Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : 2026ರ ಏಪ್ರಿಲ್’ನಲ್ಲಿ ಬಾಂಗ್ಲಾದೇಶದಲ್ಲಿ ‘ರಾಷ್ಟ್ರೀಯ ಚುನಾವಣೆ’ ಆಯೋಜನೆ ; ‘ಮೊಹಮ್ಮದ್ ಯೂನಸ್’ ಘೋಷಣೆ

06/06/2025 7:54 PM

BREAKING : ‘ಮೆಹುಲ್ ಚೋಕ್ಸಿ’ಗೆ ಬಿಗ್ ಶಾಕ್ ; ಬ್ಯಾಂಕ್ ಖಾತೆ, ಮ್ಯೂಚುವಲ್ ಫಂಡ್‌, ಷೇರುಗಳ ಮುಟ್ಟುಗೋಲಿಗೆ ‘SEBI’ ಆದೇಶ

06/06/2025 7:19 PM

ಶಿವಮೊಗ್ಗ DCC ಬ್ಯಾಂಕ್ ಹಗರಣ: ಇಡಿಯಿಂದ ಮಾಜಿ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ, ಪತ್ನಿಗೆ ಸೇರಿದ 13.91 ಕೋಟಿ ಆಸ್ತಿ ಜಪ್ತಿ

06/06/2025 7:17 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೇಂದ್ರದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಪ್ರಶ್ನಿಸಿದ್ದೇನೆ, ಬಿಜೆಪಿ ಏನೇ ಅಂದರೂ ಚಿಂತೆಯಿಲ್ಲ: ಡಿ.ಕೆ. ಸುರೇಶ್
KARNATAKA

ಕೇಂದ್ರದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಪ್ರಶ್ನಿಸಿದ್ದೇನೆ, ಬಿಜೆಪಿ ಏನೇ ಅಂದರೂ ಚಿಂತೆಯಿಲ್ಲ: ಡಿ.ಕೆ. ಸುರೇಶ್

By kannadanewsnow0919/03/2024 8:58 PM

ರಾಮನಗರ : “ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ವಿರುದ್ಧ ನಾನು ಧ್ವನಿ ಎತ್ತಿದ್ದೇನೆ. ಬಿಜೆಪಿಯವರು ಅದನ್ನು ದೇಶ ವಿಭಜನೆ ಎಂದುಕೊಂಡರೆ ನಾನೇನು ಮಾಡಲು ಸಾಧ್ಯವಿಲ್ಲ” ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ರಾಮನಗರ ಜಿಲ್ಲೆ ಹಾರೋಹಳ್ಳಿಯಲ್ಲಿ ಮಂಗಳವಾರ ಅನ್ಯಪಕ್ಷಗಳ ನಾಯಕರ ಬೆಂಬಲ ಪಡೆದ ನಂತರ ಮಾಧ್ಯಮಗಳಿಗೆ ಸುರೇಶ್ ಅವರು ಪ್ರತಿಕ್ರಿಯೆ ನೀಡಿದರು.

“ಅವರು ಏನೇ ಹೇಳಿದರೂ ನಡೆಯುತ್ತದೆ ಎಂಬ ಧಾಟಿಯಲ್ಲಿ ಅವರು ಮಾತನಾಡುತ್ತಿದ್ದಾರೆ. ನೀವು ನನ್ನನ್ನು ಪ್ರಶ್ನೆ ಮಾಡಿದ ರೀತಿಯಲ್ಲಿ ಅವರನ್ನು ಪ್ರಶ್ನೆ ಮಾಡಿ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನಾನು ಯಾವ ಕಾರಣಕ್ಕೆ ಆ ಹೇಳಿಕೆ ನೀಡಿದೆ ಎಂದು ನೀವು ಪ್ರಧಾನಿಯವರನ್ನು ಕೇಳಿ.

ಮೋದಿ ಅವರು ಕಳೆದ 10 ವರ್ಷಗಳಲ್ಲಿ ಬೆಂಗಳೂರಿಗೆ ಹಾಗೂ ಕರ್ನಾಟಕಕ್ಕೆ ಕೊಟ್ಟಿರುವ ಕೊಡುಗೆಗಳ ಬಗ್ಗೆ ಚರ್ಚೆ ಮಾಡಿ. ನೀರಿನ ಅಭಾವ ಇರುವ ಸಂದರ್ಭದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಯಾಕೆ ನೀಡುತ್ತಿಲ್ಲ? ಈ ಯೋಜನೆಗೆ ಅನುಮತಿ ನೀಡಲು ಯಾವ ಸಮಸ್ಯೆ ಇದೆ. ನಾನು ಕನ್ನಡಿಗರ ಪರವಾಗಿ ಧ್ವನಿ ಎತ್ತಿದ್ದೇನೆ. ಅವರು ಅದನ್ನು ದೇಶ ವಿಭಜನೆ ಎಂದುಕೊಂಡರೆ ನಾನೇನು ಮಾಡಲು ಸಾಧ್ಯವಿಲ್ಲ.

