ಬೆಂಗಳೂರು : ತನ್ನ ಗೆಳತಿ ಪವಿತ್ರ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿಯನ್ನು ಭೀಕರವಾಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಗೂ ಹಲವು ಚಿತ್ರರಂಗ ಕಲಾವಿದರು ದರ್ಶನವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಈ ಸಂಬಂಧ ಇಂದು ಕರ್ನಾಟಕ್ ಫಿಲಂ ಚೇಂಬರ್ ನಲ್ಲಿ ತುರ್ತು ಸಭೆ ನಡೆಸಿದ್ದು, ಅಧ್ಯಕ್ಷರಾದ ಎಂ.ಎನ್ ಸುರೇಶ್ ಈ ವಿಚಾರದಲ್ಲಿ ನಾವು ರಾಜಿ ಆಗಲ್ಲ ಎಂದು ತಿಳಿಸಿದ್ದಾರೆ.
ಹೌದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಸ್ಯಾಂಡಲ್ವುಡ್ನಿಂದ ಬ್ಯಾನ್ ಮಾಡುವ ಕುರಿತು ಇಂದು ಕರ್ನಾಟಕ ಫಿಲಂ ಚೇಂಬರ್ ನಲ್ಲಿ ಎಂ.ಎನ್ ಸುರೇಶ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.ಈ ವಿಚಾರದಲ್ಲಿ ನಾವು ರಾಜಿ ಆಗಲ್ಲ. ನಾವು ಈ ಹಿಂದೆ ಎಷ್ಟೋ ಕೇಸ್ಗಳಲ್ಲಿ ಸಂಧಾನ ಮಾಡಿಸಿದ್ದೇವೆ ಎಂದು ಅವರು ತಿಳಿಸಿದರು.
ಆದರೆ ಇದು ಕೊಲೆ ಪ್ರಕರಣ ಆಗಿರುವುದರಿಂದ ಎಲ್ಲವೂ ಕಾನೂನಿನ ಅಡಿಯಲ್ಲೇ ನಡೆಯಬೇಕು. ಪಾರದರ್ಶಕತೆಯಿಂದ ನಾವು ಕೆಲಸ ಮಾಡುತ್ತೇವೆ. ಯಾವ ಚಿತ್ರರಂಗದಲ್ಲೂ ನಟ-ನಟಿಯರನ್ನು ತಕ್ಷಣಕ್ಕೆ ಬ್ಯಾನ್ ಮಾಡಿಲ್ಲ. ಹಲವು ಸಭೆ ನಡೆದ ಬಳಿಕ ತೀರ್ಮಾನ ತೆಗೆದುಕೊಂಡಿದ್ದರು. ನಮ್ಮಲ್ಲಿ ದರ್ಶನ್ ಬಂಧನವಾಗಿ ಮೂರು ದಿನ ಆಗಿದೆ ಅಷ್ಟೇ. ನಮಗೂ ಸಮಯಾವಕಾಶ ಬೇಕು. ಈ ವಿಚಾರದಲ್ಲಿ ಸಂಧಾನ ಆಗಲ್ಲ ಎಂದರು.
ದರ್ಶನ್ ಜೊತೆ ಯಾವ ಸಿನಿಮಾಗಳು ಅನೌನ್ಸ್ ಆಗಿವೆ ಹಾಗೂ ಯಾವ ಶೂಟಿಂಗ್ ನಡೆಯುತ್ತಿದೆ ಎಂಬುದನ್ನು ನೋಡಬೇಕು. ಈ ಹಿಂದೆ ನಾವು ಎಷ್ಟೋ ಕೇಸ್ಗಳಲ್ಲಿ ಸಂಧಾನ ಮಾಡಿಸಿದ್ದೇವೆ. ಆದರೆ ಇದು ಕೊಲೆ ಕೇಸ್ ಆದ್ದರಿಂದ ಸೂಕ್ಷ ವಿಚಾರ. ಎಲ್ಲವೂ ಕಾನೂನಿನ ಅಡಿಯಲ್ಲೇ ಆಗಬೇಕು. ನಾವು ಪಾರದರ್ಶಕತೆಯಿಂದ ಕೆಲಸ ಮಾಡುತ್ತೇವೆ’ ಎಂದು ಎನ್ಎಂ ಸುರೇಶ್ ಹೇಳಿದ್ದಾರೆ.