Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹತ್ತಿ, ಹತ್ತಿ ಬೀಜದ ಖರೀದಿ ಬೆಲೆ 60,000 ನಿಗದಿ ಪಡಿಸಿ: ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ‘HDK ಪತ್ರ’

23/10/2025 4:13 PM

ಅಪರೂಪದ ದಾಖಲೆ ಮೂಲಕ ಇತಿಹಾಸ ಸೃಷ್ಟಿಸಿದ ಹಿಟ್ ಮ್ಯಾನ್ ‘ರೋಹಿತ್ ಶರ್ಮಾ’

23/10/2025 4:12 PM

BREAKING: ಬೆಂಗಳೂರಲ್ಲಿ ವೈದ್ಯೆ ಕೃತಿಕಾ ಹತ್ಯೆಗೈದಿದ್ದ ಪತಿ ಮಹೇಂದ್ರಗೆ 14 ದಿನ ನ್ಯಾಯಾಂಗ ಬಂಧನ, ಜೈಲುಪಾಲು

23/10/2025 4:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೊಬೈಲ್ ಗೀಳಿಗೆ ಬಿದ್ದಿರುವ ಯುವ ಪೀಳಿಗೆಗೆ ಮಹನೀಯರ ಇತಿಹಾಸ ತಿಳಿಸುವುದು ಅಗತ್ಯ: ಸಚಿವ ಶಿವರಾಜ್ ತಂಗಡಗಿ
KARNATAKA

ಮೊಬೈಲ್ ಗೀಳಿಗೆ ಬಿದ್ದಿರುವ ಯುವ ಪೀಳಿಗೆಗೆ ಮಹನೀಯರ ಇತಿಹಾಸ ತಿಳಿಸುವುದು ಅಗತ್ಯ: ಸಚಿವ ಶಿವರಾಜ್ ತಂಗಡಗಿ

By kannadanewsnow0923/10/2025 3:31 PM

ಬೆಂಗಳೂರು: ಯುವ ಪೀಳಿಗೆ ಇಂದು ಮೊಬೈಲ್ ಗೀಳಿಗೆ ಬಿದ್ದಿದ್ದು, ಇವರಿಗೆ ಓದಿನ ರುಚಿ ಹತ್ತಿಸುವ ಮೂಲಕ ನಾಡಿನ ಇತಿಹಾಸ ಪುರುಷರ ಬಗ್ಗೆ ತಿಳಿಸುವ ಅಗತ್ಯತೆ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಅಭಿಪ್ರಾಯಪಟ್ಟರು.

ಕಿತ್ತೂರು ರಾಣಿಚೆನ್ನಮ್ಮ ಜಯಂತಿ ಅಂಗವಾಗಿ ಕನ್ನಡ ಭವನದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಜನತೆಗೆ ಮೊಬೈಲ್ ಒಂದೇ ದುನಿಯಾ ಜೀವನ ಆಗಿ ಬಿಟ್ಟಿದೆ.‌ ನಿಜಕ್ಕೂ ಇದು ದುರದೃಷ್ಟಕರ. ಒಂದು ಕುಟುಂಬದಲ್ಲಿ ಪೋಷಕರು ಮತ್ತು ಮಕ್ಕಳು ಒಟ್ಟಿಗೆ ಕುಳಿತಿದ್ದರೆ, ಒಬ್ಬರನ್ನೊಬ್ಬರು ಮಾತನಾಡದ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಹಾಗೂ ಯುವ ಪೀಳಿಗೆಗೆ ಇತಿಹಾಸದ ವಾಸ್ತವ ಸ್ಥಿತಿಯನ್ನು ತಿಳಿಸುವ ಮೂಲಕ‌ ಓದಿನ ರುಚಿ ಹತ್ತಿಸುವ ಕೆಲಸ ಆಗಬೇಕಿದೆ. ಮಹನೀಯರ ಜಯಂತಿಗಳನ್ನ ಆಚರಣೆ ಮಾಡುವ ಮೂಲಕ ಅವರ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಚೆನ್ನಮ್ಮ ಹೆಣ್ಣುಮಕ್ಕಳ ಪ್ರತಿನಿಧಿ: ಹೆಣ್ಣೆಂದರೆ ಶಕ್ತಿದೇವತೆ. ಹೆಣ್ಣೊಬ್ಬಳು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬ ಪರಮಸತ್ಯವನ್ನು ಜಗತ್ತಿಗೆ ಸಾರಿದ ನಮ್ಮ ಕನ್ನಡ ಮಣ್ಣಿನ ಹೆಣ್ಣುಮಗಳು ಚೆನ್ನಮ್ಮನವರು.

