ನವದೆಹಲಿ : ನೀವು ಅಟಲ್ ಪಿಂಚಣಿ ಯೋಜನೆಯಲ್ಲಿ ಖಾತೆಯನ್ನು ಹೊಂದಿದ್ದರೆ ಅಥವಾ ಸರ್ಕಾರದ ಈ ಯೋಜನೆಯಲ್ಲಿ ಖಾತೆಯನ್ನು ತೆರೆಯಲು ಯೋಜಿಸುತ್ತಿದ್ದರೆ, ಈ ಸುದ್ದಿ ನಿಮಗೆ ಮುಖ್ಯವಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವ್ರ ಸ್ಮರಣಾರ್ಥ ನಡೆಯುತ್ತಿರುವ ಈ ಯೋಜನೆಯಡಿ, 60 ವರ್ಷಗಳ ನಂತ್ರ ಪಿಂಚಣಿ ಖಾತರಿಪಡಿಸುತ್ತದೆ. ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವವರಿಗೆ ಸಾಮಾಜಿಕ ಭದ್ರತೆ ನೀಡಲು ಸರಕಾರ ಈ ಯೋಜನೆ ನಡೆಸುತ್ತಿದೆ.
ಜೂನ್ 2015 ರಲ್ಲಿ ಪ್ರಾರಂಭ
ಇತ್ತೀಚೆಗೆ ಸರ್ಕಾರವು ಈ ಯೋಜನೆಗೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆಯನ್ನ ಮಾಡಿದೆ. ಆದಾಯ ರಿಟರ್ನ್ಸ್ ಸಲ್ಲಿಸುವವರು ಸೆಪ್ಟೆಂಬರ್ 30 ರವರೆಗೆ ಮಾತ್ರ ಈ ಯೋಜನೆಗೆ ಚಂದಾದಾರರಾಗಲು ಸಾಧ್ಯವಾಗುತ್ತದೆ. ಇದರ ನಂತರ, ಐಟಿಆರ್ ಸಲ್ಲಿಸುವವರಿಗೆ ಯೋಜನೆಯ ಲಾಭ ಸಿಗುವುದಿಲ್ಲ. ಅಂದ್ಹಾಗೆ, ಅಟಲ್ ಪಿಂಚಣಿ ಯೋಜನೆಯನ್ನ 1 ಜೂನ್ 2015ರಂದು ಕೇಂದ್ರದ ಮೋದಿ ಸರ್ಕಾರವು ಪ್ರಾರಂಭಿಸಿತು.
ಸೆಪ್ಟೆಂಬರ್ 30ರ ನಂತರ ಸ್ವೀಕರಿಸಿದ ಅರ್ಜಿಗಳನ್ನ ರದ್ದುಗೊಳಿಸಲಾಗುವುದು
ಈ ಯೋಜನೆಯಡಿಯಲ್ಲಿ, ಅರ್ಹ ವೃದ್ಧರಿಗೆ ಪ್ರತಿ ತಿಂಗಳು 1,000 ರೂ.ನಿಂದ 5,000 ರೂ.ವರೆಗೆ ಪಿಂಚಣಿ ನೀಡಲಾಗುತ್ತದೆ. ಮಾರ್ಚ್ 2022ರಲ್ಲಿ, ಈ ಯೋಜನೆಯಲ್ಲಿ ನೋಂದಾಯಿಸಿದ ಜನರ ಸಂಖ್ಯೆ 4 ಕೋಟಿ ದಾಟಿದೆ. ಆದಾಯ ತೆರಿಗೆ ಪಾವತಿದಾರರು ಅಕ್ಟೋಬರ್ 1 ರಿಂದ ಈ ಯೋಜನೆಯಲ್ಲಿ ಹೂಡಿಕೆ ಮಾಡುವಂತಿಲ್ಲ ಎಂದು ಹಣಕಾಸು ಸಚಿವಾಲಯ ಕಳೆದ ದಿನ ತನ್ನ ಆದೇಶದಲ್ಲಿ ತಿಳಿಸಿದೆ. 30ರ ನಂತರ ಬಂದ ಅರ್ಜಿಗಳನ್ನ ತಿರಸ್ಕರಿಸಲಾಗುವುದು.
ತಿಂಗಳಿಗೆ 42 ರೂಪಾಯಿ ಹೂಡಿಕೆ
ನೀವು ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದರೆ, ಯಾವುದೇ ಸಂದರ್ಭದಲ್ಲಿ ಸೆಪ್ಟೆಂಬರ್ 30 ರೊಳಗೆ ನೀವು ಚಂದಾದಾರರಾಗಬೇಕು ಮತ್ತು ಖಾತೆಯನ್ನ ತೆರೆಯಬೇಕು. ಇಲ್ಲದಿದ್ದರೆ, ಅವರು ಅಟಲ್ ಪಿಂಚಣಿ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ಯೋಜನೆಯ ನಿಯಮಗಳ ಪ್ರಕಾರ, 18 ರಿಂದ 40 ವರ್ಷದೊಳಗಿನವರು ಇದರಲ್ಲಿ ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ, ಅರ್ಜಿದಾರರು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ತೆರೆಯಬೇಕು. ಈ ಖಾತೆಯಿಂದ ಪ್ರತಿ ತಿಂಗಳು ನಿಮ್ಮ 42 ರೂಪಾಯಿಯಿಂದ 1454 ರೂಪಾಯಿವರೆಗೆ ಕಡಿತಗೊಳಿಸಲಾಗುತ್ತದೆ. 60 ವರ್ಷಗಳ ನಂತರ, ಪ್ರತಿ ತಿಂಗಳು 1,000 ರೂ.ನಿಂದ 5,000 ರೂ.ವರೆಗೆ ಪಿಂಚಣಿ ಲಭ್ಯವಿದೆ.