Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಾಕಿಸ್ತಾನದಿಂದ ಸ್ವಾತಂತ್ರ್ಯ ಘೋಷಿಸಿದ ಬಲೂಚಿಸ್ತಾನ

14/05/2025 9:52 PM

ಭಾರತೀಯ ವಾಯು ಪಡೆಯ ಸಿಂಧೂರ್ ರಣತಂತ್ರಕ್ಕೆ ಪಾಕ್ ವಾಯು ರಕ್ಷಣಾ ವ್ಯವಸ್ಥೆ ಥೂಳಿಪಟ

14/05/2025 9:47 PM

BIG NEWS : ತುಮಕೂರಲ್ಲಿ ಹಿಟ್ & ರನ್ ಗೆ ಬೈಕ್ ಸವಾರ ಬಲಿ

14/05/2025 9:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಡೀ ರಾಷ್ಟ್ರಕ್ಕೆ ಕರ್ನಾಟಕದ ‘ಗ್ಯಾರಂಟಿ ಯೋಜನೆ’ ಮಾದರಿ : ಬಜೆಟ್ ಅಧಿವೇಶನದಲ್ಲಿ ಗವರ್ನರ್ ಗೆಹ್ಲೊಟ್ ಬಣ್ಣನೆ
KARNATAKA

ಇಡೀ ರಾಷ್ಟ್ರಕ್ಕೆ ಕರ್ನಾಟಕದ ‘ಗ್ಯಾರಂಟಿ ಯೋಜನೆ’ ಮಾದರಿ : ಬಜೆಟ್ ಅಧಿವೇಶನದಲ್ಲಿ ಗವರ್ನರ್ ಗೆಹ್ಲೊಟ್ ಬಣ್ಣನೆ

By kannadanewsnow0512/02/2024 11:33 AM

ಬೆಂಗಳೂರು : ಇಂದಿನಿಂದ 10 ದಿನಗಳವರೆಗೆ ಕರ್ನಾಟಕ ವಿಧಾನ ಮಂಡಲದ ಬಜೆಟ್ ಅಧಿವೇಶನ ನಡೆಯತ್ತಿದ್ದು, ಅಧಿವೇಶನದ ಆರಂಭದ ದಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್, ಇಡೀ ದೇಶಕ್ಕೆ ಕರ್ನಾಟಕ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳು ಮಾದರಿಯಾಗಿವೆ ಎಂದು ಬಣ್ಣಿಸಿದರು.

ಅಧಿವೇಶನದ ಆರಂಭದ ದಿನ ಜಂಟಿ ಅಧಿವೇಶನ ಉದ್ದೇಶಿಸಿ ಇಂದು ಮಾತನಾಡಿದ ಅವರು, ಸರ್ಕಾರವು ನಡೆ ನುಡಿಗಳಗಳನ್ನು ಒಂದಾಗಿಸಿಕೊಂಡು ಕೆಲಸ ಮಾಡುತ್ತಿದೆ. ಕರ್ನಾಟಕ ಮಾದರಿಯನ್ನು ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಅನುಸರಿಸುತ್ತಾ ಬಂದಿದೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದಾಗಿ ಬಡವರಿಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಾಂತ್ವನವನ್ನು ಒದಗಿಸಿವೆ ಎಂದು ಹೇಳಿದರು.

ಇಡೀ ದೇಶಕ್ಕೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಮಾದರಿಯಾಗಿವೆ. ಶಕ್ತಿ, ಅನ್ನಭಾಗ್ಯ, ಯುವನಿಧಿ, ಗೃಹಲಕ್ಷ್ಮೀ, ಗೃಹಜ್ಯೋತಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ತೃಪ್ತಿ ನೀಡಿವೆ ಎಂದು ಅವರು ಹೇಳಿದರು.ಆರ್ಥಿಕ ಅಸಮಾನತೆಯಿಂದ ಅಶಕ್ತರಾಗಿರುವ ಜನತೆಯ ಬದುಕಿಗೆ ಕೇವಲ ಈ ಗ್ಯಾರಂಟಿಗಳು ಮಾತ್ರ ಸಾಕಾಗುವುದಿಲ್ಲ ಎನ್ನುವ ಅರಿವು ಸರ್ಕಾರಕ್ಕೆ ಇದೆ. ಸರ್ಕಾರವು ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದ ಎರಡು ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಗಿಂತ ಹೊರಗೆ ಬಂದು ಮಧ್ಯಮ ವರ್ಗದ ಸ್ಥಿತಿಗೆ ಏರುತ್ತಿವೆ.

