ಬೆಂಗಳೂರು: ಬಿಜೆಪಿಯ 18 ಶಾಸಕರನ್ನು ವಿಧಾನಸಭೆಯಿಂದ 6 ತಿಂಗಳುಗಳ ಕಾಲ ಸ್ಪೀಕರ್ ಅಮಾನತುಗೊಳಿಸಿ ಆದೇಶಿಸಿದ್ದರಿಂದ ಸದನದ ಭಾವಿಗೆ ಇಳಿದು ಬಿಜೆಪಿ-ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಈ ಹಿನ್ನಲೆಯಲ್ಲಿ ಕರ್ನಾಟಕ ವಿಧಾನಸಭೆಯ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಿ ಸ್ಪೀಕರ್ ಆದೇಶಿಸಿದರು.
ಬಿಜೆಪಿಯ ಸದಸ್ಯರ ತೀವ್ರ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಮಧ್ಯಾಹ್ನದ ಕಲಾಪದ ನಂತ್ರ ಕೆಲ ವಿಧೇಯಕಗಳನ್ನು ಮಂಡಿಸೋದಕ್ಕೆ ಮುಂದಾಗಲಾಗಿತ್ತು. ಆದರೇ ಸಚಿವರಿಗೆ ಹನಿಟ್ರ್ಯಾಪ್ ವಿಚಾರ ಪ್ರತಿಧ್ವನಿಸಿತು. ಬಿಜೆಪಿ, ಜೆಡಿಎಸ್ ಸದಸ್ಯರು ತನಿಖೆಗೆ ಆಗ್ರಹಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಹೀಗಾಗಿ ಸದನದ ಗೌರವಕ್ಕೆ, ಸ್ಪೀಕರ್ ಪೀಠಕ್ಕೆ ಅಗೌರವ ತೋರಿದಂತ 18 ಬಿಜೆಪಿ ಶಾಸಕರನ್ನು ಸ್ಪೀಕರ್ ಯು.ಟಿ ಖಾದರ್ ಅಮಾನತುಗೊಳಿಸಿ ಆದೇಶಿಸಿದರು.
ಈ ಬೆನ್ನಲ್ಲೇ ಸಚಿವ ಹೆಚ್.ಕೆ ಪಾಟೀಲ್ ಅವರು ಅರಮನೆ ಭೂ ಬಳಕೆ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಸ್ಪೀಕರ್ ಈ ವಿಧೇಯಕವನ್ನು ಸದನದ ಮತಕ್ಕೆ ಹಾಕಿದರು. ಆದರೇ ಬಿಜೆಪಿ ತೀವ್ರ ವಿರೋಧ, ಗದ್ದಲವನ್ನು ಏಳಿಸಲಾಯಿತು. ಈ ವಿರೋಧ, ಗದ್ದಲದ ನಡುವೆ ಅಂಗೀಕಾರ ನೀಡಲಾಯಿತು. ಸದನದ ಬಾವಿಗೆ ಇಳಿದು ಬಿಜೆಪಿ-ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದ ಕಾರಣ, ವಿಧಾನಸಭೆಯ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಿ ಸ್ಪೀಕರ್ ಯು.ಟಿ ಖಾದರ್ ಆದೇಶಿಸಿದರು.
ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯದ ಗದ್ದಲದ ನಡುವೆ ಅರಮನೆ ಭೂ ಬಳಕೆ ತಿದ್ದುಪಡಿ ವಿಧೇಯಕ ಅಂಗೀಕಾರ
BREAKING NEWS: ಮಾ.28ರಿಂದ ಆರಂಭಗೊಳ್ಳಬೇಕಿದ್ದ ‘KAS ಮುಖ್ಯ ಪರೀಕ್ಷೆ’ ಮುಂದೂಡಿಕೆ: KPSC ಆದೇಶ