ಶಿವಮೊಗ್ಗ: ಆ ಸಾರಿಗೆ ಬಸ್ಸಿಗೆ ಹತ್ತಿದ್ದಂತ ಪ್ರಯಾಣಿಕರೊಬ್ಬರು ಇಳಿಯುವಾಗ ಒಡವೆ, ಹಣವಿದ್ದಂತ ಬ್ಯಾಗ್ ಅನ್ನೇ ಬಿಟ್ಟು ಹೋಗಿದ್ದರು. ಆದರೇ ನಿರ್ವಾಹಕ ಅದನ್ನು ಜೋಪಾನ ಮಾಡಿ, ಬ್ಯಾಗ್ ಬಿಟ್ಟು ಹೋಗಿದ್ದವರಿಗೆ ಮಾಹಿತಿ ನೀಡಿ, ಹಿಂದಿರುಗಿಸಿದ್ದರು. ಅವರ ಪ್ರಾಮಾಣಿಕತೆಗೆ ಭಾರೀ ಮೆಚ್ಚುಗೆಯೇ ವ್ಯಕ್ತವಾಗಿದೆ. ಅವರ ಕಾರ್ಯವನ್ನು ನಿಮಗವು ಮೆಚ್ಚಿ, ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಿದೆ.
ಹೌದು.. ಫೆಬ್ರವರಿ.13, 2026ರ ಶುಕ್ರವಾರದಂದು ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದಂತ ಬಸ್ಸನ್ನು ಚಿಕ್ಕಮಗಳೂರಿನ ಪ್ರದೀಪ್ ಎಂಬುವರು ಏರಿದ್ದರು. ಅವರೊಂದಿಗೆ ಬಂಗಾರ, ನಗದು ಇದ್ದಂತ ಬ್ಯಾಗ್ ಕೂಡ ತಂದಿದ್ದರು. ಆದರೇ ಅವರು ಇಳಿಯುವಂತ ಸ್ಥಳ ಬಂದಾಗ ಬ್ಯಾಗ್ ಬಿಟ್ಟು, ಇಳಿದು ಹೋಗಿದ್ದರು.
ತಮ್ಮ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಬ್ಯಾಗ್ ಬಿಟ್ಟು ಹೋಗಿದ್ದನ್ನು ಗಮನಿಸಿದಂತ ನಿರ್ವಾಹಕ ಮಂಜುನಾಥ್, ಚಾಲಕ ಮೋಹನ್ ಅವರು ಪರಿಶೀಲಿಸಿದಾಗ, ಅದರಲ್ಲಿ 60 ಗ್ರಾಂ ಬಂಗಾರ ಹಾಗೂ 50,000 ನಗದು ಪತ್ತೆಯಾಗಿತ್ತು. ಅಲ್ಲದೇ ಅದರಲ್ಲಿ ಆಧಾರ್ ಕಾರ್ಡ್ ಕೂಡ ಇತ್ತು. ಅದನ್ನು ಪರಿಶೀಲಿಸಿದಾಗ ಪ್ರದೀಪ್ ಎಂಬುವರದ್ದು ಎಂಬುದಾಗಿ ಮಾಹಿತಿ ಸಿಕ್ಕಿತ್ತು.
ಆಧಾರ್ ಕಾರ್ಡ್ ನಲ್ಲಿ ಇದ್ದಂತ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ಪ್ರದೀಪ್ ಅವರಿಗೆ ತಾವು ಬ್ಯಾಗ್ ಅನ್ನು ಕೆ ಎಸ್ ಆರ್ ಟಿ ಸಿ ಬಸ್ ನಿಂದ ಇಳಿಯುವಾಗ ಬಸ್ಸಿನಲ್ಲಿಯೇ ಬಿಟ್ಟು ಹೋಗಿದ್ದೀರಿ. ಬಂಗಾರ ಮತ್ತು ಹಣವನ್ನು ಘಟಕದಲ್ಲಿ ನೀಡಲಾಗಿದೆ ಬಂದು ಪಡೆಯುವಂತೆ ಮಾಹಿತಿ ನೀಡಿದ್ದರು. ಅವರ ಮಾಹಿತಿ ಆಧರಿಸಿ ಪ್ರಯಾಣಿಕ ಪ್ರದೀಪ್ ಘಟಕಕ್ಕೆ ತೆರಳಿ ತಮ್ಮ ಬ್ಯಾಗ್ ಪಡೆದಿದ್ದರು.
ಲಕ್ಷಾಂತರ ಬೆಲೆಯ ಬಂಗಾರ, ನಗದು ಹಿಂದಿರುಗಿಸಿದಂತ ನಿರ್ವಾಹಕ ಮಂಜನಾಥ್ ಅವರ ಕಾರ್ಯಕ್ಕೆ ಭಾರೀ ಮೆಚ್ಚುಗೆಯನ್ನೇ ಪ್ರದೀಪ್ ವ್ಯಕ್ತಪಡಿಸಿದರು. ಅವರ ಪ್ರಾಮಾಣಿಕತೆಯನ್ನು ಶ್ಲಾಘಿಸಿ, ಕೃತಜ್ಞತೆಯನ್ನು ಸಲ್ಲಿಸಿದರು. ಇಂತಹ ಪ್ರಾಮಾಣಿಕತೆ ಮೆರೆದಂತ ನಿರ್ವಾಹಕ ಮಂಜುನಾಥ್ ಅವರನ್ನು ಕೆ ಎಸ್ ಆರ್ ಟಿ ಸಿ ನಿಗಮದ ಅಧಿಕಾರಿಗಳು, ಸಿಬ್ಬಂದಿಗಳು ಶಾಲು ಹೊದಿಸಿ, ಹಾರ ಹಾಕಿ, ಪೇಟ ಹಾಕಿ, ಹಣ್ಣು-ಹಂಪಲು ನೀಡಿ ಸನ್ಮಾನಿಸಿ ಗೌರವಿಸಿ, ಅಭಿನಂದಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING: ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಹೇಳಿಕೆ: ಸಿಗಂದೂರು ಧರ್ಮದರ್ಶಿ ರಾಮಪ್ಪ ವಿರುದ್ಧ ಪೊಲೀಸರಿಗೆ ದೂರು
BREAKING: ಕರ್ನಾಟಕ ಸೇರಿದಂತೆ 4 ರಾಜ್ಯಗಳ 12 ಜಿಲ್ಲೆಗಳಲ್ಲಿ ರೈಲ್ವೆ ಜಾಲ ವಿಸ್ತರಣೆಗೆ ಕೇಂದ್ರ ಸಂಪುಟ ಒಪ್ಪಿಗೆ
BREAKING: ‘ಬ್ರಾಹ್ಮಣ’ರ ಬಗ್ಗೆ ಹೇಳಿಕೆ ಕುರಿತು ವಿಷಾದ ವ್ಯಕ್ತ ಪಡಿಸಿದ ‘ಸಿಗಂದೂರು ದೇವಸ್ಥಾನ ಧರ್ಮದರ್ಶಿ ರಾಮಪ್ಪ’








