Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕುವೆಂಪು ವಿವಿಯಿಂದ ಪದವಿ ಪ್ರದಾನಕ್ಕೆ ಅರ್ಜಿ ಆಹ್ವಾನ

15/05/2025 8:16 AM

ಪಿಎಸ್‌ಐ ನೇಮಕಾತಿಗೆ ಪರೀಕ್ಷಾ ಪೂರ್ವ ತರಬೇತಿಗಾಗಿ ಅರ್ಜಿ ಆಹ್ವಾನ

15/05/2025 8:14 AM

Lokayukta Raid | ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಬಿಗ್ ಶಾಕ್ : ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ

15/05/2025 8:12 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕರ್ನಾಟಕದ ‘ಮಣ್ಣು’ ಕಂಡವರ ಪಾಲು : ‘ಅಕ್ರಮ’ ನಡೆಯುತ್ತಿದ್ದರು ‘ಕಣ್ಣುಮುಚ್ಚಿ’ ಕುಳಿತ ಅಧಿಕಾರಿಗಳು
KARNATAKA

ಕರ್ನಾಟಕದ ‘ಮಣ್ಣು’ ಕಂಡವರ ಪಾಲು : ‘ಅಕ್ರಮ’ ನಡೆಯುತ್ತಿದ್ದರು ‘ಕಣ್ಣುಮುಚ್ಚಿ’ ಕುಳಿತ ಅಧಿಕಾರಿಗಳು

By kannadanewsnow0501/03/2024 8:36 AM

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ: ಜಿಲ್ಲಾದ್ಯಂತ ಇಟ್ಟಿಗೆ ತಯಾರಿಸಲು ಅಕ್ರಮ ಮಣ್ಣು ಸಾಗಾಣಿಕೆ ನಡೆಯುತ್ತಲೇ ಇದೇ. ಜೊತೆಗೆ ಇಲ್ಲಿ ತಯರಾದ ಇಟ್ಟಿಗೆಗಳಿಗೆ ತಮಿಳುನಾಡು,ಕೇರಳ ರಾಜ್ಯದಲ್ಲಿ ವ್ಯಾಪಕ ಬೇಡಿಕೆ ಇದ್ದು.. ಇದಕ್ಕಾಗಿ ಫಲವತ್ತತೆಯ ಮಣ್ಣು ಅನ್ಯ ರಾಜ್ಯದ ಪಾಲಾಗುತ್ತಿದೆ. ಆದರೆ ಈ ಬಗ್ಗೆ ಯಾರು ಕಾನೂನು ಕ್ರಮ ಕೈಗೊಳ್ಳದೆ ಕಂದಾಯ ಅದಿಕಾರಿಗಳು ಮೌನವಹಿಸಿದ್ದಾರೆ.

ಪಾಕಿಸ್ತಾನ ಪರ ಘೋಷಣೆ ಆರೋಪ : ಮೂವರ ವಾಯ್ಸ್ ಸ್ಯಾಂಪಲ್ ‘FSL’ ಗೆ ರವಾನಿಸಿದ ಪೊಲೀಸರು

ಕೈಗಾರಿಕಾ ಪ್ರದೇಶದಿಂದ ಅನುಮತಿ ಪಡೆಯದೆ ಕಾನೂನುಬಾಹಿರವಾಗಿ ಜಮೀನಿನಿಂದ ಮಣ್ಣು ತೆಗೆದು ರಾಜಾರೋಷವಾಗಿ ಸಾಗಾಟ ಮಾಡಲಾಗುತ್ತಿದೆ. ಬದನಗುಪ್ಪೆ ಕೈಗಾರಿಕಾ ಪ್ರದೇಶದಿಂದ ವಿವಿದ ಗ್ರಾಮದಲ್ಲಿ ನಡೆಸೊ ಇಟ್ಟಿಗೆ ಕಾರ್ಖಾನೆಗಳಿಗೆ ಮಣ್ಣು ರವಾನಿಸಲಾಗುತ್ತದೆ. ಅನ್ಯರಾಜ್ಯವಾದ ಕೇರಳ ತಮಿಳುನಾಡಿನಲ್ಲಿ ಕೆಂಪು ಮಣ್ಣು ತೆಗೆಯಲು ಅವಕಾಶವಿಲ್ಲದರಿಂದ ಇಲ್ಲಿ ತೆಗೆದು ಇಟ್ಟಿಗೆ ಸಿಧ್ದಪಡಿಸಿ ಪಕ್ಕದ ರಾಜ್ಯಗಳಿಗೆ ರವಾನೆ ಮಾಡಲಾಗುತ್ತಿದೆ. ಅನುಮತಿ ನೀಡದೆ ಇರೊ ಜಾಗದಲ್ಲಿ ಸರ್ಕಾರ ಕೂಡ ಯಾವ್ದೆ ಕಂದಾಯ ಪಾವತಿ ಮಾಡದೆ ಸಾಗಾಣಿಕೆ ಮಾಡುತ್ತಾ ಇದ್ದರೂ ನಾಡು ನುಡಿ ಜಲ ಎಂದು ಹೋರಾಟ ಮಾಡುವ ಕೆಲ ಸಂಘಟನೆ ಮುಖಂಡರು ನೋಡಿಯೂ ನೋಡದಂತೆ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ.

