Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

`EPFO’ ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್ : ಪಿಂಚಣಿಯಲ್ಲಿ ಭಾರೀ ಏರಿಕೆ | EPFO Pension Hike

14/07/2025 7:38 AM

ಕ್ಲಬ್ ವಿಶ್ವಕಪ್ ಫೈನಲ್ : ಪ್ಯಾರಿಸ್ ಸೇಂಟ್ ಜರ್ಮೈನ್ ವಿರುದ್ಧ ಚೆಲ್ಸಿಯಾಗೆ ಭರ್ಜರಿ ಗೆಲುವು | Club world cup

14/07/2025 7:27 AM

ಪೋಷಕರಿಗೆ ಗುಡ್ ನ್ಯೂಸ್ : ರಾಜ್ಯಾದ್ಯಂತ 4000ಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ `LKG, UKG’ ತರಗತಿ ಆರಂಭ

14/07/2025 7:25 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ಪೊಲೀಸ್, ಅರಣ್ಯ ಇಲಾಖೆಯ ಅಧಿಕಾರಿ, MLA PS ವಿರುದ್ಧ ಕ್ರಮಕ್ಕೆ ಮಲ್ಲಿಕಾರ್ಜುನ ಹಕ್ರೆ ಒತ್ತಾಯ
KARNATAKA

ಸಾಗರದ ಪೊಲೀಸ್, ಅರಣ್ಯ ಇಲಾಖೆಯ ಅಧಿಕಾರಿ, MLA PS ವಿರುದ್ಧ ಕ್ರಮಕ್ಕೆ ಮಲ್ಲಿಕಾರ್ಜುನ ಹಕ್ರೆ ಒತ್ತಾಯ

By kannadanewsnow0918/06/2025 2:48 PM

ಶಿವಮೊಗ್ಗ: ಕೊಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿ, ಪೊಲೀಸ್ ಠಾಣೆಗೆ ಕರೆತಂದು, ಬಂಧಿಸಿ ಜೈಲಿಗಟ್ಟದೇ, ಅವರನ್ನು ಸಾಗರ ಪೇಟೆ ಠಾಣೆಯ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಮೀನು ಹಿಡಿಯಲು ತೆರಳಿದ್ದಂತ ಮಂಜುನಾಥ್ ಮೇಲೆ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಲ್ಲೆ ಮಾಡಿದ್ದಾರೆ. ಇಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಹಕ್ರೆ ಒತ್ತಾಯಿಸಿದ್ದಾರೆ.

ಶಾಸಕರ ಆಪ್ತ ಕಾರ್ಯದರ್ಶಿಗೆ ಸಭೆ ನಡೆಸುವ ಅಧಿಕಾರ ಕೊಟ್ಟವರಾರು?

ಇಂದು ಸಾಗರ ನಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಾಗರದ ಪ್ರವಾಸಿ ಮಂದಿರಲ್ಲಿ ಶಾಸಕರ ಅನುಪಸ್ಥಿತಿಯಲ್ಲಿ ಆಪ್ತ ಕಾರ್ಯದರ್ಶಿ ಸಭೆ ನಡೆಸುವಂತ ಅಧಿಕಾರ ಹೇಗೆ ಬಂತು? ಶಾಸಕರ ಅಕ್ಕನ ಮಗ ಎನ್ನುವ ಕಾರಣಕ್ಕೋ, ಸಂಬಂಧಿಕ ಎನ್ನುವ ಕಾರಣಕ್ಕೋ ಎಂಬುದಾಗಿ ಪ್ರಶ್ನಿಸಿದರು.

ಸಾಗರ ತಾಲ್ಲೂಕಿನಲ್ಲಿ ಶಾಸಕರ ಅನುಪಸ್ಥಿತಿಯಲ್ಲಿ ಆಡಳಿತಾಧಿಕಾರಿ ಇಓ, ಇಲ್ಲವೇ ತಹಶೀಲ್ದಾರ್, ಎಸಿ ಆಗಿದ್ದಾರೆ. ಮಳೆಹಾನಿ ಸೇರಿದಂತೆ ವಿವಿಧ ವಿಷಯಗಳಡಿ ಸಭೆ ನಡೆಸಬಹುದಾದಂತ ಅಧಿಕಾರ ಅವರಿಗಿದೆ. ಅವರು ಕರೆಯಬೇಕು. ಅದು ಬಿಟ್ಟು ಕೆ ಎಸ್ ಆರ್ ಟಿ ಸಿ ಡಿಪೋ ಮ್ಯಾನೇಜರ್ ಕರೆದಿದ್ದು ಹೇಗೆ? ಆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ಅಂದ್ರೆ ಏನು ಅಂತ ಕಿಡಿಕಾರಿದರು.

ಡಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹ

ಸಾಗರ ನಗರದ ಪ್ರವಾಸಿ ಮಂದಿರ ವಸೂಲಿ ಅಡ್ಡೆಯಾಗಿದೆ. ಶಾಸಕರ ಆಪ್ತ ಕಾರ್ಯದರ್ಶಿಗಳು ವಸೂಲಿ ಅಡ್ಡೆಯ ಕಾರಣಕ್ಕೆ ಐಬಿಯಲ್ಲಿ ಸಭೆ ನಡೆಸುತ್ತಾರೆ. ಡಿಪೋದಲ್ಲಿ ಕೆಲಸ ಮಾಡುತ್ತಿದ್ದಂತ ನೌಕರ ಶಾಸಕರ ಆಪ್ತ ಕಾರ್ಯದರ್ಶಿಯಾಗಿ ಸಭೆ ನಡೆಸಿ, ಇಓ, ತಹಶೀಲ್ದಾರ್ ಸೇರಿ ಇತರೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ ಅಂದ್ರೆ ಅಧಿಕಾರಿಗಳಾದ ನಿಮಗೆ ನಾಚಿಕೆಯಾಗಬೇಕು ಎಂಬುದಾಗಿ ಆಕ್ರೋಶ ಹೊರ ಹಾಕಿದರು.

ಎಸಿ, ತಹಶೀಲ್ದಾರ್, ನಗರಸಭೆ ಆಯುಕ್ತರು ಸೂಚನೆ ನೀಡಬೇಕಾದವರು. ನಮ್ಮ ಸರ್ಕಾರ ಇದೆ. ಶಾಸಕರಿದ್ದಾರೆ ಎನ್ನುವ ದುರಹಂಕಾರದಿಂದ ಹೀಗೆ ನಡೆದುಕೊಳ್ಳುವುದು ಸರಿಯಲ್ಲ. ಈ ಕೂಡಲೇ ಶಾಸಕರ ಆಪ್ತ ಕಾರ್ಯದರ್ಶಿ ವಿರುದ್ಧ ಜಿಲ್ಲಾಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಆಗ್ರಹಿಸಿದರು.

ಶಾಸಕರ ಕರ್ತವ್ಯಾಧಿಕಾರಿಯಾಗಿರುವಂತ ಟಿ.ಪಿ ರಮೇಶ್ ಒಬ್ಬ ನಿವೃತ್ತ ಅಧಿಕಾರಿ. ಅವರಿಗಾದರೂ ಸ್ವಲ್ಪ ಬುದ್ಧಿ ಬೇಡವ? ಜ್ಞಾನ ಬೇಡವೇ ಎಂದರು.

ಸಾಗರ ತಾಲ್ಲೂಕಿನಲ್ಲಿ ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಅಲ್ಲಲ್ಲಿ ಹಾನಿಯಾಗಿ ನೆರೆ ಸಂತ್ರಸ್ತರಾಗಿದ್ದಾರೆ. ಕಳೆದ ವರ್ಷವೂ ಇದೇ ಹೊತ್ತಿನಲ್ಲಿ ವಿದೇಶಕ್ಕೆ ಶಾಸಕರು ಹೋಗಿದ್ದರು. ಈ ಬಾರಿಯೂ ಹೋಗಿದ್ದಾರೆ. ವಿದೇಶದಲ್ಲಿ ಹೂಡಿಕೆ ನಡೀತಿದೆ ಎಂಬುದಾಗಿ ಗಂಭೀರ ಆರೋಪ ಮಾಡಿದರು.

ಸದಾನಂದ ಮರ್ಡರ್ ಕೇಸಲ್ಲಿ ಆರೋಪಿಗಳು ಕೈಗೆ ಸಿಕ್ಕರೂ ಪೊಲೀಸರು ಬಿಟ್ಟು ಕಳುಹಿಸಿದ್ದೇಕೆ?

ಸದಾನಂದ ಕೊಲೆ ಪ್ರಕರಣದಲ್ಲಿ ವೆಂಕಟೇಶ್ ಆಚಾರಿ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ವೆಂಕಟೇಶ್ ಆಚಾರಿ ಮಂಕೋಡಿನಲ್ಲಿ ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಠಿಸಿದ ಆರೋಪಿ. ಈತನ ವಿರುದ್ಧ ಈಗ ಕೊಲೆ ಕೇಸ್ ದಾಖಲಾಗಿದೆ. ಸದಾನಂದ ಕೊಲೆ ಕೇಸಲ್ಲಿ ದಾಖಲಾದಂತ ದೂರಿನ ಹಿನ್ನಲೆಯಲ್ಲಿ ಆರೋಪಿಗಳನ್ನು ಕರೆದುಕೊಂಡು ಬಂದು, ಠಾಣೆಯಲ್ಲಿ ಕೂರಿಸಿಕೊಂಡು ಆ ಬಳಿಕ ಪೊಲೀಸರು ಬಿಟ್ಟು ಕಳುಹಿಸಿದ್ದೇಕೆ ಎಂಬುದಾಗಿ ಮಲ್ಲಿಕಾರ್ಜುನ ಹಕ್ರೆ ಪ್ರಶ್ನಿಸಿದರು.

