Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

EPFO ಹೊಂದಿರುವವರಿಗೆ ಗುಡ್‌ ನ್ಯೂಸ್‌! ಈಗ ಹಣ ಹಿಂಪಡೆಯೋದು ಮತ್ತಷ್ಟು ಸುಲಭ

15/09/2025 5:10 AM

BREAKING: ರಾಯಚೂರಲ್ಲಿ ವಿಷ ಸೇವಿಸಿ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನ, ಒಬ್ಬರು ಸಾವು

14/09/2025 10:04 PM

ಚಿಕ್ಕಬಳ್ಳಾಪುರದಲ್ಲಿ ಗಣೇಶ ಮೆರವಣಿಗೆ ನೋಡಲು ತೆರಳುತ್ತಿದ್ದ ಇಬ್ಬರು ದುರ್ಮರಣ

14/09/2025 9:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿಧಾನಸಭೆಯಲ್ಲಿ ‘ವೃತ್ತಿ ಕಸುಬು ಉದ್ಯೋಗ ತೆರಿಗೆ ತಿದ್ದುಪಡಿ ವಿಧೇಯಕ’ ಅಂಗೀಕಾರ
KARNATAKA

ವಿಧಾನಸಭೆಯಲ್ಲಿ ‘ವೃತ್ತಿ ಕಸುಬು ಉದ್ಯೋಗ ತೆರಿಗೆ ತಿದ್ದುಪಡಿ ವಿಧೇಯಕ’ ಅಂಗೀಕಾರ

By kannadanewsnow0918/03/2025 7:48 PM

ಬೆಂಗಳೂರು : 2025ನೇ ಸಾಲಿನ ಕರ್ನಾಟಕ ವೃತ್ತಿಗಳ, ಕಸುಬುಗಳ, ಅಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ (ತಿದ್ದುಪಡಿ) ವಿಧೇಯಕವನ್ನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್ ಅವರು ವಿಧಾನಸಭೆಯಲ್ಲಿ ಅಂಗೀಕರಿಸಲು ಕೋರಿದರು. ವಿಧೇಯಕವು ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.

ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) (ತಿದ್ದುಪಡಿ) ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) (ತಿದ್ದುಪಡಿ) ವಿಧೇಯಕವನ್ನು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್ ಅವರು ವಿಧಾನಸಭೆಯಲ್ಲಿ ಅಂಗೀಕರಿಸಲು ಕೋರಿದರು.

ಸಚಿವರು ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಅಧಿನಿಯಮ 1959ನ್ನು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಿದೆ. ಈ ವಿಧೇಯಕವು ಪರೀಕ್ಷ ನಿಯಂತ್ರಕ ಮತ್ತು ಜಂಟಿ ಪರೀಕ್ಷ ನಿಯಂತ್ರಕ ಎಂಬ ಪದಗಳನ್ನು ಪರಿಭಾಷಿಸಲು, ಆಯೋಗವು ನಿರ್ಣಯ ತೆಗೆದುಕೊಳ್ಳುವಲ್ಲಿ ಆಗುವ ವಿಳಂಬವನ್ನು ತಡೆಯುವ ಸಂಬಂಧ, ಸುತ್ತೋಲೆಯ ಮೂಲಕ ನಿರ್ಣಯಗಳನ್ನು ಕೈಗೊಳ್ಳುವುದಕ್ಕೆ ಸಂಬಂಧಿಸಿದ ಉಪಬಂಧವನ್ನು ತೆಗೆದು ಹಾಕುವುದು, ಆಯೋಗದ ಸಭೆಗಾಗಿ ಅಧ್ಯಕ್ಷರನ್ನು ಒಳಗೊಂಡು ಸೇವೆ ಸಲ್ಲಿಸುತ್ತಿರುವ ಸದಸ್ಯರುಗಳ ಶೇಕಡಾ ಐವತ್ತರಷ್ಟುನ್ನು ಕೋರಂ ಆಗಿ ನಿಗದಿಪಡಿಸುವುದು. ಆಯೋಗವು ಅಧಿಕೃತಗೊಳಿಸಿದ ಯಾರೇ ಒಬ್ಬ ಸದಸ್ಯನು ನೇಮಕಾತಿಗಾಗಿ ಅಭ್ಯರ್ಥಿಗಳ ಸಂದರ್ಶನವನ್ನು ಮಾಡಲು ಉಪಬಂಧ ಕಲ್ಪಿಸಬಹುದು ಮತ್ತು ಕೆಲವು ಇತರೆ ಅನುಷಂಗಿಕ ತಿದ್ದುಪಡಿಗಳನ್ನು ಸಹ ಮಾಡಲಾಗಿದೆ ಎಂದು ವಿಧೇಯಕದ ಕುರಿತು ಸದನಕ್ಕೆ ವಿವರಿಸಿ ವಿಧೇಕಯವನ್ನು ಪರ್ಯಾಲೋಚಿಸಲು ಕೋರಿದರು.

