ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದಲ್ಲಿ ಸಿಬಿಐ ಶೋಧ ನಡೆಸಿದ ಒಂದು ದಿನದ ನಂತರ, ಅವರು ಶೀಘ್ರದಲ್ಲೇ ತಮ್ಮನ್ನು ಬಂಧಿಸಲಾಗುವುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಅವರು ಮಾಧ್ಯಮಗಳ ಜೊತೆಗೆ ಮಾತನಾಡುತ್ತ, ತಮ್ಮ ವಿರುದ್ಧದ ಎಲ್ಲಾ ದಾಳಿಗಳು ರಾಜಕೀಯವಾಗಿದ್ದು, ದೆಹಲಿಯ ಅಬಕಾರಿ ನೀತಿಯಲ್ಲಿನ ಉಲ್ಲಂಘನೆಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ಇದೇ ವೇಳೆ ಹೇಳಿದರು.
ಇದೇ ವೇಳೇ ಅವರು ತಮ್ಮ ಮಾತನ್ನು ಮುಂದುವರೆಸಿ, ಬಹುಶಃ ಮುಂದಿನ 3-4 ದಿನಗಳಲ್ಲಿ ಸಿಬಿಐ-ಇಡಿ ನನ್ನನ್ನು ಬಂಧಿಸುತ್ತದೆ. ನಾನು ಅದಕ್ಕೆ ಹೆದರುವುದಿಲ್ಲ, 2024 ರ ಚುನಾವಣೆ ಎಎಪಿ ವರ್ಸಸ್ ಬಿಜೆಪಿ ನಡೆಯಲಿದೆ ಎಂದು ಸಿಸೋಡಿಯಾ ಇಂದು ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು. ಇದೇ ವೇಳೆ ಅವರು ಮಾತನಾಡುತ್ತ, “ಅವರ ಸಮಸ್ಯೆ ಮದ್ಯ/ಅಬಕಾರಿ ಹಗರಣವಲ್ಲ. ಅವರ ಸಮಸ್ಯೆ ಅರವಿಂದ್ ಕೇಜ್ರಿವಾಲ್. ಆಗಿದೆ ಅಂತ ಹೇಳಿದರು.
ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ನಾನು ಕೇವಲ ಅರವಿಂದ್ ಕೇಜ್ರಿವಾಲ್ ಅವರ ಶಿಕ್ಷಣ ಸಚಿವನಾಗಿದ್ದೇನೆ ಅಂತ ಅವರು ಹೇಳಿದರು.
ಇನ್ನೂ ದೆಹಲಿಯ ಅಬಕಾರಿ ನೀತಿಯು ಅತ್ಯುತ್ತಮ ನೀತಿಯಾಗಿದೆ ಎಂದು ಸಿಸೋಡಿಯಾ ಹೇಳಿದರು, “ಅಬಕಾರಿ ನೀತಿಯನ್ನು ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ನಡೆಸುತ್ತಿದ್ದೇವೆ ಅಂತ ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿದ ದಿನದಂದು, ಅವರು ಮತ್ತು ಅವರ ಕುಟುಂಬವು ಸಿಬಿಐಗೆ ಸಹಕರಿಸಿತು ಎಂದು ಸಿಸೋಡಿಯಾ ಹೇಳಿದರು.
ಶುಕ್ರವಾರ 14 ಗಂಟೆಗಳ ಸುದೀರ್ಘ ದಾಳಿಯ ನಂತರ ಸಿಬಿಐ ಅಧಿಕಾರಿಗಳು ತೆರಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಸೋಡಿಯಾ, “ಸಿಬಿಐ ತಂಡವು ಅವರು ನನ್ನ ಮನೆಯನ್ನು ಶೋಧಿಸಿ ಮತ್ತು ನನ್ನ ಕಂಪ್ಯೂಟರ್ ಮತ್ತು ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ನನ್ನ ಕುಟುಂಬವು ಅವರೊಂದಿಗೆ ಸಹಕರಿಸಿದೆ ಮತ್ತು ಸಹಕಾರವನ್ನು ನೀಡಿದೆ, ಇದಲ್ಲದೇ ನಾವು ಯಾವುದೇ ಭ್ರಷ್ಟಾಚಾರ ಅಥವಾ ತಪ್ಪು ಮಾಡಿಲ್ಲ. ನಾವು ಹೆದರುವುದಿಲ್ಲ. ಸಿಬಿಐ ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ನಮಗೆ ತಿಳಿದಿದೆ ಅಂತ ಅವರು ಇದೇ ವೇಳೆ ಹೇಳಿದರು.
