Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧದ ಮುಡಾ ಸೈಟ್ ಹಂಚಿಕೆ ಕೇಸ್ : ವಿಚಾರಣೆ ಡಿ. 23ಕ್ಕೆ ಮುಂದೂಡಿ ಕೋರ್ಟ್ ಆದೇಶ

18/12/2025 3:36 PM

GOOD NEWS : ಆದಾಯ ಮಿತಿ ಪರಿಷ್ಕರಣೆಗೆ ಹಿನ್ನೆಲೆ, ಯಾವುದೇ ‘BPL’ ಕಾರ್ಡ್ ರದ್ದು ಮಾಡಲ್ಲ : ಸಚಿವ ಕೆ.ಹೆಚ್.ಮುನಿಯಪ್ಪ

18/12/2025 3:30 PM

ಪ್ರಧಾನ ಮಂತ್ರಿ ಇಂಟರ್ನ್ ಶಿಪ್ : 1.2 ಲಕ್ಷ ಯುವಕರಲ್ಲಿ ಕೇವಲ 2066 ಮಂದಿ ಮಾತ್ರ ತರಬೇತಿ ಪೂರ್ಣ

18/12/2025 3:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮತಗಳ್ಳತನ ಮಾಡಿ ಸಿಕ್ಕಿಬಿದ್ದು ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾಗಾಂಧಿ: ಛಲವಾದಿ ನಾರಾಯಣಸ್ವಾಮಿ
KARNATAKA

ಮತಗಳ್ಳತನ ಮಾಡಿ ಸಿಕ್ಕಿಬಿದ್ದು ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾಗಾಂಧಿ: ಛಲವಾದಿ ನಾರಾಯಣಸ್ವಾಮಿ

By kannadanewsnow0926/11/2025 4:47 PM

ಬೆಂಗಳೂರು: 1975ರಲ್ಲಿ ಮತಗಳ್ಳತನ ಮಾಡಿ ಸಿಕ್ಕಿಬಿದ್ದ ಇಂದಿರಾಗಾಂಧಿಯವರು ತನ್ನ ಅಧಿಕಾರ ಉಳಿಸಿಕೊಳ್ಳಲು ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ್ದರು. ಯಾವ ಕೋರ್ಟುಗಳೂ ಪ್ರಶ್ನೆ ಮಾಡದಂತೆ ನೋಡಿಕೊಂಡಿದ್ದರು. ನ್ಯಾಯಾಲಯಗಳೇ ತಟಸ್ಥವಾಗಿ ಇರುವಂತೆ ಮಾಡಲಾಗಿತ್ತು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.

ಸಂವಿಧಾನ ಸಮರ್ಪಣ ದಿವಸದ ಪ್ರಯುಕ್ತ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂಥ ಅನಾಹುತಗಳನ್ನು ಮಾಡಿದ ಕಾಂಗ್ರೆಸ್ ಪಕ್ಷವು ಮತಗಳ್ಳತನದ ಮಾತನಾಡುತ್ತಿದೆ. ನಾವು ಸಂವಿಧಾನದ ವಿರೋಧಿಗಳು ಎನ್ನುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಮೊದಲು ಸಂವಿಧಾನದ ಕೊಲೆ ಮಾಡುತ್ತದೆ. ತನಿಖೆ ಮಾಡಿದಾಗ ಕಾಂಗ್ರೆಸ್ಸೇ ಬಂಧನಕ್ಕೆ ಒಳಗಾಗುತ್ತದೆ ಎಂದು ಅವರು ವಿಶ್ಲೇಷಿಸಿದರು.

ಮತಗಳ್ಳತನದ ಮಾತನಾಡುತ್ತಾರೆ; ಕೋರ್ಟಿಗೆ ಹೋಗುವುದಿಲ್ಲ. ಯಾಕೆಂದರೆ ರಾಹುಲ್ ಗಾಂಧಿ ಬಂಧನಕ್ಕೆ ಒಳಗಾಗುತ್ತಾರೆ ಎಂಬುದೇ ಇದಕ್ಕೆ ಕಾರಣ ಎಂದು ತಿಳಿಸಿದರು. ಇಂಥ ಕಳ್ಳ ಕಾಂಗ್ರೆಸ್ ಕೈಯಲ್ಲಿ ದೇಶ ಬದುಕುತ್ತಿದೆಯಲ್ಲವೇ? ಬೇಕೇ ಇದು ಎಂದು ಕೇಳಿದರು.