ಚೆನ್ನಮ್ಮ ಅಸೀಮ ಶೌರ‍್ಯ, ಧೈರ್ಯ, ತ್ಯಾಗ, ರಾಜನೀತಿ, ಮಾತೃವಾತ್ಸಲ್ಯ ಮುಂತಾದ ಸದ್ಗುಣಗಳ ಖನಿ. ಎಂದೆಂದಿಗೂ ಕನ್ನಡದ ಹೆಣ್ಣುಮಕ್ಕಳ ಪ್ರತಿನಿಧಿ ಆಗಿದ್ದರು. ಇಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಮಾಡಲಾಗುತ್ತಿದ್ದರೂ, ವಾಸ್ತವವಾಗಿ ಇದು ಕಿತ್ತೂರು ಸಂಸ್ಥಾನ ಬ್ರಿಟೀಷರ ವಿರುದ್ಧ ವಿಜಯೋತ್ಸವ ಸಾಧಿಸಿದ ದಿನವಾಗಿದೆ. ಬ್ರಿಟೀಷ್‌ ಕಲೆಕ್ಟರ್‌ ಥ್ಯಾಕರೆ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ಜಯ ಸಾಧಿಸಿದ ದಿನ ಅಕ್ಟೋಬರ್‌ 23. ಇದೇ ದಿನ ಥ್ಯಾಕರೆಯ ಮರಣವೂ ಆಯಿತು. ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟೀಷರ ಮೇಲೆ ವಿಜಯ ಸಾಧಿಸಿದ ಈ ಐತಿಹಾಸಿಕ ದಿನವನ್ನೇ ಕಿತ್ತೂರ ರಾಣಿ ಜಯಂತಿ ಆಗಿಯೂ ಆಚರಿಸಲು ನಿರ್ಧರಿಸಿ 2017ರಲ್ಲಿ ಕರ್ನಾಟಕ ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿತು. ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರೇ ಅಂದು ಸಹ ಮುಖ್ಯಮಂತ್ರಿಗಳಾಗಿದ್ದರು. ಅವರ ನಿರ್ದೇಶನದ ಮೇರೆಗೆ ಈ ಸಮಾರಂಭದ ಆಚರಣೆ ಮೊದಲಾಯಿತು ಎಂದು ತಿಳಿಸಿದರು.

“ಇಲಿಯಾಗಿ ಬಹುಕಾಲ ಪರಾಧೀನತೆಯಲ್ಲಿ ಬಾಳುವುದಕ್ಕಿಂತ ಹುಲಿಯಂತೆ ಸ್ವತಂತ್ರವಾಗಿ ಬದುಕಬೇಕು” ಎಂಬ ನುಡಿಗೆ ಅನ್ವರ್ಥವಾಗಿ ಭಾರತ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡುತ್ತಾ, ಬ್ರಿಟಿಷರಿಗೆ ಸಿಂಹಸ್ವಪ್ನ ಸ್ವರೂಪಳಾಗಿ ನರಕದರ್ಶನ ಮಾಡಿಸಿದ ಮಹಾತಾಯಿ, ಕನ್ನಡದ ಕುಲನಾರಿ ಕಿತ್ತೂರು ರಾಣಿ ಚೆನ್ನಮ್ಮನವರು ಎಂದು ಇತಿಹಾಸದ ದಿನಗಳನ್ನು ಮೆಲುಕು ಹಾಕಿದರು.

ಭಾರತದ ಪ್ರಪ್ರಥಮ ಮಹಿಳಾ ಸ್ವಾತಂತ್ರ‍್ಯ ಹೋರಾಟಗಾರ್ತಿಯಾದ ಇಂತಹ ಮಹಾಮಾತೆಯ ಜಯಂತಿಯನ್ನು ಆಚರಿಸುವ ಮೂಲಕ ಆ ಮಹಾನ್ ಚೇತನದ ಸ್ಮರಣೆ ಮಾಡಿಕೊಳ್ಳುವ ಸೌಭಾಗ್ಯ ನಮಗೊದಗಿ ಬಂದಿರುವುದು ನಮ್ಮ ಅದೃಷ್ಟ ಎಂದರು.