ಸಾಗರ ಪೊಲೀಸರ ವಿರುದ್ಧ ಎಸ್ಪಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ

ಅಪರಾಧಿಗಳು ಕೈಗೆ ಸಿಕ್ಕಿದ್ದಂತ ಸಂದರ್ಭದಲ್ಲೇ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಇದಕ್ಕಾಗಿ ಎಷ್ಟು ಕೋಟಿ ಡೀಲ್ ಆಯ್ತು ಸ್ವಾಮಿ? ಶಾಸಕರಿಗೋ, ಪೊಲೀಸರಿಗೋ? ಒಬ್ಬ ಕೊಲೆಗಡುಕನನ್ನು ಬಿಟ್ಟು ಕಳುಹಿಸಿದ್ದೀರಲ್ಲ ಇದು ಸರಿಯೇ? ಸಾಗರದಲ್ಲಿ ಪೊಲೀಸ್ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಕೊಲೆ ಆರೋಪಿಗಳನ್ನು ಬಿಟ್ಟು ಕಳುಹಿಸಿದ ಸಾಗರ ಪೊಲೀಸರ ವಿರುದ್ಧ ಎಸ್ಪಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂಬುದಾಗಿ ಎಚ್ಚರಿಸಿದರು.

ಮಂಜುನಾಥ್ ಮೇಲಿನ ಹಲ್ಲೆಗೆ ಖಂಡನೆ

ಮೀನು ಹಿಡಿಯಲು ಹೋಗಿದ್ದಂತ ಮಂಜುನಾಥ್ ಎಂಬಾತನ ಮೇಲೆ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಹಲ್ಲೆ ಮಾಡಿರೋದು ಖಂಡನೀಯ. ಈ ವಿಷಯವನ್ನು ಪ್ರಸ್ತಾಪಿಸಿ ಅರಣ್ಯ ಇಲಾಖೆಯ ದೌರ್ಜನ್ಯ ಖಂಡಿಸಿದಂತ ಜಿ.ಟಿ ಸತ್ಯನಾರಾಯಣ ಅವರನ್ನು ನಾನು ಅಭಿನಂದಿಸುತ್ತೇನೆ. ಕರೂರು ಭಾಗದಲ್ಲಿ ಇಂತಹ ಹತ್ತಾರು ಕೇಸ್ ಗಳು ಕಳೆದ ಕೆಲ ವರ್ಷಗಳಿಂದ ನಡೆದಿವೆ. ಆಡಳಿತ ಅನ್ನೋದು ಸತ್ತು ಹೋಗಿದ್ದಾರೆ ಎಂದು ಸ್ವಪಕ್ಷದ ವಿರುದ್ಧವೇ ಅವರು ಗುಡುಗಿದ್ದಾರೆ ಎಂದರು.

ಮಂಜುನಾಥ್ ಮೇಲಿನ ಹಲ್ಲೆ 15 ದಿನಗಳ ಹಿಂದೆ ಆಗಿರೋದು. ಆದರೇ ಹಲ್ಲೆಯ ನಂತ್ರ ಅವರಿಗೆ ಉಸಿರಾಟದ ಸಮಸ್ಯೆ, ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅರಣ್ಯ ಇಲಾಖೆಯವರ ಧಮ್ಕಿಗೆ ಅವರು ಭಯಗೊಂಡು ಹಲ್ಲೆಯ ವಿಷಯ ಬಾಯಿ ಬಿಟ್ಟಿಲ್ಲ. ಈಗ ಎದೆ ನೋವು ಕಾಣಿಸಿಕೊಂಡ ಕಾರಣ ವಿಷಯ ಬೆಳಕಿಗೆ ಬಂದಿದೆ. ಸಾಗರದ ಆಡಳಿತದಲ್ಲಿ ಭಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಹಲ್ಲೆಯಂತ ಘಟನೆಗಳು ನಡೆಯುತ್ತಿವೆ ಎಂದರು.

ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ

ಮಂಜುನಾಥ್ ಮೇಲೆ ಹಲ್ಲೆ ಮಾಡಿದಂತ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂಬುದಾಗಿ ತಿಳಿಸಿದರು.

