ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದಲ್ಲಿ ಭಾರೀ ಮಳೆಯಿಂದ ಎದೆ ಮಟ್ಟದ ಪ್ರವಾಹದ ನಡುವೆಯೇ ಶವಹೊತ್ತು ನಡೆಯಲು ಜನರು ಪರದಾಡಿದ ಘಟನೆ ಬೆಳಕಿಗೆ ಬಂದಿದೆ.
ಕ್ಯಾನ್ಸರ್ನಿಂದ ನಿನ್ನೆ ಗ್ರಾಮದ ಸುಲೋಚನಾ (48) ಮೃತಪಟ್ಟಿದ್ದರು. ಕಾವೇರಿ ಭೋರ್ಗರೆತಕ್ಕೆ ಸ್ಮಶಾನದ ರಸ್ತೆ ಸಂಪೂರ್ಣ ಮುಳುಗಡೆಗೊಂಡಿದೆ. ಇದರ ಪರಿಣಾಮ ಪ್ರತಿ ವರ್ಷ ಈ ರಸ್ತೆ ಮುಳುಗಡೆಗೊಳ್ಳುತ್ತದೆ. ಈ ವರ್ಷದ ಮಳೆಗೂ ರಸ್ತೆ ಜಲಾವೃತಗೊಂಡಿದೆ. ಮೃತಪಟ್ಟ ಮಹಿಳೆಯ ಶವ ಹೊತ್ತೊಯ್ಯಲು ಗ್ರಾಮದ ಜನರು ಸರ್ಕಸ್ ಮಾಡುವಂತಾಗಿದೆ.