Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Viral Video : “ನನ್ನ ಸಮಾಧಿಯನ್ನ ನಾನೇ ಅಗೆಯುತ್ತೇನೆ” : ಹಮಾಸ್ ಸುರಂಗದೊಳಗೆ ಇಸ್ರೇಲಿ ಒತ್ತೆಯಾಳುವಿನ ಆಕ್ರಂದನ

03/08/2025 5:48 PM

ಶಿವಮೊಗ್ಗ ಜೈಲಿನಲ್ಲಿ ವಿಚಾರಣಾಧೀನ ಖೈದಿ ನೇಣಿಗೆ ಶರಣು

03/08/2025 5:40 PM

ಶಿವಮೊಗ್ಗ: ಸಾಗರದ ಜಂಬಗಾರುವಿನಲ್ಲಿ ಯಶಸ್ವಿಯಾಗಿ ನಡೆದ ಪೋಕ್ಸೋ, ಬಾಲ್ಯವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ

03/08/2025 5:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 2 ಸಾವಿರ ಕೊಟ್ಟಂತೆ ಮಾಡಿ 20 ಸಾವಿರ ರೂ. ದರೋಡೆ: ರಾಜ್ಯ ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕಿಡಿ
KARNATAKA

2 ಸಾವಿರ ಕೊಟ್ಟಂತೆ ಮಾಡಿ 20 ಸಾವಿರ ರೂ. ದರೋಡೆ: ರಾಜ್ಯ ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕಿಡಿ

By kannadanewsnow0919/05/2025 7:06 PM

ಚಾಮರಾಜನಗರ: ಎರಡು ವರ್ಷಗಳ ಆಡಳಿತ ಪೂರೈಸಿರುವ ಕಾಂಗ್ರೆಸ್ ಸರಕಾರದ್ದು ಅರ್ಧಂಬರ್ಧ ಗ್ಯಾರಂಟಿ ಅನುಷ್ಠಾನ, ಭ್ರಷ್ಟಾಚಾರ, ಬೆಲೆ ಏರಿಕೆಗಳೇ ಸಾಧನೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕÀ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.

ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನಿವಾರ್ಯತೆ ಇರುವ ಗ್ಯಾರಂಟಿಗಳನ್ನು ಮಾತ್ರ ಜಾರಿಗೊಳಿಸಿದ್ದಾರೆ. ಅವುಗಳೂ 3 ತಿಂಗಳಿಗೊಮ್ಮೆ ಒಂದು ತಿಂಗಳಿನದ್ದನ್ನು ಕೊಡುತ್ತಿದ್ದಾರೆ. ಉಳಿದುದು ಎಲ್ಲಿ ಹೋಗುತ್ತಿದೆ ಎಂಬುದು ಅವರಿಗೂ ಗೊತ್ತಿಲ್ಲ; ಜನರಿಗೂ ತಿಳಿದಿಲ್ಲ ಎಂದು ಆಕ್ಷೇಪಿಸಿದರು. ಗ್ಯಾರಂಟಿ ಇದುವರೆಗೂ ಸರಿಯಾಗಿ ತಲುಪಿಲ್ಲ ಎಂದು ತಿಳಿಸಿದರು.

ಭ್ರಷ್ಟಾಚಾರ ಮಿತಿ ಮೀರಿ ಹೋಗಿದೆ. ಗುತ್ತಿಗೆದಾರರೇ ಶೇ 60 ಕಮಿಷನ್ ಸರಕಾರ ಎನ್ನುತ್ತಿದ್ದಾರೆ. ಭ್ರಷ್ಟಾಚಾರ ಸರ್ವವ್ಯಾಪಿಯಾಗಿದೆ. ಎಲ್ಲ ಇಲಾಖೆಗಳಲ್ಲೂ ಅದು ಹರಡಿದೆ ಎಂದರು.

