Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ICC ಹಾಲ್ ಆಫ್ ಫೇಮ್‌ಗೆ ಎಂಎಸ್ ಧೋನಿ ಸೇರ್ಪಡೆ

09/06/2025 10:22 PM

ಬೆಂಗಳೂರಿನ ಜನತೆ ಗಮನಕ್ಕೆ: ಕಬ್ಬನ್ ಉದ್ಯಾನವನದಲ್ಲಿ ಈ ಸುರಕ್ಷತಾ ನಿಯಮ ಜಾರಿ, ಪಾಲನೆ ಕಡ್ಡಾಯ

09/06/2025 10:01 PM

ಪ್ರಯಾಣಿಕರ ಗಮನಕ್ಕೆ: ಈ ಮಾರ್ಗದಲ್ಲಿ ರೈಲುಗಳ ಸಂಚಾರ ಮತ್ತೆ ಆರಂಭ | SOUTH WESTERN RAILWAY

09/06/2025 9:29 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ‘HRMS’ ತಂತ್ರಾಂಶದಲ್ಲಿ `ಸೇವಾ ವಿವರಗಳ ಮಾಹಿತಿ’ ಸಲ್ಲಿಸುವಂತೆ ಸರ್ಕಾರದಿಂದ ಮಹತ್ವದ ಆದೇಶ| Govt Employee
KARNATAKA

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ‘HRMS’ ತಂತ್ರಾಂಶದಲ್ಲಿ `ಸೇವಾ ವಿವರಗಳ ಮಾಹಿತಿ’ ಸಲ್ಲಿಸುವಂತೆ ಸರ್ಕಾರದಿಂದ ಮಹತ್ವದ ಆದೇಶ| Govt Employee

By kannadanewsnow5701/06/2025 4:58 AM

ಬೆಂಗಳೂರು :  ಮಾತೃ ಇಲಾಖೆಯಿಂದ ಅನ್ಯ ಸೇವೆ/ನಿಯೋಜನೆಯ ಮೇಲೆ ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರು, NTT DDO CODE ಆಧಾರದ ಮೇಲೆ ವಿಮಾ ಇಲಾಖೆಯ ಆನ್‌ಲೈನ್ ಸೇವೆಗಳನ್ನು ಪಡೆಯಲು ಹೆಚ್ .ಆ‌ರ್.ಎಂ.ಎಸ್.ನಲ್ಲಿ ಸೇವಾ ವಿವರಗಳ ಪ್ರಾಥಮಿಕ ಮಾಹಿತಿಯನ್ನು ಇಂದೀಕರಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮೆಯ ಎಲ್ಲಾ ಸೇವೆಗಳನ್ನು ಪ್ರಸ್ತುತ ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗಿದೆ. ಈ ಆನ್‌ಲೈನ್ ಸೇವೆಗಳನ್ನು ಪಡೆಯಲು ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರು ಅರ್ಜಿಗಳನ್ನು ವೇತನ ಬಟವಾಡೆ ಅಧಿಕಾರಿಗಳು/ಮೇಲಧಿಕಾರಿಗಳ ಮುಖಾಂತರ ವಿಮಾ ಇಲಾಖೆಗೆ ಸಲ್ಲಿಸಬೇಕಿರುತ್ತದೆ. ಮಾತೃ ಇಲಾಖೆಯಿಂದ ಅನ್ಯ ಸೇವೆ/ನಿಯೋಜನೆಯ ಮೇಲೆ ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರ ವೇತನ ಬಟವಾಡೆ ಅಧಿಕಾರಿಗಳಿಗೆ ಖಜಾನೆ DDO Code ಇಲ್ಲದಿರುವುದರಿಂದ ಇಂತಹ DDO ಗಳಿಗೆ ಈವರೆಗೆ ವಿಮಾ ಇಲಾಖೆಯಲ್ಲಿ DDO Login ಸೃಜಿಸಲು ಸಾಧ್ಯವಾಗಿರುವುದಿಲ್ಲ. ಇದರಿಂದಾಗಿ ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿ/ನೌಕರರು ವಿಮಾ ಇಲಾಖೆಯ ಆನ್‌ಲೈನ್‌ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ.

ಈ ಹಿನ್ನೆಲೆಯಲ್ಲಿ, ಉಲ್ಲೇಖ(1) ರ ಸರ್ಕಾರದ ಆದೇಶದಲ್ಲಿ ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರಿಗೆ NTT DDO CODE ( NON TREASURY TRANSACTION DDO CODE) ಸೇವೆಗಳನ್ನು ಒದಗಿಸಲು ಅನುಮತಿಯನ್ನು ನೀಡಿ ಆದೇಶಿಸಲಾಗಿರುತ್ತದೆ.

