Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ‘ಕಾಂತಾರ ಚಾಪ್ಟರ್ 1’ ಸೆಟ್​​ನಲ್ಲಿ ಮುಗುಚಿದ ಬೋಟ್ : ರಿಷಿಬ್ ಶೆಟ್ಟಿ ಸೇರಿ 30 ಕಲಾವಿದರು ಪ್ರಾಣಾಪಾಯದಿಂದ ಪಾರು!

15/06/2025 5:46 AM

BIG NEWS : ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮತ್ತೆ 5 ಸಾವಿರ ಕೋಟಿ : CM ಸಿದ್ದರಾಮಯ್ಯ ಘೋಷಣೆ

15/06/2025 5:32 AM

BREAKING : ವಿಜಯಪುರ : ವೇಶ್ಯಾವಾಟಿಕೆ ನಡೆಸುತ್ತಿದ ಲಾಡ್ಜ್ ಮೇಲೆ ಪೊಲೀಸರ ದಾಳಿ : ಇಬ್ಬರು ಮಹಿಳೆಯರ ರಕ್ಷಣೆ ಐವರು ಅರೆಸ್ಟ್

15/06/2025 5:25 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದಲ್ಲಿ ‘ಪತ್ರಿಕಾ ಭವನ’ ಕಟ್ಟಡ ನಿರ್ಮಾಣಕ್ಕೆ ‘ಶಾಸಕ ಬೇಳೂರು ಗೋಪಾಲಕೃಷ್ಣ’ ಶಂಕುಸ್ಥಾಪನೆ
KARNATAKA

ಸಾಗರದಲ್ಲಿ ‘ಪತ್ರಿಕಾ ಭವನ’ ಕಟ್ಟಡ ನಿರ್ಮಾಣಕ್ಕೆ ‘ಶಾಸಕ ಬೇಳೂರು ಗೋಪಾಲಕೃಷ್ಣ’ ಶಂಕುಸ್ಥಾಪನೆ

By kannadanewsnow0930/08/2024 6:37 PM

ಶಿವಮೊಗ್ಗ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ತಾಲ್ಲೂಕು ಶಾಖೆಗೆ ನೂತನ ಪತ್ರಿಕಾ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅಣಲೆಕೊಪ್ಪದ ಸ್ತ್ರೀಶಕ್ತಿ ಭವನದ ಮೇಲ್ಭಾಗದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಅಡಿಗಲ್ಲಿಗೆ ಅಕ್ಷತೆ ಹಾಕುವ ಮೂಲಕ ಶಂಕು ಸ್ಥಾಪನೆ ನೆರವೇರಿಸಿದರು.

ಈ ಬಳಿಕ ಮಾತನಾಡಿದಂತ ಅವರು, ನಾನು ಶಾಸಕರ ಅನುದಾನದಲ್ಲೇ ಪತ್ರಿಕಾ ಭವನವನ್ನು ನಿರ್ಮಾಣ ಮಾಡಲು ಮುಂದಾಗಿದ್ದೆ. ಆದರೇ ನಗರಸಭೆಯಿಂದ ತಾವೇ ನಿರ್ಮಿಸಿಕೊಡುವುದಾಗಿ ಆಯುಕ್ತ ಹೆಚ್.ಕೆ ನಾಗಪ್ಪ ಅವರು ಹೇಳಿದರು. ಹೀಗಾಗಿ ಇಂದು ಪತ್ರಿಕಾ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ಕಾರ್ಯ ನಡೆದಿದೆ. ನಗರಸಭೆಯಿಂದ ಪತ್ರಿಕಾ ಭವನ ನಿರ್ಮಾಣಕ್ಕಾಗಿ 10 ಲಕ್ಷ ಅನುದಾನವನ್ನು ಒದಗಿಸಿಕೊಡಲಾಗುತ್ತಿದೆ ಎಂದರು.