ಬೆಳಿಗ್ಗೆ ಎದ್ದು ಕುಡಿಯುವ ಹಾಲಿನಿಂದ ಆರಂಭಿಸಿ ರಾತ್ರಿ ಜನರು ಕುಡಿಯುವ ಆಲ್ಕೋಹಾಲ್ ವರೆಗೆ ಎಲ್ಲದರ ಬೆಲೆ 3 ಸಾರಿ ಹೆಚ್ಚಾಗಿದೆ. ಹಾಲಿನ ಬೆಲೆ 9 ರೂ. ಏರಿಸಿದರೂ ರೈತರಿಗೆ ಕೊಟ್ಟಿಲ್ಲ; ಆಲ್ಕೋಹಾಲ್ ದರ ಪ್ರತಿ ತಿಂಗಳೂ ಏರುತ್ತಿದೆ. 2 ಸಾವಿರ ರೂ. ಕೊಡುವುದಾಗಿ ಬೀಗಿ ಬೀಗಿ ಹೇಳುತ್ತಾರೆ. ಪ್ರತಿ ಕುಟುಂಬದಿಂದ 20 ಸಾವಿರ ರೂ. ದರೋಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಗೆ ಎಷ್ಟು ಬಂದಿದೆ? ಮಾಹಿತಿ ಕೊಡಲು ಸವಾಲು..

ಪರಿಶಿಷ್ಟ ಜಾತಿ ವರ್ಗಗಳ ಏಳಿಗೆಗೆ ಬಜೆಟ್‍ನಲ್ಲಿ 42 ಸಾವಿರ ಕೋಟಿ ಇಟ್ಟಿದ್ದಾಗಿ ತೋರಿಸಿದ್ದಾರೆ. 42 ಸಾವಿರ ಕೋಟಿಯಲ್ಲಿ ಈ ಜಿಲ್ಲೆಗೆ ಎಷ್ಟು ಬಂದಿದೆ? ಇಲ್ಲಿನ ಅಭಿವೃದ್ಧಿಗೆ ಸಿಕ್ಕಿದ ಹಣ ಎಷ್ಟು? ಯಾವ ಪರಿಶಿಷ್ಟ ಜಾತಿ ವರ್ಗಗಳವರಿಗೆ ಅದು ಸಿಕ್ಕಿದೆ ಎಂಬ ವಿವರವನ್ನು ಇಲ್ಲಿನ ಸಚಿವರು, ಸಂಸದರು ನೀಡಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಸವಾಲು ಹಾಕಿದರು. 42 ಸಾವಿರ ಕೋಟಿಯಲ್ಲಿ ಶೇ 50ರಷ್ಟನ್ನು ಎಲ್ಲ ಇಲಾಖೆಗಳಿಗೆ ಕೊಡಬೇಕಿತ್ತು. ಅದರಲ್ಲಿ ದಲಿತರಿಗೆ ಒಂದು ರೂ. ಸಿಗುವುದಿಲ್ಲ ಎಂದು ಟೀಕಿಸಿದರು.

ಉಳಿದ 21 ಸಾವಿರ ಕೋಟಿಯಲ್ಲಿ ನೀವು ಗ್ಯಾರಂಟಿಗಳನ್ನು ದಲಿತರಿಗೆ ಕೊಟ್ಟಿಲ್ಲ; ಮೊದಲು ಎಲ್ಲರಿಗೂ ಫ್ರೀ ಎಂದಿದ್ದರು. ನಿಮಗೂ, ನಿಮ್ಮ ಹೆಂಡತಿಗೂ ಉಚಿತ ಇರಬಹುದು; ಕಾಕಾ ಪಾಟೀಲ್‍ಗೂ ಉಚಿತ ಇರಬಹುದು. ಆದರೆ, ಎಸ್‍ಸಿ ಸಮುದಾಯದ ಮಹದೇವಪ್ಪನಿಗೆ ಯಾಕೆ ಫ್ರೀ ಇಲ್ಲ ಎಂದು ಪ್ರಶ್ನಿಸಿದರು. 21 ಸಾವಿರ ಕೋಟಿಯಲ್ಲಿ 14 ಸಾವಿರ ಕೋಟಿಯನ್ನು ಗ್ಯಾರಂಟಿಗೆ ಬಳಸಿದ್ದಾರೆ. ಅದು ಪರಿಶಿಷ್ಟ ಜಾತಿ ವರ್ಗಗಳ ಅಭಿವೃದ್ಧಿಗೆ ಇಟ್ಟಿದ್ದ ಹಣ. ಅಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಟೀಕಿಸಿದರು. ಇದು ದಲಿತರಿಗೆ ಮಾಡಿದ ಮೋಸ ಮತ್ತು ಅನ್ಯಾಯ ಎಂದು ಆಕ್ಷೇಪಿಸಿದರು.

