Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿನ್ನಯ್ಯ ಒಳ್ಳೆಯವರು, ನಾವು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿಲ್ಲ : ಸ್ಪಷ್ಟನೆ ನೀಡಿದ ಚಿನ್ನಯ್ಯನ 2ನೇ ಹೆಂಡತಿ

26/08/2025 3:19 PM

“ನನ್ನ ವಿಸಿಟಿಂಗ್ ಕಾರ್ಡ್ ಜಪಾನೀಸ್ ಭಾಷೆಯಲ್ಲಿ ಮಾಡಿಸಿಕೊಳ್ತಿದ್ದೆ” : ‘ಜಪಾನ್ ಏಕೆ ಮುಖ್ಯ.?’ ತಿಳಿಸಿದ ಪ್ರಧಾನಿ ಮೋದಿ

26/08/2025 2:56 PM

SCO Summit : ಒಂದೇ ವೇದಿಕೆಯಲ್ಲಿ ‘ಮೋದಿ-ಪುಟಿನ್-ಜಿನ್ ಪಿಂಗ್’, ಕುತೂಹಲಕಾರಿ ಭೇಟಿ

26/08/2025 2:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಯುಜಿ ಸಿಇಟಿ/ನೀಟ್-2025ರ ಫಲಿತಾಂಶ ಪ್ರಕಟಿಸಿದ ಕೆಇಎ | UGCET/UGNEET-2025
KARNATAKA

BREAKING: ಯುಜಿ ಸಿಇಟಿ/ನೀಟ್-2025ರ ಫಲಿತಾಂಶ ಪ್ರಕಟಿಸಿದ ಕೆಇಎ | UGCET/UGNEET-2025

By kannadanewsnow0901/08/2025 12:17 PM

ಬೆಂಗಳೂರು: ಎಂಜಿನಿಯರಿಂಗ್‌, ವೈದ್ಯಕೀಯ, ದಂತ ವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದೆ.

ಈ ಫಲಿತಾಂಶಕ್ಕೆ ಆಕ್ಷೇಪಣೆಗಳು ಇದ್ದಲ್ಲಿ ಆಗಸ್ಟ್‌ 2ರಂದು ಬೆಳಿಗ್ಗೆ 11 ಗಂಟೆ ಒಳಗೆ ಇ-ಮೇಲ್‌ ಮೂಲಕ ಕೆಇಎಗೆ ಸಲ್ಲಿಸಬಹುದು. ಅದರ ನಂತರ ಪರಿಶೀಲಿಸಿ, ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಂತಿಮ ಫಲಿತಾಂಶ ಪ್ರಕಟಣೆ ನಂತರ ವೈದ್ಯಕೀಯ ಕೋರ್ಸ್‌ ಹೊರತುಪಡಿಸಿ, ಎಂಜಿನಿಯರಿಂಗ್‌, ಕೃಷಿ ಇತ್ಯಾದಿ ಕೋರ್ಸ್‌ಗಳ ಕಾಲೇಜು ಪ್ರವೇಶಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ರಾಷ್ಟ್ರ ಮಟ್ಟದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಹೋಮಿಯೋಪಥಿ ಕೋರ್ಸ್‌ಗಳ ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಇನ್ನೂ ಪ್ರಕಟವಾಗದಿರುವ ಕಾರಣ, ಆ ಕೋರ್ಸ್‌ಗಳ ಪ್ರವೇಶಕ್ಕೆ ಸದ್ಯಕ್ಕೆ ರಾಜ್ಯದಲ್ಲಿ ಕೂಡ ಅವಕಾಶ ಇರುವುದಿಲ್ಲ. ಅಲ್ಲಿ ಫಲಿತಾಂಶ ಪ್ರಕಟವಾದ ನಂತರ ಆ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಸೀಟು ಹಂಚಿಕೆ ನಂತರ ಅಭ್ಯರ್ಥಿಗಳು ತಮಗೆ ಸಿಕ್ಕಿರುವ ಸೀಟು ಇಷ್ಟ ಇದಿಯೊ/ಇಲ್ಲವೊ ಎಂಬುದನ್ನು ಕಡ್ಡಾಯವಾಗಿ ಛಾಯ್ಸ್‌ ದಾಖಲಿಸುವುದರ ಮೂಲಕ ತಿಳಿಸಬೇಕು. ಒಂದು ವೇಳೆ ಛಾಯ್ಸ್‌ ದಾಖಲಿಸದೇ ಇದ್ದಲ್ಲಿ, ಅಂತಹವರನ್ನು ನಂತರದ ಸುತ್ತಿನಲ್ಲಿ ಸೀಟು ಹಂಚಿಕೆಗೆ ಪರಿಗಣಿಸುವುದಿಲ್ಲ; ಹಾಗೂ ಅವರನ್ನು ಇಡೀ ಪ್ರಕ್ರಿಯೆಯಿಂದಲೇ ಹೊರ ಹಾಕಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

