Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

`ಶಕ್ತಿ’ ಚಂಡಮಾರುತ ಎಫೆಕ್ಟ್ : ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ, ಯೆಲ್ಲೋ ಅಲರ್ಟ್ ಘೋಷಣೆ

07/10/2025 7:26 AM

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ರಾಜ್ಯದಲ್ಲಿ `18,800′ ಹೊಸ ಶಿಕ್ಷಕರ ನೇಮಕ.!

07/10/2025 7:21 AM

Shocking: ಪರ್ವತಾರೋಹಣದಲ್ಲಿ ಸೆಲ್ಫಿಗಾಗಿ ಸುರಕ್ಷತಾ ಹಗ್ಗವನ್ನು ಬಿಚ್ಚಿದ ಪಾದಯಾತ್ರಿ ಸಾವು | Watch video

07/10/2025 7:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಾಲಭವನದ ಬಿಜೆಪಿ ಅಧ್ಯಕ್ಷರನ್ನು ನೋಡಿ ಜಗನ್ನಾಥ ಭವನದ ನಾಯಕರು ಬೀದಿಯಲ್ಲಿ ನಗುತ್ತಿದ್ದಾರೆ: ರಮೇಶ್ ಬಾಬು ವ್ಯಂಗ್ಯ
KARNATAKA

ಬಾಲಭವನದ ಬಿಜೆಪಿ ಅಧ್ಯಕ್ಷರನ್ನು ನೋಡಿ ಜಗನ್ನಾಥ ಭವನದ ನಾಯಕರು ಬೀದಿಯಲ್ಲಿ ನಗುತ್ತಿದ್ದಾರೆ: ರಮೇಶ್ ಬಾಬು ವ್ಯಂಗ್ಯ

By kannadanewsnow0926/12/2024 8:15 PM

ಬೆಂಗಳೂರು: ರಾಜಕಾರಣದಲ್ಲಿ ಗಟ್ಟಿ ನಿಲುವು ಮತ್ತು ಹೋರಾಟ ಗೊತ್ತಿಲ್ಲದೇ ಅಧಿಕಾರ ಪಡೆದಿರುವ ವಿಜೇಂದ್ರ, ತಮಗೆ ಶಕ್ತಿ ಇದ್ದರೆ ನಾಳಿನ ಹೋರಾಟಕ್ಕೆ ಅವರ ಪಕ್ಷದ ಎಲ್ಲಾ ಶಾಸಕರು ಒಟ್ಟಾಗಿ ಪಾಲ್ಗೊಳ್ಳವಂತೆ ಮಾಡಿದರೆ ಅದೇ ಅವರ ಅತಿ ದೊಡ್ಡ ಸಾಧನೆ ಆಗುತ್ತದೆ! ಬಾಲಭವನದ ಈ ಬಿಜೆಪಿ ಅಧ್ಯಕ್ಷರ ನೋಡಿ ಜಗನ್ನಾಥ ಭವನದ ರಾಜ್ಯ ಬಿಜೆಪಿ ನಾಯಕರು ಬೀದಿ ಬೀದಿಯಲ್ಲಿ ನಗುತ್ತಿದ್ದಾರೆ ಎಂಬುದಾಗಿ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ವ್ಯಂಗ್ಯವಾಡಿದ್ದಾರೆ.

ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಬೆಳಗಾವಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷವು ಶ್ರೀ ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧಿವೇಶನದ ಅಧ್ಯಕ್ಷರಾಗಿ ಒಂದು ನೂರು ವರ್ಷ ಆದ ಹಿನ್ನೆಲೆಯಲ್ಲಿ ಗಾಂಧಿ ಭಾರತ ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶದಲ್ಲಿ ಗಾಂಧಿ ತತ್ವ ಸಿದ್ದಾಂತಗಳಿಗೆ ಆದರ್ಶ ಗಳಿಗೆ ಎಳ್ಳು ನೀರು ಬಿಟ್ಟು ಕೋಮುವಾದ ದ್ವೇಷ ಬಿತ್ತುತ್ತಿರುವ ಮತೀಯ ಶಕ್ತಿಗಳ ವಿರುದ್ಧ ದೇಶದಲ್ಲಿ ಗಾಂಧೀವಾದ ತತ್ವಗಳ ಬಿತ್ತಲು ಗಾಂಧಿ ಭಾರತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದಿದ್ದಾರೆ.