ಉಳಿದಿದ್ದೆಷ್ಟು ಕೇವಲ 7 ಸಾವಿರ ಕೋಟಿ. ಇದಿಷ್ಟರಿಂದ ಅಭಿವೃದ್ಧಿ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಎಚ್.ಸಿ.ಮಹದೇವಪ್ಪ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರೇ ಆಗಿದ್ದಾರೆ. ದಲಿತರ ಹಣ ದಲಿತರ ಅಭಿವೃದ್ಧಿಗೆ ನೀಡುತ್ತಿಲ್ಲ; ದಲಿತರಿಗೆ ದೋಖಾ ಆಗುತ್ತಿದೆ ಎಂದು ದೂರಿದರು.

ಇದು ಸಾಧನಾ ಸಮಾವೇಶ ಅಲ್ಲ; ವೇದನೆಯ ಸಮಾವೇಶ

ಸರಕಾರದ 2 ವರ್ಷದ ಸಂಬಂಧ ದೊಡ್ಡ ಸಂಭ್ರಮಾಚರಣೆಗೆ ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಇದು ಸಾಧನಾ ಸಮಾವೇಶ ಅಲ್ಲ; ಜನರಿಗೆ ಕೊಟ್ಟ ವೇದನೆಯ ಸಮಾವೇಶ ಎಂದು ಟೀಕಿಸಿದರು. ಅಭಿವೃದ್ಧಿ ಇಲ್ಲದೇ ಸಾಧನೆ ಎಲ್ಲಿಂದ ಬರಲು ಸಾಧ್ಯ ನಿಮಗೆ ಎಂದು ಕೇಳಿದರು. ಸಾಧನೆಯ ಸಮಾವೇಶದ ಬದಲಾಗಿ ನೀವು ವೇದನೆಯ ಸಮಾವೇಶ ಮಾಡಿ ಎಂದು ಸಲಹೆ ನೀಡಿದರು.

ಸಂಭ್ರಮಾಚರಣೆಗೆ ಪವಿತ್ರ ಸ್ಥಳ ಹಂಪಿಗೆ ಹೋಗಿದ್ದೀರಿ. ವಿಜಯನಗರ ಸಾಮ್ರಾಜ್ಯ ರಾಜರು ಆಳಿದ ಸ್ಥಳವಿದು. ಅಲ್ಲಿಗೆ ಹೋಗಿ ಜನರಿಗೆ ಮೋಸ ಮಾಡಿದ್ದು, ವಂಚಿಸಿದ್ದನ್ನು ಅಲ್ಲಿ ಸಂಭ್ರಮಾಚರಣೆ ಮಾಡಲು ಹೋಗುತ್ತೀರಿ ಎಂದು ವಾಗ್ದಾಳಿ ನಡೆಸಿದರು. ಬೆಲೆ ಏರಿಕೆ ಬಗ್ಗೆ ಮಾತನಾಡಿ ನೋಡೋಣ; ಯಾವ್ಯಾವ ಜನರಿಗೆ ಅನ್ಯಾಯ ಮಾಡಿದ್ದೀರೆಂದು ಅಲ್ಲಿ ಹೇಳಿ ಎಂದು ಸವಾಲು ಹಾಕಿದರು. ಭ್ರಷ್ಟಾಚಾರದ ಬಗ್ಗೆ ಹೇಳಿಕೊಳ್ಳಿ ಎಂದರು.

ಬ್ರ್ಯಾಂಡ್ ಬೆಂಗಳೂರು ಬ್ರ್ಯಾಂಡಿ ಬೆಂಗಳೂರು ಆಗಿದೆ..