UGCET/UGNEET-25: First round seat allotment provisional results have been announced on the KEA website.#UGCET/UGNEET-25: ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು #KEA ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

ಅಭ್ಯರ್ಥಿಗಳು ವೆಬ್ ಸೈಟ್ ನಲ್ಲಿನ ಲಿಂಕ್ ಮೂಲಕ ಫಲಿತಾಂಶ ಪಡೆಯಬಹುದು.…

— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) August 1, 2025

ಛಾಯ್ಸ್ ದಾಖಲೆ ಸಂದರ್ಭದಲ್ಲಿ ಎಚ್ಚರ ವಹಿಸಲು ಸಲಹೆ: ಛಾಯ್ಸ್‌ ಏನು? ಎತ್ತ?

ಅಭ್ಯರ್ಥಿಗಳು ತಮಗೆ ಸಿಕ್ಕಿರುವ ಕೋರ್ಸ್‌/ಕಾಲೇಜು ಇಷ್ಟ ಆಗಿದ್ದು, ಪ್ರವೇಶ ಪಡೆಯುತ್ತೇವೆ ಎನ್ನುವವರು ಛಾಯ್ಸ್-1 ದಾಖಲಿಸಬೇಕು. ಸಿಕ್ಕಿರುವ ಕೋರ್ಸ್‌/ಕಾಲೇಜು ಪರ್ವಾಗಿಲ್ಲ. ಆದರೆ, ಇನ್ನೂ ಉತ್ತಮ ಕಾಲೇಜು ಸಿಕ್ಕಿದರೆ ಅಲ್ಲಿ ಪ್ರವೇಶ ಪಡೆಯುತ್ತೇವೆ ಅನ್ನುವವರು ಛಾಯ್ಸ್‌ -2 ದಾಖಲಿಸಬೇಕು. ಸಿಕ್ಕಿರುವ ಕಾಲೇಜು/ಕೋರ್ಸ್‌ ಇಷ್ಟ ಇಲ್ಲ ಅನ್ನುವವರು ಛಾಯ್ಸ್‌-3 ದಾಖಲಿಸಬೇಕು. ಅಂತಹವರಿಗೆ ಸಿಕ್ಕಿರುವ ಸೀಟು ಹೊರತುಪಡಿಸಿ, ದಾಖಲಿಸಿರುವ ಇತರ ಎಲ್ಲ ಇಚ್ಛೆ/ಆಯ್ಕೆಗಳನ್ನು ಎರಡನೇ ಸುತ್ತಿನಲ್ಲಿ ಪರಿಗಣಿಸಲಾಗುತ್ತದೆ. ನನಗೆ ಯಾವುದೂ ಬೇಡ, ಕೆಇಎ ಸೀಟು ಹಂಚಿಕೆ ಪ್ರಕ್ರಿಯೆಯಿಂದ ಹೊರ ಹೋಗುತ್ತೇನೆ ಅನ್ನುವವರು ಛಾಯ್ಸ್‌-4 ದಾಖಲಿಸಬಹುದು. ಒಟ್ಟಿನಲ್ಲಿ ಯಾವುದೇ ಛಾಯ್ಸ್‌ ದಾಖಲಿಸುವುದಕ್ಕೂ ಮುನ್ನ ಪೋಷಕರ ಜತೆ ಹತ್ತಾರು ಬಾರಿ ಚರ್ಚೆ ಮಾಡಿಯೇ ಮಾಡಬೇಕು ಎಂದು ಪ್ರಸನ್ನ ಅವರು ಸಲಹೆ ನೀಡಿದ್ದಾರೆ.