ಕಾಂಗ್ರೆಸ್ಸಿಗೆ ಯಾವುದೇ ನೈತಿಕತೆ ಉಳಿದಿಲ್ಲ; ಸಂವಿಧಾನ ದಿನಾಚರಣೆ ಅವರದಲ್ಲ. ಮೋದಿಯವರ ನಾಯಕತ್ವದಲ್ಲಿ ಸಂವಿಧಾನ ದಿನಾಚರಣೆ ಈ ದೇಶಕ್ಕೆ ಬಂದಿದೆ ಎಂದು ನಾವು ಎದೆತಟ್ಟಿ ಹೇಳಬೇಕು ಎಂದು ಮನವಿ ಮಾಡಿದರು. ಅದು ಕಾಂಗ್ರೆಸ್ಸಿನ ಕೊಡುಗೆ ಅಲ್ಲ ಎಂದು ತಿಳಿಸಿದರು. ನಾವು ಸಂವಿಧಾನದ ಪರ, ನಾವು ಬಾಬಾ ಸಾಹೇಬ ಡಾ. ಅಂಬೇಡ್ಕರರ ಪರ, ನಾವು ಮೀಸಲಾತಿ- ದಲಿತರ ಎಂದು ಎದೆತಟ್ಟಿ ಹೇಳಬಹುದು; ಕಾಂಗ್ರೆಸ್ ಹೇಳುತ್ತಿದ್ದು ಅದು ಆತ್ಮವಂಚನೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ದಲಿತರ ಪರ ಅಲ್ಲ..

ಇವತ್ತಿಗೂ ಕಾಂಗ್ರೆಸ್ ಪಕ್ಷ ದಲಿತರ ಪರ ಅಲ್ಲ; ಎರಡ್ಮೂರು ದಲಿತ ಕುಟುಂಬಗಳನ್ನು ಗುತ್ತಿಗೆ ತೆಗೆದುಕೊಂಡಿದೆ. ಅವರಿಗೆ ದಲಿತ ಪ್ರೇಮವೂ ಇಲ್ಲ. ಕಾಂಗ್ರೆಸ್ಸಿಗೆ ದಲಿತ ಪ್ರೀತಿಯೂ ಇಲ್ಲ. ದಲಿತರು ಎಲ್ಲಿ ಬೇಕಾದರೂ ಹಾಳಾಗಲಿ; ನಮ್ಮ ಕುಟುಂಬ ಸರಿ ಇದ್ದರೆ ಸಾಕು ಎಂಬ ಯೋಚನೆ ಆ ಮೂರು ಕುಟುಂಬಗಳದು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.

ಖರ್ಗೆಯವರ ಕುಟುಂಬ, ಮಹದೇವಪ್ಪನವರ ಮತ್ತು ಕೆ.ಎಚ್.ಮುನಿಯಪ್ಪನವರ ಕುಟುಂಬ- ಇವು. ಏನು ಬಂದರೂ ನನ್ನ ಮನೆಗೇ ಬರಬೇಕೆಂಬ ಕುಟುಂಬಗಳವು. ಇವರೆಲ್ಲ ತಗ್ಗು ಪ್ರದೇಶದಲ್ಲಿ ಮನೆ ಮಾಡಿ ಕುಳಿತಿದ್ದಾರೆ. ನೀರು ಅಲ್ಲಿಗೇ ಹೋಗುತ್ತದೆ ಎಂದು ವ್ಯಂಗ್ಯವಾಡಿದರು. ಸಂವಿಧಾನಕ್ಕೆ ಅಪಚಾರ ಮಾಡಿದವರು ಸಂವಿಧಾನ ಹಿಡಿದುಕೊಂಡು ಈ ಸಂವಿಧಾನವನ್ನು ನಾವು ಕಾಪಾಡಬೇಕು; ನಮ್ಮನ್ನು ಬಿಟ್ಟರೆ ಯಾರಿಂದಲೂ ಆಗಲ್ಲ ಎಂದು ಹೋರಾಟಕ್ಕೆ ಮುಂದಾಗಿದ್ದಾರೆ. ಇವರಿಂದ ಇದು ಆಗುತ್ತದೆಯೇ ಎಂದು ಕೇಳಿದರು.