ಅಭಿವೃದ್ಧಿಯೇ ಮಾಡದಿದ್ದರೆ ಗ್ರೇಟರ್ ಬೆಂಗಳೂರು ಹೇಗೆ ಆಗಲು ಸಾಧ್ಯ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಮೊದಲು ಬ್ರ್ಯಾಂಡ್ ಬೆಂಗಳೂರು ಎಂದಿರಿ. ಅದು ಬ್ರ್ಯಾಂಡಿ ಬೆಂಗಳೂರು ಆಗಿ ಹೋಗಿದೆ ಎಂದು ಟೀಕಿಸಿದರು. ಈಗ ಗ್ರೇಟರ್ ಬೆಂಗಳೂರು ಎನ್ನುತ್ತಿದ್ದೀರಿ. ಇದು ಗ್ರೇಟರ್ ಮಿಸ್ಟೇಕ್ ಆಫ್ ಕಾಂಗ್ರೆಸ್ ಎಂದು ಆಕ್ಷೇಪಿಸಿದರು.

ಖರ್ಗೆಯವರೆಂದರೆ ನಿಮಗೆ ಇಷ್ಟು ನಡುಕವೇ?

ಒಂದೆಡೆ ದುಡ್ಡಿಲ್ಲ; ಖರ್ಗೆಯವರ ಶಾಲೆ ಕಾಂಪೌಂಡ್, ಶೌಚಾಲಯ ಕಟ್ಟಲು 9.90 ಕೋಟಿ ಕೊಟ್ಟಿದ್ದೀರಿ. ಯೋಜನೆ ಇಲ್ಲ; ಮುಖ್ಯಮಂತ್ರಿಗಳೇ ಎಐಸಿಸಿ ಅಧ್ಯಕ್ಷ ಖರ್ಗೆಯವರನ್ನು ಕಂಡರೆ ಅಷ್ಟು ನಡುಕ ಹುಟ್ಟಿದೆಯೇ ನಿಮಗೆ ಎಂದು ಕೇಳಿದರು. ಅವರ ಮಗ ದೊಡ್ಡ ಮಾತನಾಡುತ್ತಾರೆ. ತಂದೆ ವಿಪಕ್ಷ ನಾಯಕರು, ಮಾವ ಸಂಸದರು, ಅಣ್ಣ, ತಾಯಿ ಸೇರಿದ ಕುಟುಂಬದ ಸಂಸ್ಥೆಗೆ ಏರ್‍ಪೋರ್ಟ್ ಪಕ್ಕದಲ್ಲಿ 5 ಎಕರೆ ಜಾಗವನ್ನು ಮಂಜೂರು ಮಾಡಿದ್ದರು. ರಾತ್ರೋರಾತ್ರಿ ಹೊಡೆದುಕೊಂಡರು. ನಾವು ಕೇಳಿದ ಮೇಲೆ ಪಟ್ಟಂತ ರಾತ್ರಿ ವಾಪಸ್ ಕೊಟ್ಟರು ಎಂದು ಟೀಕಿಸಿದರು.

ವಿದ್ಯಾರ್ಥಿಗಳಿಗೆ ಶುಲ್ಕ ಕಟ್ಟಲು ಹಣವನ್ನೂ ನೀಡುತ್ತಿಲ್ಲ. ಆದರೆ, ಶಾಲೆ ನಡೆಸುವವರು ಶೌಚಾಲಯ ಕಟ್ಟಿಸಬಹುದಲ್ಲವೇ? ಕಾಂಪೌಂಡ್ ಅರ್ಜೆಂಟ್ ಇತ್ತೇ? ಎಂದು ಕೇಳಿದರು. ಈ ಸರಕಾರವು ಭ್ರಷ್ಟಾಚಾರಕ್ಕೆ ಆದ್ಯತೆ ಕೊಡುತ್ತಿದೆ ಎಂದು ಆರೋಪಿಸಿದರು.

GOOD NEWS: ರಾಜ್ಯದ ಜನತೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಗುಡ್ ನ್ಯೂಸ್: ‘ಭೂ ಗ್ಯಾರಂಟಿ ಯೋಜನೆ’ ಜಾರಿ

ಸಾರ್ವಜನಿಕರೇ ಗಮನಿಸಿ : ನಿಮ್ಮ `ಮೊಬೈಲ್’ ಕಳ್ಳತನವಾದ್ರೆ ಚಿಂತೆಬೇಡ, ಜಸ್ಟ್ ಈ ರೀತಿ ಮಾಡಿ.!