ರಾಣಿ ಚೆನ್ನಮ್ಮನವರ ಜೀವನವೇ ಅತ್ಯಂತ ರೋಚಕ, ಹೋರಾಟದ ಅಧ್ಯಾಯ. ಬೆಳಗಾವಿ ಜಿಲ್ಲೆಯ ಕಾಕತಿಯ ದೇಸಾಯಿಯವರ ಪುತ್ರಿಯಾಗಿ ಹುಟ್ಟಿದ ಚೆನ್ನಮ್ಮನವರು ಅಂದಿನ ಕಾಲದ ಎಲ್ಲಾ ಹೆಣ್ಣುಮಕ್ಕಳಂತೆ ಕೇವಲ ಅಡುಗೆ ಮನೆಗೆ ಮಾತ್ರವೇ ಮೀಸಲಾಗದೇ ತಂದೆಯ ಪ್ರೋತ್ಸಾಹದೊಂದಿಗೆ ಅಂದಿನ ಕಾಲಮಾನದಲ್ಲಿ ಕೇವಲ ಗಂಡುಮಕ್ಕಳ ವಿದ್ಯೆ ಎನಿಸಿಕೊಂಡಿದ್ದ ಕುದುರೆ ಸವಾರಿ, ಶಸ್ತ್ರಾಭ್ಯಾಸ, ರಾಜಕೀಯ ಶಿಕ್ಷಣ, ವೇದ-ಪುರಾಣ-ಇತಿಹಾಸಗಳ ಅಧ್ಯಯನಗಳಂತಹ ಶಿಕ್ಷಣವನ್ನೂ ಕರಗತ ಮಾಡಿಕೊಂಡಿದ್ದರು.

ಪತಿಯ ಮರಣಾನಂತರ ಮಗ ಶಿವಲಿಂಗ ರುದ್ರಸರ್ಜನನ್ನು ಪಟ್ಟಕ್ಕೇರಿಸಿ, ಬ್ರಿಟಿಷರ ಕುತಂತ್ರಕ್ಕೆ ಅವನು ಬಲಿಯಾದಾಗ ಹಿಂಜರಿಯದೇ ಅವನ ಮಗನನ್ನೇ ದತ್ತು ತೆಗೆದುಕೊಂಡು ಸಿಂಹಾಸನದ ಮೇಲೆ ಕೂರಿಸುತ್ತಾರೆ. ಆ ಮಗುವಿಗೆ ಹಕ್ಕಿಲ್ಲವೆಂಬ ನೆವದಿಂದ ಬ್ರಿಟಿಷರು ರಾಜ್ಯವನ್ನು ಕಿತ್ತುಕೊಳ್ಳಲು ಹವಣಿಸಿದಾಗ “ಕಿತ್ತೂರು ವೀರ ಅರಸರು ಕಟ್ಟಿ ಬೆಳೆಸಿದ ಸ್ವತಂತ್ರ ರಾಷ್ಟ್ರವೇ ಹೊರತು ತಕ್ಕಡಿ ಹಿಡಿದು ವ್ಯಾಪಾರಕ್ಕೆ ಬಂದ ಪರಕೀಯರ ಸೊಲ್ಲಿ ಹರಿಯುತ್ತಿರುವುದು ವೀರ ಕ್ಷಾತ್ರ ರಕ್ತ, ಕೊಳಕು ನೀರಲ್ಲ” ಎಂದು ಹೇಳಿ ತಾವೇ ರಾಜ್ಯಭಾರವನ್ನು ವಹಿಸಿಕೊಂಡು, ಅಧಿಕೃತವಾಗಿ ಪಟ್ಟಕ್ಕೇರಿ ಸುಭಿಕ್ಷ ಹಾಗೂ ಸುಭದ್ರ ಆಡಳಿತ ನಡೆಸುತ್ತಾರೆ.

ಇಂತಹ ಉದಾತ್ತ ಚಿಂತನೆಯ ಮೂಲಕ ಸಮಸಮಾಜದ ಸಾಕಾರಕ್ಕೆ ಮುನ್ನುಡಿಯನ್ನು ಅಂದೇ ಬರೆದಿದ್ದ ರಾಣಿ ಚೆನ್ನಮ್ಮನವರಂಥ ವೀರವನಿತೆಯರು ಉದಿಸಿದ ಕನ್ನಡ ನಾಡು ಧನ್ಯ. ಇಂಥ ನಾಡಿನಲ್ಲಿ ಹುಟ್ಟಿದ ನಾವು ನೀವೆಲ್ಲರೂ ಆ ವೀರಮಾತೆಯ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ತನ್ಮೂಲಕ ಸದಾ ಕಾಯಕವನ್ನು ಮಾಡುತ್ತಾ ನಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳೋಣ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ‌‌ ಮಾಜಿ ಸಚಿವೆ ರಾಣಿ ಸತೀಶ್, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ್ ಮೂರ್ತಿ, ಲೇಖಕ ಡಾ.ಮಹಾಂತೇಶ ಬಿರಾದಾರ,‌ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ದೇವಿ, ಜಂಟಿ ನಿರ್ದೇಶಕರಾದ ಬನಶಂಕರಿ ಅಂಗಡಿ, ಬಲವಂತರಾಯ ಪಾಟೀಲ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