ಅಂದ ಹಾಗೇ ದಾಳಿ ಬಳಿಕ ಸಿಬಿಐ ದಾಖಲಿಸಿರುವ ಎಫ್ಐಆರ್ನಲ್ಲಿ ದಾಖಲಾದ 15 ಜನರಲ್ಲಿ ಸಿಸೋಡಿಯಾ ಕೂಡ ಸೇರಿದ್ದಾರೆ. ಈ ಪ್ರಕರಣದಲ್ಲಿ ಅಬಕಾರಿ ಅಧಿಕಾರಿಗಳು, ಮದ್ಯ ಕಂಪನಿ ಕಾರ್ಯನಿರ್ವಾಹಕರು, ವಿತರಕರು ಮತ್ತು ಕೆಲವು ಅಪರಿಚಿತ ಸರ್ಕಾರಿ ನೌಕರರು ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳ ವಿರುದ್ಧ ಸೆಕ್ಷನ್ 120-ಬಿ, 477 ಎ ಐಪಿಸಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ 1988 ರ ಸೆಕ್ಷನ್ 7 ರ ಅಡಿಯಲ್ಲಿ ಎಫ್ಐಆರ್ನಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನೂ ಇದೇ ವೇಳೆ ಸಿಬಿಐ ತನಿಖೆಗೆ ಆದೇಶಿಸಿದ ದಿನವೇ ದೆಹಲಿಯ ಮದ್ಯ ನೀತಿಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವರು ಪ್ರಶ್ನೆ ಮಾಡಿದ್ದು. “ಮದ್ಯ ನೀತಿಯಲ್ಲಿ ಯಾವುದೇ ಹಗರಣವಿಲ್ಲದಿದ್ದರೆ, ಅದನ್ನು ಏಕೆ ಹಿಂತೆಗೆದುಕೊಳ್ಳಲಾಯಿತು?” ಕೇಂದ್ರ ಸಚಿವ ಎಂದು ಠಾಕೂರ್ ಪ್ರಶ್ನಿಸಿದ್ದಾರೆ. ದೆಹಲಿ ಉಪಮುಖ್ಯಮಂತ್ರಿ ಮೇಲೆ ಮೇಲಿನ ದಾಳಿಗಳ ನಂತರ, ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ಕ್ರಾಂತಿಕಾರಿ ಕೆಲಸಗಳನ್ನು ನಿಲ್ಲಿಸುವ ಪ್ರಯತ್ನವಾಗಿದೆ ಎಂದು ಎಎಪಿ ನಾಯಕ ಸಂಜಯ್ ಸಿಂಗ್ ಆರೋಪಿಸಿದ್ದಾರೆ.
ಕೇಜ್ರಿವಾಲ್ ಈ ಬಗ್ಗೆ ಮಾತನಾಡಿದ್ದು, ನಮ್ಮ ಶಿಕ್ಷಣ ಅಥವಾ ಆರೋಗ್ಯ ಮಾದರಿಯನ್ನು ನೀವು ತಡೆಯಲು ಸಾಧ್ಯವಿಲ್ಲ ಚನೀವು ನಮ್ಮ ಆರೋಗ್ಯ ಸಚಿವರು ಅಥವಾ ಶಿಕ್ಷಣ ಸಚಿವರನ್ನು ಬಂಧಿಸಬಹುದು, ಆದರೆ ದೆಹಲಿಯ ಯಾವುದೇ ಕೆಲಸವನ್ನು ನಿಲ್ಲಿಸಲಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.