Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : 33 ಜೀವರಕ್ಷಕ ಔಷಧಿಗಳ ಮೇಲಿನ ‘GST’ ಶೇ.12%ರಿಂದ ಶೂನ್ಯಕ್ಕೆ ಇಳಿಕೆ : ನಿರ್ಮಲಾ ಸೀತಾರಾಮನ್ ಘೋಷಣೆ

03/09/2025 10:47 PM

BREAKING: ಜಿಎಸ್‌ಟಿ ಮಂಡಳಿಯು ಶೇ 12 ಮತ್ತು ಶೇ 28 ರ ಸ್ಲ್ಯಾಬ್‌ಗಳನ್ನು ರದ್ದು | GST Council

03/09/2025 10:28 PM

BREAKING : ಶೇ.5 ಮತ್ತು ಶೇ.18ರ ಎರಡು ತೆರಿಗೆ ಸ್ಲ್ಯಾಬ್ ದರಗಳಿಗೆ ‘GST’ ಕೌನ್ಸಿಲ್ ಗ್ರೀನ್ ಸಿಗ್ನಲ್ ; ಸೆ. 22ರಿಂದ ಜಾರಿ

03/09/2025 10:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಂಡ್ಯ: ‘ಮದ್ದೂರು ಪುರಸಭೆ ಅಧಿಕಾರ’ ಹಿಡಿಯುವಲ್ಲಿ ಎಡವಿದ ‘ಮೈತ್ರಿ ನಾಯಕ’ರು, ಗದ್ದುಗೆ ಏರಿದ ‘ಕಾಂಗ್ರೆಸ್’
KARNATAKA

ಮಂಡ್ಯ: ‘ಮದ್ದೂರು ಪುರಸಭೆ ಅಧಿಕಾರ’ ಹಿಡಿಯುವಲ್ಲಿ ಎಡವಿದ ‘ಮೈತ್ರಿ ನಾಯಕ’ರು, ಗದ್ದುಗೆ ಏರಿದ ‘ಕಾಂಗ್ರೆಸ್’

By kannadanewsnow0909/09/2024 7:45 PM

ಮಂಡ್ಯ : ತೀವ್ರ ಕುತೂಹಲ ಕೆರಳಿಸಿದ್ದ ಮದ್ದೂರು ಪುರಸಭೆಯ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನ ಕೈ ವಶವಾಗಿದ್ದು, ಸ್ಪಷ್ಟ ಬಹುಮತವಿದ್ದರೂ ಅಧಿಕಾರ ಹಿಡಿಯುವಲ್ಲಿ ಮೈತ್ರಿ ನಾಯಕರು ವಿಫಲವಾಗಿ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಜೆಡಿಎಸ್ ನ 12 ಮಂದಿ ಸದಸ್ಯರ ಪೈಕಿ 6 ಮಂದಿ ಕಾಂಗ್ರೆಸ್ ಗೆ ಬೆಂಬಲ ನೀಡುವ ಮೂಲಕ ಜೆಡಿಎಸ್ – ಬಿಜೆಪಿ ನಾಯಕರಿಗೆ ಬಿಗ್ ಶಾಕ್ ನೀಡಿದ್ದಾರೆ. ಆದರೇ ಕಾಂಗ್ರೆಸ್ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿದೆ.

ಕೇವಲ 3 ಮಂದಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಜೊತೆಗೆ 6 ಮಂದಿ ಜೆಡಿಎಸ್, 4 ಪಕ್ಷೇತರ ಹಾಗೂ 1 ಬಿಜೆಪಿ ಸದಸ್ಯರ ಜೊತೆಗೆ ಶಾಸಕ ಕೆ.ಎಂ.ಉದಯ್ ಅವರ ಮತಗಳ ಬೆಂಬಲದೊಂದಿಗೆ ಪುರಸಭೆಯ ಅಧ್ಯಕ್ಷರಾಗಿ ಕೋಕಿಲ ಅರುಣ್ ಹಾಗೂ ಉಪಾಧ್ಯಕ್ಷರಾಗಿ ಟಿ.ಆರ್.ಪ್ರಸನ್ನಕುಮಾರ್ ಅವರುಗಳು 15 ಮತ ಪಡೆದು ಆಯ್ಕೆಯಾಗಿದ್ದು, ಪುರಸಭೆಯ ಅಧಿಕಾರ ಹಿಡಿಯುವಲ್ಲಿ ಕೆ.ಎಂ.ಉದಯ್ ಯಶಸ್ವಿಯಾಗಿದ್ದಾರೆ.

ಜೆಡಿಎಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಶೋಭಾರಾಣಿ, ಉಪಾಧ್ಯಕ್ಷ ಸ್ಥಾನಕ್ಕೆ ಮನೋಜ್ ಕುಮಾರ್ ನಾಮಪತ್ರ ಸಲ್ಲಿಸಿದರು. ಚುನಾವಣಾ ಪ್ರಕ್ರಿಯೆ ಕಾಲಕ್ಕೆ ತಲಾ 8 ಮತಗಳನ್ನು ಪಡೆದು ಪರಾಭವಗೊಂಡರು‌.

ಪುರಸಭೆ ಒಟ್ಟು 23 ಸದಸ್ಯರ ಸಂಖ್ಯಾಬಲ ಹೊಂದಿದೆ. ಇದರಲ್ಲಿ ಜೆಡಿಎಸ್ 12 ಸದಸ್ಯರು, ಕಾಂಗ್ರೆಸ್‌ 4 ಸದಸ್ಯರು, ಬಿಜೆಪಿ 1 ಹಾಗೂ 6 ಮಂದಿ ಪಕ್ಷೇತರರು ಗೆಲುವು ಸಾಧಿಸಿ ಮೊದಲನೇ ಬಾರಿಗೆ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಎರಡನೇ ಅವಧಿಗೆ ಇಂದು ನಡೆದ ಚುನಾವಣೆಯಲ್ಲಿ ಮಂದಿ 6 ಜೆಡಿಎಸ್ ಸದಸ್ಯರು ಹಾಗೂ 1 ಬಿಜೆಪಿ ಸದಸ್ಯೆ ಕಾಂಗ್ರೆಸ್‌ಗೆ ಬೆಂಬಲ ಸೂಚಿಸುವ ಮೂಲಕ ಮೈತ್ರಿ ನಾಯಕರಿಗೆ ಭಾರೀ ಮುಖಭಂಗ ಉಂಟು ಮಾಡಿದ್ದಾರೆ.

ಇನ್ನು ಹಿಂದಿನ ಅಧಿಕಾರಾವಧಿಯಲ್ಲಿ ಅಧ್ಯಕ್ಷರಾಗಿದ್ದ ಸುರೇಶ್ ಕುಮಾರ್ ಮತದಾನ ಪ್ರಕ್ರಿಯೆಯಿಂದ ಗೈರು ಹಾಜರಾದರು.

ಶಾಸಕ ಕೆ.ಎಂ.ಉದಯ್ ಹೇಳಿದ್ದೇನು?

ಭರ್ಜರಿ ಗೆಲುವಿನ ಬಳಿಕ ಶಾಸಕ ಕೆ.ಎಂ.ಉದಯ್ ಪ್ರತಿಕ್ರಿಯೆ ನೀಡಿದ್ದು, ಜೆಡಿಎಸ್ 6 ಮಂದಿ ಸದಸ್ಯರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡಿದ್ದಾರೆ. ಜೆಡಿಎಸ್ – ಬಿಜೆಪಿಯ ಆಂತರಿಕ ಭಿನ್ನಮತ ಏನಿದೆಯೋ ನಮಗೆ ಗೊತ್ತಿಲ್ಲ. ಪಟ್ಟಣದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಜೆಡಿಎಸ್ ಸದಸ್ಯರು ಬಾಹ್ಯ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಬಂದರೆ ತುಂಬು ಹೃದಯದ ಸ್ವಾಗತ ಭಯಸುತ್ತೇನೆ ಎಂದರು.

