ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರನ್ನು ಇಂದು ನಟಿ ರಚಿತಾ ರಾಮ್ ಅವರು ಭೇಟಿ ಮಾಡಿದರು. ಈ ವೇಳೆ ನಟ ದರ್ಶನವರು ನಾನು ಆರಾಮಾಗಿ ಇದ್ದೇನೆ ಎಂದು ತಿಳಿಸಿದ್ದು, ಈ ವೇಳೆ ಕೆಲ ಹೊತ್ತು ಸಿನಿಮಾ ರಂಗದ ಕುರಿತು ದರ್ಶನ್ ಹಾಗೂ ರಚಿತಾ ರಾಮ್ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಜೈಲಿನಲ್ಲಿ ನಟ ದರ್ಶನ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜನನ್ನು ರಾಜನ ರೀತಿ ನೋಡೋಕೆ ಇಷ್ಟ. ದರ್ಶನ್ ರನ್ನು ನೋಡಿದ ಕೂಡಲೇ ನಾವು ಭಾವುಕರಾದ್ವಿ.ಅವರನ್ನು ಈ ರೀತಿ ನೋಡಕ್ಕೆ ನನಗೆ ಇಷ್ಟ ಇರಲಿಲ್ಲ ಸಿನೆಮಾ ರಂಗಕ್ಕೆ ನನ್ನನ್ನು ಪರಿಚಯಿಸಿದ್ದು ದರ್ಶನ ಸರ್. ಅವರ ಬ್ಯಾನರ್ ಇಂದಾನೆ ನಾನು ರಚಿತಾ ರಾಮ್ ಆಗಿದ್ದು. ಇಲ್ಲ ಅಂದಿದ್ರೆ ಬಿಂದ್ಯಾ ರಾಮ್ ಆಗಿಯೇ ಉಳಿಯುತ್ತಿದ್ದೆ ಎಂದರು.
ದರ್ಶನ್ ಸರ್ ತುಂಬಾ ಆರೋಗ್ಯವಾಗಿದ್ದಾರೆ. ಅವರನ್ನು ಈ ರೀತಿ ನೋಡೋದಕ್ಕೆ ತುಂಬಾ ಕಷ್ಟ ಆಗುತ್ತಿದೆ.ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರ ಅಭಿಮಾನಿಗಳು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೋ ನಾನು ಕೂಡ ಅಷ್ಟೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಕೂಡ ದರ್ಶನ್ ಸರ್ ಅವರ ಅಭಿಮಾನಿ ಎಂದು ತಿಳಿಸಿದರು.
ದರ್ಶನ್ ಸರ್ ಆದಷ್ಟು ಬೇಗ ಹೊರಗಡೆ ಬನ್ನಿ ಅಂತ ಹೇಳಿಬಿಟ್ಟು ಬಂದಿದ್ದೇನೆ. ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ಅವರ ಋಣ ನಮ್ಮ ಕುಟುಂಬದ ಮೇಲಿದೆ. ನನ್ನ ಇವತ್ತು ಈ ಸ್ಥಿತಿಗೆ ದರ್ಶನ್ ಸರ್ ಅವರೇ ಕಾರಣ. ನೀನು ಆರಾಮಾಗಿ ಇರು ಅಂತ ದರ್ಶನ್ ಸರ್ ನನಗೆ ಧೈರ್ಯ, ಸಮಾಧಾನ ಹೇಳಿದರು. ಆದಷ್ಟು ಬೇಗ ನಮಗೆ ಒಳ್ಳೆ ಸುದ್ದಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.