ಬೆಳಗಾವಿ : ಮೋದಿಯವರನ್ನು ಮತ್ತೆ ಗೆಲ್ಲಿಸಬೇಕೆಂಬುದು ದೇವರ ನಿರ್ಣಯವಾಗಿದೆ ಅಡ್ವಾಣಿ ವಾಜಪೇಯಿ ರಾಮಮಂದಿರಕ್ಕಾಗಿ ಯಾತ್ರೆ ಮಾಡಿದ್ರು ಅಂದು ಯಾತ್ರೆಯಲ್ಲಿ ಕೋಟ್ಯಾಂತರ ಜನ ಭಾಗಿಯಾಗಿದ್ದರು ಆದರೆ ರಾಮ ಆಯ್ಕೆ ಮಾಡಿಕೊಂಡಿದ್ದು ಮೋದಿ ಕೈಯಲ್ಲಿ ಪ್ರತಿಷ್ಠಾಪಿಸಲು ಇದು ದೇವರ ನಿರ್ಣಯ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದರು.
ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಈ ಬಾರಿಯೂ ನನ್ನನ್ನು ಹೆಚ್ಚು ಮತಗಳಿಂದ ಗೆಲ್ಲಿಸಬೇಕು. ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿರಲಿಲ್ಲ ಈ ಕಳೆದ ಬಾರಿ ಚುನಾವಣೆಯಲ್ಲಿ ಮೊದಲ ಬಾರಿ ಕಾಂಗ್ರೆಸ್ ಗೆದ್ದಿತು. ಎಂಇಎಸ್ ಗೆದ್ದಿದರೆ ನಮ್ಮ ಸಹೋದರ ಗೆದ್ದಿದ್ದಾರೆ ಅಂದುಕೊಳ್ಳಬಹುದಿತ್ತು ಎನ್ನುವ ಮೂಲಕ MES ಪುಂಡರನ್ನು ಸಂಸದ ಸಹೋದರರು ಎಂದು ಕರೆದರು.
ಈ ಬಾರಿ ಮತ್ತೆ ಖಾನಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದ್ದಾರೆ. ಕಳೆದ ಎರಡು ವರ್ಷದಿಂದ ಖಾನಾಪುರಕ್ಕೆ ಬರಲು ಆಗಿರಲಿಲ್ಲ. ನನ್ನ ಆರೋಗ್ಯ ಸರಿ ಇಲ್ಲದ ಕಾರಣ ಖಾನಾಪುರಕ್ಕೆ ಬರಲು ಆಗಿರಲಿಲ್ಲ. ಈ ಸಂದರ್ಭದಲ್ಲಿ ನಾನು ನಿಮಗೆ ಅಷ್ಟೇ ಅಲ್ಲ ಬೇರೆ ಯಾರಿಗೂ ಕೂಡ ಸಿಕ್ಕಿಲ್ಲ. ಬೇಟಿಗೆ ಯಾರಾದರೂ ಬಂದರೆ ರಾಜಕಾರಣ ಬಗ್ಗೆ ಮಾತನಾಡಬೇಡಿ ಅಂತ ಹೇಳುತ್ತಿದ್ದೆ ಎಂದು ಅವರು ತಿಳಿಸಿದರು.
ಒಳ್ಳೆ ಅಭ್ಯರ್ಥಿ ಹೆಸರು ಹೇಳಿ ಅವರನ್ನೇ ಚುನಾವಣೆ ನಿಲ್ಲಿಸೋಣ ಅಂತಿದ್ದೆ.ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಲ್ಲಿ ಹೋಗಲ್ಲ ಅಂದಿದ್ದೆ.ಎಲ್ಲರ ಮುಂದೆ ನಾನು ಸ್ಪರ್ಧೆ ಮಾಡುವುದಿಲ್ಲ ಅಂತ ಹೇಳಿದ್ದೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ತಿಳಿಸಿದರು.