ವಿಚಾರದಾರೆ ಇಲ್ಲದ ಎಳಸು ಮನಸ್ಸಿನ ಕರ್ನಾಟಕದ ಬಾಲಭವನದ ಬಿಜೆಪಿ ನಾಯಕ ಕಂ ಬಿಜೆಪಿ ಅಧ್ಯಕ್ಷ ಶ್ರೀ ವಿಜೇಂದ್ರಣ್ಣ ಗಾಂಧಿ ಭಾರತ ಕಾರ್ಯಕ್ರಮ ವಿರುದ್ಧ ಬೆಂಗಳೂರು ಗಾಂಧಿ ಪ್ರತಿಮೆ ಬಳಿ ಧರಣಿ ಸತ್ಯಾಗ್ರಹ ಮಾಡುವುದಾಗಿ ಹೇಳಿದ್ದಾರೆ! ಕಾಂಗ್ರೆಸ್ ವಿರೋಧ ಮಾಡುವ ಕಾರಣಕ್ಕಾದರೂ ಗಾಂಧಿ ಹೋರಾಟ ಅನುಸರಿಸುವ ಬಿಜೆಪಿಗೆ ಅಭಿನಂದನೆಗಳು! ಈ ಧರಣಿ ಸತ್ಯಾಗ್ರಹದಲ್ಲಿ ಬಿಜೆಪಿ ನಾಯಕರು ನಾತುರಾಮ್ ಗೋಡ್ಸೆ ಫೋಟೋ ಕೊರಳಿಗೆ ನೇತು ಹಾಕಿಕೊಂಡರೆ ಕನಿಷ್ಠ ಮಹಾತ್ಮಾ ಗಾಂಧೀಜಿ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಎಂದು ಹೇಳಿದ್ದಾರೆ.

ತಮ್ಮ ಸುದ್ದಿ ಘೋಷ್ಟಿಯಲ್ಲಿ ಬಿಜೆಪಿ ಅಧ್ಯಕ್ಷರು ಎರಡು ವಿಚಾರ/ಹೆಸರು ಪ್ರಸ್ತಾಪ ಮಾಡಿದ್ದಾರೆ. ಒಂದು ಶ್ರೀ ಅಂಬೇಡ್ಕರ್, ಇನ್ನೊಂದು ಶ್ರೀ ಶಾಮ್ ಪ್ರಸಾದ್ ಮುಖರ್ಜಿ. ಪಕ್ಷ ರಾಜಕಾರಣ ಬದಿಗಿಟ್ಟು ಅಂಬೇಡ್ಕರ್ ಅವರನ್ನು ಕೇಂದ್ರ ಕಾನೂನು ಸಚಿವರು ಮತ್ತು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರು ಮಾಡಿದ್ದು ಕಾಂಗ್ರೆಸ್. ಅಂಬೇಡ್ಕರ್ ಆಶಯಗಳ ಸಂವಿಧಾನ ಮೂಲಕ ಜಾರಿ ಮಾಡಿದ ಕೀರ್ತಿ ಕಾಂಗ್ರೆಸ್ಗೆ ಸಲ್ಲುತ್ತದೆ. ಆದರೆ ಹಿಂದೂ ಧರ್ಮದಲ್ಲಿ ಸಾಯಲು ಬಯಸದೆ ಅಂಬೇಡ್ಕರ್ ಬೇರೆ ಧರ್ಮ ಸೇರಲು ಮನುವಾದಿಗಳು ಅರ್ತಾತ್ ಬಿಜೆಪಿಗರು ಕಾರಣ ಅಲ್ಲವೇ? ಈ ಕುರಿತು ವಿಜೇಂದ್ರ ಪೂರ್ವಿಕರು ಪ್ರಾಯಶ್ಚಿತ ಯಾವಾಗ ಮಾಡಿಕೊಂಡರು? ಎಂದು ಪ್ರಶ್ನಿಸಿದ್ದಾರೆ.