ಬರಗಾಲವಿದ್ದರೂ ರಸ್ತೆ ನೀರು ಶಿಕ್ಷಣ ಆರೋಗ್ಯ ಕೃಷಿ ತೋಟಗಾರಿಕೆ ಹೈನುಗಾರಿಕೆ ಕೈಗಾರಿಕೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ನಡೆದಿದ್ದಾಗಿದ್ದು ಬಜೆಟ್ ನಲ್ಲಿ 97 ರಷ್ಟು ಘೋಷಣೆಗಳಿಗೆ ಅಧಿಸೂಚನೆ ಹೊರಡಿಸಿದೆ. ಬರಪೀಡಿತ ಪ್ರದೇಶಗಳ ನೆರವಿಗೆ ಸರ್ಕಾರ ಅನುದಾನ ನೀಡಿದೆ ಸರ್ಕಾರ ಕೊಬ್ಬರಿಗೆ ಬೆಂಬಲ ಬೆಲೆಯನ್ನು ಘೋಷಿಸಿದೆ ಅಲ್ಲದೆ ಬೆಳೆ ಹಾನಿಗೆ ಕೂಡ ಪರಿಹಾರ ನೀಡಿದೆ ಎಂದು ತಿಳಿಸಿದರು.

ಕರ್ನಾಟಕ ಉದಯವಾಗಿ ಐವತ್ತು ವರ್ಷಗಳಾಗಿವೆ ಕರ್ನಾಟಕ ಸಂಭ್ರಮ 50 ಆಚರಣೆ ಮಾಡಲಾಗುತ್ತಿದೆ ನಮ್ಮ ಭಾಷೆ ಸಂಸ್ಕೃತಿಯ ಮೇಲೆ ದಾಳಿಯನ್ನು ಸಹಿಸುವುದಿಲ್ಲ ಕನ್ನಡ ಸಂಸ್ಕೃತಿ ಕಾಪಾಡಲು ಸರ್ಕಾರ ಸೂಕ್ತವಾದಂತಹ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಅಧಿವೇಶನ ಆರಂಭಕ್ಕೂ ಮುನ್ನ ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲರಿಗೆ ಭವ್ಯ ಸ್ವಾಗತ ದೊರೆಯಿತು. ವಿಧಾನಸೌಧ ಗ್ರ್ಯಾಂಡ್ ಸ್ಟೆಪ್ ದ್ವಾರದಲ್ಲಿ ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್ ಅವರಿಗೆ ಮೈಸೂರು ಕರ್ನಾಟಿಕ್ ಬ್ಯಾಂಡ್, ಮೈಸೂರು ಇಂಗ್ಲಿಷ್ ಬ್ಯಾಂಡ್, ಮೌಂಟೆಡ್ ಲ್ಯಾನ್ಸ್ ಮೇನ್, ಮೌಂಟೆಡ್ ಹಾರ್ಸ್ ಎಸ್ಕಾರ್ಟ್, ಸಿಎಆರ್ ಪೊಲೀಸ್ ಬ್ಯಾಂಡ್ ಮೂಲಕ ಸ್ವಾಗತ ಕೋರಲಾಯಿತು. ರಾಜ್ಯಪಾಲ ಗೆಹ್ಲೋಟ್​ರನ್ನು ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದರು. ಈ ವೇಳೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್, ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಇತರರು ಹಾಜರಿದ್ದರು.

