ತೆ ಮಾಡಿದರು. ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ತುತು ಚಿಕಿತ್ಸಾ ತಜ್ಞರು, ಮೂಳೆ ತಜ್ಷರು ಹಾಗೂ ಪ್ಲಾಸ್ಟಿಕ್‌ ಸರ್ಜರಿ ವೈದ್ಯರ ತಂಡ ಚಿಕಿತ್ಸೆ ಆರಂಭಿಸಿತು. ಮೊದಲಿಗೆ ಯುವಕನನ್ನು ಸ್ಥಿರ ಸ್ಥಿತಿಗೆ ಮರಳಿಸುವುದು ವೈದ್ಯರಿಗೆ ಬಹುದೊಡ್ಡ ಸವಾಲಾಗಿತ್ತು. ಜೊತೆಗೆ ವಿಷಕಾರಿ ಪದಾರ್ಥಗಳ ಹೊಗೆಯಿಂದ ಬಹುತೇಕ ನಿಷ್ಕ್ರಿಯಗೊಂಡಿದ್ದ ಶ್ವಾಸಕೋಶ ಸ್ಥಿತಿಯನ್ನು ನಿಯಂತ್ರಣಕ್ಕೆ ತರಬೇಕಾಗಿತ್ತು. ತೀವ್ರವಾಗಿ ಘಾಸಿಗೊಂಡಿದ್ದ ಕೈಗಳು ಇನ್ನಷ್ಟು ಹಾನಿಗೊಳಗಾಗುವುದನ್ನು ತಪ್ಪಿಸಬೇಕಾಗಿದ್ದು ತುರ್ತು ಚಿಕಿತ್ಸಾ ತಜ್ಞರಾದ ಡಾ.ಹೇಮಂತ್‌ ಹೆಚ್‌.ಆರ್‌, ಡಾ.ಟಿ.ಎಸ್‌.ಶ್ರೀನಾಥ್‌ ಕುಮಾರ್‌, ಮೂಳೆ ತಜ್ಞ ಡಾ.ರವಿಕುಮಾರ್‌ ಮುಖರ್ತಿಯಲ್‌, ಪ್ಲಾಸ್ಟಿಕ್‌ ಸರ್ಜನ್‌ ಡಾ.ಕಾರ್ತಿಕ್‌ ಆದಿತ್ಯ ವಿ.ಎಸ್‌, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕಿಶನ್‌ ನಾಗ್‌ ತಂಡ ಯುವಕನನ್ನು ಪ್ರಜ್ಞಾವಸ್ಥೆಗೆ ಮರಳಿಸಿ ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.

ಇದೊಂದು ಅತ್ಯಂತ ಸಂಕೀರ್ಣವಾಗಿದ್ದ ಮತ್ತು ರೋಗಿಯ ಪ್ರಾಣಕ್ಕೆ ಕುತ್ತು ತರುವಂತಹ ಸ್ಥಿತಿಯಾಗಿದ್ದು ಬಹು ಅಂಗಾಂಗ ವ್ಯವಸ್ಥೆಯ ಮೇಲೆ ಸ್ಫೋಟದ ಗಂಭೀರ ಪರಿಣಾಮಗಳುಂಟಾಗಿದ್ದವು. ಸುಟ್ಟ ಗಾಯಗಳು,ಶ್ವಾಸಕೋಶಕ್ಕೆ ತೀವ್ರ ತರದ ಹಾನಿ, ಡಯಾಬಿಟಿಸ್‌ನಿಂದಾಗಿ ಚಯಾಪಚಯ ಪ್ರಕ್ರಿಯೆಗೆ ತೊಂದರೆ ಉಂಟಾಗಿತ್ತು. ಮಧುಮೇಹವಿರುವುದರಿಂದ ದೇಹದ ಅಂಗಾಂಗಗಳ ಮೇಲೆ ತೀವ್ರ ಪರಿಣಾಮ ಬೀರಿರುವುದನ್ನು ಮೊದಲೇ ಖಚಿತಪಡಿಸಿಕೊಂಡು ಸೂಕ್ತ ಚಿಕಿತ್ಸಾ ಕ್ರಮ ನಿರ್ಧರಿಸಿ ಬಹು ಅಂಗಾಂಗ ವೈಫಲ್ಯವನ್ನು ತಪ್ಪಿಸಲು ಸಾಧ್ಯವಾಯಿತು ಎಂದು ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಹಿರಿಯ ಸಮಾಲೋಚಕ ಡಾ. ಹೇಮಂತ್‌ ಹೆಚ್‌.ಆರ್‌.ತಿಳಿಸಿದರು.

ತಜ್ಞ ವೈದ್ಯರ ಸಮೂಹ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಯುವಕನನ್ನು ಪ್ರಾಣಾಪಾಯದಿಂದ ಪಾರು ಮಾಡಿ ಸಹಜ ಸ್ಥಿತಿಗೆ ಮರಳಿಸುವುದು ಸಾಧ್ಯವಾಯಿತು ಎಂದು ಸ್ಪರ್ಶ್‌ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕಿಶನ್‌ ನಾಗ್‌ ಹೇಳಿದರು.