ಎಷ್ಟು ಸಾಧ್ಯವೋ ಅಷ್ಟು ಬೇಗ ಪತ್ರಿಕಾ ಭವನ ನಿರ್ಮಾಣ ಕಾಮಗಾರಿಯನ್ನು ಮುಗಿಸುವಂತೆ ನಗರಸಭೆ ಆಯುಕ್ತರಿಗೆ ಇದೇ ಸಂದರ್ಭದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಸೂಚಿಸಿದರು.

ಪತ್ರಕರ್ತರಿಗೆ ನನ್ನ ಸಹಕಾರ ಸದಾ ಇದೆ. ನನ್ನ ವಿರುದ್ಧವೂ ಬರೆಯುವ ಹಕ್ಕು ನಿಮಗಿದೆ. ಬರೆಯಿರಿ, ನೀವು ಸಂವಿಧಾನದ ನಾಲ್ಕನೇ ಅಂಗವಿದ್ದಂತೆ. ಅದಕ್ಕೇನು ಬೇಜಾರಿಲ್ಲ ಎಂದು ಹೇಳಿದರು.

ಸಾಗರ ನಗರಸಭೆ ಆಯುಕ್ತ ಹೆಚ್.ಕೆ ನಾಗಪ್ಪ ಮಾತನಾಡಿ ಪತ್ರಿಕಾ ಭವನ ನಿರ್ಮಾಣದ ಬಗ್ಗೆ ಈ ಹಿಂದೆಯೇ ಮನವಿ ಮಾಡಲಾಗಿತ್ತು. ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿತ್ತು. ಶಾಸಕರ ಸೂಚನೆಯ ಮೇರೆಗೆ ನಗರಸಭೆಯಿಂದಲೇ ಅನುದಾನ ನೀಡುವ ಮೂಲಕ ಪತ್ರಿಕಾ ಭವನ ನಿರ್ಮಾಣ ಮಾಡಲಾಗುತ್ತಿದೆ. ಇನ್ನೂ ಹೆಚ್ಚಿನ ಅನುದಾನವನ್ನು ಒದಗಿಸಿ ಕೊಡಲಾಗುತ್ತದೆ. ಆದಷ್ಟು ಬೇಗ ಸ್ತ್ರೀ ಶಕ್ತಿ ಭವನದ ಮೇಲೆ ಪತ್ರಿಕಾ ಭವನ ನಿರ್ಮಾಣದ ಕಟ್ಟಡ ಕಾಮಗಾರಿ ಮುಗಿಸಲಾಗುತ್ತದೆ ಎಂಬುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ತಾಲ್ಲೂಕು ಶಾಖೆಯ ಪ್ರಧಾನ ಕಾರ್ಯದರ್ಶಿ ಮಹೇಶ್ ಹೆಗೆಡೆ ಮಾತನಾಡಿ ಈ ಹಿಂದಿನ ಶಾಸಕರು ಇದ್ದಂತ ವೇಳೆಯಲ್ಲೇ ಪತ್ರಿಕಾ ಭವನ ನಿರ್ಮಾಣಕ್ಕೆ ಮನವಿ ಮಾಡಲಾಗಿತ್ತು. ಆದರೇ ಅವರು ಯಾಕೋ ಮನಸ್ಸು ಮಾಡಲಿಲ್ಲ. ಅಂದು ಪೌರಾಯುಕ್ತ ನಾಗಪ್ಪ ಅವರು ಅಂದಿನ ಶಾಸಕ ಹರತಾಳು ಹಾಲಪ್ಪ ಬಳಿಯಲ್ಲಿ ಮಾತನಾಡಿದ್ರು. ಅದಕ್ಕಾಗಿ ಬೆಂಗಳೂರಿಗೆ ನಮ್ಮನ್ನು ಕರೆದೊಯ್ದು, ಶಾಸಕರೊಂದಿಗೆ ಮಾತನಾಡಿಸುವಂತ ಪ್ರಯತ್ನ ಮಾಡಿದ್ರು. ಆದರೇ ಅದು ಫಲಪ್ರದವಾಗಲಿಲ್ಲ ಎಂದರು.