ಛಾಯ್ಸ್‌-1 ಮತ್ತು 2 ದಾಖಲಿಸಿದ ನಂತರ ಬದಲಾವಣೆಗೆ ಅವಕಾಶ ಇರುವುದಿಲ್ಲ. ಆದರೆ, ಛಾಯ್ಸ್‌-3 ಮತ್ತು ಛಾಯ್ಸ್‌-4 ದಾಖಲಿಸಿದವರು ನಿಗದಿತ ಕೊನೆ ದಿನಾಂಕದೊಳಗೆ ಪುನಃ ವ್ಯವಸ್ಥೆಯೊಳಗೆ ಬಂದು, ಛಾಯ್ಸ್‌-1 ಅಥವಾ ಛಾಯ್ಸ್‌-2 ದಾಖಲಿಸುವುದಕ್ಕೂ ಈ ಬಾರಿ ಹೊಸದಾಗಿ ಅವಕಾಶ ನೀಡಲಾಗಿದೆ. ತಮಗೆ ಗೊತ್ತಿಲ್ಲದೆ, ಸೈಬರ್‌ ಸೆಂಟರ್‌ ನವರು ಛಾಯ್ಸ್‌ ಹಾಕಿದ್ದಾರೆಂದು ಅನೇಕ ಪೋಷಕರು ಕಳೆದ ಬಾರಿ ಕೂಡ ಅಳಲು ತೋಡಿಕೊಂಡಿದ್ದರಿಂದ ಈ ಬಾರಿ ಸಣ್ಣ ಬದಲಾವಣೆ ಮಾಡಿದ್ದು, ಎಚ್ಚರಿಕೆಯಿಂದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.

ಕಾಲೇಜು ಹಂತದಲ್ಲೇ ವೈದ್ಯಕೀಯ ದಾಖಲೆ ಪರಿಶೀಲನೆ

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಗೆ ಈ ಬಾರಿ ಕೆಇಎಗೆ ಬರುವ ಅಗತ್ಯ ಇರುವುದಿಲ್ಲ. ಬದಲಿಗೆ, ಸದರಿ ಕಾಲೇಜುಗಳಲ್ಲೇ ಮೂಲ ದಾಖಲೆ ಪರಿಶೀಲನೆ ಮಾಡಿಸಿ, ಅಲ್ಲಿಯೇ ಹಸ್ತಾಂತರಿಬೇಕು ಎಂದು ಪ್ರಸನ್ನ ಅವರು ತಿಳಿಸಿದ್ದಾರೆ.

ಇದುವರೆಗೂ ಖಾಸಗಿ ಕಾಲೇಜುಗಳಿಗೆ ಹಂಚಿಕೆಯಾದ ಸೀಟುಗಳಿಗೆ ಸಂಬಂಧಿಸಿದಂತೆ ದಾಖಲೆಗಳ ಸಂಗ್ರಹವನ್ನು ಕೆಇಎಯೇ ಮಾಡಿ ನಂತರ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಕಳುಹಿಸುತ್ತಿತ್ತು. ಇದರಿಂದ ಸಾಕಷ್ಟು ಅನಾನುಕೂಲ ಕೂಡ ಆಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

‘ಶೇಫ್ಲರ್ ಇಂಡಿಯಾ ಸಂಸ್ಥೆ’ಯಿಂದ ಯುವ ನವೋದ್ಯಮಿಗಳಿಂದ ಅರ್ಜಿ ಆಹ್ವಾನ: ಆಗಸ್ಟ್‌.30 ಕೊನೆ ದಿನ

SHOCKING: 40 ವರ್ಷದ ವಿವಾಹಿತನೊಂದಿಗೆ 13 ವರ್ಷದ ಬಾಲಕಿ ಮದುವೆ : ಅರ್ಚಕ ಸೇರಿ ನಾಲ್ವರು ವಿರುದ್ಧ `FIR’ ದಾಖಲು.!