ಪ್ರಸ್ತುತ ವಿಮಾ ಇಲಾಖೆಯಲ್ಲಿ HRMSನಲ್ಲಿ ಲಭ್ಯವಿರುವ ರಾಜ್ಯ ಸರ್ಕಾರಿ ನೌಕರರ ಪ್ರಾಥಮಿಕ ವಿವರಗಳ ದತ್ತಾಂಶವನ್ನು ವಿಮಾ ಇಲಾಖೆಗೆ ಪಡೆದು ಅದರ ಆಧಾರದ ಮೇಲೆ ವಿಮಾದಾರರ ದತ್ತಾಂಶವನ್ನು ಮಾನ್ಯ ಮಾಡುತ್ತಿರುವುದರಿಂದ ಹಾಗೂ ಪ್ರಸ್ತುತ HRMS-KGID ದತ್ತಾಂಶಗಳ ಅನುಕಲನ ತಂತ್ರಾಂಶವು ಅಭಿವೃದ್ಧಿಯಾಗುತ್ತಿರುವುದರಿಂದ ರಾಜ್ಯ ಸರ್ಕಾರಿ ನೌಕರರ ದತ್ತಾಂಶವು HRMS ಮತ್ತು KGID ತಂತ್ರಾಂಶಗಳಲ್ಲಿ ಏಕರೂಪವಾಗಿರಬೇಕು. ಇದರಿಂದಾಗಿ ವಿಮಾ ಇಲಾಖೆಯ ಆನ್‌ಲೈನ್ ಸೇವೆಗಳನ್ನು NTT DDO CODE ಆಧಾರದ ಮೇಲೆ ಒದಗಿಸಲು HRMS ನಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳು/ನೌಕರರ ಪ್ರಾಥಮಿಕ ವಿವರಗಳು ಇರುವುದು ಕಡ್ಡಾಯವಾಗಿರುತ್ತದೆ. ಆದುದರಿಂದ ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರ ಸೇವಾ ವಿವರಗಳು HRMS ನಲ್ಲಿ ಇಲ್ಲವಾದಲ್ಲಿ ಅವರ ಮಾತೃ ಇಲಾಖೆಯಲ್ಲಿನ HRMS ನೋಡಲ್ ಅಧಿಕಾರಿಯ ಮುಖಾಂತರ HRMS ನಲ್ಲಿ ಅವರ Service Register ಅನ್ನು ಸೃಜಿಸಬೇಕಿರುತ್ತದೆ ಹಾಗೂ ವೈಯಕ್ತಿಕ ವಿವರಗಳು(ಹೆಸರು, ತಂದೆಯ ಹೆಸರು, ಜನ್ಮ ದಿನಾಂಕ, ಲಿಂಗ, ಪಾನ್‌ಸಂಖ್ಯೆ, ಸರ್ಕಾರಿ ಸೇವೆಗೆ ಸೇರಿದ ದಿನಾಂಕ, ಪ್ರಥಮ ವಿಮಾ ಪಾಲಿಸಿ ಸಂಖ್ಯೆ,ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿ ಇತ್ಯಾದಿ) ಅಪೂರ್ಣವಿದ್ದಲ್ಲಿ ಸಂಪೂರ್ಣವಾದ ಮಾಹಿತಿಯೊಂದಿಗೆ HRMS ನಲ್ಲಿ ಇಂದೀಕರಿಸುವುದು ಅಗತ್ಯವಾಗಿರುತ್ತದೆ.