‘ಡೇಟಿಂಗ್‌ ಆಪ್‌’ನಲ್ಲಿ ನಕಲಿ ಪ್ರೊಫೈಲ್‌ ತಪ್ಪಿಸಲು ‘ಫೇಸ್‌ ಚೆಕ್‌’ ಲಾಗಿನ್‌ ಪರಿಚಯಿಸಿದ ‘ಟಿಂಡರ್‌’

ನ.18ರಿಂದ 3 ದಿನ `ಬೆಂಗಳೂರು ಟೆಕ್ ಸಮ್ಮಿಟ್-2025’ ಆಯೋಜನೆ : CM ಸಿದ್ದರಾಮಯ್ಯ ಮಾಹಿತಿ

Share. Facebook Twitter LinkedIn WhatsApp Email

Related Posts

ಹತ್ತಿ, ಹತ್ತಿ ಬೀಜದ ಖರೀದಿ ಬೆಲೆ 60,000 ನಿಗದಿ ಪಡಿಸಿ: ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ‘HDK ಪತ್ರ’

23/10/2025 4:13 PM1 Min Read

BREAKING: ಬೆಂಗಳೂರಲ್ಲಿ ವೈದ್ಯೆ ಕೃತಿಕಾ ಹತ್ಯೆಗೈದಿದ್ದ ಪತಿ ಮಹೇಂದ್ರಗೆ 14 ದಿನ ನ್ಯಾಯಾಂಗ ಬಂಧನ, ಜೈಲುಪಾಲು

23/10/2025 4:05 PM1 Min Read

ಹಾವೇರಿಯಲ್ಲಿ ಘೋರ ದುರಂತ : ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮತ್ತೊರ್ವ ಯುವಕ ಸಾವು!

23/10/2025 4:02 PM1 Min Read
Recent News

ಹತ್ತಿ, ಹತ್ತಿ ಬೀಜದ ಖರೀದಿ ಬೆಲೆ 60,000 ನಿಗದಿ ಪಡಿಸಿ: ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ‘HDK ಪತ್ರ’

23/10/2025 4:13 PM

ಅಪರೂಪದ ದಾಖಲೆ ಮೂಲಕ ಇತಿಹಾಸ ಸೃಷ್ಟಿಸಿದ ಹಿಟ್ ಮ್ಯಾನ್ ‘ರೋಹಿತ್ ಶರ್ಮಾ’

23/10/2025 4:12 PM

BREAKING: ಬೆಂಗಳೂರಲ್ಲಿ ವೈದ್ಯೆ ಕೃತಿಕಾ ಹತ್ಯೆಗೈದಿದ್ದ ಪತಿ ಮಹೇಂದ್ರಗೆ 14 ದಿನ ನ್ಯಾಯಾಂಗ ಬಂಧನ, ಜೈಲುಪಾಲು

23/10/2025 4:05 PM

ಹಾವೇರಿಯಲ್ಲಿ ಘೋರ ದುರಂತ : ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮತ್ತೊರ್ವ ಯುವಕ ಸಾವು!

23/10/2025 4:02 PM
State News
KARNATAKA

ಹತ್ತಿ, ಹತ್ತಿ ಬೀಜದ ಖರೀದಿ ಬೆಲೆ 60,000 ನಿಗದಿ ಪಡಿಸಿ: ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ‘HDK ಪತ್ರ’

By kannadanewsnow0923/10/2025 4:13 PM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಹತ್ತಿ ಬೆಳೆಯುವಂತ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಖರೀದಿ ಬೆಲೆಯನ್ನು 45,000ಕ್ಕೆ ನಿಗದಿ ಪಡಿಸಿರುವುದೇ ಕಾರಣ. ಈ ಬೆಲೆಯನ್ನು…

BREAKING: ಬೆಂಗಳೂರಲ್ಲಿ ವೈದ್ಯೆ ಕೃತಿಕಾ ಹತ್ಯೆಗೈದಿದ್ದ ಪತಿ ಮಹೇಂದ್ರಗೆ 14 ದಿನ ನ್ಯಾಯಾಂಗ ಬಂಧನ, ಜೈಲುಪಾಲು

23/10/2025 4:05 PM

ಹಾವೇರಿಯಲ್ಲಿ ಘೋರ ದುರಂತ : ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮತ್ತೊರ್ವ ಯುವಕ ಸಾವು!

23/10/2025 4:02 PM

BREAKING : ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣ : ಆರೋಪಿ ಪತಿ ಮಹೇಂದ್ರ ರೆಡ್ಡಿ ಗೆ 14 ದಿನ ನ್ಯಾಯಾಂಗ ಬಂಧನ

23/10/2025 3:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.