ಒಬ್ಬ ಭಾರತೀಯನಾಗಿ ಹಾಗೂ ಕನ್ನಡಿಗನಾಗಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಪ್ರಶ್ನೆ ಮಾಡುತ್ತೇನೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಲು ಕೇಂದ್ರ ಸರ್ಕಾರವೇ ಕಾರಣ. ಅವರು ಏನೇ ಅಂದರೂ ಚಿಂತೆಯಿಲ್ಲ” ಎಂದು ತಿಳಿಸಿದರು.

ಬಿಜೆಪಿ ಸರ್ಕಾರದ ಶಾಡೋ ಸಿಎಂಗಳನ್ನೂ ಜನ ನೋಡಿದ್ದಾರೆ:

ಅನೇಕ ಸೂಪರ್ ಸಿಎಂಗಳಿದ್ದಾರೆ ಎಂಬ ಪ್ರಧಾನಿ ಟೀಕೆ ಬಗ್ಗೆ ಕೇಳಿದಾಗ, “ಅವರು ಈ ರೀತಿ ಹೇಳುವುದು ಹೊಸತೇನಲ್ಲ. ಅವರ ಸರ್ಕಾರ ಇದ್ದಾಗ ಯಾರೆಲ್ಲಾ ಶಾಡೋ ಸಿಎಂ ಆಗಿ ಕೆಲಸ ಮಾಡಿದ್ದಾರೆ ಎಂದು ಜನ ನೋಡಿದ್ದಾರೆ. ಅವರು ಹೇಳಿಕೆ ಕೇವಲ ಚುನಾವಣಾ ಗಿಮಿಕ್. ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದವರು, ನಂತರ ಅದು ಸುಳ್ಳು ಎಂದರು” ಎಂದು ತಿಳಿಸಿದರು.

ಕುಮಾರಸ್ವಾಮಿ ಆರೋಗ್ಯ ಬೇಗ ಸುಧಾರಿಸಲಿ:

ಡಿ.ಕೆ ಸುರೇಶ್ ನನ್ನ ಬದುಕಿಗೆ ವಿಷ ಹಾಕಿದ್ದಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಯಾರ ಬದುಕಿಗೂ ವಿಷ ಹಾಕುವವನಲ್ಲ. ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತೇನೆ. ಅವರು ಆರೋಗ್ಯ ತಪಾಸಣೆಗಾಗಿ ತೆರಳುತ್ತಿದ್ದಾರೆ. ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದರು.

ಡಿ.ಕೆ. ಸಹೋದರರು ಚುನಾವಣೆ ಹಿನ್ನೆಲೆಯಲ್ಲಿ ಗಿಫ್ಟ್ ಹಂಚುತ್ತಿದ್ದಾರೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಏನು ಮಾತನಾಡಿದ್ದಾರೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದು ತಿಳಿಸಿದರು.

ಪಾರದರ್ಶಕ ಚುನಾವಣೆಗೆ ಪ್ಯಾರಾ ಮಿಲಿಟರಿ ಕರೆಸಬೇಕು ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಪ್ಯಾರಾ ಮಿಲಿಟರಿ ಆದರೂ ಕರೆಸಿಕೊಳ್ಳಲಿ, ಪ್ರಧಾನಮಂತ್ರಿ ಅವರನ್ನಾದರೂ ಕರೆಸಿಕೊಳ್ಳಲಿ. ನಮ್ಮ ತಕರಾರು ಏನೂ ಇಲ್ಲ. ನಾನು ಈವರೆಗೂ ಮಾಡಿರುವ ಕೆಲಸಗಳಿಗೆ ಮತದಾರರಿಂದ ಕೂಲಿ ಕೇಳುತ್ತಿದ್ದೇನೆ. ಕಳೆದ ಹತ್ತು ವರ್ಷಗಳಲ್ಲಿ ಮಾಡಿರುವ ಕೆಲಸ ಮುಂದಿಟ್ಟು ಕೂಲಿ ಕೇಳುತ್ತಿದ್ದೇನೆ. ನೀವು ಈ ವಿಚಾರವನ್ನು ಜನರಿಗೆ ತಿಳಿಸಿ. ನಾನು ಯಾರ ಮೇಲೂ ಆರೋಪ ಮಾಡುತ್ತಿಲ್ಲ” ಎಂದು ತಿಳಿಸಿದರು.

ಬಲವಂತವಾಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ಶಾಲು ಹಾಕುತ್ತಿದ್ದಾರೆ ಎಂಬ ಸಿ. ಪಿ ಯೋಗೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನನಗೆ ಬಲವಂತ ಮಾಡುವ ಅಭ್ಯಾಸವಿಲ್ಲ. ಅವರು ತಮ್ಮ ನಾಯಕರನ್ನು ಮೆಚ್ಚಿಸಿಕೊಳ್ಳಲು ಮಾಧ್ಯಮಗಳ ಮುಂದೆ ಬಂದು ಮಾತನಾಡುತ್ತಾರೆ. ಕೆಲಸಗಳ ಮೂಲಕ ನಾನು ಜನರನ್ನು ತಲುಪಿದ್ದೇನೆ” ಎಂದು ತಿಳಿಸಿದರು.