‘KMF’ ಹೊಸ ದಾಖಲೆ: ದಸರಾ, ದೀಪಾವಳಿಯಲ್ಲಿ 1,100 ಮೆಟ್ರಿಕ್ ಟನ್ ‘ನಂದಿನಿ ಸಿಹಿ ಉತ್ಪನ್ನ’ಗಳು ಮಾರಾಟ | Nandini Products

ಕೆಇಎ ಕಾರ್ಯವೈಖರಿ ಬಗ್ಗೆ ಮಹಾರಾಷ್ಟ್ರ ಅಧಿಕಾರಿಯಿಂದ ಮೆಚ್ಚುಗೆ: ಸೀಟು ಹಂಚಿಕೆ ಅಧ್ಯಯನಕ್ಕೆ 2ನೇ ಭೇಟಿ

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ 4,000 ಕೋಟಿ ವೆಚ್ಚದಲ್ಲಿ 500 ಕಿಮೀ ರಸ್ತೆಗೆ ವೈಟ್‌ ಟಾಪಿಂಗ್ ಡಿಪಿಆರ್ ಸಿದ್ಧತೆ: ಡಿಸಿಎಂ ಡಿ.ಕೆ. ಶಿವಕುಮಾರ್

21/10/2025 4:48 PM4 Mins Read

ಕೆಇಎ ಕಾರ್ಯವೈಖರಿ ಬಗ್ಗೆ ಮಹಾರಾಷ್ಟ್ರ ಅಧಿಕಾರಿಯಿಂದ ಮೆಚ್ಚುಗೆ: ಸೀಟು ಹಂಚಿಕೆ ಅಧ್ಯಯನಕ್ಕೆ 2ನೇ ಭೇಟಿ

21/10/2025 4:40 PM1 Min Read

‘KMF’ ಹೊಸ ದಾಖಲೆ: ದಸರಾ, ದೀಪಾವಳಿಯಲ್ಲಿ 1,100 ಮೆಟ್ರಿಕ್ ಟನ್ ‘ನಂದಿನಿ ಸಿಹಿ ಉತ್ಪನ್ನ’ಗಳು ಮಾರಾಟ | Nandini Products

21/10/2025 4:09 PM2 Mins Read
Recent News

ಬೆಂಗಳೂರಲ್ಲಿ 4,000 ಕೋಟಿ ವೆಚ್ಚದಲ್ಲಿ 500 ಕಿಮೀ ರಸ್ತೆಗೆ ವೈಟ್‌ ಟಾಪಿಂಗ್ ಡಿಪಿಆರ್ ಸಿದ್ಧತೆ: ಡಿಸಿಎಂ ಡಿ.ಕೆ. ಶಿವಕುಮಾರ್

21/10/2025 4:48 PM

ಮೊಬೈಲ್‌ ಸ್ಫೋಟ: ಬಹು ಅಂಗಾಂಗಕ್ಕೆ ಹಾನಿ-ಪ್ರಾಣಾಪಾಯದಿಂದ ಪಾರು ಮಾಡಿದ ಸಕಾಲಿಕ ಚಿಕಿತ್ಸೆ

21/10/2025 4:44 PM

ಕೆಇಎ ಕಾರ್ಯವೈಖರಿ ಬಗ್ಗೆ ಮಹಾರಾಷ್ಟ್ರ ಅಧಿಕಾರಿಯಿಂದ ಮೆಚ್ಚುಗೆ: ಸೀಟು ಹಂಚಿಕೆ ಅಧ್ಯಯನಕ್ಕೆ 2ನೇ ಭೇಟಿ

21/10/2025 4:40 PM

‘KMF’ ಹೊಸ ದಾಖಲೆ: ದಸರಾ, ದೀಪಾವಳಿಯಲ್ಲಿ 1,100 ಮೆಟ್ರಿಕ್ ಟನ್ ‘ನಂದಿನಿ ಸಿಹಿ ಉತ್ಪನ್ನ’ಗಳು ಮಾರಾಟ | Nandini Products

21/10/2025 4:09 PM
State News
KARNATAKA

ಬೆಂಗಳೂರಲ್ಲಿ 4,000 ಕೋಟಿ ವೆಚ್ಚದಲ್ಲಿ 500 ಕಿಮೀ ರಸ್ತೆಗೆ ವೈಟ್‌ ಟಾಪಿಂಗ್ ಡಿಪಿಆರ್ ಸಿದ್ಧತೆ: ಡಿಸಿಎಂ ಡಿ.ಕೆ. ಶಿವಕುಮಾರ್

By kannadanewsnow0921/10/2025 4:48 PM KARNATAKA 4 Mins Read

ಬೆಂಗಳೂರು : “4 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ 500 ಕಿ.ಮೀ. ಉದ್ದದ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಡಿಪಿಆರ್…

ಮೊಬೈಲ್‌ ಸ್ಫೋಟ: ಬಹು ಅಂಗಾಂಗಕ್ಕೆ ಹಾನಿ-ಪ್ರಾಣಾಪಾಯದಿಂದ ಪಾರು ಮಾಡಿದ ಸಕಾಲಿಕ ಚಿಕಿತ್ಸೆ

21/10/2025 4:44 PM

ಕೆಇಎ ಕಾರ್ಯವೈಖರಿ ಬಗ್ಗೆ ಮಹಾರಾಷ್ಟ್ರ ಅಧಿಕಾರಿಯಿಂದ ಮೆಚ್ಚುಗೆ: ಸೀಟು ಹಂಚಿಕೆ ಅಧ್ಯಯನಕ್ಕೆ 2ನೇ ಭೇಟಿ

21/10/2025 4:40 PM

‘KMF’ ಹೊಸ ದಾಖಲೆ: ದಸರಾ, ದೀಪಾವಳಿಯಲ್ಲಿ 1,100 ಮೆಟ್ರಿಕ್ ಟನ್ ‘ನಂದಿನಿ ಸಿಹಿ ಉತ್ಪನ್ನ’ಗಳು ಮಾರಾಟ | Nandini Products

21/10/2025 4:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.