ದಕ್ಷಿಣಕನ್ನಡ : ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ವಿಚಾರಕ್ಕೆ ಸಂಬಂಧಪಟ್ಟಂತೆ ಯೂಟ್ಯೂಬ್ ನಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದ ಅಡಿ ಟಿ. ಜಯಂತ್ ವಿರುದ್ಧ ಇದೀಗ ಎಫ್ ಆರ್ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ FIR ದಾಖಲಿಸಿಕೊಂಡಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ವಿಚಾರಕ್ಕೆ ಸಂಬಂಧಪಟ್ಟಂತೆ ಇದೊಂದು ಷಡ್ಯಂತರ ಅಂತ ಟಿ.ಜಯಂತ ಸುದ್ದಿ ಪ್ರಸಾರ ಮಾಡಿದ್ದ. ಯುಟ್ಯೂಬ್ ನಲ್ಲಿ ಪ್ರಸಾರ ಮಾಡಿದ್ದ. ಗಡಿಪಾಡಿನ ಸತ್ಯತೆ ತಿಳಿದಿದ್ದರೂ ಕೂಡ ಜಯಂತ್ ಅಪೂರ್ಣವಾದ ಮಾಹಿತಿ ನೀಡಿದ್ದಾನೆ. ಇದೊಂದು ಷಡ್ಯಂತರ ಎಂದು ಸುಳ್ಳು ಸುದ್ದಿ ಹರಿಬಿಟ್ಟ ಆರೋಪದ ನೆರೆಗೆ ಬೆಳ್ತಂಗಡಿ ಠಾಣೆಯಲ್ಲಿ ಬಿ ಎನ್ ಎಸ್ 353 (1) (b) ಅಡಿ ಪ್ರಕರಣ ದಾಖಲಾಗಿದೆ.