ಶೀತ, ಕೆಮ್ಮು, ಜ್ವರ ಬಂದರೆ ಕೊರೊನಾ ಅಂತ ಆತಂಕ ಪಡಬೇಡಿ. ಇದು ವೈರಲ್‌ ಫೀವರ್‌ ಆಗಿರಬಹುದು. ಇದಕ್ಕೆ ಸುಲಭವಾದ ಮನೆಮದ್ದು ಇದೆ.

ಪ್ರಶ್ನಿಸಬೇಕಾದ ಕಂದಾಯ ಅಧಿಕಾರಿಗಳು ಮೌನ :

ಎಗ್ಗಿಲ್ಲದೆ ಮಣ್ಣು ಸಾಗಿಸುತ್ತಿದ್ದರೂ ಗಣಿ ಇಲಾಖೆ ಕುರುಡುತನ ಪ್ರದರ್ಶನ ತೋರುತ್ತಿದೆ. ಮತ್ತೊಂದೆಡೆ ಅನಧಿಕೃತ ಪರವಾನಿಗೆ ಪಡೆಯದೆ ಟ್ರಾಕ್ಟರ್ ಲಾರಿಯಲ್ಲಿ ಸಾಗಿಸುತ್ತಿದ್ದರೂ ಕೇಳದೆ ಇರೊ ಪ್ರಾದೇಶಿಕ ಸಾರಿಗೆ ಅದಿಕಾರಿಗಳು ಅಕ್ರಮದ ಬಗ್ಗೆ ಕೇಳಬೇಕಾದ ಪೊಲೀಸರೆ ಈ ದಂಧೆಯಲ್ಲಿ ಶಾಮೀಲಾಗಿ ಸಾಥ್ ನೀಡುತ್ತಿರೋದು ಶೋಚನೀಯ ಎಂದರೆ ತಪ್ಪಾಗಲಾರದು.

ಅನದಿಕೃತ ಮಣ್ಣು ಖನಿಜ ಸಂಪತ್ತು ಕೊಳ್ಳೆ ಹೊಡೆಯುತ್ತಿದ್ದರೂ ಪ್ರಾದೇಶಿಕ ಅದಿಕಾರಿಗಳು ನಮಗಲ್ಲ ಎಂದರೆ ಇದನ್ನ ತಡೆ ಹಿಡಿಯಬೇಕಾದ ಆರಕ್ಷಕರೂ ನಮ್ಮ ಕೆಲಸವಲ್ಲ ಕಂದಾಯ ಅದಿಕಾರಿಗಳ ಕೆಲಸ ಎಂದು ಸುಮ್ಮನಿದ್ದಾರೆ ಆದರೆ ಅಲ್ಲೊಮ್ಮೆ ಇಲ್ಲೊಮ್ಮೆ ದಾಳಿ ನಡೆಸಿದ ಗಣಿ ಇಲಾಖೆ ಮೇಲೆ ಸಾರ್ವಜನಿಕರು ಅನುಮಾನ ಪಡಬೇಕಾದ ದುಸ್ಥಿತಿ ಎದುರಾಗಿದೆ.