ನಾನೊಬ್ಬ ಸ್ಟ್ರಾಂಗ್ CM, ನಿಮ್ಮ ಹಾಗೆ ವೀಕ್ PM ಅಲ್ಲ: ‘ಮೋದಿ’ ವಿರುದ್ಧ ಸಿದ್ಧರಾಮಯ್ಯ ವಾಗ್ಧಾಳಿ

ನಾನೊಬ್ಬ ಸ್ಟ್ರಾಂಗ್ CM, ನಿಮ್ಮ ಹಾಗೆ ವೀಕ್ PM ಅಲ್ಲ: ‘ಮೋದಿ’ ವಿರುದ್ಧ ಸಿದ್ಧರಾಮಯ್ಯ ವಾಗ್ಧಾಳಿ

Share. Facebook Twitter LinkedIn WhatsApp Email

Related Posts

ಶಿವಮೊಗ್ಗ DCC ಬ್ಯಾಂಕ್ ಹಗರಣ: ಇಡಿಯಿಂದ ಮಾಜಿ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ, ಪತ್ನಿಗೆ ಸೇರಿದ 13.91 ಕೋಟಿ ಆಸ್ತಿ ಜಪ್ತಿ

06/06/2025 7:17 PM1 Min Read

ಶಿವಮೊಗ್ಗ: ಸಾಗರದ ಮರ್ಕಝ್ ಮ್ಯಾನೇಜರ್ ಶರೀಫ್ ಸಖಾಫಿ ನಿಧನ

06/06/2025 6:56 PM1 Min Read

ರಾಜ್ಯದಲ್ಲಿಂದು 41 ಜನರಿಗೆ ಕೊರೋನಾ ಪಾಸಿಟಿವ್, ಸೋಂಕಿತರಾದಂತ 48 ಮಂದಿ ಡಿಸ್ಚಾರ್ಜ್

06/06/2025 6:44 PM1 Min Read
Recent News

BREAKING : 2026ರ ಏಪ್ರಿಲ್’ನಲ್ಲಿ ಬಾಂಗ್ಲಾದೇಶದಲ್ಲಿ ‘ರಾಷ್ಟ್ರೀಯ ಚುನಾವಣೆ’ ಆಯೋಜನೆ ; ‘ಮೊಹಮ್ಮದ್ ಯೂನಸ್’ ಘೋಷಣೆ

06/06/2025 7:54 PM

BREAKING : ‘ಮೆಹುಲ್ ಚೋಕ್ಸಿ’ಗೆ ಬಿಗ್ ಶಾಕ್ ; ಬ್ಯಾಂಕ್ ಖಾತೆ, ಮ್ಯೂಚುವಲ್ ಫಂಡ್‌, ಷೇರುಗಳ ಮುಟ್ಟುಗೋಲಿಗೆ ‘SEBI’ ಆದೇಶ

06/06/2025 7:19 PM

ಶಿವಮೊಗ್ಗ DCC ಬ್ಯಾಂಕ್ ಹಗರಣ: ಇಡಿಯಿಂದ ಮಾಜಿ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ, ಪತ್ನಿಗೆ ಸೇರಿದ 13.91 ಕೋಟಿ ಆಸ್ತಿ ಜಪ್ತಿ

06/06/2025 7:17 PM

BREAKING: ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕಮಲ್ ಹಾಸನ್ | Actor Kamal Hassan

06/06/2025 7:02 PM
State News
KARNATAKA

ಶಿವಮೊಗ್ಗ DCC ಬ್ಯಾಂಕ್ ಹಗರಣ: ಇಡಿಯಿಂದ ಮಾಜಿ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ, ಪತ್ನಿಗೆ ಸೇರಿದ 13.91 ಕೋಟಿ ಆಸ್ತಿ ಜಪ್ತಿ

By kannadanewsnow0906/06/2025 7:17 PM KARNATAKA 1 Min Read

ಬೆಂಗಳೂರು: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹಗರಣ ಸಂಬಂಧ ಈಗಾಗಲೇ ಮಾಜಿ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ ಅವರನ್ನು ಬಂಧಿಸಲಾಗಿದೆ. ಅವರು…

ಶಿವಮೊಗ್ಗ: ಸಾಗರದ ಮರ್ಕಝ್ ಮ್ಯಾನೇಜರ್ ಶರೀಫ್ ಸಖಾಫಿ ನಿಧನ

06/06/2025 6:56 PM

ರಾಜ್ಯದಲ್ಲಿಂದು 41 ಜನರಿಗೆ ಕೊರೋನಾ ಪಾಸಿಟಿವ್, ಸೋಂಕಿತರಾದಂತ 48 ಮಂದಿ ಡಿಸ್ಚಾರ್ಜ್

06/06/2025 6:44 PM

BREAKING : ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ದುರಂತ ; ಕ್ರಿಕೆಟಿಗ ‘ವಿರಾಟ್ ಕೊಹ್ಲಿ’ ವಿರುದ್ಧ ದೂರು ದಾಖಲು

06/06/2025 6:40 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.