ಶಾಸಕ ಬೇಳೂರು ಗೋಪಾಲಕೃಷ್ಣ ಅವರನ್ನು ಪತ್ರಿಕಾ ಭವನ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದ ಕೂಡಲೇ ಸ್ಪಂದಿಸಿ, ಪೌರಾಯುಕ್ತರಿಗೆ ಸೂಚನೆ ನೀಡಿದ್ರು. ಸ್ತ್ರೀ ಶಕ್ತಿ ಭವನ ನಗರಸಭೆ ವ್ಯಾಪ್ತಿಯಲ್ಲಿ ಇದೆ ಎಂಬುದಾಗಿ ಹೇಳಿದ ನಂತ್ರ ಆ ಭವನದ ಮೇಲೆ ಪತ್ರಿಕಾ ಭವನ ನಿರ್ಮಿಸಿಕೊಡುವಂತ ಭರವಸೆ ನೀಡಿದ್ದರು. ಆ ಭರವಸೆಯಂತೆ ಇಂದು ಪತ್ರಿಕಾ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಅವರಿಗೆ ಸಂಘದ ವತಿಯಿಂದ ಹೃದಯಪೂರ್ವಕ ಕೃತಜ್ಞತೆ, ಅಭಿನಂದನೆಗಳನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಪತ್ರಿಕಾ ಭವನ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದಂತ ಶಾಸಕ ಬೇಳೂರು ಗೋಪಾಲಕೃಷ್ಣ, ನಗರಸಭೆ ಪೌರಾಯುಕ್ತ ಹೆಚ್.ಕೆ ಹಾಲಪ್ಪ ಅವರಿಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಸಾಗರ ತಾಲ್ಲೂಕು ಶಾಖೆಯ ವತಿಯಿಂದ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಲಾಯಿತು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ಕರ್ನಾಟಕದ ಹೆಮ್ಮೆಯ ‘KSRTC’ಗೆ ಬರೋಬ್ಬರಿ ’16 ರಾಷ್ಟ್ರಮಟ್ಟದ ಪ್ರಶಸ್ತಿ’ಗಳ ಸರಮಾಲೆ

ಬೆಂಗಳೂರಿಗೆ ‘ಶರಾವತಿ ನದಿ’ ನೀರು: ಜನರ ಅಭಿಪ್ರಾಯ ಪಡೆದು ಸರ್ಕಾರಕ್ಕೆ ಮಾಹಿತಿ- ಶಾಸಕ ಬೇಳೂರು ಗೋಪಾಲಕೃಷ್ಣ

ಬ್ಯಾಂಕ್ ಗ್ರಾಹಕರೇ ಗಮನಿಸಿ : `ಸೆಪ್ಟೆಂಬರ್’ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ!Bank Holidays

Share. Facebook Twitter LinkedIn WhatsApp Email

Related Posts

BREAKING : ‘ಕಾಂತಾರ ಚಾಪ್ಟರ್ 1’ ಸೆಟ್​​ನಲ್ಲಿ ಮುಗುಚಿದ ಬೋಟ್ : ರಿಷಿಬ್ ಶೆಟ್ಟಿ ಸೇರಿ 30 ಕಲಾವಿದರು ಪ್ರಾಣಾಪಾಯದಿಂದ ಪಾರು!

15/06/2025 5:46 AM1 Min Read

BIG NEWS : ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮತ್ತೆ 5 ಸಾವಿರ ಕೋಟಿ : CM ಸಿದ್ದರಾಮಯ್ಯ ಘೋಷಣೆ

15/06/2025 5:32 AM1 Min Read

BREAKING : ವಿಜಯಪುರ : ವೇಶ್ಯಾವಾಟಿಕೆ ನಡೆಸುತ್ತಿದ ಲಾಡ್ಜ್ ಮೇಲೆ ಪೊಲೀಸರ ದಾಳಿ : ಇಬ್ಬರು ಮಹಿಳೆಯರ ರಕ್ಷಣೆ ಐವರು ಅರೆಸ್ಟ್