ಮೇಲ್ಕಂಡ ಸಮಸ್ಯೆಯನ್ನು ನಿವಾರಿಸಲು ಉಲ್ಲೇಖ(2)ರ ಪತ್ರದಲ್ಲಿ ವಿಮಾ ನಿರ್ದೇಶಕರು ಸಲ್ಲಿಸಿರುವ ಕೋರಿಕೆಯನ್ನು ಪರಿಶೀಲಿಸಿ, ಅನ್ಯ ಸೇವೆ/ನಿಯೋಜನೆ ಮೇಲೆ ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಮತ್ತು ನೌಕರರು NTT DDO CODE ಆಧಾರದ ಮೇಲೆ ವಿಮಾ ಇಲಾಖೆಯ ಆನ್‌ಲೈನ್ ಸೇವೆಗಳನ್ನು ಪಡೆಯುವುದನ್ನು ಸಾಧ್ಯಗೊಳಿಸಲು ಅನುವಾಗುವಂತೆ ಸರ್ಕಾರವು ಈ ಕೆಳಗಿನಂತೆ ಆದೇಶಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, NTT DDO CODE ಆಧಾರದ ಮೇಲೆ ವಿಮಾ ಇಲಾಖೆಯ ಆನ್‌ಲೈನ್‌ ಸೇವೆಗಳನ್ನು ಪಡೆಯಲು ಅನುವಾಗುವಂತೆ ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಅನ್ಯ ಸೇವೆ/ನಿಯೋಜನೆ ಮೇರೆಗೆ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರು ಅವರ ಮಾತೃ ಇಲಾಖೆಯ HRMS ನೋಡಲ್ ಅಧಿಕಾರಿಯ ಮೂಲಕ HRMS ನಲ್ಲಿ Service Register ಅನ್ನು ಸೃಜಿಸಲು ಕ್ರಮವಹಿಸಲು ಹಾಗೂ ಪ್ರಸ್ತುತ HRMS ಮೂಲಕ ವೇತನ ಪಡೆಯುತ್ತಿರುವ ಅಧಿಕಾರಿ/ನೌಕರರು ತಮ್ಮ ವೈಯಕ್ತಿಕ ವಿವರಗಳ ಮಾಹಿತಿಯು ಅಪೂರ್ಣ/ತಿದ್ದುಪಡಿ ಇದ್ದಲ್ಲಿ ಸಂಪೂರ್ಣವಾದ ಮಾಹಿತಿಯನ್ನು HRMS ನಲ್ಲಿ ಇಂದೀಕರಿಸಲು ಆದೇಶಿಸಿದೆ.

May be an image of text that says "ಇಲಾಖೆಯಿಂದ ಅನ್ಯ ಸೇವ/ನಿಯೋಜನೆಯ ನಿಗಮ, ಮಂಡಳಿ ಮತ್ತು ಸ್ವಾಯತ್ತ NTT ವಿಮಾ ಇಲಾಖೆಯ ಆನ್ಲೈನ್ ಸೇವೆಗಳನ್ನು ಪಡೆಯಲು ಪ್ರಾಥಮಿಕ ಇಂದೀಕರಿಸುವ ಕವಿಇ ದಿನಾಂಕ: ಪ್ರಸ್ಥಾವನೆ: ಕರ್ನಾಟಕ ಇಲಾಖೆಯ ಕಡ್ಡಾಯ ಜೀವ ವಿಮಯ ಎಲ್ಲಾ ಸೇವಗಳನ್ನು ಸೇವೆಗಳನ್ನು ಪಡೆಯಲು ಸರ್ಕಾರದ ಮುಖಾಂತರ ಅಧಿಕಾರಿಗಳು ವಿಮಾ ញយសក ಸಲ್ಲಿಸಬೇಕಿರುತ್ತದೆ. ಮಾತೃ ಇಲಾಖೆಯಿಂದ ಸ್ವಾಯಕ್ತ ಸಂಸ್ಥಗಳಲ್ಲಿ ಸಲ್ಲಿಸುತ್ತಿರುವ DDO ಸಾಧ್ಯವಾಗಿರುವುದಿಲ್ಲ. ವಿಮಾ ಸೇವೆ/ನಿಯೋಜನೆಯ ಸರ್ಕಾರದ ಅಧಿಕಾರಿಗಳು ಮತ್ತು ಗಳಿಗೆ ಇಲಾಖೆಯ ಆನ್ಲೈನ್ ಈಹಿನ್ನಲೆಯಲ್ಲಿ, ಉಲ್ಲೇಖ್(1) ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರಿಗೆ DDO CODE TREASURY TRANSACTION DDO CODE) ಆಧಾರದ ಮೇಲೆ ವಿಮಾ ಇಲಾಖೆಯ ಪ್ರಸ್ತುತ ಇಲಾಖೆಯಲ್ಲಿ ದತ್ತಾಂಶವನ್ನು ಆಲಾಖೆಗೆ ಮಾಡುತ್ತಿರುವುದರಿಂದ ಪ್ರಸ್ತುತ ಲಭ್ಯವಿರುವ ರಾಜ್ಯ ಸರ್ಕಾರಿ ನೌಕರರ ಅದರ ಆಧಾರದ ಮೇಲೆ ದತ್ತಾಂಶವನ್ನು ದತ್ತಾಂಶಗಳ ಅನುಕಲನ ತಂತ್ರಾಂಶವು ಮತ್ತು KGID ತಂತ್ರಾಂಶಗಳಲ್ಲಿ ಸೇವೆಗಳನ್ನು NTT DDO ಪ್ರಾಥಮಿಕ ವಿವರಗಳು ಸಂಸ್ಥಗಳಲ್ಲಿ ವಿಮಾ HRMS ಇರುವುದು ಕಡ್ಡಾಯವಾಗಿರುತ್ತದೆ. ನಿಗಮ, ಮಂಡಳಿ ಮತ್ತು"

