ಚಿತ್ರದುರ್ಗ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೊಡೋ ಯಾತ್ರೆ ನಡೆಯುತ್ತಿದ್ದು, ಯಾತ್ರೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಪ್ರವೇಶಿಸಿದೆ.
ಸಚಿವ ಬಿ. ಶ್ರೀರಾಮುಲು ಕ್ಷೇತ್ರದಲ್ಲಿ ಕಾಂಗ್ರೆಸ್ ಭರ್ಜರಿ ಶಕ್ತಿ ಪ್ರದರ್ಶನ ನಡೆಸಿದೆ. ದಿನದ ಯಾತ್ರೆ ಕೊನೆಯಾದ ಹಿನ್ನೆಲೆ ರಾಗಾ ಸಮಾವೇಶ ನಡೆಸಿದ್ದಾರೆ.
ಇನ್ನೂ, ಜೋಡೋ ಯಾತ್ರೆ ಮೊಳಕಾಲ್ಮೂರು ಪ್ರವೇಶಿಸುತ್ತಿದ್ದಂತೆ ಪವರ್ ಕಟ್ ಆಗಿದೆ. ರಾಹುಲ್ ಗಾಂಧಿ ಸ್ವಾಗತಕ್ಕಾಗಿ ಮೊಳಕಾಲ್ಮೂರಲ್ಲಿ ಭಾರಿ ಲೈಟಿಂಗ್ ಹಾಕಲಾಗಿತ್ತು, ಆದರೆ ಅದೇ ವೇಳೆ ಪವರ್ ಕಟ್ ಆಗಿದ್ದರಿಂದ ದೀಪಗಳು ಬೆಳಗಲೇ ಇಲ್ಲ, ಇನ್ನೂ ಕತ್ತಲಿನಲ್ಲೇ ರಾಗಾ ಹೆಜ್ಜೆ ಹಾಕಿ ವೇದಿಕೆಯತ್ತ ಧಾವಿಸಿದ್ದಾರೆ.