ಗುವಾಹಟಿ: ಫುಟ್ಬಾಲ್ ಪಂದ್ಯವೊಂದರಲ್ಲಿ 500 ರೂಪಾಯಿಗಳ ಬೆಟ್ಟಿಂಗ್ ಸೋತ ಸ್ನೇಹಿತನ ಶಿರಚ್ಛೇದ ಮಾಡಿದ ಘಟನೆ ಅಸ್ಸಾಂನಲ್ಲಿ ಸೋಮವಾರ ನಡೆದಿದೆ.
ಏನಿದು ಘಟನೆ?
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಉತ್ತರ ಅಸ್ಸಾಂನ ಸೋನಿತ್ಪುರ ಜಿಲ್ಲೆಯಲ್ಲಿ ಸೋಮವಾರ ಫುಟ್ಬಾಲ್ ಪಂದ್ಯವೊಂದನ್ನು ಆಯೋಜಿಸಲಾಗಿತ್ತು. ಈ ವೇಳೆ ಬೆಟ್ಟಿಂಗ್ನಲ್ಲಿ ಸೋತ ಬೋಯಿಲಾ ಹೆಮ್ರಾಮ್ 500 ರೂಪಾಯಿಯನ್ನು ತುನಿರಾಮ್ ಮಾಡ್ರಿಗೆ ಕೊಡಲು ನಿರಾಕರಿಸಿದ್ದಾನೆ. ಇದರಿಂದ ತುನಿರಾಮ್ ಕೋಪಗೊಂಡಿದ್ದ.
ಫುಟ್ಬಾಲ್ ಪಂದ್ಯದ ನಂತ್ರ, ತುನಿರಾಮ್ ಮಾಡ್ರಿಯು ಹೆಮ್ರಮ್ಅನ್ನು ಮನೆಗೆ ಊಟಕ್ಕೆ ಆಹ್ವಾನಿಸಿದ್ದು, ಮೇಕೆ ಕಡಿಯುತ್ತಿದ್ದ. ಈ ವೇಳೆಯೂ ಕೂಡ ಹಣಕ್ಕೆ ಇಬ್ಬರ ನಡುವೆಯೂ ಜಗಳವಾಗಿದೆ. ಇದ್ರಿಂದ ಕೋಪಗೊಂಡ ಮಾಡ್ರಿ ಕೈಯ್ಯಲ್ಲಿದ್ದ ಮತ್ತಿನಿಂದ ಹೆಮ್ರಾಮ್ ತಲೆ ಕಡಿದಿದ್ದಾನೆ.
ನಂತ್ರ, ತುಂಡರಿಸಿದ ತಲೆಯನ್ನು ಹಿಡಿದುಕೊಂಡು ರಾತ್ರಿಯೇ 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ.