ನವದೆಹಲಿ : ಕೊಲ್ಕತ್ತಾ ಮೇಲೆ ದಾಳಿ ಮಾಡುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿರುವ ವಿಚಾರವಾಗಿ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಹೇಳಿಕೆಗೆ ರಾಜನಾಥ್ ಸಿಂಗ್ ಇದೀಗ ಖಡಕ್ ಎಚ್ಚರಿಕೆ ಕೊಟ್ಟಿದ್ದು, ಪಶ್ಚಿಮ ಬಂಗಾಳ ಮೇಲೆ ಕಣ್ಣು ಹಾಕಿದರೆ ಮತ್ತೆ ಇಬ್ಭಾಗ ಆಗಲಿದೆ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಅವರು, 1971ರ ಘಟನೆಯನ್ನು ನೀವು ಎಂದಿಗೂ ಮರೆಯಬೇಡಿ. ಈ ಹಿಂದೆ ಪಾಕಿಸ್ತಾನ ಹೇಗೆ ಇಬ್ಭಾಗ ಆಗಿದೆ ಅಂತ ನೆನಪಿನಲ್ಲಿ ಇಟ್ಟುಕೊಳ್ಳಿ. ಪಾಕಿಸ್ತಾನದಿಂದ ಬೇರ್ಪಟ್ಟು ಬಾಂಗ್ಲಾದೇಶ ರಚನೆ ಆಯ್ತು. ಪಶ್ಚಿಮ ಬಂಗಾಳದ ಮೇಲೆ ಕಣ್ಣು ಹಾಕಿದರೆ ಮತ್ತೆ ಪಾಕಿಸ್ತಾನ ಇಬ್ಬಾಗ ಆಗಲಿದೆ. ಅಗತ್ಯ ಬಿದ್ದರೆ ಪಾಕಿಸ್ತಾನ ಇನ್ನು ಎಷ್ಟು ಭಾಗ ಆಗುತ್ತೆ ಗೊತ್ತಿಲ್ಲ ಎಂದು ಪಾಕಿಸ್ತಾನ ಸಚಿವರ ಹೇಳಿಕೆಗೆ ರಾಜನಾಥ ಸಿಂಗ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.








