ಅಸ್ಸಾಂ: ಆತ ಅಂತರ್ಜಾತಿ ವಿವಾಹವಾಗಿದ್ದನು. ಇದೇ ಕಾರಣದಿಂದಾಗಿ ಗ್ರಾಮದಿಂದಲೂ ಭಹಿಷ್ಕಾರಕ್ಕೂ ಒಳಗಾಗಿದ್ದನು. ಹೀಗೆ ಅಂತರ್ಜಾತಿ ವಿವಾಹವಾಗಿ, ಗ್ರಾಮದಿಂದ ಭಹಿಷ್ಕಾರಕ್ಕೆ ಒಳಗಾದಂತ ವ್ಯಕ್ತಿ ಸಾವನ್ನಪ್ಪಿದಾಗ, ಆತನ ಅಂತ್ಯ ಸಂಸ್ಕಾರವನ್ನು ಎರಡು ಬಾರಿ ಮಾಡಿರೋ ಘಟನೆ ಅಸ್ಸಾಂನ ದರ್ರಾಂಗ್ ಜಿಲ್ಲೆಯಲ್ಲಿ ನಡೆದಿದೆ.

BIG NEWS: ಮುಂದಿನ 20 ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಸಿದ್ಧರಾಮಯ್ಯ-ಡಿಕೆಶಿ ಒಂದಾಗಲ್ಲ – BJP MLC ಬಾಬುರಾವ್ ಚಿಂಚನಸೂರು ಭವಿಷ್ಯ

ಅಸ್ಸಾಂನ ಗೌಹಾತಿ ಬಳಿಯ ದರ್ರಾಂಗ್ ಜಿಲ್ಲೆಯಲ್ಲಿನ ಪಟೋಲ್ಸಿಂಗ್ಪರಾ ಗ್ರಾಮದ ನಿವಾಸಿಯಾಗಿದ್ದಂತ ಅತುಲ್ ಶರ್ಮಾ(50) ಎಂಬಾತ ಅಂತರ್ಜಾತಿ ವಿವಾಹವಾಗಿದ್ದನು. ಹೀಗಾಗಿಯೇ ಗ್ರಾಮದಿಂದ 27 ವರ್ಷಗಳ ಕಾಲ ಬಹಿಷ್ಕಾರಕ್ಕೆ ಒಳಗಾಗಿದ್ದನು.

BIGG NEWS : ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ʼಇಂದಿನ ಯುವ ಸಮೂಹʼ ಅರಿತುಕೊಳ್ಳಬೇಕು : ಸಚಿವ ವಿ.ಸೋಮಣ್ಣ

ಕಳೆದ ಮಂಗಳವಾರದಂದು ಅತುಲ್ ಶರ್ಮಾ ನಿಧನರಾಗಿದ್ದರಿಂದಾಗಿ, ಗ್ರಾಮಸ್ಥರಾರು ಆತನ ಅಂತ್ಯಸಂಸ್ಕಾರಕ್ಕೆ ಮುಂದಾಗಿಲ್ಲ. ಅಲ್ಲದೇ ಅವರ ಪುತ್ರ ದೂರದ ಊರಿನಲ್ಲಿ ಇದ್ದ ಕಾರಣ, ಅಂತ್ಯಸಂಸ್ಕಾರಕ್ಕೆ ಬರಲು ಆಗಿರಲಿಲ್ಲ.

BIGG NEWS : ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ʼಇಂದಿನ ಯುವ ಸಮೂಹʼ ಅರಿತುಕೊಳ್ಳಬೇಕು : ಸಚಿವ ವಿ.ಸೋಮಣ್ಣ

ಈ ವೇಳೆಯಲ್ಲಿ ಮೃತ ಅತುಲ್ ಶರ್ಮಾ ಸಹೋದನೊಬ್ಬನೇ ಒಂಟಿಯಾಗಿ ಅವರ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಈ ವಿಷಯ ತಿಳಿದು ಗ್ರಾಮಕ್ಕೆ ಆಗಮಿಸಿದಂತ ತಾಲೂಕು ಆಡಳಿತದ ಅಧಿಕಾರಿಗಳು ಮತ್ತೆ ಮೃತದೇಹವನ್ನ ಹೊರ ತೆಗೆದು, ಶವಪರೀಕ್ಷೆ ನಡೆಸಿದ ಬಳಿಕ, ಹಿಂದೂ ಸಂಪ್ರದಾಯದಂತೆ ಪುತ್ರನ ಕೈಯಿಂದಲೇ ಆಗ್ನಿ ಸ್ಪರ್ಶ ಮಾಡಿಸಿ, ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

Share.
Exit mobile version