May be an image of text

May be an image of text

Important order from the government to submit `Service Details Information' in the ‘HRMS’ software | Govt Employee
Share. Facebook Twitter LinkedIn WhatsApp Email

Related Posts

ಬೆಂಗಳೂರಿನ ಜನತೆ ಗಮನಕ್ಕೆ: ಕಬ್ಬನ್ ಉದ್ಯಾನವನದಲ್ಲಿ ಈ ಸುರಕ್ಷತಾ ನಿಯಮ ಜಾರಿ, ಪಾಲನೆ ಕಡ್ಡಾಯ

09/06/2025 10:01 PM4 Mins Read

ಪ್ರಯಾಣಿಕರ ಗಮನಕ್ಕೆ: ಈ ಮಾರ್ಗದಲ್ಲಿ ರೈಲುಗಳ ಸಂಚಾರ ಮತ್ತೆ ಆರಂಭ | SOUTH WESTERN RAILWAY

09/06/2025 9:29 PM1 Min Read

ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಕೆ.ಮಾಯಣ್ಣಗೌಡ ನೇಮಕ

09/06/2025 9:22 PM1 Min Read
Recent News

ICC ಹಾಲ್ ಆಫ್ ಫೇಮ್‌ಗೆ ಎಂಎಸ್ ಧೋನಿ ಸೇರ್ಪಡೆ

09/06/2025 10:22 PM

ಬೆಂಗಳೂರಿನ ಜನತೆ ಗಮನಕ್ಕೆ: ಕಬ್ಬನ್ ಉದ್ಯಾನವನದಲ್ಲಿ ಈ ಸುರಕ್ಷತಾ ನಿಯಮ ಜಾರಿ, ಪಾಲನೆ ಕಡ್ಡಾಯ

09/06/2025 10:01 PM

ಪ್ರಯಾಣಿಕರ ಗಮನಕ್ಕೆ: ಈ ಮಾರ್ಗದಲ್ಲಿ ರೈಲುಗಳ ಸಂಚಾರ ಮತ್ತೆ ಆರಂಭ | SOUTH WESTERN RAILWAY

09/06/2025 9:29 PM

ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಕೆ.ಮಾಯಣ್ಣಗೌಡ ನೇಮಕ

09/06/2025 9:22 PM
State News
KARNATAKA

ಬೆಂಗಳೂರಿನ ಜನತೆ ಗಮನಕ್ಕೆ: ಕಬ್ಬನ್ ಉದ್ಯಾನವನದಲ್ಲಿ ಈ ಸುರಕ್ಷತಾ ನಿಯಮ ಜಾರಿ, ಪಾಲನೆ ಕಡ್ಡಾಯ

By kannadanewsnow0909/06/2025 10:01 PM KARNATAKA 4 Mins Read

ಬೆಂಗಳೂರು: ಬೆಂಗಳೂರಿನ ಶ್ರೀ ಚಾಮರಾಜೇಂದ್ರ ಕಬ್ಬನ್ ಉದ್ಯಾನವನದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಹಾಗೂ ಉದ್ಯಾನವನದ ಸಂರಕ್ಷಣಾ ಹಿತದೃಷ್ಟಿಯಿಂದ ಉದ್ಯಾನವನದ ಆವರಣದಲ್ಲಿ ಅನುಮತಿಸಬಹುದಾದ…

ಪ್ರಯಾಣಿಕರ ಗಮನಕ್ಕೆ: ಈ ಮಾರ್ಗದಲ್ಲಿ ರೈಲುಗಳ ಸಂಚಾರ ಮತ್ತೆ ಆರಂಭ | SOUTH WESTERN RAILWAY

09/06/2025 9:29 PM

ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಕೆ.ಮಾಯಣ್ಣಗೌಡ ನೇಮಕ

09/06/2025 9:22 PM

ಬಿಬಿಎಂಪಿಯಿಂದ ಈವರೆಗೆ 5 ಲಕ್ಷ ನಾಗರೀಕರಿಗೆ ‘ಅಂತಿಮ ಇ-ಖಾತಾ’ ವಿತರಣೆ | BBMP E-Khata

09/06/2025 9:11 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.