ಕೊಪ್ಪಳ : ಜಾತಿ ನಿಂದನೆ ಮಹಿಳೆಯ ಫೋಟೋ ಸ್ಟೇಟಸ್ ಗೆ ಹಾಕುವ ಬೆದರಿಕೆ ಹಿನ್ನೆಲೆಯಲ್ಲಿ ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಲಬುರ್ಗಾ ತಾಲೂಕಿನ ಹಿರಿಯಕಲ್ ಗ್ರಾಮದಲ್ಲಿ ನಡೆದಿದೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಡ್ರಕಲ್ ಗ್ರಾಮದಲ್ಲಿ ನಡೆದಿದೆ.
ಹಿರೇವಡ್ರಕಲ್ ಗ್ರಾಮದಲ್ಲಿ ನೇಣು ಬಿಗಿದುಕೊಂಡು ಪಾರ್ವತಿ ಎನ್ನುವ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಯಮನೂರಪ್ಪ, ಮಧುರಾಜ್ ನಿರುಪಾದಿ ವಿರುದ್ಧ ಮಹಿಳೆ ಡೆತ್ ನೋಟ್ನಲ್ಲಿ ಹೆಸರು ಉಲ್ಲೇಖಿಸಿ ಇವರು ನನಗೆ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯ ಆರೋಪಿಸಿದ್ದಾರೆ. ಡೆತ್ ನೋಟಲ್ಲಿ ಮೂವರ ಹೆಸರು ಉಲ್ಲೇಖಿಸಿ ಪಾರ್ವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆಗಸ್ಟ್ 31ರಂದು ಪಾನ್ ಶಾಪ್ ನಲ್ಲಿ ಯಮನೂರಪ್ಪ ಸಿಹಿ ತಿಂಡಿ ತಿಂದಿದ್ದ. ಇ ವೇಳೆ ತಿಂಡಿಗೆ ಹಣ ಕೇಳಿದ್ದಕ್ಕೆ ಯಮನೂರಪ್ಪ ಪಾರ್ವತಿಗೆ ಜಾತಿ ನಿಂದನೆ ಮಾಡಿದ್ದಾನೆ. ಬಳಿಕ ಪಾರ್ವತಿಯ ವಿಡಿಯೋ ಸ್ಟೇಟಸ್ ನಲ್ಲಿ ಹಾಕಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಮನನೊಂದು ಡೆತ್ ನೋಟ್ ಬರೆದು ಪಾರ್ವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಘಟನೆ ಕುರಿತು ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.