Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಟ್ರಂಪ್ ರಹಸ್ಯ ಪತ್ರದ ವಿವರ ಬಹಿರಂಗ: ‘ನನಗೇನಾದರೂ ಆದರೆ ಇರಾನ್ ದೇಶವನ್ನೇ ಭೂಪಟದಿಂದ ಅಳಿಸಿ ಹಾಕಿ’: ಜೆ.ಡಿ. ವ್ಯಾನ್ಸ್‌ಗೆ ಕಡಕ್ ಸೂಚನೆ!

ಪುರುಷರ ಕುಡಿತದ ಚಟದಿಂದ ಮಹಿಳೆಯರ ಮೇಲೆ ದೌರ್ಜನ್ಯ ಕೇಸ್ ಹೆಚ್ಚಳ : ಅಬಕಾರಿ ಇಲಾಖೆ ವರದಿಯಲ್ಲಿ ಬಹಿರಂಗ!

ಅಸ್ಸಾಂ ಸಿಎಂ ಪತ್ನಿ ದಾಖಲಿಸಿದ ಕೇಸ್: ಗುವಾಹಟಿಯಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ 10 ಗಂಟೆಗಳ ಕಾಲ ಸುಧೀರ್ಘ ವಿಚಾರಣೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪುರುಷರ ಕುಡಿತದ ಚಟದಿಂದ ಮಹಿಳೆಯರ ಮೇಲೆ ದೌರ್ಜನ್ಯ ಕೇಸ್ ಹೆಚ್ಚಳ : ಅಬಕಾರಿ ಇಲಾಖೆ ವರದಿಯಲ್ಲಿ ಬಹಿರಂಗ!
KARNATAKA

ಪುರುಷರ ಕುಡಿತದ ಚಟದಿಂದ ಮಹಿಳೆಯರ ಮೇಲೆ ದೌರ್ಜನ್ಯ ಕೇಸ್ ಹೆಚ್ಚಳ : ಅಬಕಾರಿ ಇಲಾಖೆ ವರದಿಯಲ್ಲಿ ಬಹಿರಂಗ!

By ಸುರೇಶ್‌

ಬೆಂಗಳೂರು: ಕರ್ನಾಟಕದಲ್ಲಿ ಮದ್ಯ ಮಾರಾಟವು ಈ ವರ್ಷ ದಾಖಲೆ ಮಟ್ಟವನ್ನು ತಲುಪಿದ್ದು, ಸರ್ಕಾರದ ಬೊಕ್ಕಸಕ್ಕೆ ನಿರೀಕ್ಷೆಗೂ ಮೀರಿದ ಆದಾಯ ಹರಿದುಬಂದಿದೆ. ಆದರೆ, ಈ ಆರ್ಥಿಕ ಲಾಭದ ಬೆನ್ನಲ್ಲೇ ಸಮಾಜದ ಕರಾಳ ಮುಖವೊಂದು ಅನಾವರಣಗೊಂಡಿದೆ. ಮದ್ಯದ ವ್ಯಸನದಿಂದಾಗಿ ಮಹಿಳೆಯರ ಮೇಲೆ ಪುರುಷರು ಎಸಗುತ್ತಿರುವ ದೈಹಿಕ ದೌರ್ಜನ್ಯಗಳ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ ಎಂದು ‘ಅಬಕಾರಿ ಸುಧಾರಣಾ-2026’ ವರದಿಯು ಆತಂಕಕಾರಿ ಅಂಶಗಳನ್ನು ಹೊರಹಾಕಿದೆ.

ಅಬಕಾರಿ ಇಲಾಖೆಯ ಸುಧಾರಣಾ ವರದಿಯ ಪ್ರಕಾರ, ಮದ್ಯಪಾನದ ಚಟವು ಕೇವಲ ವ್ಯಕ್ತಿಯ ಆರೋಗ್ಯದ ಮೇಲೆ ಮಾತ್ರವಲ್ಲದೆ, ಕೌಟುಂಬಿಕ ಶಾಂತಿಯ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಕುಡಿತದ ಚಟವಿಲ್ಲದ ವಿವಾಹಿತ ಪುರುಷರಿಗೆ ಹೋಲಿಸಿದರೆ, ಮದ್ಯವ್ಯಸನಿಗಳು ತಮ್ಮ ಪತ್ನಿ ಹಾಗೂ ಕುಟುಂಬದ ಇತರೆ ಮಹಿಳಾ ಸದಸ್ಯರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ನಡೆಸುತ್ತಿರುವುದು ಅಂಕಿಅಂಶಗಳಿಂದ ಸಾಬೀತಾಗಿದೆ.