ಸಂವಿಧಾನದ ಕಲಂ 370 ರ ಕುರಿತು ಜನಸಂಘದ ಸ್ಥಾಪಕ ಶಾಮ್ ಪ್ರಸಾದ್ ಮುಖರ್ಜಿ ಹೆಸರನ್ನು ಬಿಜೆಪಿ ಯತೇಚವಾಗಿ ಬಳಸುತ್ತದೆ. ಜಮ್ಮು ಕಾಶ್ಮೀರಗೆ ಕಲಂ 370 ವಿರೋಧ ಮಾಡಿದ್ದ ಅವರು, ನೆಹರು ಅವರ ಅಂದಿನ ತೀರ್ಮಾನ ಸರಿ ಮತ್ತು ಅನಿವಾರ್ಯ ಎಂದು ಲೋಕಸಭೆ ಅಧಿವೇಶನದಲ್ಲಿ ಮಾತನಾಡಿರುವುದು ಸುಳ್ಳೇ? ಸತ್ಯವನ್ನು ತಿರುಚುವ ಬಿಜೆಪಿ ಲೋಕಸಭೆ ನಡವಳಿಕೆಯ ಅವರ ಭಾಷಣ ಓದಲಿ ಅಥವಾ ಬಹಿರಂಗ ಪಡಿಸಲಿ ಎಂದು ಆಗ್ರಹಿಸಿದ್ದಾರೆ.

ರಾಜ್ಯ ಬಿಜೆಪಿ ಗುಂಪುಗಾರಿಕೆಗೆ ಉತ್ತರ ನೀಡಲು ಸಾಧ್ಯವಾಗದೆ ತತ್ತರಿಸಿರುವ ವಿಜೇಂದ್ರ, ಗಾಂಧಿ ಭಾರತ ಐತಿಹಾಸಿಕ ಕಾರ್ಯಕ್ರಮ ವಿರೋದಿಸುವ ಮೂಲಕ ಅವರ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ರಾಜಕಾರಣದಲ್ಲಿ ಗಟ್ಟಿ ನಿಲುವು ಮತ್ತು ಹೋರಾಟ ಗೊತ್ತಿಲ್ಲದೇ ಅಧಿಕಾರ ಪಡೆದಿರುವ ವಿಜೇಂದ್ರ, ತಮಗೆ ಶಕ್ತಿ ಇದ್ದರೆ ನಾಳಿನ ಹೋರಾಟಕ್ಕೆ ಅವರ ಪಕ್ಷದ ಎಲ್ಲಾ ಶಾಸಕರು ಒಟ್ಟಾಗಿ ಪಾಲ್ಗೊಳ್ಳವಂತೆ ಮಾಡಿದರೆ ಅದೇ ಅವರ ಅತಿ ದೊಡ್ಡ ಸಾಧನೆ ಆಗುತ್ತದೆ! ಬಾಲಭವನದ ಈ ಬಿಜೆಪಿ ಅಧ್ಯಕ್ಷರ ನೋಡಿ ಜಗನ್ನಾಥ ಭವನದ ರಾಜ್ಯ ಬಿಜೆಪಿ ನಾಯಕರು ಬೀದಿ ಬೀದಿಯಲ್ಲಿ ನಗುತ್ತಿದ್ದಾರೆ ಎಂಬುದಾಗಿ ವ್ಯಂಗ್ಯವಾಡಿದ್ದಾರೆ.

ವಿಜೇಂದ್ರ ಅಧ್ಯಕ್ಷ ಸ್ಥಾನದ ರಾಜೀನಾಮೆ ನಿರೀಕ್ಷೆಯಲ್ಲಿ ಇರುವ ರಾಜ್ಯ ಬಿಜೆಪಿ ಜಗನ್ನಾಥ ಭವನದ ನಾಯಕರು, ಇವರ ಹೋರಾಟಗಳು ನಕಲಿ ಎಂದು ಪದೇ ಪದೇ ಹೇಳುತ್ತಿದ್ದಾರೆ. ಗಾಂಧಿ ಭಾರತ ಕಾರ್ಯಕ್ರಮ ವಿರುದ್ಧ ಹೋರಾಟ ಮಾಡುವ ಮೊದಲು ವಿಜೇಂದ್ರ ಮತ್ತು ಅವರ ಬಿಜೆಪಿ ಬಾಲಭವನದ ಪಟಾಲಂ ಪ್ರಾಯಶ್ಚಿತ ಮಾಡಿಕೊಳ್ಳಲಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ಹಾರೈಸುತ್ತದೆ ಎಂದು ಹೇಳಿದ್ದಾರೆ.

