ಕೋಲಾರ: ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾರ ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿದ್ದಾರೆ. ಗುತ್ತಿಗೆ ವಿಚಾರದ ಆರೋಪಕ್ಕೆ ಆಧಾರವಿಲ್ಲ ಅದಕ್ಕೆ ಹೆದರುವುದಿಲ್ಲ. ಕಾಮಗಾರಿಯಲ್ಲಿ ಅಕ್ರಮ ನಡೆದಿದ್ದರೆ ಬಿಡುವ ಮಾತೇ ಇಲ್ಲ. ಮುಂದಿನ ತಿಂಗಳು 5 ದಿನಗಳ ಕಾಲ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದ್ದಾರೆ.
HEALTH TIPS: ಪುರುಷರಲ್ಲಿ ಎನರ್ಜಿ ಕಡಿಮೆಯಾಗುತ್ತಿದ್ದಿಯಾ..? ಹಾಗಾದ್ರೆ ಹೀಗೆ ಮಾಡಿ
ಸುದ್ದಿಗಾರರೊಂದಿಗೆ ಮತನಾಡಿದ ಅವರು, ಮುಂದಿನ ತಿಂಗಳು 10 ನೇ ತಾರೀಖಿನಿಂದ ಜಿಲ್ಲೆಯಲ್ಲಿ 5 ದಿನಗಳ ಕಾಲ ಕಳಪೆ ರಸ್ತೆಗಳು ಸೇರಿದಂತೆ ಜಿಲ್ಲೆಯ ಪ್ರಗತಿ ಪರಿಶೀಲನೆ ಮಾಡುತ್ತೇನೆ. ಯಾವುದೇ ಕಳಪೆ ಸೇರಿದಂತೆ ಅಭಿವೃದ್ದಿಗೆ ಮಾರಕವಾದ ಯಾರನ್ನೂ ಸಹ ಬಿಡುವುದಿಲ್ಲ. ಈ ಹಿಂದೆ ಕೋಲಾರದಲ್ಲಿ ಕಳಪೆ ಕಾಮಗಾರಿ ವೀಕ್ಷಣೆ ಮಾಡುವುದಾಗಿ ಹೇಳಿದ ಬಳಿಕ ಪರ್ಸಂಟೇಜ್ ಆರೋಪ ಕೇಳಿ ಬಂದಿತ್ತು. ಆದರೆ, ಈ ಬಾರಿ ಜಿಲ್ಲೆಯ ಎಲ್ಲ ಅಧಿಕಾರಿಗಳು ಸೇರಿದಂತೆ ಹಿಂದಿನ, ಇಂದಿನ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿ, ಗುತ್ತಿಗೆದಾರರ ನೇತೃತ್ವದಲ್ಲಿ ಪರಿಶೀಲನೆ ನಡೆಯಲಿದೆ ಎಂದರು.