ವರದಿಯಲ್ಲಿನ ಅಂಕಿಅಂಶಗಳು ಅತ್ಯಂತ ಭಯಾನಕವಾಗಿದ್ದು, ಪ್ರತಿನಿತ್ಯ ಮದ್ಯ ಸೇವಿಸಿ ಮನೆಗೆ ಬರುವ ಪತಿಯಂದಿರ ಪೈಕಿ ಶೇ. 71ರಷ್ಟು ಮಂದಿ ತಮ್ಮ ಪತ್ನಿಯರ ಮೇಲೆ ಹಲ್ಲೆ ಅಥವಾ ದೌರ್ಜನ್ಯ ಎಸಗುತ್ತಿದ್ದಾರೆ. ಈ ಗುಂಪಿನಲ್ಲಿ ದೌರ್ಜನ್ಯದ ತೀವ್ರತೆ ಹೆಚ್ಚಾಗಿದ್ದು, ಮದ್ಯವು ಕೌಟುಂಬಿಕ ಹಿಂಸಾಚಾರಕ್ಕೆ ನೇರ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ.

ಇನ್ನು ಸಾಂದರ್ಭಿಕವಾಗಿ ಮದ್ಯ ಸೇವಿಸುವ ಪುರುಷರಲ್ಲಿ ಈ ಪ್ರಮಾಣವು ಶೇ. 46ರಷ್ಟಿದೆ. ಅಚ್ಚರಿಯ ಸಂಗತಿಯೆಂದರೆ, ಮದ್ಯದ ವ್ಯಸನವಿದ್ದರೂ ಸಹ ಮನೆಯ ಹೊರಗಡೆ ಕುಡಿದು, ಮನೆಗೆ ಬರುವಾಗ ಮದ್ಯ ಸೇವಿಸದ ಪುರುಷರಲ್ಲಿಯೂ ಶೇ. 33ರಷ್ಟು ಮಂದಿ ಪತ್ನಿಯರನ್ನು ಹಿಂಸಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಅಂದರೆ ವ್ಯಸನವು ಯಾವುದೇ ರೂಪದಲ್ಲಿದ್ದರೂ ಅದು ಮಹಿಳೆಯರ ಸುರಕ್ಷತೆಗೆ ಮಾರಕವಾಗಿ ಪರಿಣಮಿಸುತ್ತಿದೆ.

ಕುಡಿತದ ಚಟವಿಲ್ಲದ ವಿವಾಹಿತ ಪುರುಷರಿಗಿಂತ ಮದ್ಯವ್ಯಸನಿಗಳು, ಪತ್ನಿ ಸೇರಿದಂತೆ ಕುಟುಂಬದ ಮಹಿಳಾ ಸದಸ್ಯರ ಮೇಲೆ ಹೆಚ್ಚು ದೌರ್ಜನ್ಯ ನಡೆಸುತ್ತಿದ್ದಾರೆ. ಪ್ರತಿನಿತ್ಯ ಮದ್ಯ ಸೇವಿಸಿ ಮನೆಗೆ ಬರುವ ಪತಿಯಂದಿರ ಪೈಕಿ ಶೇ.71ರಷ್ಟು ಮಂದಿ ಪತ್ನಿಯರ ಮೇಲೆ ಹೆಚ್ಚು ದೌರ್ಜನ್ಯ ಎಸಗುತ್ತಿದ್ದಾರೆ. ಸಾಂದರ್ಭಿಕವಾಗಿ ಮದ್ಯ ಸೇವಿಸುವ ಪುರುಷರಲ್ಲಿ ಶೇ.46ರಷ್ಟು, ಕುಡಿತದ ವ್ಯಸನವಿದ್ದರೂ ಮನೆಗೆ ಮದ್ಯ ಸೇವಿಸಿ ಬಾರದ ಪುರುಷರಲ್ಲಿ ಶೇ.33ರಷ್ಟು ಮಂದಿ ಪತ್ನಿಯರನ್ನು ಹಿಂಸಿಸುತ್ತಿದ್ದಾರೆ.

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.11ರಷ್ಟು ಮಂದಿ ಮದ್ಯ ಸೇವಿಸುತ್ತಾರೆ. ಇದು ರಾಷ್ಟ್ರೀಯ ಸರಾಸರಿಗೆ (ಶೇ.14.6) ಹೋಲಿಸಿದರೆ, ಕಡಿಮೆ ಇದೆ. ಅಬಕಾರಿ ತೆರಿಗೆಯು ರಾಜ್ಯದ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಎಸ್‌ಡಿಪಿ) ಶೇ.1.4ರಷ್ಟು, ಒಟ್ಟು ತೆರಿಗೆ ಆದಾಯಕ್ಕೆ ಶೇ.11ರಷ್ಟು ಮತ್ತು ಸ್ವಂತ ತೆರಿಗೆಗೆ ಶೇ.20.3ರಷ್ಟು (2024-25) ಕೊಡುಗೆ ನೀಡುತ್ತಿದೆ. ದೇಶದಲ್ಲಿ ಮಾರಾಟವಾಗುವ ಒಟ್ಟು ಮದ್ಯದಲ್ಲಿ ಶೇ. 45ರಷ್ಟು ಪಾಲು ಹೊಂದಿರುವ ದಕ್ಷಿಣದ ಐದು ರಾಜ್ಯಗಳ ಪೈಕಿ ಕರ್ನಾಟಕವೂ ಒಂದು.