Share. Facebook Twitter LinkedIn WhatsApp Email

Related Posts

ಶಿವಮೊಗ್ಗ ಜೈಲಿನಲ್ಲಿ ವಿಚಾರಣಾಧೀನ ಖೈದಿ ನೇಣಿಗೆ ಶರಣು

03/08/2025 5:40 PM1 Min Read

ಶಿವಮೊಗ್ಗ: ಸಾಗರದ ಜಂಬಗಾರುವಿನಲ್ಲಿ ಯಶಸ್ವಿಯಾಗಿ ನಡೆದ ಪೋಕ್ಸೋ, ಬಾಲ್ಯವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ

03/08/2025 5:22 PM1 Min Read

ಆ.15ರಂದು ರಾಜ್ಯದ ಗ್ರಾಮ ಪಂಚಾಯ್ತಿ ಅರಿವು ಕೇಂದ್ರಗಳಲ್ಲಿ ಮಕ್ಕಳಿಗಾಗಿ ಸ್ವಾತಂತ್ರ್ಯ ದಿನ, ವಿಜ್ಞಾನ ಚಟುವಟಿಕೆ

03/08/2025 4:49 PM2 Mins Read
Recent News

Viral Video : “ನನ್ನ ಸಮಾಧಿಯನ್ನ ನಾನೇ ಅಗೆಯುತ್ತೇನೆ” : ಹಮಾಸ್ ಸುರಂಗದೊಳಗೆ ಇಸ್ರೇಲಿ ಒತ್ತೆಯಾಳುವಿನ ಆಕ್ರಂದನ

03/08/2025 5:48 PM

ಶಿವಮೊಗ್ಗ ಜೈಲಿನಲ್ಲಿ ವಿಚಾರಣಾಧೀನ ಖೈದಿ ನೇಣಿಗೆ ಶರಣು

03/08/2025 5:40 PM

ಶಿವಮೊಗ್ಗ: ಸಾಗರದ ಜಂಬಗಾರುವಿನಲ್ಲಿ ಯಶಸ್ವಿಯಾಗಿ ನಡೆದ ಪೋಕ್ಸೋ, ಬಾಲ್ಯವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ

03/08/2025 5:22 PM

ಮಹಿಳಾ ಮಣಿಗಳಿಗೆ ಗುಡ್ ನ್ಯೂಸ್ ; ‘LIC’ ಹೊಸ ಯೋಜನೆಯಡಿ, ತಿಂಗಳಿಗೆ 7000 ಲಭ್ಯ, ನೀವೂ ಅರ್ಜಿ ಸಲ್ಲಿಸಿ

03/08/2025 4:59 PM
State News
KARNATAKA

ಶಿವಮೊಗ್ಗ ಜೈಲಿನಲ್ಲಿ ವಿಚಾರಣಾಧೀನ ಖೈದಿ ನೇಣಿಗೆ ಶರಣು

By kannadanewsnow0903/08/2025 5:40 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯಲ್ಲಿ ವಿಚಾರಣಾಧೀನ ಓರ್ವ ಖೈದಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ. ಪತ್ನಿ ಕೊಲೆ ಆರೋಪದ ಮೇಲೆ…

ಶಿವಮೊಗ್ಗ: ಸಾಗರದ ಜಂಬಗಾರುವಿನಲ್ಲಿ ಯಶಸ್ವಿಯಾಗಿ ನಡೆದ ಪೋಕ್ಸೋ, ಬಾಲ್ಯವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ

03/08/2025 5:22 PM

ಆ.15ರಂದು ರಾಜ್ಯದ ಗ್ರಾಮ ಪಂಚಾಯ್ತಿ ಅರಿವು ಕೇಂದ್ರಗಳಲ್ಲಿ ಮಕ್ಕಳಿಗಾಗಿ ಸ್ವಾತಂತ್ರ್ಯ ದಿನ, ವಿಜ್ಞಾನ ಚಟುವಟಿಕೆ

03/08/2025 4:49 PM

GOOD NEWS: ಪ್ರವಾಸೋದ್ಯಮ ಇಲಾಖೆಯಿಂದ ‘ಹೊಂಸ್ಟೇ ನಿರ್ಮಿಸಲು ಸಹಾಯಧನ’ಕ್ಕೆ ಅರ್ಜಿ ಆಹ್ವಾನ

03/08/2025 4:39 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.