ಇನ್ಮುಂದೆ ಅಡ್ಜೆಸ್ಟ್ಮೆಂಟ್ ರಾಜಕಾರಣ ನಡೆಯಲ್ಲ

ಈ ಹಿಂದೆ ಕ್ಷೇತ್ರದಲ್ಲಿ ಬಹಳಷ್ಟು ಅಡ್ಜೆಸ್ಟ್ಮೆಂಟ್ ರಾಜಕಾರಣ ನಡೆಯುತ್ತಿತ್ತು. ವಿರೋಧ ಪಕ್ಷಕ್ಕೆ ಸಹಾಯ ಮಾಡಿಕೊಂಡು ಬರ್ತಿದ್ರು. ಇವಾಗ ಹೊಸ ಅಧ್ಯಾಯ ಪ್ರಾರಂಭವಾಗಿದೆ. ನಮ್ಮದು ಅಡ್ಜೆಸ್ಟ್ಮೆಂಟ್ ರಾಜಕಾರಣ ಅಲ್ಲ ಎಲ್ಲರು ಸಹಕಾರ ನೀಡಿದ್ದಾರೆ. ಎಲ್ಲಾ ಸದಸ್ಯರ ಸಹಕಾರದಿಂದ ಪುರಸಭೆ ಅಧಿಕಾರ ಹಿಡಿದ್ದಿದ್ದೇವೆ. ನಾವು ಯಾರನ್ನು ಹೈಜಾಕ್ ಮಾಡಿಲ್ಲ. ಹುಡುಗರು ಆದ್ರೆ ಎತ್ತಿಕೊಂಡು ಹೋಗಬಹುದು ಆದರೆ ಎಲ್ಲಾ ಮಹಿಳಾ ಸದಸ್ಯರು ಅಭಿವೃದ್ಧಿ ಉದ್ದೇಶದಿಂದ ಬಾಹ್ಯ ಬೆಂಬಲ ನೀಡಿದ್ದಾರೆ.

ಇನ್ನು ಮುಂದೆ ಮದ್ದೂರು ಪಟ್ಟಣ ಅಭಿವೃದ್ಧಿಯತ್ತ ಸಾಗಲಿದೆ. ಹಿಂದಿನ ವಾತವರಣವೇ ಬೇರೆ ಮುಂದಿನ ವಾತಾವರಣವೇ ಬೇರೆ ನಾವು ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡುತ್ತೇವೆ. ಜನರ ಕೆಲಸವೇ ನನಗೆ ಮುಖ್ಯ ಇನ್ನುಳಿದ ಜೆಡಿಎಸ್ ಸದಸ್ಯರಿಗೆ ನಾನು ಗಾಳ ಹಾಕುವ ಅವಶ್ಯಕತೆ ಇಲ್ಲ. ಅಭಿವೃದ್ಧಿ ಬೇಕು ಅನ್ನೋದಾದರೆ ಸ್ವತಃ ಅವರೇ ಬಂದು ನಮ್ಮ ಜೊತೆ ಕೈ ಜೋಡಿಸಲಿ ಪುರಸಭೆ ಸದಸ್ಯರೆಲ್ಲರೂ ಒಂದೇ ಕುಟುಂಬದಂತೆ ಒಟ್ಟಿಗೆ ಹೋಗ್ತೇವೆ ಎಂದು ಹೇಳಿದರು.

ಇನ್ನು ಪುರಸಭೆ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ಒಲಿಯುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಯಾವುದು ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು, ಕೆಪಿಸಿಸಿ ಸದಸ್ಯ ಕದಲೂರು ರಾಮಕೃಷ್ಣ, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ, ಜಿ.ಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಮುಖಂಡರಾದ ಕೆ.ಆರ್.ಮಹೇಶ್, ಶಂಕರೇಗೌಡ, ಡಾಬಾ ಮಹೇಶ್, ಅರುಣ್ ಕುಮಾರ್, ತೈಲೂರು ರಘು, ವಿಜಯ್ ಕುಮಾರ್ ಮತ್ತಿತರರು ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

ಏನಿದು ‘ನಿಪುಣ ಕರ್ನಾಟಕ’ ಯೋಜನೆ? ಜಾರಿಯಿಂದ ಪ್ರಯೋಜನ ಏನು? ಇಲ್ಲಿದೆ ಪುಲ್ ಡೀಟೆಲ್ಸ್ | Nipuna Karnataka Scheme

ಬೆಂಗಳೂರು ಕನ್ನಡಿಗರಿಗೆ ಸೇರಿದ್ದು: ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದ ಪೋಸ್ಟ್, ಟಾಕ್ ವಾರ್ | Bengaluru belongs to Kannadigas

BIG NEWS : ನನಗೂ ‘ಸಿಎಂ’ ಆಗುವ ಆಸೆ ಇದೆ ಆದರೆ…?: ಸಚಿವ ಶರಣಬಸಪ್ಪ ದರ್ಶನಾಪುರ ಹೊಸ ಬಾಂಬ್!

Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಗೆ ಗುಡ್ ನ್ಯೂಸ್ : `ಸ್ವಾವಲಂಬಿ ಸಾರಥಿ’ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸೆ.10 ಕೊನೆಯ ದಿನ.!

03/09/2025 8:53 PM2 Mins Read

BREAKING : ಸೌಜನ್ಯ ಕೇಸ್ ಮೇಲ್ಮನವಿ ಬಗ್ಗೆ ಅವರ ತಾಯಿ ನಿರ್ಧರಿಸಬೇಕು : CM ಸಿದ್ದರಾಮಯ್ಯ ಹೇಳಿಕೆ

03/09/2025 8:43 PM1 Min Read

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಇನ್ಮುಂದೆ ಈ 44 ಸೇವೆಗಳು `ಬಾಪೂಜಿ ಸೇವಾಕೇಂದ್ರ’ಗಳಲ್ಲಿ ಲಭ್ಯ.!

03/09/2025 8:26 PM1 Min Read
Recent News

BREAKING : 33 ಜೀವರಕ್ಷಕ ಔಷಧಿಗಳ ಮೇಲಿನ ‘GST’ ಶೇ.12%ರಿಂದ ಶೂನ್ಯಕ್ಕೆ ಇಳಿಕೆ : ನಿರ್ಮಲಾ ಸೀತಾರಾಮನ್ ಘೋಷಣೆ

03/09/2025 10:47 PM

BREAKING: ಜಿಎಸ್‌ಟಿ ಮಂಡಳಿಯು ಶೇ 12 ಮತ್ತು ಶೇ 28 ರ ಸ್ಲ್ಯಾಬ್‌ಗಳನ್ನು ರದ್ದು | GST Council

03/09/2025 10:28 PM

BREAKING : ಶೇ.5 ಮತ್ತು ಶೇ.18ರ ಎರಡು ತೆರಿಗೆ ಸ್ಲ್ಯಾಬ್ ದರಗಳಿಗೆ ‘GST’ ಕೌನ್ಸಿಲ್ ಗ್ರೀನ್ ಸಿಗ್ನಲ್ ; ಸೆ. 22ರಿಂದ ಜಾರಿ

03/09/2025 10:26 PM

BREAKING : ಇನ್ಮುಂದೆ ವಿಮಾ ಪ್ರೀಮಿಯಂಗಳ ಮೇಲೆ ‘GST’ ಇಲ್ಲ ; ಪರೋಕ್ಷ ತೆರಿಗೆಯಿಂದ ಪಾಲಿಸಿಗಳಿಗೆ ವಿನಾಯಿತಿ

03/09/2025 10:21 PM
State News

ರಾಜ್ಯದ ಜನತೆಗೆ ಗುಡ್ ನ್ಯೂಸ್ : `ಸ್ವಾವಲಂಬಿ ಸಾರಥಿ’ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸೆ.10 ಕೊನೆಯ ದಿನ.!

By kannadanewsnow5703/09/2025 8:53 PM KARNATAKA 2 Mins Read

ಬೆಂಗಳೂರು : ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ,…

BREAKING : ಸೌಜನ್ಯ ಕೇಸ್ ಮೇಲ್ಮನವಿ ಬಗ್ಗೆ ಅವರ ತಾಯಿ ನಿರ್ಧರಿಸಬೇಕು : CM ಸಿದ್ದರಾಮಯ್ಯ ಹೇಳಿಕೆ

03/09/2025 8:43 PM

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಇನ್ಮುಂದೆ ಈ 44 ಸೇವೆಗಳು `ಬಾಪೂಜಿ ಸೇವಾಕೇಂದ್ರ’ಗಳಲ್ಲಿ ಲಭ್ಯ.!

03/09/2025 8:26 PM

BREAKING : 70 ಸಾವಿರ ರೂ. ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಕಾನ್ಸ್ ಟೆಬಲ್.!

03/09/2025 8:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.