Caste Census : ನಾನು ಯಾವ ಜಾತಿ ಎಂದು ಯಾರೂ ಬಂದು ಮಾಹಿತಿ ಕೇಳಿಲ್ಲ: ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ

ಇಂತಹವರ ರಕ್ಷಣೆಗೆ ನಿಂತು 112 ನ ಕೆಲವು ಸಿಬ್ಬಂದಿಗಳೆ ಸಾಗಾಣಿಕೆಯ ವಾಹನದ ಮುಂದಾಳತ್ವದ ಜವಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ ಎಂಬ ಆರೋಪಗಳು ಹಿಂದೆ ಕೇಳಿಬಂದಿದ್ದವು. *ಅಕ್ರಮವಾಗಿ ತೆಗೆದ ಮಣ್ಣನ್ನ ಇಟ್ಟಿಗೆ ಗೂಡಿಗೆ ಸಾಗಿಸಿ ಇಟ್ಟಿಗೆ ಸಿದ್ದಪಡಿಸಿ ಅನ್ಯ ರಾಜ್ಯಗಳಾದ ತಮಿಳುನಾಡು ಕೇರಳಕ್ಕೆ ಎಗ್ಗಿಲ್ಲದೆ ಇಟ್ಟಿಗೆಗಳು ರವಾನೆಯಾಗುತ್ತಿದೆ. ತಪಾಸಣೆ ಮಾಡಬೇಕಾದ ಚೆಕ್ ಪೊಸ್ಟ್ ಗಳಿಗೂ ಇಂತಿಷ್ಟು ಮಾಮೂಲಿ ನೀಡೊದರಿಂದ ನಮಗೇಕೆ ಅಂತ ಸುಮ್ಮನಾಗಿದ್ದಾರೆ. ಸರ್ಕಾರಕ್ಕೆ ಜಿಎಸ್ಟಿ ಪಾವತಿಸದೇ ಸುಲಭದಲ್ಲಿ ಉದ್ಯೋಗ ಕಂಡುಕೊಂಡಿರುವ ಮಾಲೀಕರು ಅತಿ ಹೆಚ್ಚಿನ ಲಾಭದ ಉದ್ದೇಶದಿಂದ ಮಣ್ಣು ಅನ್ಯರಾಜ್ಯದ ಪಾಲಾಗುತ್ತಿದೆ.

ಅದಿಕಾರಿಗಳಿಗಿಲ್ಲ ರಕ್ಷಣೆ:

ಕರಿಕಲ್ಲು ಬಿಳಿಕಲ್ಲು ಕೆಂಪು ಮಣ್ಣು ಹೀಗೆ ಎಗ್ಗಿಲ್ಲದೆ ಕಾನೂನುಬಾಹಿರವಾಗಿ ಸಾಗಾಟ ಮಾಡುವಾಗ ಕೃತ್ಯದಲ್ಲಿ ತೊಡಗುವವರು ದಾಳಿ ಸಂದರ್ಭದಲ್ಲಿ ಹಲ್ಲೆ ನಡೆಸುವ ತಾಜಾ ಉದಾಹರಣೆಗಳುಂಟು. ಹಿಂದೆ ಜಿಲ್ಲಾದಿಕಾರಿ ಕುಂಜಪ್ಪ ಅವರ ಮೇಲೂ ಕಲ್ಲು ತೂರಾಟವಾಗಿದ್ದವು. ಪೊಲೀಸರ ಮೇಲೆ ಹಲ್ಲೆ ಕೂಡ ಆಗಿದ್ದವು. ಪೊಲೀಸರ ನಂಬಿ ಪೂರ್ವಯೋಜಿತ ದಾಳಿ ನಡೆದರೆ ಅದಿಕಾರಿಗಳ ಮೇಲೆ ಹಲ್ಲೆ ಗಲಾಟೆ ನಡೆಯದೆ ಇರಲಾರದು.

