ಬೆಂಗಳೂರು: ಇಡ್ಲಿಗುರು ಹೆಸರಿನಲ್ಲಿ ಹೋಟೆಲ್ ಶುರು ಮಾಡಿದ್ದಂತ ದಂಪತಿಗಳಿಬ್ಬರು, ಪ್ರಾಂಚೈಲಿಸಿ ಕೊಡುವುದಾಗಿ ಜನರಿಂದ ಹಣ ಪಡೆದು ವಂಚಿಸಿದ್ದರು. ಈ ಹಿನ್ನಲೆಯಲ್ಲಿ ಇಡ್ಲಿಗುರು ಹೋಟೆಲ್ ಮಾಲೀಕರು, ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಬೆಂಗಳೂರಿನ ಹೆಸರಾಂತ ಇಡ್ಲಿಗುರು ಮಾಲೀಕರಾದಂತ ಕಾರ್ತಿಕ್ ಶೆಟ್ಟಿ, ಪತ್ನಿ ಮಂಜುಳಾ, ಕಾರ್ತಿಕ್ ತಂದೆ ಬಾಬು ಹಾಗೂ ಮತ್ತೋರ್ವ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿತ್ತು.
ಕಾಮಾಕ್ಷಿಪಾಳ್ಯದ ನಿವಾಸಿ ಚೇತನ್ ಎಂಬುವರಿಂದ ಹಣಪಡೆದು, ಇಡ್ಲಿಗುರು ಹೋಟೆಲ್ ಪ್ರಾಂಚೈಸಿ ಕೊಡುವುದಾಗಿ ನಂಬಿಸಿ, ಕೊಟ್ಟಿರಲಿಲ್ಲ. ಹೀಗಾಗಿ ಅವರು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರಿಗೆ ದೂರು ನೀಡಿದ ಬಳಿಕ, ಕಾರ್ತಿಕ್ ಶೆಟ್ಟಿ ಹಾಗೂ ಪತ್ನಿ ಮಂಜುಳಾ ತಲೆಮರೆಸಿಕೊಂಡಿದ್ದರು. ಅವರು ಮುಂಬೈನಲ್ಲಿ ಇರುವ ವಿಷಯ ತಿಳಿದು ಅಲ್ಲಿಗೆ ತೆರಳಿದಂತ ಪೊಲೀಸರು ಅವರನ್ನು ವಶಕ್ಕೆ ಪಡೆದು, ಬೆಂಗಳೂರಿಗೆ ಕರೆತರುತ್ತಿದ್ದಾರೆ.
BREAKING : ರಾಜ್ಯಸಭಾ ಚುನಾವಣೆ : ಗುಜರಾತ್’ನಿಂದ ಜೆ.ಪಿ. ನಡ್ಡಾ, ಮಹಾರಾಷ್ಟ್ರದಿಂದ ಅಶೋಕ್ ಚವಾಣ್ ಸ್ಪರ್ಧೆ