Share. Facebook Twitter LinkedIn WhatsApp Email

Related Posts

BIG NEWS : ತುಮಕೂರಲ್ಲಿ ಹಿಟ್ & ರನ್ ಗೆ ಬೈಕ್ ಸವಾರ ಬಲಿ

14/05/2025 9:14 PM1 Min Read

ಭಾರತ-ಪಾಕ್ ಮಧ್ಯ ಕದನ ವಿರಾಮ ಬೆನ್ನಲ್ಲೆ, ಸರಕು ಸಾಗಣೆ ಹಡಗಿನಲ್ಲಿ ಕಾರವಾರ ಬಂದರಿಗೆ ಬಂದ ಪಾಕಿಸ್ತಾನ್ ಪ್ರಜೆ!

14/05/2025 8:52 PM1 Min Read

BREAKING : ಚಿತ್ರದುರ್ಗದಲ್ಲಿ ಘೋರ ದುರಂತ : ಕೃಷಿ ಹೊಂಡದಲ್ಲಿ ಕಾಲುಜಾರಿ ಬಿದ್ದು ಇಬ್ಬರು ಯುವಕರು ಸಾವು!

14/05/2025 8:43 PM1 Min Read
Recent News

ಪಾಕಿಸ್ತಾನದಿಂದ ಸ್ವಾತಂತ್ರ್ಯ ಘೋಷಿಸಿದ ಬಲೂಚಿಸ್ತಾನ

14/05/2025 9:52 PM

ಭಾರತೀಯ ವಾಯು ಪಡೆಯ ಸಿಂಧೂರ್ ರಣತಂತ್ರಕ್ಕೆ ಪಾಕ್ ವಾಯು ರಕ್ಷಣಾ ವ್ಯವಸ್ಥೆ ಥೂಳಿಪಟ

14/05/2025 9:47 PM

BIG NEWS : ತುಮಕೂರಲ್ಲಿ ಹಿಟ್ & ರನ್ ಗೆ ಬೈಕ್ ಸವಾರ ಬಲಿ

14/05/2025 9:14 PM

ಭಾರತ-ಪಾಕ್ ಮಧ್ಯ ಕದನ ವಿರಾಮ ಬೆನ್ನಲ್ಲೆ, ಸರಕು ಸಾಗಣೆ ಹಡಗಿನಲ್ಲಿ ಕಾರವಾರ ಬಂದರಿಗೆ ಬಂದ ಪಾಕಿಸ್ತಾನ್ ಪ್ರಜೆ!

14/05/2025 8:52 PM
State News
KARNATAKA

BIG NEWS : ತುಮಕೂರಲ್ಲಿ ಹಿಟ್ & ರನ್ ಗೆ ಬೈಕ್ ಸವಾರ ಬಲಿ

By kannadanewsnow0514/05/2025 9:14 PM KARNATAKA 1 Min Read

ತುಮಕೂರು : ಕೆಲಸ ಮುಗಿಸಿಕೊಂಡು ಮನೆಗೆ ಹೋಗುವ ವೇಳೆ ಹಿಟ್ ಅಂಡ್ ರಂಡಿಗೆ ಬೈಕ್ ಸಮಾರಂಭ ಸಾವನಪ್ಪಿರುವ ಘಟನೆ ತುಮಕೂರು…

ಭಾರತ-ಪಾಕ್ ಮಧ್ಯ ಕದನ ವಿರಾಮ ಬೆನ್ನಲ್ಲೆ, ಸರಕು ಸಾಗಣೆ ಹಡಗಿನಲ್ಲಿ ಕಾರವಾರ ಬಂದರಿಗೆ ಬಂದ ಪಾಕಿಸ್ತಾನ್ ಪ್ರಜೆ!

14/05/2025 8:52 PM

BREAKING : ಚಿತ್ರದುರ್ಗದಲ್ಲಿ ಘೋರ ದುರಂತ : ಕೃಷಿ ಹೊಂಡದಲ್ಲಿ ಕಾಲುಜಾರಿ ಬಿದ್ದು ಇಬ್ಬರು ಯುವಕರು ಸಾವು!

14/05/2025 8:43 PM

ಬಾಗಲಕೋಟೆಯಲ್ಲಿ ಒಡೆದ ಬಿಯರ್ ಬಾಟಲ್ ನಿಂದ ಶಿಕ್ಷಕನ ಮೇಲೆ ಹಲ್ಲೆ : ಆರೋಪಿ ಯುವಕ ಅರೆಸ್ಟ್

14/05/2025 8:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.