ಬೆಂಗಳೂರು : ಕಾರ್ತಿಕ್ ಮಹೇಶ್ ಅಧಿಕೃತವಾಗಿ ಬಿಬಿ 10 ಕನ್ನಡದ ಚಾಂಪಿಯನ್ ಕಿರೀಟವನ್ನು ಪಡೆದರು. ಅವರು ಟ್ರೋಫಿಯನ್ನು ಗೆದ್ದುಕೊಂಡಿದ್ದಲ್ಲದೆ 50 ಲಕ್ಷ ರೂಪಾಯಿ ನಗದು ಬಹುಮಾನ, ಐಷಾರಾಮಿ ಕಾರು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಗೆದ್ದರು. ಬಿಬಿ ಮನೆಯಲ್ಲಿದ್ದಾಗ ಕಾರ್ತಿಕ್ ಹಲವಾರು ಸವಾಲುಗಳನ್ನು ಎದುರಿಸಿದರು.
ಇನ್ನು ಮಾಧ್ಯಮಗಳೊಂದಿಗೆ ತಮ್ಮ ಗೆಲುವಿನ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, ಪ್ರತಿಯೊಂದು ವಿಷಯದಲ್ಲೂ ನನ್ನ ಅಭಿಮಾನಿಗಳು ತುಂಬಾ ಧನ್ಯವಾದಗಳು ಪ್ರತಿಯೊಂದಕ್ಕೂ ನನಗೆ ಹಾಗೂ ಬೇಜಾರಲ್ಲಿ ಇದ್ದಹಾಗಲು ನೀವು ಧೈರ್ಯಾಕ್ ಕಳ್ಕೋಬೇಡಿ ಅಂತ ಹೇಳ್ಬಿಟ್ಟು ಅಭಿಮಾನಿಗಳು ಪ್ರೋತ್ಸಾಹ ನೀಡಿದ್ದಾರೆ ಅವರನ್ನು ಸಾಕಷ್ಟ ಗಮನಿಸಿದ್ದೆನೆ ಎಂದರು.
ನಾನು ಯಾವಾಗಲೂ ಹೇಳುವುದು ಒಂದೇ ತಪ್ಪಿದ್ದಾಗ ಒಪ್ಪಿಕೊಳ್ಳೋಣ ಕ್ಷಮೆ ಕೇಳಿದ್ರಲ್ಲೂ ಏನು ತಪ್ಪಿಲ್ಲ. ನಾವು ಕ್ಷೇಮ ಕೇಳೋದ್ರಿಂದ ನಾವು.ಯಾವತ್ತು ಚಿಕ್ಕವರು ಆಗುವುದಿಲ್ಲ ತಪ್ಪಿಲ್ಲ ಅಂದ್ರೆ ನನ್ನನ್ ನಾನು ಬಿಟ್ಟು ಕೊಡುವುದಿಲ್ಲ ಅದು ನನ್ನ ವ್ಯಕ್ತಿತ್ವವಾಗಿದೆ. ಒಳಗಡೆಯಿಂದ ನಾನು ಕಷ್ಟಪಟ್ಟೆ ನನ್ನ ಗೆಲುವು ಗೋಸ್ಕರ ಹೊರಗಿನ ಅಭಿಮಾನಿಗಳು ನನಗೆ ಪ್ರೋತ್ಸಾಹ ನೀಡಿದ್ದಾರೆ.
ನಾನು ಸಾಕಷ್ಟು ವಿಡಿಯೋಗಳನ್ನು ನೋಡ್ತಾ ಇದೀನಿ ಒಂದು ಸಣ್ಣ ಮಗು ನನಗೆ ಓಟ್ ಮಾಡಕಾಗಿಲ್ಲ ಅಂತ ಅತ್ತಿದ್ದು ನೋಡಿ ತುಂಬಾ ಹೆಮ್ಮೆ ಅನಿಸ್ತಾ ಇದೆ.ಶಾಲೆಗಳಲ್ಲಿ ಮಕ್ಕಳು ನನಗೋಸ್ಕರ ನನ್ನ ಗೆಲುವಿಗಾಗಿ ಅನ್ನದಾನ ಮಾಡಿದ್ದನ್ನು ನಾನು ನೋಡಿದ್ದೇನೆ.ಏನು ಕೇಳಿದೆ ಇಷ್ಟರ ಮಟ್ಟಿಗೆ ಪ್ರೀತಿ ತೋರಿಸಿದ್ದಾರೆ ಅವರಿಗೋಸ್ಕರ ಒಂದಷ್ಟು ಒಳ್ಳೆ ಸಿನಿಮಾಗಳನ್ನು ಮಾಡಬೇಕು ಎಂದರು.
