ಯಾದಗಿರಿ: ನಗರದಲ್ಲಿ ಎತ್ತ ನೋಡಿದ್ರೂ ಗುಂಡಿಗಳೇ ಎದ್ದು ಕಾಣುತ್ತಿದೆ. ಯಾವ ರಸ್ತೆಗಳಿಗೂ ಹೋದ್ರು ಗುಂಡಿಗಳೇ ಇದೆ.
BIGG NEWS: ದಯವಿಟ್ಟು ಭಾವೋದ್ವೇಗದಿಂದ ಮಾತನಾಡಬೇಡಿ: ರೇಣುಕಾಚಾರ್ಯಗೆ ಆರಗ ಜ್ಞಾನೇಂದ್ರ ಮನವಿ
ಕಳೆದ ಎರಡು ತಿಂಗಳಲ್ಲಿ ಈ ಗುಂಡಿಗಳಿಂದ ಮೂವರು ವಾಹನ ಸವಾರರು ಸಾವಿಗೀಡಾಗಿದ್ದಾರೆ. ದುರ್ಘಟನೆಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳಿಗೆ ಮಾತ್ರ ಕರುಣೆ ಬಂದಿಲ್ಲ. ಹೀಗಾಗಿ ವಾಹನ ಸವಾರರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಲು ಆರಂಭಿಸಿದ್ದಾರೆ.ಯಾದಗಿರಿ ನಗರದ ಹೃದಯ ಭಾಗದಲ್ಲಿರುವ ಸುಭಾಷ್ ವೃತ್ತದಲ್ಲಿ ರಸ್ತೆಯ ತುಂಬೆಲ್ಲ ಗುಂಡಿಗಳು ಬಿದ್ದಿವೆ. ಅಷ್ಟೇ ಯಾಕೆ ನಗರದ ಹತ್ತಿಕುಣಿ ಕ್ರಾಸ್ ರಸ್ತೆ, ಜಿಲ್ಲಾಧಿಕಾರಿ ಕಚೇರಿ ರಸ್ತೆ, ಹೈದ್ರಾಬಾದ್ ರಸ್ತೆ ಸೇರಿದಂತೆ ನಾನಾ ಕಡೆ ಇರುವ ರಸ್ತೆಗಳ ತುಂಬೆಲ್ಲ ಗುಂಡಿಗಳೇ ಹೆಚ್ಚಾಗಿ ಕಾಣುತ್ತಿವೆ.
BIGG NEWS: ದಯವಿಟ್ಟು ಭಾವೋದ್ವೇಗದಿಂದ ಮಾತನಾಡಬೇಡಿ: ರೇಣುಕಾಚಾರ್ಯಗೆ ಆರಗ ಜ್ಞಾನೇಂದ್ರ ಮನವಿ
ನಿತ್ಯ ಸಾವಿರಾರು ವಾಹನ ಸಂಚಾರ ವಾಗುತ್ತಿದ್ದರೂ ಅಧಿಕಾರಿಗಳು ಗುಂಡಿಗಳನ್ನ ಮುಚ್ಚಿಸುವ ಸಣ್ಣ ಕೆಲಸಕ್ಕೆ ಮುಂದಾಗದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಹತ್ತಿಕುಣಿ ಕ್ರಾಸ್ ರಸ್ತೆ ಮೇಲೆ ವಾಹನ ಸವಾರರು ಓಡಾಡಬೇಕು ಅಂದರೆ ನೂರು ಬಾರಿ ಯೋಚನೆ ಮಾಡಿ ವಾಹನ ಓಡಿಸುವಂತಾಗಿದೆ.