Scam Alert: ನೀವು ಪಾರ್ಟ್ ಟೈಂ ಉದ್ಯೋಗ ಹುಡುಕ್ತಾ ಇದ್ದೀರಾ.? ಹಾಗಾದ್ರೇ ಈ ಸುದ್ದಿ ಓದಿ

ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಸಾವು ಕೇಸ್: ವೈದ್ಯರಿಂದ ಈ ಸ್ಪಷ್ಟನೆ

Share. Facebook Twitter LinkedIn WhatsApp Email

Related Posts

`ಶಕ್ತಿ’ ಚಂಡಮಾರುತ ಎಫೆಕ್ಟ್ : ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ, ಯೆಲ್ಲೋ ಅಲರ್ಟ್ ಘೋಷಣೆ

07/10/2025 7:26 AM1 Min Read

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ರಾಜ್ಯದಲ್ಲಿ `18,800′ ಹೊಸ ಶಿಕ್ಷಕರ ನೇಮಕ.!

07/10/2025 7:21 AM1 Min Read

ರಾಜ್ಯದ ಜನತೆಯ ಗಮನಕ್ಕೆ : ವೈದ್ಯರ ಸಲಹೆ ಮೇರೆಗೆ ಮಾತ್ರ `ಕೆಮ್ಮಿನ ಔಷಧಿ’ಗಳನ್ನು ಬಳಸಿ

07/10/2025 7:13 AM2 Mins Read
Recent News

`ಶಕ್ತಿ’ ಚಂಡಮಾರುತ ಎಫೆಕ್ಟ್ : ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ, ಯೆಲ್ಲೋ ಅಲರ್ಟ್ ಘೋಷಣೆ

07/10/2025 7:26 AM

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ರಾಜ್ಯದಲ್ಲಿ `18,800′ ಹೊಸ ಶಿಕ್ಷಕರ ನೇಮಕ.!

07/10/2025 7:21 AM

Shocking: ಪರ್ವತಾರೋಹಣದಲ್ಲಿ ಸೆಲ್ಫಿಗಾಗಿ ಸುರಕ್ಷತಾ ಹಗ್ಗವನ್ನು ಬಿಚ್ಚಿದ ಪಾದಯಾತ್ರಿ ಸಾವು | Watch video

07/10/2025 7:14 AM

ರಾಜ್ಯದ ಜನತೆಯ ಗಮನಕ್ಕೆ : ವೈದ್ಯರ ಸಲಹೆ ಮೇರೆಗೆ ಮಾತ್ರ `ಕೆಮ್ಮಿನ ಔಷಧಿ’ಗಳನ್ನು ಬಳಸಿ

07/10/2025 7:13 AM
State News
KARNATAKA

`ಶಕ್ತಿ’ ಚಂಡಮಾರುತ ಎಫೆಕ್ಟ್ : ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ, ಯೆಲ್ಲೋ ಅಲರ್ಟ್ ಘೋಷಣೆ

By kannadanewsnow5707/10/2025 7:26 AM KARNATAKA 1 Min Read

ಬೆಂಗಳೂರು : ಶಕ್ತಿ ಚಂಡಮಾರುತ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು,…

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ರಾಜ್ಯದಲ್ಲಿ `18,800′ ಹೊಸ ಶಿಕ್ಷಕರ ನೇಮಕ.!

07/10/2025 7:21 AM

ರಾಜ್ಯದ ಜನತೆಯ ಗಮನಕ್ಕೆ : ವೈದ್ಯರ ಸಲಹೆ ಮೇರೆಗೆ ಮಾತ್ರ `ಕೆಮ್ಮಿನ ಔಷಧಿ’ಗಳನ್ನು ಬಳಸಿ

07/10/2025 7:13 AM

BIG NEWS : `ಬೌದ್ಧ’ ಧರ್ಮಕ್ಕೆ ಮತಾಂತರಗೊಂಡರೂ 101 ಪರಿಶಿಷ್ಟ ಜಾತಿಗೆ `SC’ ಪ್ರಮಾಣಪತ್ರ : ರಾಜ್ಯ ಸರ್ಕಾರ ಆದೇಶ

07/10/2025 7:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.