ಬೀದರ್ : ಪಹಲ್ಗಾಮ್ ನಲ್ಲಿ ಪ್ರವಾಸಿಗರ ಗುಂಡಿನ ದಾಳಿಯಲ್ಲಿ ಕರ್ನಾಟಕದ ಇಬ್ಬರು ಸೇರಿದಂತೆ 26 ಜನ ಬಲಿಯಾಗಿದ್ದಾರೆ. ಇದೆ ವಿಚಾರವಾಗಿ ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಶ್ಮೀರಕ್ಕೆ ಸಿಎಂ ಸಿದ್ದರಾಮಯ್ಯ ಪುತ್ರ ಸಚಿವರಾದ ಮಹದೇವಪ್ಪ ಪುತ್ರ, ಜಮೀರ್ ಪುತ್ರ ಹೋಗಿದ್ರೆ ಜಮೀರ್ ಪುತ್ರ ಮಾತ್ರ ವಾಪಸ್ ಬರ್ತಿದ್ದ ಎಂದು ಹೇಳಿಕೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ಯಾವ ಧರ್ಮದವರು ಎಂದು ಹೇಳಿ ಗುಂಡು ಹಾರಿಸಿದ್ದಾರೆ. ಹಾಗಾಗಿ ಇದೀಗ ಎಲ್ಲ ಹಿಂದೂಗಳು ಒಂದಾಗುವ ಸಮಯ ಬಂದಿದೆ. ಕಾಶ್ಮೀರಕ್ಕೆ ಸಿಎಂ ಸಿದ್ದರಾಮಯ್ಯ ಪುತ್ರ ಸಚಿವರಾದ ಮಹದೇವಪ್ಪ ಪುತ್ರ, ಜಮೀರ್ ಪುತ್ರ ಹೋಗಿದ್ರೆ ಜಮೀರ್ ಪುತ್ರ ಮಾತ್ರ ವಾಪಸ್ ಬರ್ತಿದ್ದ. ಸಿಎಂ ಸಿದ್ದರಾಮಯ್ಯ ಮಾದೇವಪ್ಪ ಪುತ್ರರಿಗೆ ಗುಂಡು ಹೊಡೆಯುತ್ತಿದ್ದರು.
ಯಾಕಂದ್ರೆ ಸಿದ್ದರಾಮಯ್ಯ ಮಹಾದೇವಪ್ಪ ಮಕ್ಕಳು ಹಿಂದೂಗಳು. ಸಿಎಂ ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇಲ್ಲ. ಪಾಕಿಸ್ತಾನ ಏಜೆಂಟರಂತೆ ವರ್ತಿಸುತ್ತಾರೆ. ಯುದ್ಧ ಬೇಕಾಗಿಲ್ಲ ಎಂದು ಹೇಳೋಕೆ ಸಿದ್ದರಾಮಯ್ಯ ಯಾರು? ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯೋ? ಪಾಕಿಸ್ತಾನದ ಒಂದು ರಾಜ್ಯದ ಮುಖ್ಯಮಂತ್ರಿಯೋ? ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ಎಲ್ಲಿಯವರೆಗೆ ಹಿಂದೂಗಳು ಒಗ್ಗಟ್ಟು ಆಗುವುದಿಲ್ಲವೋ ಇಂತಹ ನಾಯಕರನ್ನು ಸೋಲಿಸುವವರಿಗೆ ಹೀಗೆ ಮಾಡುತ್ತಾರೆ. ಕಾಂಗ್ರೆಸ್ನವರು ಮೊದಲು ಮಸೀದಿಗೆ ಹೋಗುತ್ತಿದ್ದರು. ಕಾಂಗ್ರೆಸ್ನವರು ಇತ್ತೀಚಿಗೆ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ನಾವು ನಮ್ಮ ದೇಶದ ಪರವಾಗಿ ಮಾತನಾಡಬೇಕು. ಪಾಕಿಸ್ತಾನದ ಏಜೆಂಟರಂತೆ ಮಾತನಾಡಿದರೆ ಬೇರೆ ಅರ್ಥ ಬರುತ್ತದೆ. ಮೋದಿಗೆ ಮುಸ್ಲಿಂ ದೇಶಗಳಿಂದ ಬೆಂಬಲ ಸಿಗುತ್ತಿದೆ ನಕಲಿ ಮುಸ್ಲಿಮರಿಂದಲ್ಲ ಎಂದು ಹೇಳಿಕೆ ನೀಡಿದರು.