ಮೊದಲನೇ ದಿನ ಶೋಗೆ ಹೋಗಿದ್ದ ದಿನಾನೇ ನನ್ನ ಗೆಳೆಯ ವಿನಯ್ ಗೆ ಹೇಳಿದ್ದು ಅದೇನೇ ಒಂದು ಕೈ ನನ್ನದಾಗಿರೆ ಇನ್ನೊಂದು ಕೈ ಆತನದಾಗಿರಬೇಕು ಅಂತ ಹೇಳಿದ್ದೆ ಅದೇ ರೀತಿ ಒಂದು ಕೈ ನನ್ನದಾಗಿತ್ತು ಸುದೀಪ್ ಸರ್ ಒಂದು ಕೈ ಹಿಡಿದುಕೊಳ್ಳದೆ ಅದೃಷ್ಟ ಪ್ರತಿವಾರ ಏನಾದರೂ ತಪ್ಪು ಮಾಡಿದ್ದೇನೆ. ಅಥವಾ ನನಗೆ ಕ್ಲಾಸ್ ಗೊತ್ತಲ್ಲ ಸುದ್ದಿ ಸರ್ ಅಂತ ಒಂದು ಖಾತೆಯನ್ನು ಕಾಯುತ್ತಿದ್ದೆ ಆದರೆ ನಿನ್ನೆ ಅಷ್ಟು ಹತ್ತರಿಂದ ಕೈ ಹಿಡಿದು ನನ್ನ ಕೈಯೆತ್ತಿದ್ದು ನನ್ನ ಜೀವನದಲ್ಲಿ ಅತ್ಯಂತ ಒಳ್ಳೆಯ ಘಟನೆ ಎಂದರೂ.
ನನ್ನ ಒಂದು ಕೆಪಾಸಿಟಿ ನನ್ನ ಮೇಲೆ ನಂಗಿರುವ ಆತ್ಮವಿಶ್ವಾಸದಿಂದ ನಾನು ಇಂದು ಬಿಗ್ ಬಾಸ್ 10 ರಲ್ಲಿ ನಾನು ಕಪ್ ಗೆಲ್ಲೋಕೆ ಸಾಧ್ಯವಾಗಿದೆ. ನಮ್ಮಪ್ಪ ಇದ್ದಿದ್ರೆ ತುಂಬಾ ಖುಷಿ ಪಟ್ಟಿರುವರು ಅವರು ಎಂದಿಗೂ ಒಂದು ಮಾತು ಹೇಳುತ್ತಿದ್ದರು ನನ್ನ ಮಗ ಯಾಕೆ ಇಷ್ಟೆಲ್ಲ ಕಷ್ಟ ಪಡುತ್ತಿದ್ದರು ಯಾಕೆ ಗೆಲವು ಸಿಗುತ್ತಿಲ್ಲ.ಅವನ ಜೊತೆ ಇದ್ದವರೆಲ್ಲ ಏನೇನು ಮಾಡಿ ಬಿಗ್ ಬಾಸ್ ಗೆ ಹೋಗಿದ್ದಾರೆ.ನೀನ್ಯಾಕ್ ಹೋಗ್ತಿಲ್ಲ ಅಂತ ಕೇಳ್ತಿದ್ರು ಆದರೆ ಇವಾಗ ಅವರಿಲ್ಲ.ಅಮ್ಮನಿಗೋಸ್ಕರ ಒಂದೊಳ್ಳೆ ಮನೆ ಕಟ್ಟಿಸಿ ಕೊಡಬೇಕು ಅನ್ನೋದು ನನ್ನ ಆಸೆ ಅದು ಅತೀ ಶೀಘ್ರದಲ್ಲಿ ಈಡೇರುತ್ತೆ ಎಂದು ತಿಳಿಸಿದರು.