Share. Facebook Twitter LinkedIn WhatsApp Email

Related Posts

ಚಿನ್ನಯ್ಯ ಒಳ್ಳೆಯವರು, ನಾವು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿಲ್ಲ : ಸ್ಪಷ್ಟನೆ ನೀಡಿದ ಚಿನ್ನಯ್ಯನ 2ನೇ ಹೆಂಡತಿ

26/08/2025 3:19 PM1 Min Read

ಕರ್ನಾಟಕದ ದ್ವಿಭಾಷಾ ನೀತಿ ಪ್ರಸ್ತಾವನೆಗೆ ಹಿಂದಿ ಶಿಕ್ಷಕರ ಆತಂಕ: ಕಳವಳ ವ್ಯಕ್ತಪಡಿಸಿದ 25,000 ಶಿಕ್ಷಕರು

26/08/2025 1:44 PM1 Min Read

BREAKING : ಚಿನ್ನಯ್ಯ ತಂದ ತಲೆ ಬುರುಡೆ ಪುರುಷನದ್ದು : ‘FSL’ ವರದಿಯಲ್ಲಿ ಸ್ಪೋಟಕ ವಿಚಾರ ಬೆಳಕಿಗೆ!

26/08/2025 1:13 PM1 Min Read
Recent News

ಚಿನ್ನಯ್ಯ ಒಳ್ಳೆಯವರು, ನಾವು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿಲ್ಲ : ಸ್ಪಷ್ಟನೆ ನೀಡಿದ ಚಿನ್ನಯ್ಯನ 2ನೇ ಹೆಂಡತಿ

26/08/2025 3:19 PM

“ನನ್ನ ವಿಸಿಟಿಂಗ್ ಕಾರ್ಡ್ ಜಪಾನೀಸ್ ಭಾಷೆಯಲ್ಲಿ ಮಾಡಿಸಿಕೊಳ್ತಿದ್ದೆ” : ‘ಜಪಾನ್ ಏಕೆ ಮುಖ್ಯ.?’ ತಿಳಿಸಿದ ಪ್ರಧಾನಿ ಮೋದಿ

26/08/2025 2:56 PM

SCO Summit : ಒಂದೇ ವೇದಿಕೆಯಲ್ಲಿ ‘ಮೋದಿ-ಪುಟಿನ್-ಜಿನ್ ಪಿಂಗ್’, ಕುತೂಹಲಕಾರಿ ಭೇಟಿ

26/08/2025 2:41 PM

ಪ್ರಧಾನಿ ಮೋದಿಯ ‘ವೋಕಲ್ ಫಾರ್ ಲೋಕಲ್’ ಅಭಿಯಾನಕ್ಕೆ ಬಿಜೆಪಿ, ಆರ್ಎಸ್ಎಸ್ ಚಾಲನೆ

26/08/2025 1:49 PM
State News
KARNATAKA

ಚಿನ್ನಯ್ಯ ಒಳ್ಳೆಯವರು, ನಾವು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿಲ್ಲ : ಸ್ಪಷ್ಟನೆ ನೀಡಿದ ಚಿನ್ನಯ್ಯನ 2ನೇ ಹೆಂಡತಿ

By kannadanewsnow0526/08/2025 3:19 PM KARNATAKA 1 Min Read

ಚಾಮರಾಜನಗರ : ಧರ್ಮಸ್ಥಳದಲ್ಲಿ ಶವ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆದಂತ ಚಿನ್ನಯ್ಯನ 2ನೇ ಹೆಂಡತಿ ಪ್ರತಿಕ್ರಿಯೆ ನೀಡಿದ್ದು,…

ಕರ್ನಾಟಕದ ದ್ವಿಭಾಷಾ ನೀತಿ ಪ್ರಸ್ತಾವನೆಗೆ ಹಿಂದಿ ಶಿಕ್ಷಕರ ಆತಂಕ: ಕಳವಳ ವ್ಯಕ್ತಪಡಿಸಿದ 25,000 ಶಿಕ್ಷಕರು

26/08/2025 1:44 PM

BREAKING : ಚಿನ್ನಯ್ಯ ತಂದ ತಲೆ ಬುರುಡೆ ಪುರುಷನದ್ದು : ‘FSL’ ವರದಿಯಲ್ಲಿ ಸ್ಪೋಟಕ ವಿಚಾರ ಬೆಳಕಿಗೆ!

26/08/2025 1:13 PM

BREAKING : ಬೆಂಗಳೂರಲ್ಲಿ ‘ನಮ್ಮ ಮೆಟ್ರೋದಲ್ಲಿ’ ಆಯತಪ್ಪಿ ಹಳಿಗೆ ಬಿದ್ದ ಸಿಬ್ಬಂದಿ : ಅದೃಷ್ಟವಶಾತ್ ಬಚಾವ್ | Video Viral

26/08/2025 1:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.