ವಿರೋಧಪಕ್ಷದ ನಾಯಕರು ಕೆ.ಪಿ.ಎಸ್.ಸಿ ಗೆ ಹೊಸ ಕಾಯಕಲ್ಪ ತರುವುದು ನಮ್ಮೆಲ್ಲರ ಕರ್ತವ್ಯ. ಯುಪಿಎಸ್ಸಿ ಮಾದರಿಯಲ್ಲಿ ಕೆ.ಪಿ.ಎಸ್.ಸಿಯನ್ನು ರೂಪುಗೊಳಿಸಬೇಕು ಎಂದು ತಿಳಿಸಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಸದಸ್ಯರಾದ ತನ್ವೀರ್ ಸೇಠ್ ರವರು ಕೆ.ಪಿ.ಎಸ್.ಸಿ ವಿಧೇಯಕ ತಿದ್ದುಪಡಿಗೆ ಬೆಂಬಲ ವ್ಯಕ್ತಪಡಿಸಿ ಕೆ.ಪಿ.ಎಸ್.ಸಿಯು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಲ್ಲಿ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ. ಯು.ಪಿ.ಎಸ್.ಸಿ ಮಾದರಿಯಲ್ಲಿ ಬಲಪಡಿಸಬೇಕೆಂದು ತಿಳಿಸಿದರು. ವಿಧಾನಸಭೆಯ ಸದಸ್ಯರಾದ ಡಾ:ಅಶ್ವತ್ಥ್ ನಾರಾಯಣ, ಸುರೇಶ್ ಕುಮಾರ್, ಅರಗ ಜ್ಞಾನೇಂದ್ರ, ಯತ್ನಾಳ್, ಇನ್ನಿತರ ಸದಸ್ಯರು ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿ ಕೆ.ಪಿ.ಎಸ್.ಸಿಯು ಪ್ರಾಮಾಣಿಕವಾಗಿ, ಭ್ರಷ್ಟಚಾರ ರಹಿತವಾಗಿ ಕೆಲಸಮಾಡಬೇಕು. ಕೆ.ಪಿ.ಎಸ್.ಸಿ ಯು ಸಹ ಯು.ಪಿ.ಎಸ್.ಸಿ ಮಾದರಿಯಲ್ಲೇ ಕೆಲಸ ನಿರ್ವಹಿಸಬೇಕು, ಕೆ.ಪಿ.ಎಸ್ ಸಿ ಯನ್ನು ಶುದ್ದೀಕರಣ ಮಾಡುವುದು ಸರ್ಕಾರದ ಆದ್ಯತೆ ಆಗಬೇಕು ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಬೆಂಬಲ ವ್ಯಕ್ತಪಡಿಸಿದರು.

ಸಚಿವರಾದ ಹೆಚ್.ಕೆ. ಪಾಟೀಲ್ ರವರು ವಿಧೇಯಕದ ಬಗ್ಗೆ ಚರ್ಚಿಸಿ ಬೆಂಬಲ ವ್ಯಕ್ತಪಡಿಸಿ ಬಿಲ್ ನ್ನು ಅಂಗೀಕಾರ ಮಾಡಲು ಒಪ್ಪಿರುವುದನ್ನು ಸ್ವಾಗತಿಸಿ ಮುಂದಿನ ದಿನಗಳಲ್ಲಿ ಕೆ.ಪಿ.ಎಸ್.ಸಿ ಗೆ ಉತ್ತಮ ವ್ಯವಸ್ಥೆ ನಿರ್ಮಾಣ ಮಾಡಲು ಈ ವಿಧೇಯಕದಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು. ವಿಧೇಯಕವು ಸರ್ವಾನುಮತದಿಂದ ಅಂಗೀಕಾರಗೊಂಡಿತು.