ವರದಿ; ವಸಂತ ಬಿ ಈಶ್ವರಗೆರೆ

BIG NEWS: ಮಂಜುನಾಥ್ ಮೇಲೆ ಹಲ್ಲೆ ಮಾಡಿಲ್ಲ: ಸಾಗರದ ಕಾರ್ಗಲ್ ವೈಲ್ಡ್ ಲೈಫ್ RFO ಸಂತೋಷ್ ಪವಾರ್ ಸ್ಪಷ್ಟನೆ

BIG NEWS: ಸಾಗರದಲ್ಲಿ ‘ಸದಾನಂದ ಮರ್ಡರ್’ ಕೇಸ್: ಪೊಲೀಸರು ‘ಕೊಲೆ ಆರೋಪಿ’ಗಳನ್ನು ಬಿಟ್ಟು ಕಳುಹಿಸಿದ್ದು ಯಾಕೆ.?

ಭೀಕರ ದುರ್ಘಟನೆಯಲ್ಲಿ ಇಬ್ಬರು ಬಚಾವ್..!

Share. Facebook Twitter LinkedIn WhatsApp Email

Related Posts

ಪೋಷಕರಿಗೆ ಗುಡ್ ನ್ಯೂಸ್ : ರಾಜ್ಯಾದ್ಯಂತ 4000ಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ `LKG, UKG’ ತರಗತಿ ಆರಂಭ

14/07/2025 7:25 AM1 Min Read

BREAKING : ಹೃದಯಾಘಾತದಿಂದ ಜೆಡಿಎಸ್ ಮುಖಂಡ `ಹೆಚ್.ಟಿ ರಾಜೇಂದ್ರ’ ನಿಧನ | H.T. Rajendra passes away

14/07/2025 7:12 AM1 Min Read

ವರ್ಷಾಂತ್ಯದೊಳಗೆ 42 ಸ್ವಯಂಚಾಲಿತ ಪರೀಕ್ಷಾ ಟ್ರ್ಯಾಕ್ ನಿರ್ಮಾಣ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

14/07/2025 7:06 AM1 Min Read
Recent News

`EPFO’ ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್ : ಪಿಂಚಣಿಯಲ್ಲಿ ಭಾರೀ ಏರಿಕೆ | EPFO Pension Hike

14/07/2025 7:38 AM

ಕ್ಲಬ್ ವಿಶ್ವಕಪ್ ಫೈನಲ್ : ಪ್ಯಾರಿಸ್ ಸೇಂಟ್ ಜರ್ಮೈನ್ ವಿರುದ್ಧ ಚೆಲ್ಸಿಯಾಗೆ ಭರ್ಜರಿ ಗೆಲುವು | Club world cup

14/07/2025 7:27 AM

ಪೋಷಕರಿಗೆ ಗುಡ್ ನ್ಯೂಸ್ : ರಾಜ್ಯಾದ್ಯಂತ 4000ಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ `LKG, UKG’ ತರಗತಿ ಆರಂಭ

14/07/2025 7:25 AM

Big News: ಲಂಡನ್ನ ಸೌತ್ ಎಂಡ್ ವಿಮಾನ ನಿಲ್ದಾಣದಲ್ಲಿ ಬಿಸಿನೆಸ್ ಜೆಟ್ ಪತನ | Business Jet Crashes

14/07/2025 7:18 AM
State News
KARNATAKA

ಪೋಷಕರಿಗೆ ಗುಡ್ ನ್ಯೂಸ್ : ರಾಜ್ಯಾದ್ಯಂತ 4000ಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ `LKG, UKG’ ತರಗತಿ ಆರಂಭ

By kannadanewsnow5714/07/2025 7:25 AM KARNATAKA 1 Min Read

ಬೆಂಗಳೂರು: ಪೋಷಕರಿಗೆ ಗುಡ್ ನ್ಯೂಸ್ ಎನ್ನುವಂತೆ ರಾಜ್ಯಾದ್ಯಂತ 4 ಸಾವಿರಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳಲ್ಲಿ ಅಕ್ಟೋಬರ್ ವೇಳೆಗೆ ಎಲ್ಕೆಜಿ, ಯುಕೆಜಿ…

BREAKING : ಹೃದಯಾಘಾತದಿಂದ ಜೆಡಿಎಸ್ ಮುಖಂಡ `ಹೆಚ್.ಟಿ ರಾಜೇಂದ್ರ’ ನಿಧನ | H.T. Rajendra passes away

14/07/2025 7:12 AM

ವರ್ಷಾಂತ್ಯದೊಳಗೆ 42 ಸ್ವಯಂಚಾಲಿತ ಪರೀಕ್ಷಾ ಟ್ರ್ಯಾಕ್ ನಿರ್ಮಾಣ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

14/07/2025 7:06 AM

SHOCKING : ಹೊಸಪೇಟೆಯಲ್ಲಿ ಕೋತಿ ದಾಳಿಗೆ ಮೂರೂವರೆ ವರ್ಷದ ಬಾಲಕಿ ಬಲಿ.!

14/07/2025 6:42 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.