ದಲಿತ ಸಮುದಾಯಗಳಿಗೆ ಮತದಾನದ ಹಕ್ಕು ಇರಲಿಲ್ಲ; ಕೇವಲ ಜಮೀನ್ದಾರರಿಗೆ ಇತ್ತು. ಬಾಬಾ ಸಾಹೇಬ ಡಾ. ಅಂಬೇಡ್ಕರರ ಹೋರಾಟದ ಫಲವಾಗಿ ನಮ್ಮೆಲ್ಲರಿಗೂ ಮತದಾನದ ಹಕ್ಕು ಬಂದಿದೆ ಎಂದು ಅವರು ವಿವರಿಸಿದರು. ದಲಿತರಿಗೆ ಮೀಸಲಾತಿ ಕೊಟ್ಟಿದ್ದರಿಂದ ಈ ದೇಶವು ಅಭಿವೃದ್ಧಿ ಆಗುವುದಿಲ್ಲ ಎಂದು ಮೊದಲ ಪ್ರಧಾನಿ ನೆಹರೂ ಅವರು ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಮೀಸಲಾತಿ ವಿರೋಧಿಗಳು ಯಾರು? ಕಾಂಗ್ರೆಸ್; ಹೇಳುವುದು ಬಿಜೆಪಿ ಮೇಲೆ; ನಾಚಿಕೆ ಆಗಬೇಕಲ್ಲವೇ ನಿಮಗೆ ಎಂದು ಆಕ್ಷೇಪಿಸಿದರು.

ರಾಜ್ಯದಲ್ಲಿ ದಲಿತರ, ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ 15ರಿಂದ ಶೇ 17ಕ್ಕೆ ಏರಿಸಿದ್ದು ಬಿಜೆಪಿ. ಎಸ್‍ಟಿಗಳ ಮೀಸಲಾತಿ 3ರಿಂದ 7ಕ್ಕೆ ಹೆಚ್ಚಿಸಿದ್ದು ಬಿಜೆಪಿ. ಆದರೂ ನಮ್ಮನ್ನು ಮೀಸಲಾತಿ ವಿರೋಧಿಗಳು ಎನ್ನುತ್ತಾರೆ. ಸಂವಿಧಾನವಿರೋಧಿಗಳು ಎನ್ನುತ್ತಾರೆ. ಬಾಬಾಸಾಹೇಬರ ಪಂಚ ಕ್ಷೇತ್ರಗಳನ್ನು ರಾಷ್ಟ್ರೀಯ ಸ್ಮಾರಕ ಮಾಡಿದ್ದು ನರೇಂದ್ರ ಮೋದಿಜೀ ಅವರ ಬಿಜೆಪಿ ಸರಕಾರ ಎಂದರು.

ಅಂಬೇಡ್ಕರರು ದೆಹಲಿ ನಿವಾಸದಲ್ಲಿ ತೀರಿಕೊಂಡಾಗ ಬಾಂಬೆಗೆ ಓಡಿಸಿದವರು ಕಾಂಗ್ರೆಸ್ಸಿನವರು. ಅನಾಥ ಶವದಂತೆ ಸಮುದ್ರ ತೀರದಲ್ಲಿ ಅವರ ಅಂತ್ಯಕ್ರಿಯೆ ಮಾಡಲಾಗಿತ್ತು. ಇದಕ್ಕೆ ಕಾಂಗ್ರೆಸ್ ಕಾರಣ. ಆದರೆ, ಬಿಜೆಪಿ ವಿರುದ್ಧ ಹೇಳುತ್ತಾರೆ ಎಂದು ಟೀಕಿಸಿದರು.

ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಸಿಮೆಂಟ್ ಮಂಜುನಾಥ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಮುಖಂಡ ಮುನಿಕೃಷ್ಣ, ಎಸ್‍ಸಿ ಮೋರ್ಚಾ ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಮತ್ತು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Share. Facebook Twitter LinkedIn WhatsApp Email

Related Posts

BREAKING : ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧದ ಮುಡಾ ಸೈಟ್ ಹಂಚಿಕೆ ಕೇಸ್ : ವಿಚಾರಣೆ ಡಿ. 23ಕ್ಕೆ ಮುಂದೂಡಿ ಕೋರ್ಟ್ ಆದೇಶ

18/12/2025 3:36 PM1 Min Read

GOOD NEWS : ಆದಾಯ ಮಿತಿ ಪರಿಷ್ಕರಣೆಗೆ ಹಿನ್ನೆಲೆ, ಯಾವುದೇ ‘BPL’ ಕಾರ್ಡ್ ರದ್ದು ಮಾಡಲ್ಲ : ಸಚಿವ ಕೆ.ಹೆಚ್.ಮುನಿಯಪ್ಪ

18/12/2025 3:30 PM1 Min Read

BIG NEWS : `ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ’ ಅಡಿಯಲ್ಲಿ  ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಬಹುದು : ಇಲ್ಲಿದೆ ಸಂಪೂರ್ಣ ಪಟ್ಟಿ

18/12/2025 1:47 PM2 Mins Read
Recent News

BREAKING : ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧದ ಮುಡಾ ಸೈಟ್ ಹಂಚಿಕೆ ಕೇಸ್ : ವಿಚಾರಣೆ ಡಿ. 23ಕ್ಕೆ ಮುಂದೂಡಿ ಕೋರ್ಟ್ ಆದೇಶ

18/12/2025 3:36 PM

GOOD NEWS : ಆದಾಯ ಮಿತಿ ಪರಿಷ್ಕರಣೆಗೆ ಹಿನ್ನೆಲೆ, ಯಾವುದೇ ‘BPL’ ಕಾರ್ಡ್ ರದ್ದು ಮಾಡಲ್ಲ : ಸಚಿವ ಕೆ.ಹೆಚ್.ಮುನಿಯಪ್ಪ

18/12/2025 3:30 PM

ಪ್ರಧಾನ ಮಂತ್ರಿ ಇಂಟರ್ನ್ ಶಿಪ್ : 1.2 ಲಕ್ಷ ಯುವಕರಲ್ಲಿ ಕೇವಲ 2066 ಮಂದಿ ಮಾತ್ರ ತರಬೇತಿ ಪೂರ್ಣ

18/12/2025 3:28 PM

ಉದ್ಯೋಗ ನಿರೀಕ್ಷಿತರಿಗೆ ಅದ್ಭುತ ಅವಕಾಶ ; ‘ಯುನಿಸೆಫ್’ನಲ್ಲಿ 6 ತಿಂಗಳ ‘ಇಂಟರ್ನ್ಶಿಪ್’, 1.5 ಲಕ್ಷ ರೂ. ಸ್ಟೈಫಂಡ್!

18/12/2025 3:04 PM
State News
KARNATAKA

BREAKING : ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧದ ಮುಡಾ ಸೈಟ್ ಹಂಚಿಕೆ ಕೇಸ್ : ವಿಚಾರಣೆ ಡಿ. 23ಕ್ಕೆ ಮುಂದೂಡಿ ಕೋರ್ಟ್ ಆದೇಶ

By kannadanewsnow0518/12/2025 3:36 PM KARNATAKA 1 Min Read

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧದ ಮುಡಾ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್…

GOOD NEWS : ಆದಾಯ ಮಿತಿ ಪರಿಷ್ಕರಣೆಗೆ ಹಿನ್ನೆಲೆ, ಯಾವುದೇ ‘BPL’ ಕಾರ್ಡ್ ರದ್ದು ಮಾಡಲ್ಲ : ಸಚಿವ ಕೆ.ಹೆಚ್.ಮುನಿಯಪ್ಪ

18/12/2025 3:30 PM

BIG NEWS : `ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ’ ಅಡಿಯಲ್ಲಿ  ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಬಹುದು : ಇಲ್ಲಿದೆ ಸಂಪೂರ್ಣ ಪಟ್ಟಿ

18/12/2025 1:47 PM

5 ಸಾವಿರ ಕೋಟಿ ಹಣ ಬಿಡುಗಡೆಯೇ ಆಗಿಲ್ಲ ಅಂದಮೇಲೆ ಅದು ಎಲ್ಲಿ‌ ಹೋಗುತ್ತದೆ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

18/12/2025 1:31 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.