ರಾಜ್ಯದಲ್ಲಿ 15ರಿಂದ 49 ವರ್ಷದೊಳಗಿನ ಪುರುಷರಲ್ಲಿ ಸುಮಾರು ಶೇ.16.5ರಷ್ಟು ಮಂದಿ ಮದ್ಯ ಸೇವಿಸುತ್ತಿದ್ದಾರೆ ಹಾಗೂ ಸುಮಾರು ಶೇ.0.9ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಿದ್ದಾರೆ. ಮದ್ಯಪಾನದಿಂದ ಉಂಟಾಗುವ ಸಾಮಾಜಿಕ ವೆಚ್ಚವು ರಾಜ್ಯದ ಒಟ್ಟು ಜಿಡಿಪಿಯ ಸುಮಾರು ಶೇ.2.0ರಷ್ಟಿದೆ (ಅಂದರೆ ಸುಮಾರು 51 ಸಾವಿರ ಕೋಟಿ ರೂ.) ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.

Share. Facebook Twitter LinkedIn WhatsApp Email

Related Posts

ALERT : ರಾಜ್ಯದಲ್ಲಿ ಬೇಸಿಗೆಯ ಬಿಸಿಲಿನಿಂದ ಪಾರಾಗಲು ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ

2 Mins Read

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : 2026-27ನೇ ಸಾಲಿನ ಮೆಟ್ರಿಕ್ ಪೂರ್ವ ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

1 Min Read

ನಿಮ್ಮ ಮನೆಯ `ಕರೆಂಟ್ ಬಿಲ್’ ಕಡಿಮೆ ಮಾಡಲು ತಪ್ಪದೇ ಈ ನಿಯಮಗಳನ್ನು ಪಾಲಿಸಿ | Electricity bill

1 Min Read
Recent News

ಟ್ರಂಪ್ ರಹಸ್ಯ ಪತ್ರದ ವಿವರ ಬಹಿರಂಗ: ‘ನನಗೇನಾದರೂ ಆದರೆ ಇರಾನ್ ದೇಶವನ್ನೇ ಭೂಪಟದಿಂದ ಅಳಿಸಿ ಹಾಕಿ’: ಜೆ.ಡಿ. ವ್ಯಾನ್ಸ್‌ಗೆ ಕಡಕ್ ಸೂಚನೆ!

ಪುರುಷರ ಕುಡಿತದ ಚಟದಿಂದ ಮಹಿಳೆಯರ ಮೇಲೆ ದೌರ್ಜನ್ಯ ಕೇಸ್ ಹೆಚ್ಚಳ : ಅಬಕಾರಿ ಇಲಾಖೆ ವರದಿಯಲ್ಲಿ ಬಹಿರಂಗ!

ಅಸ್ಸಾಂ ಸಿಎಂ ಪತ್ನಿ ದಾಖಲಿಸಿದ ಕೇಸ್: ಗುವಾಹಟಿಯಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ 10 ಗಂಟೆಗಳ ಕಾಲ ಸುಧೀರ್ಘ ವಿಚಾರಣೆ

ALERT : ನಿಮ್ಮ ಮೆದುಳಿನ ಸಾಮರ್ಥ್ಯವನ್ನೇ ಕುಂದಿಸಬಹುದು ಮುಂಜಾನೆಯ ಈ 5 ತಪ್ಪು ಅಭ್ಯಾಸಗಳು; ಇಂದೇ ಎಚ್ಚೆತ್ತುಕೊಳ್ಳಿ!

State News
KARNATAKA

ಪುರುಷರ ಕುಡಿತದ ಚಟದಿಂದ ಮಹಿಳೆಯರ ಮೇಲೆ ದೌರ್ಜನ್ಯ ಕೇಸ್ ಹೆಚ್ಚಳ : ಅಬಕಾರಿ ಇಲಾಖೆ ವರದಿಯಲ್ಲಿ ಬಹಿರಂಗ!

By ಸುರೇಶ್‌ KARNATAKA 2 Mins Read

ಬೆಂಗಳೂರು: ಕರ್ನಾಟಕದಲ್ಲಿ ಮದ್ಯ ಮಾರಾಟವು ಈ ವರ್ಷ ದಾಖಲೆ ಮಟ್ಟವನ್ನು ತಲುಪಿದ್ದು, ಸರ್ಕಾರದ ಬೊಕ್ಕಸಕ್ಕೆ ನಿರೀಕ್ಷೆಗೂ ಮೀರಿದ ಆದಾಯ ಹರಿದುಬಂದಿದೆ.…

ALERT : ರಾಜ್ಯದಲ್ಲಿ ಬೇಸಿಗೆಯ ಬಿಸಿಲಿನಿಂದ ಪಾರಾಗಲು ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : 2026-27ನೇ ಸಾಲಿನ ಮೆಟ್ರಿಕ್ ಪೂರ್ವ ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ನಿಮ್ಮ ಮನೆಯ `ಕರೆಂಟ್ ಬಿಲ್’ ಕಡಿಮೆ ಮಾಡಲು ತಪ್ಪದೇ ಈ ನಿಯಮಗಳನ್ನು ಪಾಲಿಸಿ | Electricity bill

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.