ಗಲಾಟೆ ನಡೆದಾಗ ರಕ್ಷಣೆ ನಮ್ಮ ಕೆಲಸ ಎನ್ನುವ ಆರಕ್ಷಕರು ಮುಂದೆ ವಾಹನಗಳು ಹೋದರೆ ಆರ್ಟಿಒ,ಗಣಿ ಕಂದಾಯ ಅಧಿಕಾರಿಗಳು ಏನು ಮಾಡುತ್ತಾರೆ ಎನ್ನುವ ಇವರುಗಳು ಅಂತಹ ವಾಹನಗಳಿಗೆ ತಡೆದು ಕೈ ಯಾಕೆ ಒಡ್ಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಲಾರದಂತಾಗಿದೆ.ಜಿಲ್ಲಾಡಳಿತ ಕಂದಾಯ ಅದಿಕಾರಿಗಳು, ಆರ್ಟಿಓ, ಪೊಲೀಸ್ ಇಲಾಖೆ,ಗಣಿಇಲಾಖೆ ನಾಲ್ಕೈದು ಇಲಾಖೆಗಳ ಸಮನ್ವಯತೆಯಿಂದ ದಾಳಿ ನಡೆಸಿದರೆ ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಬಹುದು ಇಲ್ಲವಾದರೆ ಕರ್ನಾಟಕದ ಖನಿಜ ಸಂಪತ್ತು ಕಂಡವ್ರ ಪಾಲಾಗದೆ ಇರಲಾರದು.

Share. Facebook Twitter LinkedIn WhatsApp Email

Related Posts

ಕುವೆಂಪು ವಿವಿಯಿಂದ ಪದವಿ ಪ್ರದಾನಕ್ಕೆ ಅರ್ಜಿ ಆಹ್ವಾನ

15/05/2025 8:16 AM2 Mins Read

ಪಿಎಸ್‌ಐ ನೇಮಕಾತಿಗೆ ಪರೀಕ್ಷಾ ಪೂರ್ವ ತರಬೇತಿಗಾಗಿ ಅರ್ಜಿ ಆಹ್ವಾನ

15/05/2025 8:14 AM1 Min Read

Lokayukta Raid | ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಬಿಗ್ ಶಾಕ್ : ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ

15/05/2025 8:12 AM1 Min Read
Recent News

ಕುವೆಂಪು ವಿವಿಯಿಂದ ಪದವಿ ಪ್ರದಾನಕ್ಕೆ ಅರ್ಜಿ ಆಹ್ವಾನ

15/05/2025 8:16 AM

ಪಿಎಸ್‌ಐ ನೇಮಕಾತಿಗೆ ಪರೀಕ್ಷಾ ಪೂರ್ವ ತರಬೇತಿಗಾಗಿ ಅರ್ಜಿ ಆಹ್ವಾನ

15/05/2025 8:14 AM

Lokayukta Raid | ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಬಿಗ್ ಶಾಕ್ : ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ

15/05/2025 8:12 AM

ಇಂದು ಸುಪ್ರೀಂ ಕೋರ್ಟ್ ನಲ್ಲಿ ‘ವಕ್ಫ್ ತಿದ್ದುಪಡಿ ಕಾಯ್ದೆಯ’ ಸಾಂವಿಧಾನಿಕತೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ | Waqf bill

15/05/2025 8:12 AM
State News
KARNATAKA

ಕುವೆಂಪು ವಿವಿಯಿಂದ ಪದವಿ ಪ್ರದಾನಕ್ಕೆ ಅರ್ಜಿ ಆಹ್ವಾನ

By kannadanewsnow0715/05/2025 8:16 AM KARNATAKA 2 Mins Read

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 35 ನೇ ವಾರ್ಷಿಕ ಘಟಿಕೋತ್ಸವ ಮೇ/ಜೂನ್-2025 ರ ಮಾಹೆಯಲ್ಲಿ ಜರುಗಲಿದ್ದು ಅರ್ಹ ಅಭ್ಯರ್ಥಿಗಳಿಗೆ ಪದವಿ ಪ್ರದಾನ…

ಪಿಎಸ್‌ಐ ನೇಮಕಾತಿಗೆ ಪರೀಕ್ಷಾ ಪೂರ್ವ ತರಬೇತಿಗಾಗಿ ಅರ್ಜಿ ಆಹ್ವಾನ

15/05/2025 8:14 AM

Lokayukta Raid | ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಬಿಗ್ ಶಾಕ್ : ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ

15/05/2025 8:12 AM

ಡಿಪ್ಲೋಮಾ ಟೆಕ್ಸ್‍ಟೈಲ್ ಟೆಕ್ನಾಲಜಿ ಕೋರ್ಸಿಗೆ ಅರ್ಜಿ ಆಹ್ವಾನ

15/05/2025 8:06 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.