15/06/2025 5:25 AM1 Min Read
Recent News

BREAKING : ‘ಕಾಂತಾರ ಚಾಪ್ಟರ್ 1’ ಸೆಟ್​​ನಲ್ಲಿ ಮುಗುಚಿದ ಬೋಟ್ : ರಿಷಿಬ್ ಶೆಟ್ಟಿ ಸೇರಿ 30 ಕಲಾವಿದರು ಪ್ರಾಣಾಪಾಯದಿಂದ ಪಾರು!

15/06/2025 5:46 AM

BIG NEWS : ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮತ್ತೆ 5 ಸಾವಿರ ಕೋಟಿ : CM ಸಿದ್ದರಾಮಯ್ಯ ಘೋಷಣೆ

15/06/2025 5:32 AM

BREAKING : ವಿಜಯಪುರ : ವೇಶ್ಯಾವಾಟಿಕೆ ನಡೆಸುತ್ತಿದ ಲಾಡ್ಜ್ ಮೇಲೆ ಪೊಲೀಸರ ದಾಳಿ : ಇಬ್ಬರು ಮಹಿಳೆಯರ ರಕ್ಷಣೆ ಐವರು ಅರೆಸ್ಟ್

15/06/2025 5:25 AM

BIG NEWS : ಕನ್ನಡಿಗರಿಗೆ ಮಣಿದ RV ಪಿಯು ಕಾಲೇಜ್ : ಸಸ್ಪೆಂಡ್ ಆಗಿದ್ದ ಉಪನ್ಯಾಸಕರಿಗೆ ಮತ್ತೆ ಸಿಕ್ತು ಕೆಲಸ

15/06/2025 5:23 AM
State News
KARNATAKA

BREAKING : ‘ಕಾಂತಾರ ಚಾಪ್ಟರ್ 1’ ಸೆಟ್​​ನಲ್ಲಿ ಮುಗುಚಿದ ಬೋಟ್ : ರಿಷಿಬ್ ಶೆಟ್ಟಿ ಸೇರಿ 30 ಕಲಾವಿದರು ಪ್ರಾಣಾಪಾಯದಿಂದ ಪಾರು!

By kannadanewsnow0515/06/2025 5:46 AM KARNATAKA 1 Min Read

ಶಿವಮೊಗ್ಗ : ಕಾಂತರ ಚಾಪ್ಟರ್ 1 ರಲ್ಲಿ ಯಾಕೋ ಎಲ್ಲವು ಸರಿ ಇಲ್ಲ ಸಿನೆಮಾ ಸೆಟ್ ನಲ್ಲಿ ಒಂದಾದರೋಂದರಂತೆ ಅವಘಡಗಳು…

BIG NEWS : ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮತ್ತೆ 5 ಸಾವಿರ ಕೋಟಿ : CM ಸಿದ್ದರಾಮಯ್ಯ ಘೋಷಣೆ

15/06/2025 5:32 AM

BREAKING : ವಿಜಯಪುರ : ವೇಶ್ಯಾವಾಟಿಕೆ ನಡೆಸುತ್ತಿದ ಲಾಡ್ಜ್ ಮೇಲೆ ಪೊಲೀಸರ ದಾಳಿ : ಇಬ್ಬರು ಮಹಿಳೆಯರ ರಕ್ಷಣೆ ಐವರು ಅರೆಸ್ಟ್

15/06/2025 5:25 AM

BIG NEWS : ಕನ್ನಡಿಗರಿಗೆ ಮಣಿದ RV ಪಿಯು ಕಾಲೇಜ್ : ಸಸ್ಪೆಂಡ್ ಆಗಿದ್ದ ಉಪನ್ಯಾಸಕರಿಗೆ ಮತ್ತೆ ಸಿಕ್ತು ಕೆಲಸ

15/06/2025 5:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.