BREAKING: ವಿಧಾನಸಭೆಯಲ್ಲಿ ‘ಕರ್ನಾಟಕ ಲೋಕಸೇವಾ ಆಯೋಗ’ದ ತಿದ್ದುಪಡಿ ವಿಧೇಯಕ ಅಂಗೀಕಾರ

ಭದ್ರಾವತಿಯ ಉರಗಡೂರು ಗ್ರಾಮದ ರೈತರಿಗೆ ಮಾನವೀಯತೆ ಆಧಾರದಡಿ ಪರಿಹಾರ: ಸಾಮಾನ್ಯ ದರದಲ್ಲಿ ನಿವೇಶನ

Share. Facebook Twitter LinkedIn WhatsApp Email

Related Posts

BREAKING: ರಾಯಚೂರಲ್ಲಿ ವಿಷ ಸೇವಿಸಿ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನ, ಒಬ್ಬರು ಸಾವು

14/09/2025 10:04 PM1 Min Read

ಚಿಕ್ಕಬಳ್ಳಾಪುರದಲ್ಲಿ ಗಣೇಶ ಮೆರವಣಿಗೆ ನೋಡಲು ತೆರಳುತ್ತಿದ್ದ ಇಬ್ಬರು ದುರ್ಮರಣ

14/09/2025 9:46 PM1 Min Read

ಮಲಗುವ ಮುನ್ನ ಈ 3 ಅಕ್ಷರಗಳ ಮಂತ್ರವನ್ನು ಪಠಿಸಿ, ಮರುದಿನ ನಿಮ್ಮ ಎಲ್ಲಾ ಪ್ರಯತ್ನ ಯಶಸ್ವಿ

14/09/2025 9:26 PM3 Mins Read
Recent News

EPFO ಹೊಂದಿರುವವರಿಗೆ ಗುಡ್‌ ನ್ಯೂಸ್‌! ಈಗ ಹಣ ಹಿಂಪಡೆಯೋದು ಮತ್ತಷ್ಟು ಸುಲಭ

15/09/2025 5:10 AM

BREAKING: ರಾಯಚೂರಲ್ಲಿ ವಿಷ ಸೇವಿಸಿ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನ, ಒಬ್ಬರು ಸಾವು

14/09/2025 10:04 PM

ಚಿಕ್ಕಬಳ್ಳಾಪುರದಲ್ಲಿ ಗಣೇಶ ಮೆರವಣಿಗೆ ನೋಡಲು ತೆರಳುತ್ತಿದ್ದ ಇಬ್ಬರು ದುರ್ಮರಣ

14/09/2025 9:46 PM

ಮಲಗುವ ಮುನ್ನ ಈ 3 ಅಕ್ಷರಗಳ ಮಂತ್ರವನ್ನು ಪಠಿಸಿ, ಮರುದಿನ ನಿಮ್ಮ ಎಲ್ಲಾ ಪ್ರಯತ್ನ ಯಶಸ್ವಿ

14/09/2025 9:26 PM
State News
KARNATAKA

BREAKING: ರಾಯಚೂರಲ್ಲಿ ವಿಷ ಸೇವಿಸಿ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನ, ಒಬ್ಬರು ಸಾವು

By kannadanewsnow0914/09/2025 10:04 PM KARNATAKA 1 Min Read

ರಾಯಚೂರು: ವಿಷ ಸೇವಿಸಿ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನಿಸಿದಂತ ಘಟನೆ ರಾಯಚೂರಲ್ಲಿ ನಡೆದಿದೆ. ಈ ಘಟನೆಯಲ್ಲಿ ಓರ್ವ ಯುವತಿ ಸಾವನ್ನಪ್ಪಿದ್ದಾರೆ.…

ಚಿಕ್ಕಬಳ್ಳಾಪುರದಲ್ಲಿ ಗಣೇಶ ಮೆರವಣಿಗೆ ನೋಡಲು ತೆರಳುತ್ತಿದ್ದ ಇಬ್ಬರು ದುರ್ಮರಣ

14/09/2025 9:46 PM

ಮಲಗುವ ಮುನ್ನ ಈ 3 ಅಕ್ಷರಗಳ ಮಂತ್ರವನ್ನು ಪಠಿಸಿ, ಮರುದಿನ ನಿಮ್ಮ ಎಲ್ಲಾ ಪ್ರಯತ್ನ ಯಶಸ್ವಿ

14/09/2025 9:26 PM

ಇಸ್ರೇಲ್ ಬೆಳವಣಿಗೆ ವಾಸ್ತವ ಅರಿಯಲು, ಭಾರತೀಯ ಪತ್ರಕರ್ತರ ನಿಯೋಗ ಭೇಟಿ

14/09/2025 8:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.