ಅಸ್ಸಾಂ : ದೆಹಲಿಯಲ್ಲಿ AI ಶೃಂಗಸಭೆ ನಡೆದಿದ್ದನ್ನು ನೀವೆಲ್ಲ ನೋಡಿದ್ದೀರಿ. ಕಳೆದ ತಿಂಗಳು ದೆಹಲಿಯಲ್ಲಿ ವಿಶ್ವದ ಎಐ ಶೃಂಗ ಸಭೆ ಆಯೋಜಿಸಿದ್ದೆವು. ಈಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಬಟ್ಟೆ ಬಿಚ್ಚಿ ಪ್ರತಿಭಟನೆ ಮಾಡಿದರು ನಾನು ನಿಮಗೆ ಕೇಳಲು ಬಯಸುತ್ತೇನೆ ನೀವು ಈಗಾಗಲೇ ಬೆತ್ತಲಾಗಿದ್ದೀರಿ ಎನ್ನುವುದು ದೇಶಕ್ಕೆ ಗೊತ್ತಿದೆ ಆದರೂ ನಿಮಗೆ ಅನಿಸಿತು ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದರು.
ಅಸ್ಸಾಂನ ಚಿಲಚರ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದು, ವಿಶ್ವದ 80ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ದೆಹಲಿಗೆ ಬಂದಿದ್ದರು. ಇದುವರೆಗೂ ಅಭಿವೃದ್ಧಿ ಶೀಲ ರಾಷ್ಟ್ರದಲ್ಲಿ ಇಂತಹ ಸಮ್ಮೇಳನ ನಡೆದಿರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷದವರು ಭಾರತದ ಜಾಗತಿಕ ಕಾರ್ಯಕ್ರಮವನ್ನು ತಮ್ಮ ಬೆತ್ತಲೆ ಮತ್ತು ಕೊಳಕು ರಾಜಕೀಯದ ಅಖಾಡವನ್ನಾಗಿ ಪರಿವರ್ತಿಸಿದರು.
ಅತಿಥಿಗಳ ಮುಂದೆ ವಿವಸ್ತ್ರಗೊಳ್ಳುತ್ತ ಶೃಂಗಸಭೆ ಸ್ಥಳಕ್ಕೆ ಬಂದಿದ್ದರು. ಕಾಂಗ್ರೆಸ್ ನಾಯಕರು ಮತ್ತು ಮುಖಂಡರನ್ನು ನಾನು ಕೇಳಲು ಬಯಸುತ್ತೇನೆ ನೀವು ಈಗಾಗಲೇ ಬೆತ್ತಲೆಯಾಗಿದ್ದೀರಿ ಎಂದು ಇಡೀ ದೇಶಕ್ಕೆ ತಿಳಿದಿದೆ. ಹಾಗಿದ್ದು ನಿಮ್ಮ ಬಟ್ಟೆಗಳನ್ನು ತೆಗೆಯಬೇಕೆಂದು ನಿಮಗೆ ಏಕೆ ಅನಿಸಿತು ಎಂದು ಅಸ್ಸಾಂನ ಚೀಲಚರ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವ್ಯಂಗವಾಡಿದರು.








